Tuesday, June 30, 2009

ನಾಲ್ಕು ಸುದ್ದಿಗಳು.

*****ಸುದ್ದಿ ಒಂದು: ಜಾರ್ಖಂಡ್ ನ ಪಲಾಮೌ ಜಿಲ್ಲೆಯ ಚತ್ರಾಪುರ ಬ್ಲಾಕ್ ನ ಸಾವಿರಕ್ಕೂ ಹೆಚ್ಚು ರೈತರು ಸತತ ನಾಲ್ಕು ವರ್ಷಗಳ ಬರಗಾಲದಿಂದ ತತ್ತರಿಸಿ ಆತ್ಮಹತ್ಯೆ ಮಾಡಿಕೊಳ್ಳಲು ರಾಷ್ರಪತಿಗಳ ಅನುಮತಿ ಕೋರಿದ್ದಾರೆ.
*****ಸುದ್ದಿ ಎರಡು: ನಮ್ಮ ಸಂಸತ್ ಭವನ, ಪ್ರಧಾನಿ ನಿವಾಸ ಮತ್ತು ರಾಷ್ರಪತಿಗಳ ನಿವಾಸದ ಒಟ್ಟು ವಿದ್ಯುತ್ ಖರ್ಚು ವರ್ಷಕ್ಕೆ ಸುಮಾರು ೧೪ ಕೋಟಿ ರೂಪಾಯಿಗಳು.
*****ಸುದ್ದಿ ಮೂರು: ಗುಜರಾತಿನ ಮುಖ್ಯಮಂತ್ರಿ ಮೋದಿಯವರ ಪ್ರತಿತಿಂಗಳ ವಿಮಾನಯಾನದ ಖರ್ಚು ಸುಮಾರು ೨೭ ಲಕ್ಷ ರೂಪಾಯಿಗಳು.
*****ಸುದ್ದಿ ನಾಲ್ಕು: ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ತಮ್ಮ ಹಾಗೂ ತಮ್ಮ ಪಕ್ಷದ ಸಂಸ್ಥಾಪಕ ಕಾನ್ಶೀರಾಮ್ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶದ ಎಲ್ಲಡೆ ಸ್ಥಾಪಿಸಲು ನಿರ್ಧರಿಸಿ, ಇದಕ್ಕಾಗಿ ಸರಕಾರೀ ಬಾಬತ್ತಿನಲ್ಲಿ ಎರಡು ಸಾವಿರ ಕೋಟಿ ಹಣ ಮೀಸಲಿಟ್ಟಿದ್ದಾರೆ.
*****ಇವನ್ನು ಓದಿದೆ.ಯಾವ ರೀತಿಯ ಪ್ರತಿಕ್ರಿಯೆ ತೋರಿಸಬೇಕು ತಿಳೀತಿಲ್ಲ.