tag:blogger.com,1999:blog-53554005874687538632024-03-13T14:52:40.975+05:30ಹೊಸಮನೆಹುತ್ತಗಟ್ಟಿದ ಚಿತ್ತಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.comBlogger56125tag:blogger.com,1999:blog-5355400587468753863.post-3781351594475010062017-10-09T17:31:00.000+05:302017-10-09T17:31:05.762+05:30ಹರಿಗೆ ಕೊಡು ಗಾಂಡಿವವ....<div dir="ltr" style="text-align: left;" trbidi="on">
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">ಭಾಗ ೧<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಮನುಷ್ಯನ ವರ್ತನೆಗಳು ಹೊರಗಿನ ಘಟನೆಗಳಿಂದ ಕೆಲವೊಮ್ಮೆ, ಬೇರೆಯವರ ಮಾತುಗಳಿಂದ
ಕೆಲವೊಮ್ಮೆ, ನಮ್ಮದೇ ಆದ ಊಹೆಗಳಿಂದ ಕೆಲವೊಮ್ಮೆ ಪ್ರಚೋದಿತವಾಗುತ್ತವೆ. ಒಂದು ಘಟನೆ ಅಥವಾ ಮಾತು
ಅಥವಾ ಊಹೆಗಳಿಗೂ ಮತ್ತು ವ್ಯಕ್ತಿಯ ಪ್ರತಿಕ್ರಿಯೆಗಳಿಗೂ ಇರುವ ಸಂಬಂಧದ ರೂಪ ಯಾವ ರೀತಿಯದು? ಘಟನೆಯ
ಮಹತ್ವ ಅಥವ ತೀವ್ರತೆ, ಅದು ಸಂಬಂಧಿಸಿದ ವ್ಯಕ್ತಿಯ ಮೇಲೆ ಮಾಡುವ ಪರಿಣಾಮದ ಆಧಾರದಲ್ಲಿಯೇ
ವ್ಯಕ್ತವಾಗುತ್ತದೆ. ಪರಿಣಾಮವನ್ನುಂಟುಮಾಡದ, ಪ್ರತಿಕ್ರಿಯೆಯನ್ನು ಹುಟ್ಟಿಸದ ಘಟನೆ
ಗಮನೀಯವಾಗುವುದಿಲ್ಲ. ಅಂದರೆ ವ್ಯಕ್ತಿಯ ವರ್ತನೆಯ ತೀವ್ರತೆಯ ಆಧಾರದಲ್ಲಿಯೇ ನಾವು ಆ ಘಟನೆಯನ್ನು
ವ್ಯಾಖ್ಯಾನಿಸಬಹುದೇ ಹೊರತು, ಆ ತೀವ್ರತೆಯನ್ನು ಬದಿಗಿಟ್ಟು ವ್ಯಾಖ್ಯಾನಿಸಲು ಆಗುವುದಿಲ್ಲ. ಈ
ವರ್ತನೆಯನ್ನು,ಹೊರ ಘಟನೆಯನ್ನು ವರ್ಣಿಸುವಷ್ಟು ಸುಲಭದಲ್ಲಿ ವರ್ಣಿಸಲು ಆಗುವುದಿಲ್ಲ. ವ್ಯಕ್ತಿ
ಯಾಕೆ ಒಂದು ನಿರ್ದಿಷ್ಟ ರೀತಿಯಲ್ಲಿ ವರ್ತಿಸುತ್ತಾನೆ ಎಂಬುದಕ್ಕೆ ಕಾರಣಗಳನ್ನು ಹುಡುಕುವುದು
ಸುಲಭವಲ್ಲ. ಒಂದೇ ರೀತಿಯ ಪರಿಣಾಮ ಬೀರಬಹುದಾದ ಎರಡು ಘಟನೆಗಳಲ್ಲಿ ಪ್ರತಿಕ್ರಿಯೆ ಒಂದೇ
ರೀತಿಯದಾಗಿರದೆ ಭಿನ್ನವಾಗಿರಲು, ಘಟನೆಯನ್ನು ಅರ್ಥೈಸುವ ವ್ಯಕ್ತಿಯ ಗ್ರಹಿಕೆಯ ಸಂಕೀರ್ಣ
ಸ್ವರೂಪವೇ ಕಾರಣ. ಈ ರೀತಿಯ ಸಂಕೀರ್ಣ ವರ್ತನೆಯನ್ನು ವ್ಯಾಸ ಮತ್ತು ಕುಮಾರವ್ಯಾಸ ಚಿತ್ರಿಸಿದ
ಒಂದು ಸನ್ನಿವೇಶದ ಆಧಾರದಲ್ಲಿವಿಶ್ಲೇಷಣೆ ಮಾಡುವ ಪ್ರಯತ್ನ ಇಲ್ಲಿದೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಕುರುಕ್ಷೇತ್ರ ಯುದ್ಧದ ಹದಿನೇಳನೆಯ ದಿವಸ. ಕರ್ಣನ ಸೇನಾಪತ್ಯ. ಆ ದಿನ ಧರ್ಮರಾಯ ಮತ್ತು
ಕರ್ಣನಿಗೆ ಯುದ್ಧ ನಡೆಯುತ್ತದೆ. ಆ ಯುದ್ಧದಲ್ಲಿ ಅಂತಿಮವಾಗಿ ಧರ್ಮರಾಯ ಗಾಯಗೊಂಡು, ಪರಾಜಿತನಾಗುತ್ತಾನೆ.
ಕರ್ಣ ಅವನನ್ನು ಹೀಯಾಳಿಸಿ,ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಬಿಟ್ಟುಬಿಡುತ್ತಾನೆ.
ಕರ್ಣನ ಬಾಣಗಳ ಪೆಟ್ಟಿಂದ ಜರ್ಜರಿತನಾದ ಧರ್ಮರಾಯ ತನ್ನ ಬಿಡಾರಕ್ಕೆ ಮರಳುತ್ತಾನೆ.<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಧರ್ಮರಾಯನ ರಥ ಯುದ್ಧಮಧ್ಯದಲ್ಲಿ
ಬಿಡಾರದತ್ತ ತೆರಳುತ್ತಿರುವುದನ್ನು ಕಂಡ ಅರ್ಜುನನಿಗೆ ಧರ್ಮರಾಯನಿಗೆ ಏನೋ ಅಗಿದೆ ಎಂಬ
ಅನುಮಾನ ಬರುತ್ತದೆ. ಚಿಕಿತ್ಸೆಗಾಗಿ ಬಿಡಾರಕ್ಕೆ ಮರಳಿದ ಧರ್ಮರಾಯನನ್ನು ನೋಡಿ ಸಂತೈಸಲು
ಕೃಷ್ಣಾರ್ಜುನರು ರಣರಂಗದಿಂದ ಹೊರಡುತ್ತಾರೆ</span><span style="line-height: 115%;">. <o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಆಗಿನ ಅವನ ಸ್ಥಿತಿ ಮತ್ತು ಭಾವನೆಯ ಚಿತ್ರಣ ಹೀಗಿದೆ</span><span style="line-height: 115%;">,<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧</span><span style="line-height: 115%;">] …<span lang="KN">ಕಂಬನಿಗಳಾಲಿಯೊಳೀಡಿರಿದು
ಸೋರಿದವು ಸೊಂಪಡಗಿತು ಮುಖಾಂಬುಜದ</span>..(<span lang="KN">ಸಂ</span>-<span lang="KN">೧೪</span>,<span lang="KN">ಪ</span>-<span lang="KN">೧೦</span>)<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೨</span><span style="line-height: 115%;">] <span lang="KN">“ಸೇನೆ ಮುರಿಯಲಿ
ಕೌರವನ ದುಮ್ಮಾನ ಹರಿಯಲಿ ನನಗೆ ಚಿತ್ತಗ್ಲಾನಿಯೆಳ್ಳೆನಿತಿಲ್ಲ ಕಟ್ಟಲಿ ಗುಡಿಯ ಗಜನಗರ ಆ
ನರೇಂದ್ರನ ಸಿರಿಮೊಗಕೆ ದುಮ್ಮಾನವೋ ಮೇಣ್ ಸುರಪುರಕೆ ಸಂಧಾನವೋ ನಾನರಿಯನಳ್ಳೆದೆಯಾದುದೆನಗೆಂದ ||
(ಸಂ-೧೪,ಪ-೧೧)</span><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ಧರಣಿಪತಿ ಸಪ್ರಾಣನೇ ಗಜಪುರದ ರಾಜ್ಯಕೆ
ನಿಲಿಸುವೆನು ಮೇಣ್ ಸುರರೊಳಗೆ ಸಮ್ಮೇಳವೇ ಕುಂತೀಕುಮಾರಂಗೆ ಅರೆಗಳಿಗೆ ಧರ್ಮಜನ
ಬಿಟ್ಟಾನಿರೆನು........” (ಪ-೧೨)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಮೊದಲ ಚಿತ್ರಣ ಅವನ ದೈಹಿಕ ಸ್ಥಿತಿ.ಎರಡನೆಯದು ಅವನ ವೈಚಾರಿಕ ಪ್ರತಿಕ್ರಿಯೆಗಳು. ಅರ್ಜುನನಿಗೆ
ಧರ್ಮರಾಯನ ಬಗ್ಗೆ ಇರುವ ಪ್ರೀತಿ,ಗೌರವದ ತೀವ್ರತೆಯನ್ನು ಸೂಚಿಸುತ್ತವೆ. ಮತ್ತು ಅರ್ಜುನನ ಈ
ಪ್ರತಿಕ್ರಿಯೆಗಳ ಕಾರಣ ಅವನ ಊಹೆ. ಘಟನೆ ನಡೆದದ್ದು ಹೌದಾದರೂ, ಆ ಘಟನೆಯ ಅರಿವು ಅರ್ಜುನನಿಗೆ
ಇಲ್ಲ, ಆದರೆ ಊಹೆ ಮಾಡುತ್ತಿದ್ದಾನೆ. ಅವನ ಊಹೆಯೇ ಅವನ ಪ್ರತಿಕ್ರಿಯೆಗೆ ಕಾರಣವಾಗಿದೆ. ಈ ಊಹೆ
ಅವನಲ್ಲಿ ಹುಟ್ಟಿಸುವ ಪ್ರತಿಕ್ರಿಯೆ ನೇರವಾಗಿ ಅವನ ಮತ್ತು ಧರ್ಮರಾಯನ ಸಂಬಂಧದ ಮೇಲೆ
ನಿರ್ಧರಿತವಾಗಿದೆ. ಸಂಬಂಧ ಕೇವಲ ಅಣ್ಣ-ತಮ್ಮ ಎಂಬ ಸಂಬಂಧವಲ್ಲ, ಅವನಿಗೆ ಧರ್ಮರಾಯನ ಬಗ್ಗೆ ಇರುವ
ಬಂಧ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">***</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಬಿಡಾರದಲ್ಲಿರುವ ಧರ್ಮರಾಯನನ್ನು ಕಂಡಾಗ
ಅರ್ಜುನನ ಸ್ಥಿತಿ:</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ಕರಗಿತಂತಃಕರಣವಾಲಿಗಳೊರತೆಯನೆ
ಕಣ್ಣಾಲಿಯಲಿ ಕಾತರಿಸಿದವು ಜಲಬಿಂದುಗಳು .....(ಸಂ-೧೬,ಪ-೮)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಅನುಮಾನಿಸಿದಾಗ ’ಈರಿಡಿದು ಸೋರಿದ’ ಕಂಬನಿಗಳ ಜೊತೆಗೆ ಈಗ ಅಂತಃಕರಣವೂ ಕರಗಿದೆ. ಆದರೆ ಈಗ
ಅವನ ಪ್ರತಿಕ್ರಿಯೆ ಇದಕ್ಕೂ ಮಿಕ್ಕಿ ಹೋಗುತ್ತಿಲ್ಲ. ಊಹಿಸಿದ ಸಂದರ್ಭದಲ್ಲಿ ಊಹೆಗೆ ಮಿತಿ
ಇರದಿದ್ದ ಕಾರಣ ಆತ ಆ ಮಾತುಗಳನ್ನು ಆಡಿದ್ದ. ಅವು, ಈಗಾಗಲೆ ಗಮನಿಸಿದಂತೆ ಸ್ಥಿತಿಯಿಂದ
ಪ್ರೇರಿತವಾಗಿರದೆ, ಊಹೆಯಿಂದ ಪ್ರೇರಿತವಾಗಿದ್ದವು. ಇಲ್ಲಿ ಸ್ಥಿತಿ ಅವನ ಎದುರಿದೆ. ಧರ್ಮರಾಯ
ಮರಣಿಸಿಲ್ಲ, ಘಾಯಗೊಂಡಿದ್ದಾನೆ, ಚಿಕಿತ್ಸೆ ನಡೆಯುತ್ತಿದೆ. ಆದ್ದರಿಂದ ಉಳಿದ ಯಾವ ರೀತಿಯ
ಪ್ರತಿಕ್ರಿಯೆಗಳಿಗೂ ಇಲ್ಲಿ ಪ್ರಚೋದನೆ ಇಲ್ಲ. ಅರ್ಜುನ “ಚೇಷ್ಟಾಪರಿಗತಿಯನಾರೈವುತಭಿಮುಖನಾಗಿ
ಕುಳ್ಳಿರ್ದ”(ಪ-೮).</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">***</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ಹರಿಕರಾಬ್ಜಸ್ಪರ್ಷ ಮಾತ್ರ
ಸ್ಫುರಣದಿಂದಾಪ್ಯಾಯಿತಾಂತಃಕರಣನಾದ”(ಪ-೧೦)ಧರ್ಮರಾಯನಿಗೆ ಎಚ್ಚರವಾಗುತ್ತದೆ. ಎದುರು ಕುಳಿತ
ಅರ್ಜುನನನ್ನು ಕಂಡ ಅವನ ಪ್ರತಿಕ್ರಿಯೆ ಏನು? </span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ಹದುಳವೇ ಪಾರ್ಥಂಗೆ?(ಪ-೧೧)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಪಾರ್ಥ ಕ್ಷೇಮವೇ ಎಂಬ ಅವನ
ಪ್ರಶ್ನೆಯಲ್ಲಿ ಕಾಳಜಿಯಿಲ್ಲ, ವ್ಯಂಗ್ಯವಿದೆ.ಇದು ಮುಂದಿನ ಅವನ ಮಾತುಗಳಿಂದ ಸ್ಪಷ್ಟವಾಗುತ್ತದೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೨] “ಕರ್ಣಂಗೆ ಮಾಡಿದುಪಾಯವಾವುದು”
(ಪ-೧೨)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೩]“ಬೇರೆ ಸಮಸಪ್ತಕರೊಳೆಕ್ಕಟಿ ತೋರಿದೆ
ತೋರಿಸಿದೆ ನೀ ತೊಂಡಿನೋಲೆಯಕಾರತನವನು”[ಪ-೧೩]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೪]“ಸೂತತನಯನ ಗೆಲಿದು ಬಂದೆಯೋ
ದಿವಿಜನಗರಿಗೆ ಕಳುಹಿ ಬಂದೆಯೋ ಕಂಡು ಕೆಣಕದೆ ಬಂದೆಯೋ” [ಪ-೧೪]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೫] ...ಉಳುಹಿಬಿಡುವನೇ ಸಮರ ಮುಖದಲಿ
ಮಲೆತನಾದರೆ ಕರ್ಣನು....(ಪ-೧೪)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಧರ್ಮರಾಯನ ಈ ಮಾತುಗಳ ಕಾರಣ ಏನು? ತಾನು ಯುದ್ಧದಲ್ಲಿ ಸೋತದ್ದು ಮತ್ತು ಆ ಸೋಲನ್ನು
ಅವಮಾನ ಎಂದು ಭಾವಿಸಿದ್ದು. ಅರ್ಜುನನನ್ನು ತನ್ನ ಸೋಲಿಗೆ ಜವಾಬ್ದಾರನನ್ನಾಗಿ ಮಾಡುವ ಅಗತ್ಯವೇ
ಇಲ್ಲ. ಆದರೆ ಧರ್ಮರಾಯ ತನ್ನ ಸೋಲಿನ ಕಾರಣವನ್ನು ಅರ್ಜುನನ ನಿಷ್ಕ್ರಿಯತೆ ಎಂಬಂತೆ
ಭಾವಿಸಿದ್ದಾನೆ. ತನ್ನನ್ನು ಕಾಪಾಡಲು ಆತ ಬರಲಿಲ್ಲ ಎಂಬುದು ಧರ್ಮರಾಯನಲ್ಲಿ, ಅರ್ಜುನನ ಬಗ್ಗೆ
ಸಿಟ್ಟು ಉಕ್ಕುವಂತೆ ಮಾಡಿದೆ. (ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ ಬಂದು...ಸಂ-೧೬,ಪ-೨೬).
ನಿರೀಕ್ಷೆಯ ಈ ವೈಫಲ್ಯ ಅವನ ಎಲ್ಲ ವರ್ತನೆಗಳನ್ನು ಪ್ರಚೋದಿಸುತ್ತಿದೆ. ಧರ್ಮರಾಯ ಕರ್ಣನ ವೀರತ್ವವನ್ನು
ಅರ್ಜುನನ ವೀರತ್ವದೊಡನೆ ಹೋಲಿಸುತ್ತಾ ಅರ್ಜುನನನ್ನು ಹೀಯಾಳಿಸುತ್ತಿದ್ದಾನೆ. ಎಲ್ಲೂ ತನ್ನ
ದೌರ್ಬಲ್ಯವನ್ನು ಹೇಳಿಕೊಳ್ಳುತ್ತಿಲ್ಲ. ಯುದ್ಧದಲ್ಲಿ ಸೋಲು ಮತ್ತು ಗೆಲವು ಸಹಜ ಎಂಬ ಅರಿವು
ಧರ್ಮರಾಯನಿಗೆ ಇದ್ದಿದ್ದರೆ ಈ ಮಾತುಗಳು ಬರುತ್ತಲೇ ಇರಲಿಲ್ಲ.ತನ್ನ ಸೋಲನ್ನು ಅವನು ಗ್ರಹಿಸಿದ
ರೀತಿ ಅವನ ವರ್ತನೆಗಳನ್ನು ಪ್ರಚೋದಿಸುತ್ತಿದೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಅರ್ಜುನ ಧರ್ಮರಾಯನ ಈ ಹೀಯಾಳಿಕೆಗಳಿಗೆ ವ್ಯಗ್ರನಾಗುವುದಿಲ್ಲ. ಧರ್ಮರಾಯನ ಎಲ್ಲ ಮಾತುಗಳು
ಆತನಿಗೆ ಹಳಹಳಿಕೆಗಳಂತೆ ಅನಿಸುತ್ತವೆ. ಅವನಿಗೆ ಕರ್ಣನನ್ನು ಎದುರಿಸಿ ಗೆಲ್ಲುವ ಆತ್ಮ
ವಿಶ್ವಾಸವಿದೆ. ಹಾಗಾಗಿ ಅವನು ತಾನು ಕರ್ಣನನ್ನು ಕೊಲ್ಲುತ್ತೇನೆ, ಚಿಂತೆ ಬಿಡು ಎಂದು
ಹೇಳುತ್ತಾನೆ. ಈ ಮಾತನ್ನು ಆಡಲು ಪ್ರಚೋದನೆ ತನ್ನ ಬಗ್ಗೆ ಇರುವ ಆತ್ಮವಿಶ್ವಾಸ ಮತ್ತು
ಧರ್ಮರಾಯನನ್ನು ಸಂತೈಸಲು ಬಯಸಿದ ಅವನ ಬಯಕೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;"> ಪ್ರತಿಕ್ರಿಯೆಗಳು ಸರಪಳಿಯ ಕೊಂಡಿಯಂತಿರುತ್ತವೆ. ಘಟನೆಗಳು
ಘಟನೆಗಳಿಗೆ, ಮಾತು ಮಾತಿಗೆ ಕಾರಣವಾಗುತ್ತಾ ಹೋಗುತ್ತದೆ. ಆದರೆ ಕೆಲವೊಮ್ಮೆ ಈ ಕೊಂಡಿ ತಪ್ಪಿದಾಗ
ವರ್ತನೆಗಳು ಅನಿರೀಕ್ಷಿತವಾದ ದಿಕ್ಕಗೆ ಪಲ್ಲಟಿಸುತ್ತವೆ. ಅರ್ಜುನ ನೀಡಿದ ಭರವಸೆ ಧರ್ಮರಾಯನಿಗೆ
ಸಮಾಧಾನ ತರಬೇಕಿತ್ತು. ಆದರೆ ಆತ ಈ ಕೊಂಡಿಯನ್ನು ಗ್ರಹಿಸಲು, ಒಪ್ಪಲು ಸಿದ್ಧನಿಲ್ಲ. ಆತನ ವರ್ತನೆ
ಈ ಹೊಸ ಕಾರಣದಿಂದ (ಅರ್ಜುನನ ಭರವಸೆ) ಪ್ರಚೋದಿತವಾಗುವ ಬದಲು, ಹಳೆಯ ಕಾರಣಗಳಲ್ಲಿಯೇ
ಉಳಿದುಬಿಟ್ಟಿದೆ.ಹಾಗಾಗಿ ಆತ ಅರ್ಜುನನ ಮಾತುಗಳನ್ನು ನಂಬದೆ, ಆಡುವ ಮಾತುಗಳು ಇನ್ನೂ
ಹರಿತವಾಗುತ್ತವೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ನಾಲಗೆಯ ನೆಣಗೊಬ್ಬು ಮಿಕ್ಕು
ಛಡಾಳಿಸಿದರೇನಹುದು ಕರ್ಣನ ಕೋಲಗರಿ ಸೋಂಕಿದರೆ ಸೀಯದೆ ಸಿತಗತನ ನಿನಗೆ..”[ಸಂ-೧೬,ಪ-೧೭]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ನಿನಗೆ ಮಣಿವವನಲ್ಲ ರಾಧಾತನಯ”[ಪ-೧೮]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ಕರ್ಣಜಯವತಿ ಸುಲಭವೇ
ನಿನ್ನಂದದವರಿಗೆ..”[ಪ-೧೯]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ಜಾಣತನದಲಿ ಕಾದಿ ಹಿಂಗುವ
ದ್ರೋಣನಲ್ಲಳವಿಯಲಿ ಕಳವಿನ ಕೇಣದಲಿ ಕೊಂಡಾಡುವರೆ ಗಾಂಗೇಯನಿವನಲ್ಲ..[ಪ-೨೦]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ನಿನ್ನ ಗಂಟಲ ಗಾಳ”[ಪ-೨೧]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಈ ಎಲ್ಲ ಮಾತುಗಳ ಮೂಲಕ ಅರ್ಜುನನ ಶೌರ್ಯ ಮತ್ತು ಪ್ರಾಮಾಣಿಕತೆಯನ್ನು ಧರ್ಮರಾಯ
ಶಂಕಿಸುತ್ತಿದ್ದಾನೆ.ಧರ್ಮರಾಯನ ಈ ಎಲ್ಲ ಹೀಯಾಳಿಕೆಯ ಮಾತುಗಳನ್ನು ಅರ್ಜುನ ಸಮಾಧಾನದಿಂದಲೇ
ಸ್ವೀಕರಿಸುತ್ತಾನೆ. ಧರ್ಮರಾಯನನ್ನು ರಕ್ಷಿಸುವ ಉದ್ದೇಶದಿಂದ ಬರುತ್ತಿರುವಾಗ ಸುಶರ್ಮ, ಅಶ್ವತ್ಥಾಮ
ಅವರು ತನ್ನನ್ನು ಅಡ್ಡಗಟ್ಟಿದಾಗ, ಅವರನ್ನು ನಿವಾರಿಸಿ
ಬಂದ ಕಾರಣ ತಾನು ಬರುವುದು ತಡವಾಯಿತು ಎಂದು ವಿವರಿಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಕೌರವರ ಜತೆ ಯುದ್ಧದಲ್ಲಿ ನಿರತನಾದ ಕಾರಣದಿಂದ ತಡವಾಯಿತು,ಇಲ್ಲವಾದರೆ ಅರ್ಜುನ ತನ್ನ
ಕಾಪಾಡಲು ಬಹಳ ಬೇಗ ಬರುತ್ತಿದ್ದ..ಆಹಾ ಎಂಬ ವ್ಯಂಗ್ಯದ ಮಾತನ್ನು ಧರ್ಮರಾಯ ಆಡುತ್ತಾನೆ. ತನಗೆ
ಅಭ್ಯಾಸವಾಗಿರುವ ವನವಾಸವೇ ಸಾಕು, ಸಿರಿಯೇ ಬೇಕು ಅನಿಸಿದರೆ ಸಂಧಿ ಮಾಡಿಕೊಂಡು ಬದುಕಿದರಾಯಿತು, ಧೃತರಾಷ್ಟ್ರನ
ಸೇವೆ ಮಾಡುತ್ತಾ ಇರಬಹುದು ಎಂದೂ ಉದ್ಗರಿಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“ಅರಳಿಚದೆ ಮಧುಮಾಸ ಮಾಣಲಿ ವರುಷ ಋತುವೇ
ಸಾಕು ಜಾತಿಗೆ ಜರಡರೆಮಗಿನ್ನೇನು ಪೂರ್ವಪ್ರಕೃತಿ ವನವಾಸ| ಸಿರಿಗೆ ಕಕ್ಕುಲಿತೆಯೇ ವಿಪಕ್ಷವ ಬೆರಸಿ
ಬದುಕುವೆವೈಸಲೇ ವರಗುರುವಲಾ ಧೃತರಾಷ್ಟ್ರನೂಣಯವೇನು ಹೇಳೆಂದ..[ಪ-೩೨]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಮುಂದುವರೆದು “ಬರಿದೆ ಬಯಸಿದಡಹುದೆ
ರಾಜ್ಯದ ಹೊರಿಗೆಯನು ನಿಶ್ಯಂಕೆಯಲಿ ಹೊಕ್ಕಿರಿದು ಬಹ ಸತ್ವಾತಿಶಯ ಬೇಹುದು ರಣಾಗ್ರದಲಿ ಇರಿದು ಮೇಣ್
ಕುಕ್ಕುರಿಸುವರೆ ರಾಧೇಯನಂತಿರಲುರುವನೊಬ್ಬನೆ ಬೇಹುದಲ್ಲದಡಿಲ್ಲ ಜಯವೆಂದ” [ಪ-೩೩] ಎಂದು
ತೀರ್ಮಾನಿಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಧರ್ಮರಾಯನ ಈ ಎಲ್ಲ ಮಾತುಗಳು
ಅಭಿವ್ಯಕ್ತಿಸುವ ಭಾವಗಳನ್ನು ಗಮನಿಸಬೇಕು.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ಬೇಸರ ಮತ್ತು ವಿಷಾದ-ಅರ್ಜುನನಿಗೆ
ತನ್ನನ್ನು ರಕ್ಷಿಸುವಲ್ಲಿ ತೀವ್ರತೆ ಇರಲಿಲ್ಲ (......ಒಲವರವು ನಿನಗುಳ್ಳರಾಗಳೆ ನಿಲಿಸಿದಾ ನೀ
ಬಂದು ಬಯಲಗ್ಗಳಿಕೆಯನೆ ಬಿಡೆ ಕೆದರುತಿಹೆ...ಸಂ-೧೬,ಪ-೨೬)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">೨] ನಿರಾಶೆ.[ಪ-೩೨]<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">೩] ಶಂಕೆ.[ಪ-೧೭,೧೮,೧೯,೨೦,೨೧]<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೪] ನಿರೀಕ್ಷೆ-ಜಯದ ನಿರೀಕ್ಷೆ ಮತ್ತು ಆ
ನಿರೀಕ್ಷೆ ಈಡೇರಿಸುವ ವೀರರು ತಮ್ಮ ಪಕ್ಷದಲ್ಲಿಇಲ್ಲ ಎಂಬ ಸಂದೇಹ. ಅಂದರೆ ಭೀಮಾರ್ಜುನರ ಬಗ್ಗೆ
ಅನುಮಾನ.[ಪ-೩೩]</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ.ಯುದ್ಧದಲ್ಲಿ ತಾನು ಸೋತ ಅನಂತರ ಕರ್ಣನನ್ನು ಯಾರಿಗೂ
ಸೋಲಿಸಲು ಆಗುವುದಿಲ್ಲ ಮತ್ತು ಆ ಕಾರಣದಿಂದ ತಮಗೆ ರಾಜ್ಯ ಸಿಗುವುದಿಲ್ಲ ಎಂಬ ಧರ್ಮರಾಯನ ಭಾವನೆ
ಅವನ ಈ ಎಲ್ಲ ವರ್ತನೆಗಳನ್ನು ಪ್ರಚೋದಿಸಿದೆ.ಕರ್ಣ ಅವನನ್ನು ಹೀಯಾಳಿಸಿದ್ದು,</span><span style="line-height: 115%;">(<span lang="KN">
೧] ಕೌರವರಾಯನನು ಮರೆವೊಕ್ಕು ಬದುಕಾ (ಕ.ಪ, ಸಂ-೧೧,ಪ-೫೭)</span><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೨] ನಿಮಗೀ ಕದನ ಕರ್ಕಶವಿದ್ಯೆಯೇಕೆಂದ..(ಪ-೫೯)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಅಥವಾ ತಾಯಿಗೆ ಮಾತು ಕೊಟ್ಟಿರುವ ಕಾರಣಕ್ಕಾಗಿ ನಿನ್ನ ಕೊಲ್ಲುವುದಿಲ್ಲ</span><span style="line-height: 115%;">(<span lang="KN">ಕೊಲುವೆಡವ್ವೆಗೆ
ಕೊಟ್ಟಮಾತಿಂಗಳುಕುವೆನು ನೀ ಹೋಗು...(ಸಂ-೧೧,ಪ-೬೧) ಎಂಬ ಕರ್ಣನ ಮಾತು ಧರ್ಮರಾಯನಲ್ಲಿ ಯಾವುದೇ
ಭಾವನೆಯನ್ನು ಅಥವ ಕುತೂಹಲವನ್ನು ಹುಟ್ಟಿಸಿಲ್ಲ.<o:p></o:p></span></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">ಅದೇ ಸಂದರ್ಭದಲ್ಲಿ ಅರ್ಜುನನಿಗೆ ಇರುವ
ಭಾವನೆಗಳು.<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ದುಃಖ ಮತ್ತು ಪ್ರೀತಿ-ಧರ್ಮರಾಯನ
ಸ್ಥಿತಿಯನ್ನು ಕಂಡು ದುಃಖ. ಅವನನ್ನು ಬಿಟ್ಟು ತಾನಿರಲಾರೆ ಎಂಬ ಅವನ ಮಾತು.(ಸಂ-೧೪,ಪ-೧೧,೧೨)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">೨] ಅಸಹಾಯಕತೆ- ಸುಶರ್ಮ ಮತ್ತು
ಅಶ್ವತ್ಥಾಮ ತನ್ನನ್ನು ತಡೆದ ಕಾರಣ ತಾನು ಕಾಪಾಡಲು ಆಗಲಿಲ್ಲ.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">೩] ಭರವಸೆ.-ಕರ್ಣನನ್ನು ಕೊಲ್ಲುತ್ತೇನೆ
.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಪ್ರಸ್ತುತ ಸನ್ನಿವೇಶಕ್ಕೆ ತಕ್ಕುದಾಗಿರುವ ಪ್ರತಿಕ್ರಿಯೆ ಅರ್ಜುನನದು. ಅಣ್ಣನ ಮೇಲಿರುವ
ಪ್ರೀತಿ, ಗೌರವ ಅವನ ಈಗಿನ ಸ್ಥಿತಿಯನ್ನು ಕಂಡು ದುಃಖಿಸುವಂತೆ ಮಾಡಿದೆ. ನನ್ನನ್ನು ನೀನು
ಕಾಪಾಡಲಿಲ್ಲ ಎಂಬ ಅರೋಪಕ್ಕೆ ಅವನು ಕೊಡುವ ವಿವರಣೆ ಸತ್ಯ ಮತ್ತು ಸಹಜವಾದದ್ದು. ಕರ್ಣನ ವೀರತ್ವದ
ಬಗ್ಗೆ ಅವನಾಡಿದ ಯಾವ ಮಾತನ್ನೂ ನಿರಾಕರಿಸದೆ ತಾನು ಅವನನ್ನು ಕೊಲ್ಲುತ್ತೇನೆ ಎಂಬಷ್ಟೆ ಮಾತು ಕೂಡ
ಸಹಜವಾದ ಪ್ರತಿಕ್ರಿಯೆ.<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಆದರೆ ಈ ಅಭಿಪ್ರಾಯಗಳನ್ನು ಧರ್ಮರಾಯನ ವರ್ತನೆಗಳಿಗೆ ಅನ್ವಯಿಸುವುದು ಕಷ್ಟ. ಯುದ್ಧದಲ್ಲಿ
ಅಪಜಯವಾಗಬಾರದು, ಗಾಯವಾಗಬಾರದು ಎಂಬ ಅವನ ನಿರೀಕ್ಷೆ ತಪ್ಪು. ಯುದ್ಧದಲ್ಲಿ ತನ್ನನ್ನು ಅರ್ಜುನ
ಬಂದು ಕಾಪಾಡಬೇಕು ಎಂಬ ಅವನ ನಿರೀಕ್ಷೆಯೂ ತಪ್ಪು. ಅವೆಲ್ಲಕ್ಕಿಂತ ಮುಖ್ಯವಾಗಿ ಅವನ ಈ
ದುಃಸ್ಥಿತಿಗೆ ಅರ್ಜುನ ಕಾರಣ ಎಂಬ ಆಪಾದನೆ ಔಚಿತ್ಯ ಮೀರಿದ ಮಾತು. ಆದರೂ ಆತ ಆಡಿದ್ದನ್ನು
ಗಮನಿಸಿದರೆ ವರ್ತಮಾನದ ತಲ್ಲಣಗಳು ಮನುಷ್ಯನ ಒಳಗೆ ಸುಪ್ತವಾಗಿರುವ ಗುಣವನ್ನು ಅಥವ ಅವಗುಣವನ್ನು
ಹೇಗೆ ಪ್ರಕಟಪಡಿಸುತ್ತವೆ ಎಂಬುದರ ಸೂಚಕವಾಗುತ್ತದೆ. ಇದೇ ಧರ್ಮರಾಯ ತುಂಬಿದ ಸಭೆಯಲ್ಲಿ
ದ್ರೌಪದಿಗೆ ಅವಮಾನವಾಗುತ್ತಿದ್ದಾಗ ಮೌನಿಯಾಗಿದ್ದ, ಮಾತ್ರವಲ್ಲ ಭೀಮನನ್ನು ಸುಮ್ಮನಾಗಿರಿಸಿದ್ದ. ಆ
ಸ್ಥಿತಿ ಅವನ ವೈಯಕ್ತಿಕ ಅನುಭವವಾಗಿರದ ಕಾರಣ ಅವನು ಅದನ್ನು ಧರ್ಮದ ಹಿನ್ನೆಲೆಯಲ್ಲಿ ಶೋಧಿಸಲು
ಸಾಧ್ಯವಾಯಿತು. ಆ ಸಂದರ್ಭದಲ್ಲಿ ಧರ್ಮದ ಹಿನ್ನೆಲೆ ಅವನ ವರ್ತನೆಗಳನ್ನು ನಿಯಂತ್ರಿಸಿತು.ಇಲ್ಲಿ
ಅನುಭವ ವೈಯಕ್ತಿಕವಾದದ್ದು. ಅನುಭವ ವೈಯಕ್ತಿಕವಾಗಿರುವಾಗ ಪ್ರತಿಕ್ರಿಯೆಯೂ ನಿಯಮಗಳನ್ನು ಮೀರಿ
ವೈಯಕ್ತಿಕವಾಗಿಬಿಟ್ಟಿದೆ. ತಾನು ಅನುಭವಿಸುವಾಗ ನಿಯಮಪಾಲನೆಯನ್ನು ಉಲ್ಲಂಘಿಸುವುದು ಅವನ ಅರಿವನ್ನೂ ಮೀರಿ
ನಡೆದುಬಿಡಬಹುದು. ಅಥವಾ ಅಂತಹ ಸಂದರ್ಭಗಳಲ್ಲಿ ನಿಯಮಗಳನ್ನು ಅನ್ವಯಿಸಲು ಅಗತ್ಯವಿರುವ
ವಿವೇಚನಾಶಕ್ತಿ ಕುಂಠಿತವಾಗಬಹುದು. ಅಥವಾ ತನ್ನ ವಿಫಲತೆಯ ಕಾರಣಗಳನ್ನು ತನ್ನ ಹೊರತಾದ ಮತ್ತೊಂದರಲ್ಲಿ
ಹುಡುಕುವ ಸ್ವಭಾವ ಇರಬಹುದು. </span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ತಾನು ಮತ್ತೆ ವನವಾಸಕ್ಕೆ ಹೋಗಲು ಸಿದ್ಧ ಅಥವ ಧೃತರಾಷ್ಟ್ರನ ಸೇವೆ ಮಾಡುತ್ತಾ
ಇರುತ್ತೇನೆ. ನಿನಗೆ ಯುದ್ಧದಲ್ಲಿ ಗೆಲ್ಲುವ ಆಸೆ ಇದ್ದರೆ ನಿನ್ನ ಗಾಂಡಿವವನ್ನು ಕೃಷ್ಣನಿಗೆ
ಕೊಟ್ಟು ನೀನು ಅವನ ಸಾರಥಿಯಾಗು ಎಂಬ ಅತಿ ವ್ಯಂಗ್ಯದ ಮಾತನ್ನು ಧರ್ಮರಾಯ ಆಡುತ್ತಾನೆ.(ಬವರ
ಗೆಲುವರೆ ಹರಿಗೆ ಕೊಡು ಗಾಂಡಿವವ ಸಾರಥಿಯಾಗು ನೀ.......ಸಂ-೧೬,ಪ-೩೪)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">***</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಈ ಮಾತನ್ನು ಕೇಳಿದ ಅರ್ಜುನ ಕತ್ತಿಯನ್ನು ಹಿಡಿದು ಧರ್ಮರಾಯನನ್ನು ಕೊಲ್ಲಲು
ಹೊರಡುತ್ತಾನೆ.ತನ್ನ ಗಾಂಡಿವದ ಬಗ್ಗೆ ಅವಹೇಳನೆಯ ಮಾತನ್ನು ಆಡಿದವರನ್ನು ಕೊಲ್ಲುತ್ತೇನೆ ಎಂಬುದು
ಅವನು ತಾನಾಗಿಯೇ ಮಾಡಿಕೊಂಡ ಶಪಥ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“........ಮೇಲುಮೇಲುಬ್ಬೇಳ್ವ ರೋಷಜ್ವಾಲೆ
ಹೊದಿಸಿತು ವದನವನು ಕಣ್ಣಾಲಿ ಕಾಹೇರಿದವು ......(ಸಂ-೧೭,ಪ-೧)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">ಮುಖದಲ್ಲಿ ಸಿಟ್ಟು ಉಕ್ಕಿತು. ಕಣ್ಣು
ಸಿಟ್ಟಿಂದ ಕಾದವು. ಧರ್ಮರಾಯನ ರಥ ಬಿಡಾರಕ್ಕೆ ಮರಳುವುದು ಕಂಡಾಗ, ಅವನಿಗೇನಾಯಿತೋ ಎಂಬ ಶಂಕೆ
ಹುಟ್ಟಿದ್ದಾಗ, ಸೊಂಪಡಗಿದ್ದ ಮುಖ ಮತ್ತು ನೀರು ತುಂಬಿದ್ದ ಕಣ್ಣುಗಳೇ ಈಗ ಸಂಪೂರ್ಣ ಭಿನ್ನ
ಭಾವವನ್ನು ಪ್ರಕಟಿಸುತ್ತಿವೆ. ಅಣ್ಣನಿಲ್ಲದೆ ತಾನು ಬದುಕಿರಲಾರೆ ಎಂದ ಅರ್ಜುನ ಈಗ ಅಣ್ಣನನ್ನು
ಉಳಿಸುವುದಿಲ್ಲ ಎಂದು ಹೊರಟಿದ್ದಾನೆ. ತನ್ನ ಬಗ್ಗೆ ಆಡಿದ ಎಲ್ಲ ಅವಹೇಳನವನ್ನೂ ಸಂಯಮದಿಂದ
ಸ್ವೀಕರಿಸಿದ್ದ ಅರ್ಜುನ ಗಾಂಡಿವದ ಬಗ್ಗೆ ಆಡಿದ ಮಾತಿಗೆ ವ್ಯಗ್ರನಾಗಿದ್ದಾನೆ.<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಅರ್ಜುನನ ಈ ವರ್ತನೆ ಧರ್ಮರಾಯ ಅವನನ್ನು ಹೀಯಾಳಿಸಿದ್ದಕ್ಕೆ ಅಥವ ಕರ್ಣನನ್ನು
ಹೊಗಳಿದ್ದಕ್ಕೆ ಅಲ್ಲ. ಧರ್ಮರಾಯನ ಆ ಮಾತುಗಳಿಗೆ ಅರ್ಜುನ ಸ್ವಾಭಾವಿಕವಾದ ನೆಲೆಯಲ್ಲಿ
ಪ್ರತಿಕ್ರಿಯೆ ತೋರಿಸಿದ್ದಾನೆ. ಆದರೆ ಇಲ್ಲಿ ಆತ ವ್ಯಗ್ರನಾಗಲು ಕಾರಣ ಗಾಂಡೀವ ಹಿಡಿಯಲು ತಾನು
ಯೋಗ್ಯನಲ್ಲ ಎಂಬ ಧರ್ಮರಾಯನ ಮಾತು. ಇಲ್ಲಿ ಅವನ ವರ್ತನೆ ಬದಲಾಗಲು ಅವನ ತನಗೆ ತಾನೇ ಮಾಡಿಕೊಂಡಿರುವ
ಶಪಥ. ಅಂದರೆ ಧರ್ಮರಾಯನ ಮಾತುಗಳಿಗಿಂತ, ತನ್ನ ಶಪಥಕ್ಕೆ ಆದ ಅವಹೇಳನ ಅವನ ವರ್ತನೆಯನ್ನು
ಪ್ರಚೋದಿಸಿದೆ. </span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಹೀಗೆ ಬದಲಾದ ಅರ್ಜುನ ಒರೆಯಿಂದ ತನ್ನ ಕತ್ತಿಯನ್ನು ತೆಗೆದು “ರೌದ್ರಸ್ಥಾಯಿಭಾವದ
ಭಾರದಲಿ” ಧರ್ಮರಾಯನತ್ತ ನಡೆದ. ಗಾಬರಿಗೊಂಡ ದ್ರೌಪದಿ ಅಡ್ಡಬರುತ್ತಾಳೆ. ಉಳಿದವರು
ಶೋಕಿತರಾಗುತ್ತಾರೆ. ಕೃಷ್ಣ ಅರ್ಜುನನನ್ನು ಹಿಡಿದುಕೊಳ್ಳುತ್ತಾನೆ. ಅವನನ್ನು ತಡೆಯಬೇಡಿ, ಆತನ
ರಾಜಕಾರ್ಯವನ್ನು ಕೆಡಿಸಬೇಡಿ, ತನ್ನ ಕಣ್ಣೀರಿನಿಂದಲೇ ತನ್ನನ್ನು ಅವನಿಗೆ ಧಾರೆಯೆರೆದೆ ಎಂದು
ಧರ್ಮರಾಯ ಉದ್ಗರಿಸುತ್ತಾನೆ. ಅರ್ಜುನ ತನ್ನನ್ನು ಕೊಲ್ಲಲು ಹೊರಟಿದ್ದಾನೆ ಎಂಬುದು ಧರ್ಮರಾಯನಿಗೆ
ಹೊಳೆದಿದೆ. ಆದರೆ ಈಗಲೂ ತನ್ನ ತಪ್ಪೇನು ಎಂಬುದು ಹೊಳೆದಿಲ್ಲ. ಅಥವಾ ಅರ್ಜುನನ ಈ ಪ್ರತಿಕ್ರಿಯೆಗೆ
ಕಾರಣವನ್ನು ತಿಳಿಯುವ ವ್ಯವಧಾನವಿಲ್ಲ. ನಿನ್ನ ಈ ವರ್ತನೆಗೆ ಕಾರಣವೇನು ಎಂದು ಕೃಷ್ಣ
ಅರ್ಜುನನನ್ನು ವಿಚಾರಿಸಿದಾಗ, ನಿನಗೆ ಗಾಂಡೀವವೇತಕೆ ಎಂದು ಅವಹೇಳನ ಮಾಡಿದವರನ್ನು ನಾನು
ಉಳಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ, ಈಗ ಈ ಅರಸ ಆ ನ್ಯಾಯವಲ್ಲದ ಮಾತನ್ನು ಆಡಿದ್ದು
ನೀವೆಲ್ಲ ಕೇಳಿದಿರಿ, ಅದು ಸರಿಯೇ ಕೃಷ್ಣ ನೀನು ಹೇಳು
ಎಂದು ಅರ್ಜುನ ಉತ್ತರಿಸುತ್ತಾನೆ. ಅವನ ಆ ಮಾತನ್ನು ಕೇಳಿದ ಧರ್ಮರಾಯ ತಮ್ಮನ ಭಾಷೆ
ಉಳಿಯಲಿ, ತನಗೆ ರಾಜ್ಯ, ಶರೀರ ಎರಡರ ಮೇಲೂ ಆಸೆಯಿಲ್ಲ ಎಂದು ಉತ್ತರಿಸುತ್ತಾನೆ.(ಸಂ-೧೭,ಪ-೧೦
....ಲೇಸುಲೇಸಿದು ತಮ್ಮನಾಡಿದ ಭಾಷೆ ಬಾಹಿರವಾಗಬೇಡ ವಿನಾಶಕಾನಂಜೆನು.........ಆಶೆಯೆನಗೀ
ರಾಜ್ಯದಲಿ ಮೇಣೀ ಶರೀರದಲಿಲ್ಲ......) ಅರ್ಜುನ ಪ್ರಶ್ನೆ ಕೇಳಿದ್ದು ಕೃಷ್ಣನಿಗೆ, ಉತ್ತರ
ಕೊಟ್ಟಿದ್ದು ಧರ್ಮರಾಯ. ಆ ಉತ್ತರವೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಉತ್ತರವಲ್ಲ, ಇನ್ನಷ್ಟು
ಹದಗೆಡಿಸುವ ಉತ್ತರ. ಈ ಸಮಸ್ಯೆಗೆ ವ್ಯಾವಹಾರಿಕವಾದ ಉತ್ತರವಿಲ್ಲ ಎಂಬುದನ್ನು ಗ್ರಹಿಸಿದ ಕೃಷ್ಣ,
ಧರ್ಮರಾಯನನ್ನು ಸುಮ್ಮನಿರೆಂದು ಗದರಿಸಿ (ಪ-೧೧....ಮರುಳೆ ಮೋನದೊಳಿರು) ಅರ್ಜುನನಿಗೆ,
ಅಣ್ಣನನ್ನು ಕೊಲ್ಲಬಯಸುವ ಅವನ ಕ್ರಿಯೆ ಧರ್ಮವಲ್ಲ ಎಂದು ವಿವರಿಸುತ್ತಾನೆ. ವೈಯಕ್ತಿಕ ನೆಲೆಯಲ್ಲಿ
ಹುಟ್ಟಿದ ಸಂಘರ್ಷವನ್ನು ಧರ್ಮದ ನೆಲೆಯಲ್ಲಿ ವಿವರಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ
ತಂತ್ರಗಾರಿಕೆ ಕೃಷ್ಣನದು</span><span lang="KN" style="line-height: 115%;">.</span><span lang="KN" style="line-height: 115%;"> </span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಅರ್ಜುನನಲ್ಲಿ ಇದು ಒಂದು ಬಿಕ್ಕಟ್ಟನ್ನು ಹುಟ್ಟಿಸುತ್ತದೆ. ಪ್ರತಿಜ್ಞೆ
ಈಡೇರಿಸದಿರುವುದು ವೈಯಕ್ತಿಕ ನೆಲೆಯಲ್ಲಿ ಅವಮಾನದ ಸಂಗತಿ, ಸ್ವಧರ್ಮವಲ್ಲ. ಕೃಷ್ಣ ಹೇಳುತ್ತಾನೆ
ಪ್ರತಿಜ್ಞೆ ಈಡೇರಿಸುವುದು ಅಧರ್ಮದ ಕಾರ್ಯ. ಈ ಬಿಕ್ಕಟ್ಟನ್ನು, ಬಿಕ್ಕಟ್ಟು ಹುಟ್ಟಲು ಕಾರಣವಾದ
ಕೃಷ್ಣನೇ ಪರಿಹರಿಸಬೇಕು. ಅರ್ಜುನ ಹಾಗಿದ್ದರೆ ತನ್ನ ಪ್ರತಿಜ್ಞೆ ನೆರವೇರಬೇಕು, ಅಣ್ಣ ಸಾಯಲೂ
ಬಾರದ ಆ ಉಪಾಯವನ್ನು ನೀನೇ ಹೇಳು ಎಂದು ವಿನಂತಿಸುತ್ತಾನೆ.
<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">“ಆವ ಪರಿಯಲಿ ತನ್ನ ಸತ್ಯದ ಠಾವು
ನಿಲುವುದು ರಾಯನುಪಹತಿ ಯಾವ ಪರಿಯಿಂದಾಗದಿಹುದದನರಿದು ಬೆಸಸೆಂದ” (ಸಂ-೧೭,ಪ-೨೫)<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಈ ಪ್ರಶ್ನೆ ಕೃಷ್ಣನಲ್ಲೂ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ. ಗಾಂಡಿವವನ್ನು ತ್ಯಜಿಸು
ಎಂದವರನ್ನು ಕೊಲ್ಲುತ್ತೇನೆ ಎಂಬ ಅರ್ಜುನನ ಪ್ರತಿಜ್ಞೆ ಭಂಗವಾಗುವ ಹಾಗಿಲ್ಲ. ಹಾಗಂತ ಅದು ಪ್ರಸ್ತುತ
ಸನ್ನಿವೇಶದಲ್ಲಿ ನೆರವೇರಲೂಬಾರದು. ಪ್ರತಿಜ್ಞೆ ಭಂಗವಾಗುವುದು ಸರಿ ಎಂದು ಕೃಷ್ಣ ಹೇಳುವಂತಿಲ್ಲ, ಪ್ರತಿಜ್ಞೆ
ನೆರವೇರಲಿ ಎಂದೂ ಹೇಳುವಂತಿಲ್ಲ.ಇದು ಕೃಷ್ಣನ ಸಮಸ್ಯೆ. ಗಮನಿಸಬೇಕಾದ ಅಂಶವೆಂದರೆ ಧರ್ಮರಾಯನಿಗೆ ಈ
ಬಿಕ್ಕಟ್ಟು ತಟ್ಟಿಯೇ ಇಲ್ಲ. ಅರ್ಜುನನ ಮನಸ್ಸಿನ ತಾಕಲಾಟಕ್ಕೆ ಆತ ಸಂಪೂರ್ಣ
ಸಂವೇದನಾಶೀಲರಹಿತನಾಗಿದ್ದಾನೆ. ಅವನ ವರ್ತನೆಗಳನ್ನು ಈಗಲೂ ಸಧ್ಯದ ಸನ್ನಿವೇಶದ ಬದಲು ಹಿಂದೆ ನಡೆದ
ಘಟನೆಯೇ ನಿಯಂತ್ರಿಸುತ್ತಿದೆ. ತನ್ನನ್ನು ಕೊಂದು
ಅರ್ಜುನ ತನ್ನ ಭಾಷೆಯನ್ನುಳಿಸಿಕೊಳ್ಳಲಿ ಎಂದು ಬಿಡುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;"> ವ್ಯಾವಹಾರಿಕವಾಗಿ ಬಗೆಹರಿಸಲಾರದ ಸಮಸ್ಯೆ ಇದು
ಎಂದರಿತ ಕೃಷ್ಣ, ಅದನ್ನು ಪರಿಹರಿಸಲು, ಮಾನವಂತನಾದ ಧರ್ಮರಾಯನನ್ನು ನೀನು ಅವಹೇಳನ ಮಾಡು, ಅದು
ಸಾವಿಗೆ ಸಮಾನ ಎಂದು ಅರ್ಜುನನಿಗೆ ಸೂಚಿಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">“.....ಲೋಗರ ಹಳಿವುದೇ ವಧೆ....”(ಪ-೨೬)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಅವನ ಸಲಹೆಯನುಸಾರವಾಗಿ ಅರ್ಜುನ
ಧರ್ಮರಾಯನನ್ನು ಹೀಯಾಳಿಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ನೆಲನ ಕೊಂಡರು ನಿನ್ನ ಮೋರೆಯ ಬಲುಹು
ಕಂಡೇ ಕೌರವರು (ಸಂ-೧೭,ಪ-೨೮)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೨] ನಿನ್ನ ಜೂಜಿನ ವಿಲಗದಲಿ ಸಂಪನ್ನ
ರಾಜ್ಯವ ಬಿಸುಟು ನಿನ್ನಯ ಬೆನ್ನಲಿ ಅಡವಿಯಲಾಡಿದೆವು (ಪ-೨೯)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೩] ರಣದ ಘಾರಾಘಾರಿಯಾರೋಗಣೆಯ
ಮನೆಯಲ್ಲ..(ಪ-೩೦)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೪]ಒಂದು ತೂರಂಬಿನಲಿ ಗಡ ನೀನಿಂದು ಜೀವವ
ಜಾರಿಸುವೆ ಸುಡಲಿಂದುಕುಲಕಂಟಕರಿನಿರಿದರೆ ದೋಷವೇನೆಂದ(ಪ-೩೨)</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಅರ್ಜುನನ ಈ ಮಾತುಗಳು ತುಂಬಾ ಕುತೂಹಲಕಾರಿಯಾಗಿವೆ. ಆತ ಧರ್ಮರಾಯ ಮಾಡದೇ ಇರುವುದನ್ನು ಹೇಳಿ
ಹೀಯಾಳಿಸುತ್ತಿಲ್ಲ, ಆತನಿಂದ ಘಟಿಸಿದ್ದನ್ನೇ ಹೇಳುತ್ತಿದ್ದಾನೆ. ಆ ಘಟನೆಗಳು ನಡೆದಾಗ, ಅವು
ತಪ್ಪು ಎಂದು ಹೇಳಿರದಿದ್ದ ಅರ್ಜುನ ಈಗ ಅವು ತಪ್ಪು ಎಂದು ಘೋಷಿಸುತ್ತಿದ್ದಾನೆ. ಆತ ಇಲ್ಲಿ
ಹೇಳುತ್ತಿರುವುದು ಧರ್ಮರಾಯನ ದೌರ್ಬಲ್ಯಗಳನ್ನು ಮತ್ತು ಆ ದೌರ್ಬಲ್ಯಗಳು ಹುಟ್ಟಿಸಿದ ಪರಿಣಾಮಗಳನ್ನು.
ಅರ್ಜುನನ ಮನಸ್ಸಿನಲ್ಲಿ ಸುಪ್ತವಾಗಿ ಧರ್ಮರಾಯನ ಬಗ್ಗೆ ಈ ಅಭಿಪ್ರಾಯಗಳು ಹುದುಗಿದ್ದವು. ಅಣ್ಣ
ದೇವರ ಸಮಾನ ಎಂಬ ಸಾಮಾಜಿಕ ಮತ್ತು ಧಾರ್ಮಿಕವಾಗಿರಬಹುದಾದ ನಂಬಿಕೆಯಿಂದ ಆತ ಸುಮ್ಮನಿದ್ದನೇ ಹೊರತು
ಧರ್ಮರಾಯನ ವರ್ತನೆಗಳನ್ನು ಪೂರ್ಣ ಮನಸ್ಸಿಂದ ಒಪ್ಪಿ ಬೆಂಬಲಿಸಿ ಅಲ್ಲ ಎಂಬ ಅನುಮಾನ ಬರುತ್ತದೆ.
ಅಣ್ಣನ ಕೈಗಳನ್ನು ಸುಟ್ಟುಬಿಡುತ್ತೇನೆ ಎಂದು ದ್ಯೂತದ ಸಮಯದಲ್ಲಿ ಎದ್ದು ನಿಂತಿದ್ದ ಭೀಮನನ್ನು
ನಿಯಂತ್ರಿಸಿದ್ದ ಅರ್ಜುನ, ಇವತ್ತು ಕುಲಕಂಟಕರನಿರಿದರೆ ದೋಷವೇನು ಎಂದು ಪ್ರಶ್ನಿಸುತ್ತಾನೆ. ಅಲ್ಲಿ
ಕೈಯನ್ನು ಸುಡುವುದು ಅಧರ್ಮವಾಗಿತ್ತು. ಇಲ್ಲಿ ಧರ್ಮರಾಯ ಕುಲಕಂಟಕ ಮತ್ತು ಅವನನ್ನು ಕೊಲ್ಲುವುದು
ತಪ್ಪಲ್ಲ. ಈ ಕೊನೆಯ ಮಾತು ಧರ್ಮರಾಯನ ದೋಷವನ್ನು ಹೇಳುವ ಮಾತಲ್ಲ. ಕೃಷ್ಣ ಹೇಳಿದ್ದು ಅವನನ್ನು
ಹೀಯಾಳಿಸು ಎಂದು. ಆದರೆ ಈ ಕೊನೆಯ ಮಾತಲ್ಲಿ ಅರ್ಜುನ ತಾನು ಮಾಡಲು ಹೊರಟಿದ್ದ ತನ್ನ ಕೃತ್ಯದ
ಸಮರ್ಥನೆ ಮಾಡಿಕೊಂಡ ಮತ್ತು ಧರ್ಮರಾಯನನ್ನು ಕೊಂದರೆ ತಪ್ಪಿಲ್ಲ ಎಂಬ ಅಭಿಪ್ರಾಯವನ್ನು
ವ್ಯಕ್ತಪಡಿಸಿದ. ಧರ್ಮರಾಯನನ್ನು ’ಇಂದುಕುಲಕಂಟಕ’ ಎಂದು ಎಂದದ್ದು ಮಾತ್ರವಲ್ಲದೆ ಅವನನ್ನು
ಕೊಲ್ಲುವುದು ದೋಷವಲ್ಲ ಎಂದೇ ಅನ್ನುತ್ತಾನೆ. ಇದು ಹೀಯಾಳಿಕೆಯ ಗಡಿಯನ್ನು ದಾಟಿ ತೀರ್ಮಾನದ
ರೂಪವನ್ನು ಪಡೆದಿದೆ.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಈ ಮಾತು ಅತ್ಯಂತ ವಿಚಿತ್ರವಾಗಿ ಅರ್ಜುನ ಮತ್ತು ಧರ್ಮರಾಯ ಇಬ್ಬರ ಮೇಲೂ ಪರಿಣಾಮ
ಬೀರುತ್ತದೆ. ಕೃಷ್ಣ ತಮ್ಮ ದೈವ, ರಕ್ಷಕ, ಹಿತೈಷಿ ಮತ್ತು ಕೃಷ್ಣನ ಸಲಹೆಯಂತೆ ಆಡಿದ ಮಾತುಗಳಿವು
ಎಂಬ ಅರಿವು ಇಬ್ಬರಿಗೂ ಇರುವುದರಿಂದ ಪ್ರಸಂಗ ಅಲ್ಲಿಗೇ
ಮುಗಿಯಬೇಕಿತ್ತು. ಹಾಗಾಗುವುದಿಲ್ಲ.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಮನುಷ್ಯನ ಸಂವೇದನೆ ಯಾವ ರೀತಿಯಲ್ಲಿ ಯಾವಾಗ ವರ್ತಿಸುತ್ತದೆ ಎಂಬುದು ಅನೂಹ್ಯ. ಹೀಗೆ
ಮಾಡು ಎಂಬ ಸಲಹೆ ಕೃಷ್ಣನದು. ಕ್ರಿಯೆ, (ಹೀಯಾಳಿಸುವುದು) ಕೃಷ್ಣನ ಸಲಹೆಯನ್ನು ಪಾಲಿಸಿದೆ. ಆದರೆ
ಕ್ರಿಯೆಯ ಪರಿಣಾಮ ವೈಯಕ್ತಿಕವಾದದ್ದು, ಅದರ ಮೇಲೆ ಸಲಹೆ ನೀಡಿದವನ ನಿಯಂತ್ರಣವಿಲ್ಲ. ಪ್ರತಿಕ್ರಿಯೆ
ಹೀಗೇ ಇರಲಿ ಎಂದು ಕೃಷ್ಣ ನಿಯಮಿಸುವಂತಿಲ್ಲ. ಅದು ಧರ್ಮರಾಯ ಮತ್ತು ಅರ್ಜುನ ಅವರಿಬ್ಬರ ಸಂವೇದನೆಯ
ಸ್ವರೂಪ ಮತ್ತು ತೀವ್ರತೆಯನ್ನು ಅವಲಂಬಿಸಿದೆ.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">ಅಂತೆಯೇ ಆಗಿದೆ.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಅರ್ಜುನ: ಒರೆಯಿಂದ ಕತ್ತಿಯನ್ನು ಮತ್ತೆ ಎಳೆದು ತನ್ನನ್ನು ಕೊಂದುಕೊಳ್ಳಲು
ಹೊರಡುವುದು.(ಸಂ-೧೭,ಪ-೩೩).ಧರ್ಮರಾಯನನ್ನು ಕೊಂದ ಬಳಿಕ ತನಗೂ ಬದುಕು ಬೇಡ ಎಂಬುದು ಅವನು ಈ
ಕೃತ್ಯಕ್ಕೆ ನೀಡುವ ಸಮರ್ಥನೆ.(ಪ-೩೪)<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಇದನ್ನು ತಡೆಯುವ ಕೃಷ್ಣ ಆತ್ಮಹತ್ಯೆ ಮಹಾಪಾಪ ಎಂದು ಅರ್ಜುನನಿಗೆ ಹೇಳಿ, ತನ್ನನ್ನು ತಾನೇ
ಹೊಗಳಿಕೊಳ್ಳುವುದು ಸಾವಿಗೆ ಸಮಾನ, ನಿನ್ನ ನೀನೆ
ಹೊಗಳಿಕೊಂಡು ನಿನ್ನನ್ನು ಕೊಂದುಕೋ ಎಂಬ ಸಲಹೆ ನೀಡುತ್ತಾನೆ. ಪರರನ್ನು ತೆಗಳುವುದು ಪರರನ್ನು ಕೊಂದಂತಾದರೆ,
ತನ್ನ ಬಗ್ಗೆಯೇ ತನ್ನ ಹೊಗಳಿಕೆ ತನ್ನನ್ನು ಕೊಂದುಕೊಂಡಂತೆ.(...ನಿನ್ನಗ್ಗಳಿಕೆಗಳ ನೀನಾಡಿ
ನಿನ್ನನೇ ಕೊಂದುಕೊಳ್ಳೆಂದ|| ಪ-೩೫)</span><span style="line-height: 115%;">.<span lang="KN"> ಅರ್ಜುನ ಹಾಗೆಯೇ ಮಾಡುತ್ತಾನೆ.<o:p></o:p></span></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">ಧರ್ಮರಾಯ: ಇವನ ಪ್ರತಿಕ್ರಿಯೆ ಮಾತ್ರ
ಸಂಪೂರ್ಣವಾಗಿ ಅನಿರೀಕ್ಷಿತವಾದದ್ದು.<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">೧) ಕೃಷ್ಣನಿಕ್ಕಿದ ಗಂಟಿನಲಿ ಸಿಲುಕದಿರು
ತನ್ನಯ ಗಂಟಲಿದೆ ಶಸ್ತ್ರೌಘವಿದೆ(ಪ-೩೯)<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">೨) ಇರಿದ ಕರ್ಣನೇ ಸಾಲದೇ ಪೆಣನಿರಿದು
ಪಗೆಯೇಕೆ..(ಪ-೪೧)<o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">
ಕೃಷ್ಣನ ಮಾತಿನಲ್ಲಿ ಸಿಕ್ಕಿಕೊಳ್ಳಬೇಡ, ತನ್ನನ್ನು ಕೊಲ್ಲು, ಈಗಾಗಲೇ ಕರ್ಣನಿಂದ
ಕೊಲ್ಲಲ್ಪಟ್ಟಿರುವ ತಾನು ಹೆಣಕ್ಕೆ ಸಮಾನ, ಯುದ್ಧದಲ್ಲಿ ಗೆದ್ದರೆ ಭೀಮನನ್ನು ಅರಸನನ್ನಾಗಿ ಮಾಡು,
ನಕುಲ ಸಹದೇವರನ್ನು ಪಾಲಿಸು ಇತ್ಯಾದಿ ವಿನಂತಿಸಿಕೊಂಡ ಧರ್ಮರಾಯ ಎದ್ದು ಕಾಡಿಗೆ ಹೊರಡುತ್ತಾನೆ. ಅವನನ್ನು
ದ್ರೌಪದಿ,ನಕುಲ,ಸಹದೇವರು ಉಳಿದವರು ಅನುಸರಿಸುತ್ತಾರೆ.<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಕುಲಕಂಟಕ ಎಂಬ ಅರ್ಜುನನ ಮಾತು ಧರ್ಮರಾಯನನ್ನು ಇನ್ನಷ್ಟು ಘಾತಿಸುತ್ತದೆ. ಅದು ಅವನ
ದೌರ್ಬಲ್ಯಗಳ ಬಗ್ಗೆ ಹೇಳಿದ ಮಾತಾಗದೆ ಅವನ ಮಟ್ಟಿಗೆ ಅವನ ವ್ಯಕ್ತಿತ್ವವನ್ನು ಅಳೆದ
ಮಾತಾಗುತ್ತದೆ. ಆ ಹಿನ್ನೆಲೆಯಲ್ಲಿ ಅರ್ಜುನನ ಮಾತನ್ನು ಗ್ರಹಿಸಿದ ಆತ ಅರಮನೆಯಿಂದ ಕಾಡಿನತ್ತ
ಹೊರಡುತ್ತಾನೆ. ಅನಂತರ ಅರ್ಜುನ ಹೋಗಿ ಅವನ ಕಾಲು ಹಿಡಿದು ಕ್ಷಮೆ ಕೋರುತ್ತಾನೆ. ಕೃಷ್ಣನೂ
ಪಾರ್ಥನನ್ನು ಕ್ಷಮಿಸು ಎಂದು ಧರ್ಮರಾಯನಿಗೆ ಹೇಳುತ್ತಾನೆ. ಧರ್ಮರಾಯ ಒಪ್ಪಿ ಪ್ರಕರಣ
ಸುಖಾಂತ್ಯವಾಗುತ್ತದೆ. ಹೀಗೆ ಒಪ್ಪುವಾಗಲೂ ಧರ್ಮರಾಯ ತಾನಾಡಿದ ಅನುಚಿತವಾದ ಮಾತಿಗೆ ಪಶ್ಚಾತಾಪ
ವ್ಯಕ್ತಪಡಿಸುವುದಿಲ್ಲ. ಆತ ಅದರ ಕಾರಣ ದ್ವಾಪರ ಮತ್ತು ಕಲಿ ಸಂಧಿಸುತ್ತಿರುವ ಸಮಯದಲ್ಲಿ ಕಲಿಯ
ಪ್ರಭಾವ ದ್ವಾಪರದ ಮೇಲೂ ಆಗುತ್ತಿರುವುದೇ ಈ ಮಾತಿನ ಯುದ್ಧಕ್ಕೆ ಕಾರಣ ಎಂದು ಅರ್ಥೈಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">“ಹಿಂಗದಿನ್ನೂ ದ್ವಾಪರದ ಸರ್ವಾಂಗವೀ
ದ್ವಾಪರದ ಸೀಮಾಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡಸೋಹಿನಲಿ ಸಂಗಡಿಸಿತಧೋರತ್ತರದ ಸಮರಂಗ....”<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಸನ್ನಿವೇಶವನ್ನು ಅರ್ಥೈಸುವ ವಿಧಾನ ಮತ್ತು ಒಂದು ಅನುಚಿತವಾದ ಮಾತು ಹುಟ್ಟಿಸಬಹುದಾದ
ಅನರ್ಥ ಪರಂಪರೆ ಯಾವ ಮಟ್ಟದ್ದಾಗಬಹುದು ಎಂಬುದು ಇಲ್ಲಿ ವ್ಯಕ್ತವಾಗಿದೆ. ಹರಿಗೆ ಕೊಡು ಗಾಂಡಿವವ
ಎಂಬ ಅನುಚಿತ ಮಾತು ಧರ್ಮರಾಯನದು. ಆ ಮಾತಿನಿಂದ ಬೆಳೆದ ಸನ್ನಿವೇಶದ ಅಂತ್ಯದಲ್ಲಿ ಅರ್ಜುನನೇ
ಧರ್ಮರಾಯನ ಕಾಲು ಹಿಡಿದು ಕ್ಷಮೆ ಕೇಳುವ ಹಂತ ತಲುಪಿದೆ. ತನ್ನ ಅನುಚಿತ ಮಾತಿಗೆ ಧರ್ಮರಾಯನ
ಪ್ರತಿಕ್ರಿಯೆ ಏನು? ಆತ ಅಂತಹ ಮಾತಾಡಿದ್ದಕ್ಕೆ ಪಶಾತ್ತಾಪ ಕೂಡ ಪಡುವುದಿಲ್ಲ</span><span style="line-height: 115%;">. <span lang="KN">ತನ್ನ
ಶತಾಪರಾಧವನ್ನು ಮನ್ನಿಸು ಎಂದು ಅರ್ಜುನನೇ ಕಾಲಿಗೆ ಬೀಳುತ್ತಾನೆ</span>.<span lang="KN">
ಕುಮಾರವ್ಯಾಸ ನಿರ್ವಹಿಸಿದ ರೀತಿಯನ್ನು ಗಮನಿಸಿದರೆ ಎಲ್ಲ ತಪ್ಪೂ ಅರ್ಜುನನದು ಎಂಬಂತೆ
ಭಾಸವಾಗುತ್ತದೆ. ಸಲಹೆ ಕೊಟ್ಟ ಕೃಷ್ಣನಿಗೂ, ಧರ್ಮರಾಯನ ಕಾಡಿನತ್ತ ಹೊರಟು ನಿಂತಾಗ ಅವನ ತೀರ್ಮಾನವನ್ನು ನಿಯಂತ್ರಿಸಲಾಗಲಿಲ್ಲ. ಅರ್ಜುನ ಕಾಲಿಗೆ
ಬಿದ್ದು ತನ್ನದು ತಪ್ಪಾಯಿತು ಎಂದ ಅನಂತರ ಧರ್ಮರಾಯ ತುಸು ಮೃದುವಾದಾಗ, ಕೃಷ್ಣ ಅರಮನೆಗೆ ಮರಳು
ಎಂದು ಸೂಚಿಸುತ್ತಾನೆ.</span><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಇಡೀ ಸನ್ನಿವೇಶದಲ್ಲಿ ಧರ್ಮರಾಯನ ವರ್ತನೆಯೂ ಸಂಯಮ ಮೀರಿದ್ದಾದರೂ</span><span style="line-height: 115%;">, <span lang="KN">ಅನುಚಿತವಾಗಿದ್ದರೂ
ತಪ್ಪೆಲ್ಲ ಅರ್ಜುನನದು ಎಂಬಂತೆ ಕುಮಾರವ್ಯಾಸನಲ್ಲಿ ಚಿತ್ರಿತವಾಗಿದೆ.</span><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">***</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span lang="KN" style="line-height: 115%;"><span style="font-family: Times, Times New Roman, serif; font-size: xx-small;">ಭಾಗ -೨<o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ವ್ಯಾಸರಲ್ಲಿ ಧರ್ಮರಾಯನ ವರ್ತನೆ ಮತ್ತು ಆತ ಅರ್ಜುನನ ಮೇಲೆ ಮಾಡುವ ಆರೋಪ ತುಸು ಬೇರೆ
ರೀತಿಯದು.ಅವುಗಳನ್ನು ಹೀಗೆ ಸಂಗ್ರಹಿಸಬಹುದು.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ಸೂತಪುತ್ರನಾದ ಕರ್ಣನಿಂದ ತಾನು
ಪರಾಜಿತನಾದದ್ದು ತನಗೆ ಅವಮಾನಕರವಾಗಿದೆ. ದ್ರೋಣ ಮತ್ತು ಭೀಷ್ಮ ಅವರು ತನ್ನನ್ನು ಈ ರೀತಿ
ಅವಮಾನಿಸಿರಲಿಲ್ಲ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೨] ಯುದ್ಧಮಾಡಲು ತಾನು ಅಶಕ್ತ ಎಂಬ
ರೀತಿಯಲ್ಲಿ ಕರ್ಣ ತನ್ನ ಬಗ್ಗೆ ವರ್ತಿಸಿದ್ದು.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಈ ಎರಡು ಮಾತುಗಳಲ್ಲಿ ವ್ಯಕ್ತವಾಗುವ
ಸೂಕ್ಷ್ಮಗಳನ್ನು ಗಮನಿಸಬೇಕು. ೧] ಯುದ್ಧದಲ್ಲಿ ಸೋಲು-ಗೆಲುವು ಸಹಜ ಎಂಬುದನ್ನು ಧರ್ಮರಾಯ
ಸ್ವೀಕರಿಸಿಲ್ಲ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೨] ಸೂತನಿಂದ ತಾನು ಸೋಲಿಸಲ್ಪಟ್ಟೆ ಎಂಬ
ಕೀಳರಿಮೆ ಮತ್ತು ತನ್ನನ್ನು ಅಶಕ್ತ ಎಂದು ಕರ್ಣ ಬಿಟ್ಟುಬಿಟ್ಟಿದ್ದು ತನಗಾದ ಅವಮಾನ ಎಂಬ ಭಾವನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">ಧರ್ಮರಾಯ ಅರ್ಜುನನ ಬಗ್ಗೆ ಎತ್ತುವ
ಆಕ್ಷೇಪಗಳು ಹೀಗಿವೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೧] ನನಗೆ ವನವಾಸದ ಸಮಯದಲ್ಲಿ ಕರ್ಣನ
ಬಗ್ಗೆ ತುಂಬಾ ಭಯವಿತ್ತು.ನೀನು ಯಾವಾಗಲೂ ಕರ್ಣನನ್ನು ಕೊಲ್ಲುತ್ತೇನೆ ಎಂದು ಹೇಳುತ್ತಿದ್ದೆ.ನಿನ್ನ
ಆ ಭರವಸೆಯನ್ನು ನಂಬಿ ನಾನು ಯುದ್ಧಕ್ಕೆ ಸಿದ್ಧನಾದೆ. ಈಗ ನೀನು ರಣರಂಗದಲ್ಲಿ ಭೀಮನನ್ನು ಬಿಟ್ಟು
ಕರ್ಣನಿಗೆ ಹೆದರಿ ಬಂದೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೩] ನಿನಗೆ ಸಾಮರ್ಥ್ಯವಿಲ್ಲದಿದ್ದರೆ
ಕೇಶವನಿಗೆ ಗಾಂಡಿವ ಕೊಟ್ಟು ಸಾರಥಿಯಾಗು. ನಿನಗೆ, ನಿನ್ನ ಶಕ್ತಿಗೆ, ನಿನ್ನ ಧನುಸ್ಸಿಗೆ, ರಥಕ್ಕೆ
ಧಿಕ್ಕಾರವಿರಲಿ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಕುಮಾರವ್ಯಾಸನಲ್ಲಿ ಧರ್ಮರಾಯನ ಆಕ್ಷೇಪ ಅರ್ಜುನ ತನ್ನನ್ನು ಕಾಪಾಡಲಿಲ್ಲ ಎಂಬುದು. ವ್ಯಾಸರಲ್ಲಿ
ಅರ್ಜುನ ತಾನಿತ್ತ ಭರವಸೆಯನ್ನು ಈಡೇರಿಸದ ಕಾರಣ ಈ ಸ್ಥಿತಿ ಬಂದಿದೆ ಎಂಬುದು.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೩] ವ್ಯಾಸರಲ್ಲಿ ಕೃಷ್ಣ ಧರ್ಮರಾಯನ
ತಪ್ಪನ್ನೂ ಎತ್ತಿ ತೋರಿಸುತ್ತಾನೆ. ಅರ್ಜುನನ ಪ್ರತಿಜ್ಞೆ ತಿಳಿದಿದ್ದೂ ನೀನು ಗಾಂಡಿವವನ್ನು
ಅವಮಾನಿಸಿದ್ದು ತಪ್ಪು ಎಂಬುದು ಅವನ ಅಭಿಪ್ರಾಯ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೪] ಅರ್ಜುನನ ಪ್ರತಿಜ್ಞೆ ಭಂಗವಾಗಬಾರದು
ಮತ್ತು ನೀನು ಹತನಾಗಬಾರದು ಎಂಬ ಉದ್ದೇಶದಿಂದ ನಾವು ಮಾಡಿದ ಈ ಕೃತ್ಯವನ್ನು ಕ್ಷಮಿಸು ಎಂದು ಕೃಷ್ಣ
ಧರ್ಮರಾಯನ ಪಾದಗಳಿಗೆ ಅರ್ಜುನನ ಜೊತೆ ನಮಸ್ಕರಿಸುತ್ತಾನೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">೫] ಧರ್ಮರಾಯ ತಾನು ಗಾಂಡಿವವನ್ನು
ಹಳಿದದ್ದು ತಪ್ಪು, ಆ ನನ್ನ ಅಪರಾಧವನ್ನು ಕ್ಷಮಿಸಿ ಎಂದು ವಿನಂತಿಸುವುದು.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">***</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಕುಮಾರವ್ಯಾಸನಲ್ಲಿ ಎಲ್ಲವೂ ಅರ್ಜುನನ ತಪ್ಪು ಎಂಬಂತೆ ಚಿತ್ರಿಸಲ್ಪಟ್ಟಿದೆ. ವ್ಯಾಸರಲ್ಲಿ
ಹೀಗಿಲ್ಲ. ಧರ್ಮರಾಯ ಮತ್ತು ಕೃಷ್ಣ ಇವರೂ ಕೂಡ ತಮ್ಮ ವರ್ತನೆಗೆ ಕ್ಷಮೆ ಕೋರುವ ಮೂಲಕ
ಸನ್ನಿವೇಶಕ್ಕೆ ಒಂದು ಪೂರ್ಣರೂಪದ ಚೌಕಟ್ಟನ್ನು ಹಾಕುತ್ತಾರೆ. ಕುಮಾರವ್ಯಾಸನಲ್ಲಿ ಧರ್ಮರಾಯನಿಗೆ
ಕಡೆಗೂ ತನ್ನ ತಪ್ಪಿನ ಅರಿವಾಗುವುದಿಲ್ಲ ಮತ್ತು ಕೃಷ್ಣ ಅದನ್ನು ಸೂಚಿಸುವುದೂ ಇಲ್ಲ. ಸಮಸ್ಯೆಯ
ಹುಟ್ಟಿಗೆ ಕಾರಣವಾದ ಧರ್ಮರಾಯ ಅದರ ಪರಿಹಾರಕ್ಕೆ ಏನೂ ಪ್ರಯತ್ನಪಡದಿರುವಂತೆ ಚಿತ್ರಣವಿದೆ. ಬಿಕ್ಕಟ್ಟನ್ನು
ಬಗೆಹರಿಸಲು ಅರ್ಜುನನಿಗೆ ಇರುವ ಕಳಕಳಿಯ ಒಂದಂಶವೂ ಧರ್ಮರಾಯನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆ
ಮಟ್ಟಿಗೆ ಧರ್ಮರಾಯನ ವ್ಯಕ್ತಿತ್ವ ಮುಕ್ಕಾಗುತ್ತದೆ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">***</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<span style="font-family: Times, Times New Roman, serif; font-size: xx-small;"><span lang="KN" style="line-height: 115%;">
ಇಲ್ಲಿ ಇನ್ನೊಂದು ಪ್ರಶ್ನೆಯನ್ನೂ ಕೇಳಿಕೊಳ್ಳಬಹುದು. ದ್ಯೂತದ ಸಂದರ್ಭದಲ್ಲಿ ದ್ರೌಪದಿಗೆ
ಅವಮಾನವಾಗುವಾಗ ಧರ್ಮರಾಯ ತಾನೂ ಸುಮ್ಮನಿದ್ದು, ಭೀಮನನ್ನೂ ಸುಮ್ಮನಿರಿಸುತ್ತಾನೆ. (ಸಭಾಪರ್ವ,ಸಂಧಿ-೧೫,ಪದ್ಯ-೯೩).
ಅರ್ಜುನನೂ ಧರ್ಮರಾಯನ ಕೈಸುಡುವ ಪ್ರಸ್ತಾಪ ಬೇಡ ಎಂದು ಸಮಾಧಾನಿಸುತ್ತಾನೆ.(ಸಭಾಪರ್ವ,ಸಂಧಿ-೧೫,ಪದ್ಯ-೯೦).
ಅಲ್ಲಿ ಆಗುತ್ತಿರುವ ಅವಮಾನ ಧರ್ಮರಾಯನಿಗೂ ಅಲ್ಲ, ಅರ್ಜುನನಿಗೂ ಅಲ್ಲ. ಆದ್ದರಿಂದ ಅದನ್ನು
ವೈಯಕ್ತಿಕ ನೆಲೆಯಿಂದ ದೂರವಿಟ್ಟು ಧರ್ಮದ ನೆಲೆಯಲ್ಲಿ ಗ್ರಹಿಸಲು ಇಬ್ಬರಿಗೂ ಸಾಧ್ಯವಾಗಿದೆ. ಇಲ್ಲಿ
ಅವಮಾನ ತನಗೇ ಆಗಿರುವ ಕಾರಣ ಧರ್ಮರಾಯನ ವರ್ತನೆಯನ್ನು ನಿಯಂತ್ರಿಸುತ್ತಿರುವ ಸಂಗತಿ ಧರ್ಮದ ಪರಿಕಲ್ಪನೆಯಲ್ಲ,
ವೈಯಕ್ತಿಕ ಅವಮಾನದ ಭಾವನೆ. ಪರರ ಬಿಕ್ಕಟ್ಟನ್ನು ಧರ್ಮದ ಮೂಲಕ ಗ್ರಹಿಸುವಷ್ಟು ಸರಳವಾಗಿ ತಮ್ಮ
ಬಿಕ್ಕಟ್ಟನ್ನು ಗ್ರಹಿಸಲು ಆಗುವುದಿಲ್ಲ ಎಂಬುದಕ್ಕೆ ಈ ಪ್ರಸಂಗ ದೃಷ್ಟಾಂತವಾಗಿದೆ. ಭೀಮ ದ್ರೌಪದಿಯ ಅವಮಾನವನ್ನು ತಮಗಾದ
ಅವಮಾನ ಎಂದೇ ಆ ಸಂದರ್ಭದಲ್ಲಿ ಭಾವಿಸಿದ್ದ. ಆತನಿಗೆ ದ್ರೌಪದಿಗೆ ಆಗುತ್ತಿರುವ ಅವಮಾನವನ್ನು ನೋಡಿ
ಸುಮ್ಮನಿರುವುದು ಅಧರ್ಮ ಅನಿಸಿದರೆ, ಧರ್ಮರಾಯನಿಗೆ ಧರ್ಮದ ಕಾರಣದಿಂದ ಸುಮ್ಮನಿರಲೇಬೇಕಾಗಿದೆ
ಅನಿಸಿತ್ತು. ವರ್ತನೆಯಲ್ಲಿ ಕಂಡುಬರುವ ಈ ವ್ಯತ್ಯಾಸಕ್ಕೆ ಸನ್ನಿವೇಶವನ್ನು ಗ್ರಹಿಸುವ ರೀತಿ
ಕಾರಣ.</span><span style="line-height: 115%;"><o:p></o:p></span></span></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<div class="MsoNormal" style="text-align: justify;">
<br /></div>
<br />
<div class="MsoNormal" style="text-align: justify;">
<br /></div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com2tag:blogger.com,1999:blog-5355400587468753863.post-20633859356654874222016-10-07T11:51:00.000+05:302016-10-07T11:51:02.779+05:30ಚಕ್ರವ್ಯೂಹ.<div dir="ltr" style="text-align: left;" trbidi="on">
<div class="MsoNormal">
<span lang="KN" style="line-height: 115%;">ವ್ಯಾಸರಲ್ಲಿ:</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಕುರುಕ್ಷೇತ್ರ ಯುದ್ಧದ ಹದಿಮೂರನೆಯ ದಿನ ದ್ರೋಣರು ಚಕ್ರವ್ಯೂಹವನ್ನು ರಚಿಸುತ್ತಾರೆ</span><span style="line-height: 115%;">.<span lang="KN">ಈ
ಚಕ್ರವ್ಯೂಹವನ್ನು ಭೇದಿಸುವ ತಂತ್ರವನ್ನು ಬಲ್ಲವರು ಆ ಕಾಲದಲ್ಲಿ ಕೃಷ್ಣ, ಅರ್ಜುನ,ಪ್ರದ್ಯುಮ್ನ
ಮತ್ತು ಅಭಿಮನ್ಯು ಮಾತ್ರ. ಈ ನಾಲ್ವರಲ್ಲಿ ಅಭಿಮನ್ಯುವಿಗೆ ವ್ಯೂಹವನ್ನು ಪ್ರವೇಶಿಸುವ ತಂತ್ರ
ಗೊತ್ತಿದೆ,ಅಲ್ಲಿಂದ ಪಾರಾಗಿ ಹೊರಬರುವ ತಂತ್ರ ತಿಳಿದಿಲ್ಲ.ಅದರ ಕಾರಣ, ಅಭಿಮನ್ಯು ಹೇಳುವ
ಪ್ರಕಾರ, ಆತನಿಗೆ ಅರ್ಜುನ ಪ್ರವೇಶಿಸುವ ರೀತಿಯನ್ನು ಮಾತ್ರ ಕಲಿಸಿದ್ದು.(ಮೂಲಮಹಾಭಾರತ-ದ್ರೋಣಪರ್ವ-೩೫ನೆಯ
ಅಧ್ಯಾಯ).</span><o:p></o:p></span></div>
<div class="MsoNormal">
<span lang="KN" style="line-height: 115%;">ಚಕ್ರವ್ಯೂಹವನ್ನು ನಿರ್ಮಿಸಿದ ದ್ರೋಣರು ಯುದ್ಧಕ್ಕೆ
ಆಹ್ವಾನಿಸುತ್ತಾರೆ.ಸಂಸಪ್ತಕರೊಡನೆ ಅರ್ಜುನ ಯುದ್ಧನಿರತನಾಗಿರುವ ಕಾರಣದಿಂದ ಧರ್ಮರಾಯ
ಚಕ್ರವ್ಯೂಹವನ್ನು ಭೇದಿಸು ಎಂದು ಅಭಿಮನ್ಯುವನ್ನು ಕೇಳಿಕೊಳ್ಳುತ್ತಾನೆ. ಆತ ಅಭಿಮನ್ಯುವಿಗೆ
ಹೇಳುವ ಮಾತು: “ಈ ವ್ಯೂಹವನ್ನು ಭೇದಿಸಿ ನೀವು ಪಾಂಡವಸೇನೆಯನ್ನು ನಾಶ ಮಾಡುತ್ತಿದ್ದ ದ್ರೋಣರನ್ನು
ತಡೆಯಲಿಲ್ಲ ಎಂದು ಅರ್ಜುನ ವಾಪಸಾದ ಅನಂತರ ದೂಷಿಸಬಾರದು. ನಮಗ್ಯಾರಿಗೂ ಈ ವ್ಯೂಹವನ್ನು ಭೇದಿಸುವ
ತಂತ್ರ ತಿಳಿದಿಲ್ಲ. ಆದ್ದರಿಂದ ನೀನು ಈ ದಿನ ಆ ವ್ಯೂಹವನ್ನು ಭೇದಿಸಬೇಕು.”</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ತಾನು ಆ ವ್ಯೂಹವನ್ನು ಭೇದಿಸಬಲ್ಲೆ. ಚಕ್ರವ್ಯೂಹದ ಒಳಹೊಗುವ
ತಂತ್ರವನ್ನು ತನ್ನ ತಂದೆ ಕಲಿಸಿದ್ದಾನೆ.ಆದರೆ ಅಲ್ಲಿ ಆಪತ್ತಿಗೆ ಸಿಲುಕಿದರೆ ಹೊರಬರುವ ತಂತ್ರ
ನನಗೆ ಗೊತ್ತಿಲ್ಲವಾದುದರಿಂದ ಹೊರಬರುವುದು ನನಗೆ ಅಸಾಧ್ಯ ಎಂದು ಅಭಿಮನ್ಯು ಹೇಳುತ್ತಾನೆ. ಅವನು
ಒಳಹೋಗಲು ಹಿಂಜರಿಕೆ ತೋರದಿದ್ದರೂ ಮುಂದಿನ ಅಪಾಯವನ್ನು ಸೂಕ್ಷ್ಮವಾಗಿ ಧರ್ಮರಾಯನಿಗೆ
ಸೂಚಿಸುತ್ತಿದ್ದಾನೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಅದಕ್ಕೆ ಧರ್ಮರಾಯ ಸಮಾಧಾನ ನೀಡುತ್ತಾನೆ. “ನೀನು ಅದನ್ನು ಭೇದಿಸಿದಾಗ
ನಿನ್ನ ಹಿಂದೆ ನಾವೂ ಬರುತ್ತೇವೆ.ಹಾಗೆ ಬಂದು ವ್ಯೂಹವನ್ನು ದ್ವಂಸಮಾಡುತ್ತೇವೆ.”ಭೀಮನೂ ಈ
ಮಾತನ್ನು ಅನುಮೋದಿಸುತ್ತಾನೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಹಾಗೆ ಧರ್ಮರಾಯನಂದರೂ ಅಭಿಮನ್ಯುವಿಗೆ ಅವರು ತನ್ನ ಜೊತೆ
ಪ್ರವೇಶಿಸಿಯಾರು ಎಂಬ ನಂಬಿಕೆ ಇಲ್ಲ. “ಕೋಪಗೊಂಡ ಪತಂಗ ಬೆಂಕಿಯತ್ತ ನುಗ್ಗುವಂತೆ ನಾನು
ನುಗ್ಗುತ್ತೇನೆ” ಎಂಬ ಮಾತನ್ನಾಡುತ್ತಾನೆ. ಈ ಮಾತಲ್ಲಿ ತಾನು ಬದುಕುವುದಿಲ್ಲ ಎಂಬ ಅರ್ಥವನ್ನು ಆತ
ಧ್ವನಿಸುತ್ತಾನೆ.ಆದರೆ ಧರ್ಮರಾಯ ಈ ಧ್ವನಿಯನ್ನು ಗ್ರಹಿಸುವುದಿಲ್ಲ ಅಥವ ಗ್ರಹಿಸಿದರೂ</span><span style="line-height: 115%;">,<span lang="KN">
ಆ ಸನ್ನಿವೇಶ ನಿರ್ಮಿಸಿದ್ದ ಅನಿವಾರ್ಯತೆಯಿಂದಾಗಿ ಅವನ ಅಭಿಪ್ರಾಯವನ್ನು
ಕಡೆಗಣಿಸುತ್ತಾನೆ.ಯುದ್ಧಕ್ಕೆ ತೆರಳಲು ಅನುಮತಿ ನೀಡುತ್ತಾನೆ.</span><o:p></o:p></span></div>
<div class="MsoNormal">
<span lang="KN" style="line-height: 115%;">ಚಕ್ರವ್ಯೂಹದತ್ತ ರಥ ನಡೆಸು ಎಂದು ಸಾರಥಿಗೆ ಅಭಿಮನ್ಯು
ಅದೇಶಿಸುತ್ತಾನೆ.ಸಾರಥಿ ವ್ಯಾವಹಾರಿಕವಾದ ಎರಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾನೆ.೧)
ಅಸ್ತ್ರವಿದ್ಯೆಯಲ್ಲಿ ಶ್ರೇಷ್ಠರಾದ ದ್ರೋಣರ ಜೊತೆ ಯುದ್ಧಮಾಡುವುದರ ಬಗ್ಗೆ ಇನ್ನೊಮ್ಮೆ
ವಿಚಾರಮಾಡು.೨) ನಿನಗೆ ಯುದ್ಧರಂಗದ ಅನುಭವ ಇಲ್ಲ. </span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">“ದ್ರೋಣರು ತಮಗೆ ಸಮನಲ್ಲ, ಅಷ್ಟೇಕೆ ಇಂದ್ರ,ರುದ್ರ,ಶ್ರೀಕೃಷ್ಣ ಅಥವ
ಅರ್ಜುನ ಯುದ್ಧಕ್ಕೆ ಬಂದರೂ ಮಣಿಸುತ್ತೇನೆ.ನೀನು ರಥ ಹರಿಸು” ಎಂದು ಮತ್ತೆ ಅದೇಶಿಸಿದಾಗ
ಮನಸ್ಸಿಲ್ಲದಿದ್ದರೂ ಸಾರಥಿ ವ್ಯೂಹದತ್ತ ಒಯ್ಯುತ್ತಾನೆ.ಅಭಿಮನ್ಯು ಒಳಪ್ರವೇಶಿಸುತ್ತಾನೆ.ಆದರೆ
ಪಾಂಡವಸೇನೆಯ ಉಳಿದ ಯಾರಿಗೂ ಅದನ್ನು ಪ್ರವೇಶಿಸಲು ಆಗುವುದಿಲ್ಲ.ಅಭಿಮನ್ಯು ಒಂಟಿಯಾಗುತ್ತಾನೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಕುಮಾರವ್ಯಾಸನಲ್ಲಿ:</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">(ದ್ರೋಣಪರ್ವ-ಸಂಧಿ ೪ )</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">೧]ಅರ್ಜುನನನ್ನು ಏಕಕಾಲಕ್ಕೆ ಸಮಸಪ್ತಕರು ಮತ್ತು ಚಕ್ರವ್ಯೂಹವನ್ನು
ನಿರ್ಮಿಸಿದ ದ್ರೋಣ ಇಬ್ಬರೂ ಯುದ್ಧಕ್ಕೆ ಆಹ್ವಾನಿಸುತ್ತಾರೆ.ಅರ್ಜುನ ನಾನು ಯಾರ ಜತೆ ಯುದ್ಧ
ಮಾಡಲಿ ಎಂದು ಕೃಷ್ಣನನ್ನು ಕೇಳುತ್ತಾನೆ.ನಿನ್ನ ಮಗ ದ್ರೋಣರನ್ನೆದುರಿಸುತ್ತಾನೆ</span><span style="line-height: 115%;">,<span lang="KN">ನೀನು
ಸಮಸಪ್ತಕರನ್ನೆದುರಿಸು ಎಂಬ ಸಲಹೆಯನ್ನು ಕೃಷ್ಣ ನೀಡುತ್ತಾನೆ</span>. <span lang="KN">ಹೀಗೆ ಸಲಹೆ
ನೀಡಲು ಕೃಷ್ಣನಿಗೆ ಕಾರಣವಿದೆ</span>.<o:p></o:p></span></div>
<div class="MsoNormal">
<span style="line-height: 115%;">“<span lang="KN">ಅಳಿಯನೀ ಮೋಹರದೊಳಗಲ್ಲದೆ ಫಲುಗುಣನ ಮಗನಿವನು ಬಲುಗೈಯುಳುಹಬಾರದು ಕಾಯಿದರೆ
ಕಲಿಯುಗಕೆ ಗತಿಯಿಲ್ಲ</span>…(<span lang="KN">ಪ</span>-<span lang="KN">೨೭</span>)<o:p></o:p></span></div>
<div class="MsoNormal">
<span lang="KN" style="line-height: 115%;">ಮಹಾಬಲಶಾಲಿಯಾದ ಅಭಿಮನ್ಯು ಈ ಯುದ್ಧದಲ್ಲಿ ಅಳಿಯಬೇಕು. ಅಭಿಮನ್ಯು
ಬದುಕಿದರೆ ಕಲಿಯುಗ ಪ್ರಾರಂಭವಾಗುವುದಿಲ್ಲ.(ಯಾಕೆ ಪ್ರಾರಂಭವಾಗುವುದಿಲ್ಲ ಎಂಬುದು ಗೊತ್ತಿಲ್ಲ).ಅಭಿಮನ್ಯುವಿನ
ಸಾವನ್ನು ಇಲ್ಲಿ ಕೃಷ್ಣ ನಿಶ್ಚೈಸುತ್ತಾನೆ.<o:p></o:p></span></div>
<div class="MsoNormal">
<span lang="KN" style="line-height: 115%;">೨] ಭೀಮನನ್ನೂ ಸೇರಿದಂತೆ ಪಾಂಡವಸೇನೆಗೆ ವ್ಯೂಹಭೇದನ
ಅಸಾಧ್ಯವಾಗುತ್ತದೆ.(ಕಾದಲೆನ್ನಳವಲ್ಲ ಬಲ ದುರ್ಭೇದವಿದು ಶಿವಶಿವಯೆನುತ್ತ ವೃಕೋದರನು
ಮರಳಿದನು...ಸಂ-೪,ಪ-೩೨.) ಚಕ್ರವ್ಯೂಹವನ್ನು ಹೇಗೆ ಭೇದಿಸುವುದು ಎಂಬ ಚಿಂತೆಯಲ್ಲಿರುವ
ಧರ್ಮರಾಯನನ್ನು ಕಂಡ ಅಭಿಮನ್ಯು ತನಗೆ ಅಪ್ಪಣೆ ಕೊಡು ಎಂದು ಕೇಳುತ್ತಾನೆ.ಬಾಲಕನಾದ ಅವನನ್ನು ಕಳಿಸಲು
ಧರ್ಮರಾಯನ ಮನಸ್ಸು ಒಪ್ಪುವುದಿಲ್ಲ. ವ್ಯೂಹಭೇದನದಲ್ಲಿ ಎದುರಾಗುವ ಕಷ್ಟವನ್ನು
ವಿವರಿಸುತ್ತಾನೆ.ಆದರೆ ಅಭಿಮನ್ಯು ತನ್ನ ಪೌರುಷಕ್ಕೆ ಅದು ಸಮವಲ್ಲ ಎಂದು ಸಾಧಿಸಿದಾಗ ಧರ್ಮರಾಯ
ಒಪ್ಪುತ್ತಾನೆ.ತಾವು ಅವನನ್ನು ಹಿಂಬಾಲಿಸುವ ಭರವಸೆ ನೀಡುತ್ತಾನೆ.ಇಲ್ಲಿಯೂ ಸಾರಥಿಯ ಸಂದೇಹವನ್ನು
ತಳ್ಳಿಹಾಕಿದ ಅಭಿಮನ್ಯು ವ್ಯೂಹವನ್ನು ಪ್ರವೇಶಿಸುತ್ತಾನೆ.ಉಳಿದವರಿಗೆ ಪ್ರವೇಶಿಸಲು ಆಗದೆ
ಅಭಿಮನ್ಯು ಒಂಟಿಯಾಗುತ್ತಾನೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಮೂಲದಲ್ಲಿ ಕೃಷ್ಣನ ತಂತ್ರದ ಸೂಚನೆ ಇಲ್ಲ.ಇದನ್ನು ಕುಮಾರವ್ಯಾಸ ಯಾಕೆ
ತಂದ ಎಂಬುದು ತಿಳಿಯುವುದಿಲ್ಲ.ಅದರಿಂದ ಕಾವ್ಯದ ಅರ್ಥವ್ಯಾಪ್ತಿಯ ವಿಸ್ತಾರವಂತೂ
ಆಗಿಲ್ಲ.ಮಹಾಭಾರತದ ಎಲ್ಲ ಮುಖ್ಯ ಘಟನೆಗಳಲ್ಲೂ ಕೃಷ್ಣನ ಕೈವಾಡವಿದೆ ಎಂಬುದನ್ನು ತೋರಿಸಲು
ತಂದಿರಬಹುದು ಎಂದು ಊಹಿಸಬಹುದು.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಮೂಲದಲ್ಲಿ ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ್ದಾನೆ ಮತ್ತು
ಅಭಿಮನ್ಯು ತನ್ನ ಮಿತಿಯನ್ನು ಹೇಳುತ್ತಾನೆ.ತಾವು ಉಳಿದ ಸೇನೆಯ ಜತೆ ಅವನನ್ನು ಹಿಂಬಾಲಿಸಿ
ಕಾಪಾಡುತ್ತೇವೆ ಎಂಬ ಭರವಸೆಯನ್ನು ಧರ್ಮರಾಯ ಮತ್ತು ಭೀಮ ನೀಡುತ್ತಾರೆ. ಮೂಲದಲ್ಲಿ
ಅಭಿಮನ್ಯುವಿನ ಈ ವ್ಯಾವಹಾರಿಕ ಎಚ್ಚರ,ಅವನ
ಪೌರುಷದ ಜೊತೆಗೇ ನಿರೂಪಿತವಾಗಿದೆ. </span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಕುಮಾರವ್ಯಾಸನಲ್ಲಿ ತನ್ನ ವೀರತ್ವವನ್ನು ಘೋಷಿಸಿ ಅಭಿಮನ್ಯುವೇ
ಧರ್ಮರಾಯನನ್ನು ವಿನಂತಿಸುತ್ತಾನೆ. ಮೊದಲಿಗೆ ಧರ್ಮರಾಯ ವಿರೋಧಿಸಿದರೂ ಅಭಿಮನ್ಯುವಿನ ಒತ್ತಾಯಕ್ಕೆ
ಒಪ್ಪುತ್ತಾನೆ.ಮೂಲಕ್ಕಿಂತ ಹೆಚ್ಚಿನ ವಿವರದಲ್ಲಿ ಅಭಿಮನ್ಯುವಿನ ಶೌರ್ಯ ಚಿತ್ರಿತವಾಗಿದ್ದರೂ,
ಮೂಲದಲ್ಲಿ ವ್ಯಕ್ತವಾಗುವ ವ್ಯಾವಹಾರಿಕ ಎಚ್ಚರ ಇಲ್ಲಿ ಕಂಡು ಬರುವುದಿಲ್ಲ. ಆ ಎಚ್ಚರ
ಧರ್ಮರಾಯನಲ್ಲಿ ಇದೆ. ಆದರೆ ಅಷ್ಟೆಲ್ಲ ವಿರೋಧಿಸಿದ ಧರ್ಮರಾಯ ಕೊನೆಗೆ ಒಪ್ಪಲು ಏನು ಕಾರಣ ಎಂಬುದು
ತಿಳಿಯುವುದಿಲ್ಲ.ವ್ಯೂಹಭೇದನ ಅನಿವಾರ್ಯವಾಗಿತ್ತು ಎಂಬುದು ಆತ ಒಪ್ಪಲು ಕಾರಣವಾದರೆ ಆ
ಅನಿವಾರ್ಯತೆ ಅಭಿಮನ್ಯುವನ್ನು ಮೊದಲು ವಿರೋಧಿಸುವಾಗಲೂ ಇತ್ತು.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;"> ಮೊದಲು ಒಪ್ಪದ,
ಅನಂತರ ಒಪ್ಪುವ ಧರ್ಮರಾಯನ ವರ್ತನೆಯ ನಡುವೆ ಅವನ ಅಭಿಪ್ರಾಯ ಬದಲಾಗಲು ಯಾವುದು ಕಾರಣ ಎಂಬ ಅಂಶ
ಕುಮಾರವ್ಯಾಸನಲ್ಲಿ ಸ್ಪಷ್ಟವಾಗಿಲ್ಲ.ಈ ರೀತಿಯ ಗೊಂದಲ ಮೂಲದಲ್ಲಿ ಇಲ್ಲ.ಅಲ್ಲಿ ಧರ್ಮರಾಯ
ವಿನಂತಿಸುತ್ತಾನೆ ಮತ್ತು ಅಭಿಮನ್ಯು ತನ್ನ ಮಿತಿಯನ್ನು ಹೇಳಿ,ತನಗೊದಗಬಹುದಾದ ಆಪತ್ತಿನ ಬಗ್ಗೆ
ಹೇಳಿದಾಗ ಧರ್ಮರಾಯ ಮತ್ತು ಭೀಮ ತಾವು ಬೆಂಬಲಕ್ಕೆ ಬರುವ ಭರವಸೆ ನೀಡುತ್ತಾರೆ.ಅಂದರೆ ಮೂಲದಲ್ಲಿ
ಅಭಿಮನ್ಯುವಿಗೆ ತನ್ನ ಶಕ್ತಿ ಮತ್ತು ಮಿತಿ ಎರಡರ ಬಗ್ಗೆಯೂ ತಿಳಿವಳಿಕೆ ಇದೆ.ಹಾಗಾಗಿಯೇ
ಧರ್ಮರಾಯ,ಭೀಮ ಇಬ್ಬರೂ ಬೆಂಬಲಿಸುವ ಭರವಸೆ ನೀಡಿದ ಅನಂತರ ವ್ಯೂಹಭೇದನಕ್ಕೆ ಒಪ್ಪುತ್ತಾನೆ.ಕುಮಾರವ್ಯಾಸನ
ಅಭಿಮನ್ಯು ಅದರ ಅಗತ್ಯವೇ ಇಲ್ಲ ಎಂಬಂತೆ ಮಾತಾಡಿದ್ದಾನೆ.ಅಭಿಮನ್ಯು ವ್ಯಾಸರಲ್ಲಿ ವೀರ ಮತ್ತು
ವಿವೇಕಿ ಎಂಬಂತೆ ಚಿತ್ರಿತವಾಗಿದ್ದರೆ ಕುಮಾರವ್ಯಾಸನಲ್ಲಿ ವೀರ ಎಂಬಂತೆ ಮಾತ್ರ
ಚಿತ್ರಿತವಾಗಿದೆ.ಕುಮಾರವ್ಯಾಸನ ಅಭಿಮನ್ಯು ಒಂದು ಮಗ್ಗುಲನ್ನು ಕಳೆದುಕೊಂಡಿದ್ದಾನೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಇನ್ನೊಂದು ಅಂಶವನ್ನೂ ಗಮನಿಸಬಹುದು</span><span style="line-height: 115%;">. <span lang="KN">ಮೂಲದಲ್ಲಿ
ಧರ್ಮರಾಯನೇ ಅಭಿಮನ್ಯುವನ್ನು ವಿನಂತಿಸಿದ ಕಾರಣ ಅವನ ಮರಣದ ಜವಾಬ್ದಾರಿಯನ್ನು ಧರ್ಮರಾಯ ಹೊರಬೇಕಾಗಿದೆ</span>.
<span lang="KN">ಕುಮಾರವ್ಯಾಸನಲ್ಲಿ ಅಭಿಮನ್ಯುವೇ ತನ್ನ ಮರಣಕ್ಕೆ ಜವಾಬ್ದಾರನಾಗುತ್ತಾನೆ</span>.<span lang="KN">ಹಾಗಾಗಿ ವ್ಯಾಸರಲ್ಲಿ ಧರ್ಮರಾಯನನ್ನು ಕಾಡುವ</span> ’<span lang="KN">ಪಾಪಪ್ರಜ್ಞೆ</span>’
<span lang="KN">ಕುಮಾರವ್ಯಾಸನಲ್ಲಿ ಕಾಡಬೇಕಿಲ್ಲ</span>.<o:p></o:p></span></div>
<div class="MsoNormal">
<span lang="KN" style="line-height: 115%;">೨ </span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ವ್ಯಾಸರ</span><span style="line-height: 115%;">ಲ್ಲಿ ಚಕ್ರವ್ಯೂಹದೊಳಗೆ..<o:p></o:p></span></div>
<div class="MsoNormal">
<span lang="KN" style="line-height: 115%;">೧] ಅಭಿಮನ್ಯುವಿನ ಯುದ್ಧದ ಬಿರುಸಿನಿಂದ ಎಲ್ಲರೂ ಬಸವಳಿದಾಗ ಕರ್ಣ
ದ್ರೋಣರ ಬಳಿ ಹೋಗಿ ತನಗೆ ಇವನ ಜೊತೆ ಯುದ್ಧ ಮಾಡಲು ಆಗುತ್ತಿಲ್ಲ, ಇವನನ್ನು ನಿಯಂತ್ರಿಸುವುದು
ಹೇಗೆ ಎಂದು ಕೇಳುತ್ತಾನೆ. ಕೈಯಲ್ಲಿ ಬಿಲ್ಲು ಇರುವವರೆಗೆ ಅವನನ್ನು ನಿಯಂತ್ರಿಸಲು
ಆಗದು.ಸಾಧ್ಯವಾದರೆ ಬಿಲ್ಲನ್ನು ಕತ್ತರಿಸು.ಬೇಕಿದ್ದರೆ ಹಿಂದಿನಿಂದ ಅವನ ಮೇಲೆ ದಾಳಿ ಮಾಡು ಎಂದು
ದ್ರೋಣರು ಅನ್ನುತ್ತಾರೆ. ಕುಮಾರವ್ಯಾಸಲ್ಲಿ ಇರುವಂತೆ ನಾವೆಲ್ಲಾ ಸೇರಿ ಅವನ ಮೇಲೆ ಒಟ್ಟಿಗೇ
ಯುದ್ಧ ಮಾಡುವ ಎಂದು ದ್ರೋಣರು ಹೇಳಿಲ್ಲ.ಕರ್ಣ ಬಿಲ್ಲನ್ನು ಕತ್ತರಿಸುತ್ತಾನೆ. ಆದರೆ ಆತ
ಹಿಂದಿನಿಂದ ಕತ್ತರಿಸಿದ ಎಂಬ ಸೂಚನೆ ವ್ಯಾಸರಲ್ಲಿ ಇಲ್ಲ.ಆದ್ದರಿಂದ ಕರ್ಣ ಎದುರಿಗೆ ನಿಂತೇ
ಬಿಲ್ಲು ಕತ್ತರಿಸಿದ್ದಾನೆ ಎಂದು ಭಾವಿಸಬೇಕಾಗುತ್ತದೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">(ಇದಕ್ಕೆ ಪೂರಕವಾಗಿ ಕೆಲವು ಅಂಶಗಳನ್ನು ಗಮನಿಸಬಹುದು.೧] ಅಭಿಮನ್ಯು ’ಹಿಂದಿನಿಂದ
ಕತ್ತರಿಸಿದೆಯಲ್ಲ ಕರ್ಣ’ ಎಂಬ ಮಾತನ್ನು ಆಡಿಲ್ಲ.೨]
ಕರ್ಣವಧೆಯ ಸಂದರ್ಭದಲ್ಲಿ, ಕರ್ಣ ಮಾಡಿದ ಅನ್ಯಾಯವನ್ನು ಪಟ್ಟಿ ಮಾಡುವಾಗ ಹಿಂದಿನಿಂದ ಬಿಲ್ಲು
ಕತ್ತರಿಸಿದೆ ಎಂದು ಕೃಷ್ಣ ಆಪಾದಿಸಿಲ್ಲ,ಬದಲಿಗೆ ನೀವು ಆರು ಜನ ಒಬ್ಬನನ್ನು ಕೊಂದದ್ದು ಧರ್ಮವೇ
ಎಂದು ಕೇಳುತ್ತಾನೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಯದಾಭಿಮನ್ಯುಂ ಬಹವೋ ಯುದ್ಧೇ ಜಘ್ನುರ್ಮಹಾರಥಾಃ|</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಪರಿವಾರ್ಯ ರಣೇ ಬಾಲಂ ಕ್ವ ತೇ ಧರ್ಮಸ್ತದಾ ಗತಃ || ಕ.ಪ-ಅಧ್ಯಾಯ
೧೯,ಶ್ಲೋ-೧೧. ಯುದ್ಧದಲ್ಲಿ ಏಕಾಕಿಯಾಗಿದ್ದ ಬಾಲನಾದ ಅಭಿಮನ್ಯುವನ್ನು ಅನೇಕ ಮಹಾರಥರು
ಸುತ್ತುವರಿದು ಸಂಹಾರಮಾಡಿದರು.ಆ ಸಮಯದಲ್ಲಿ ನಿನ್ನ ಧರ್ಮವು ಎಲ್ಲಿ ಹೋಗಿತ್ತು?)</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">೩] ಕರ್ಣ ಅಭಿಮನ್ಯುವಿನ ಕೈಯನ್ನು ಕತ್ತರಿಸುವುದು ವ್ಯಾಸರಲ್ಲಿ
ಇಲ್ಲ.ಇದು ವಾಸ್ತವಿಕವಾದ ಚಿತ್ರಣ ಅನಿಸುತ್ತದೆ. ಕೈ ಇಲ್ಲದ ಅಭಿಮನ್ಯು ರಥದ ಚಕ್ರ ಹಿಡಿದು ಯುದ್ಧ
ಮಾಡುವುದು ಅವಾಸ್ತವಿಕ ಅನಿಸುತ್ತದೆ. ವ್ಯಾಸರಲ್ಲಿ ಕೊನೆಗೆ ಅಭಿಮನ್ಯು ಮತ್ತು ದುಶ್ಯಾಸನನ ಮಗ
ಗದಾಯುದ್ಧ ಮಾಡುತ್ತಾರೆ.ಇಬ್ಬರೂ ಪೆಟ್ಟಾಗಿ ನೆಲಕ್ಕುರುಳುತ್ತಾರೆ. ದುಶ್ಯಾಸನನ ಮಗ
ಅಭಿಮನ್ಯುವಿಗಿಂತ ಮೊದಲು ಮೇಲೆದ್ದು ಅಭಿಮನ್ಯುವಿನ ತಲೆಗೆ ಗದೆಯಿಂದ ಪೆಟ್ಟು
ಕೊಡುತ್ತಾನೆ.ಅಭಿಮನ್ಯು ಸಾಯುತ್ತಾನೆ. (ದುಶ್ಯಾಸನನ ಮಗನೂ ಸತ್ತದ್ದು ವ್ಯಾಸರಲ್ಲಿ ಇಲ್ಲ.)ಈ
ವಿವರಣೆ ಸಹಜವಾಗಿದೆ.ಕುಮಾರವ್ಯಾಸನ ಚಿತ್ರಣದಂತೆ ಅತಿ ರಂಜಿತವಾಗಿಲ್ಲ.</span><span style="line-height: 115%;"><o:p></o:p></span></div>
<div class="MsoNormal">
<br /></div>
<div class="MsoNormal">
<span lang="KN" style="line-height: 115%;">ಕುಮಾರವ್ಯಾಸನಲ್ಲಿ ಚಕ್ರವ್ಯೂಹದೊಳಗೆ....</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಒಳಹೊಕ್ಕ ಅಭಿಮನ್ಯು ಭೀಕರವಾಗಿ ಯುದ್ಧಮಾಡಿ ಕೌರವ ಪಕ್ಷದ ಎಲ್ಲ
ಅತಿರಥ,ಮಹಾರಥರನ್ನು ಸೋಲಿಸುತ್ತಾನೆ.ದ್ರೋಣ, ಶಲ್ಯ,ಕರ್ಣ,ಅಶ್ವತ್ಥಾಮ,ದುರ್ಯೋಧನ ಇತ್ಯಾದಿಯಾಗಿ
ಯಾರಿಗೂ ಅವನ ಸಮನಾಗಿ ಯುದ್ಧ ಮಾಡಲು ಆಗುವುದಿಲ್ಲ.ಹತಾಶನಾದ ದುರ್ಯೋಧನ ಎಲ್ಲರನ್ನು
ಹೀಯಾಳಿಸುತ್ತಾನೆ. ಆಗ ದ್ರೋಣರು ಒಬ್ಬರಿಂದ ಇವನನ್ನು ಸಂಹರಿಸಲು ಆಗುವುದಿಲ್ಲ.ನಾವು ಆರು ಜನಸೇರಿ
ಏಕಕಾಲದಲ್ಲಿ ಯುದ್ಧ ಮಾಡಬೇಕು ಎಂಬ ತೀರ್ಮಾನಕ್ಕೆ ಬರುತ್ತಾರೆ. ಹಾಗಿದ್ದೂ ಅಭಿಮನ್ಯುವನ್ನು
ಸೋಲಿಸಲು ಆಗುವುದಿಲ್ಲ.ಆಗ ಕರ್ಣನನ್ನು ಕರೆದು ನೀನು ಹಿಂದಿನಿಂದ ಅವನ ಬಿಲ್ಲನ್ನು ಕತ್ತರಿಸು
ಎಂದು ಸೂಚಿಸುತ್ತಾರೆ.(.........ಇದಿರೊಳಾನಿಹೆ ಶಲ್ಯನೆಡವಂಕದಲಿ ಬಲದಲಿ ಕೃಪನಪರಭಾಗದಲಿ ನೀ
ಬಂದೆಸು ಕುಮಾರನ ಕರದ ಕಾರ್ಮುಕವ||ದ್ರೋ.ಪ.ಸಂ-೬,ಪ-೨೮).ಇದು ಯುದ್ಧನೀತಿಯಲ್ಲ ಎಂಬುದು ದ್ರೋಣನಿಗೆ
ಗೊತ್ತು.ಕರ್ಣನೂ ಈ ಸಲಹೆಯನ್ನು ಒಪ್ಪದಿರಬಹುದು ಎಂಬ ಅನುಮಾನವಿದೆ. ಇದು ಸ್ವಾಮಿಕಾರ್ಯ,ಕೌರವನ
ಉಳಿವಿಗೆ ಅನಿವಾರ್ಯ ಎಂಬ ಮಾತನಾಡಿ ಕರ್ಣನನ್ನು ಭಾವನಾತ್ಮಕವಾಗಿ
ಬಂಧಿಸುತ್ತಾನೆ.(.....ವೈಪರೀತ್ಯಕೆ ಬೆದರಲಾಗದು ಸ್ವಾಮಿಕಾರ್ಯವಿದು ರೂಪುದೋರದೆ ಬಂದು ಸುಭಟನ
ಚಾಪವನು ಖಂಡಿಸುವುದಿದು ಕುರುಭೂಪನುಳಿವೆಂದಿನಸುತನನೊಡಬಡಿಸಿದನು ದ್ರೋಣ||ಪ-೨೯).<o:p></o:p></span></div>
<div class="MsoNormal">
<span lang="KN" style="line-height: 115%;"> <o:p></o:p></span></div>
<div class="MsoNormal">
<span lang="KN" style="line-height: 115%;">***<o:p></o:p></span></div>
<div class="MsoNormal">
<span lang="KN" style="line-height: 115%;">ದ್ರೋಣ ಅಪರಭಾಗದಿಂದ ಬಂದು ಬಿಲ್ಲನ್ನು ಖಂಡಿಸಲು ಕರ್ಣನನ್ನು ಆಯಲು ಈ
ಕಾರಣಗಳು ಇವೆ ಎಂದು ಊಹಿಸಬಹುದು.<o:p></o:p></span></div>
<div class="MsoNormal">
<span lang="KN" style="line-height: 115%;">೧] ಕ್ಷತ್ರಿಯ ಶಲ್ಯ ಮತ್ತು ಬ್ರಾಹ್ಮಣ ಕೃಪ ದ್ರೋಣರ ಸಲಹೆಯನ್ನು ಅನೀತಿ
ಎಂದು ತಿರಸ್ಕರಿಸಬಹುದು. ಉಚ್ಚಕುಲದ ಅವರಿಗೆ ನೀತಿಯಲ್ಲದ ಕೆಲಸ ಸೂಚಿಸುವುದು ಸರಿಯಲ್ಲ. ಮತ್ತು ಅವರು ಯಾರೂ ಮನಃಪೂರ್ವಕವಾಗಿ ದುರ್ಯೋಧನನ
ಪಕ್ಷದಲ್ಲಿ ಇದ್ದವರಲ್ಲ.<o:p></o:p></span></div>
<div class="MsoNormal">
<span lang="KN" style="line-height: 115%;">೨] ಸ್ವಾಮಿನಿಷ್ಠೆ ಮತ್ತು ಕೌರವನ ಉಳಿವಿನ ಬಗ್ಗೆ ಕರ್ಣನಿಗೆ ಇರುವ
ಭಾವನೆ ಉಳಿದವರಿಗೆ ಇಲ್ಲ.ಅವರಿಗೆ ಇರುವುದು ಋಣಪ್ರಜ್ಞೆ ಮಾತ್ರ.ಹಾಗಾಗಿ ನಾವು ಯುದ್ಧ
ಮಾಡುತ್ತೇವೆ,ಆದರೆ ನೀತಿ ರಹಿತವಾಗಿ ಅಲ್ಲ ಎಂದು ಅವರು ಹೇಳಿದರೆ ಅದನ್ನು ತಪ್ಪು ಅನ್ನುವಂತಿಲ್ಲ.ಅದಲ್ಲದೆ
ಅವರನ್ನು ಸ್ವಾಮಿನಿಷ್ಠತೆಯ ಹೆಸರಲ್ಲಿ ಪ್ರೇರೇಪಿಸಲು ಆಗುವುದಿಲ್ಲ.<o:p></o:p></span></div>
<div class="MsoNormal">
<span lang="KN" style="line-height: 115%;">೩] ಕರ್ಣನ ಜಾತಿಯ ಹಿನ್ನೆಲೆಯೂ ದ್ರೋಣರ ಮನಸ್ಸಲ್ಲಿ ಇತ್ತೇ?ತಾವು
ಮತ್ತು ಕೃಪ ಬ್ರಾಹ್ಮಣರು,ಶಲ್ಯ ಕ್ಷತ್ರಿಯ.ತಾವು ಅನೀತಿಯ ಮಾರ್ಗ ಅವಲಂಬಿಸುವುದು ತಪ್ಪು,ಆದರೆ
ಸೂತಕುಲಜನಾದ ಕರ್ಣ ಹಾಗೆ ಮಾಡುವುದು ತಪ್ಪಲ್ಲ ಎಂಬ ಭಾವನೆಯೂ ಇರಬಹುದು.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">೪] ಹಿಂದಿನಿಂದ ಬಿಲ್ಲನ್ನು ಕಾತರಿಸುವುದೂ ಕೂಡ ಸಾಮಾನ್ಯ ಯೋಧರಿಗೆ
ಅಸಾಧ್ಯವಾದುದರಿಂದ ದ್ರೋಣರು ಕರ್ಣನನ್ನು ಆಯ್ಕೆ ಮಾಡಿದರು ಎಂಬ ಮಾತೂ ಇದೆ. ಇದನ್ನು ಒಪ್ಪುವುದು
ಕಷ್ಟ.ಕೃಪ,ಶಲ್ಯರು ಮಹಾ ಯೋಧರೇ.ಸ್ವತಃ ದ್ರೋಣರೂ ಮಹಾ ಯೋಧರೇ. ಹಾಗಿರುವಾಗ ಕರ್ಣನ್ನು ಆಯ್ಕೆ
ಮಾಡಲು ಅವನ ಕುಲವೇ ಕಾರಣವಾಗಿರಬಹುದು ಎಂಬುದು ಹೆಚ್ಚು ಸಹಜವಾಗಿದೆ.<o:p></o:p></span></div>
<div class="MsoNormal">
<span lang="KN" style="line-height: 115%;">***</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಕರ್ಣ ಹಿಂಜರಿಯುತ್ತಾನೆ. ಅವನು ಬಿಲ್ಲನ್ನು ಖಂಡಿಸುತ್ತಾನೆ ಎಂಬ
ಭರವಸೆಯಿಂದ ಎದುರಾದ ಶಲ್ಯ,ಕೃಪರು ಮತ್ತೆ ಪೆಟ್ಟು ತಿಂದು ಕರ್ಣನನ್ನು ದೂಷಿಸುತ್ತಾರೆ. ಕರ್ಣನ ದ್ವಂದ್ವ
ಮನಸ್ಥಿತಿ ಹಿಂಜರಿಕೆಗೆ ಕಾರಣ. ಅಭಿಮನ್ಯು ತನ್ನ ಮಗನ ಸಮಾನ ಎಂಬ ಭಾವ ಇದೆ.ಹಾಗಂತ ಈತನನ್ನು
ಕೊಲ್ಲದಿದ್ದರೆ ಒಡೆಯ ಕೌರವನಿಗೆ ಉಳಿವಿಲ್ಲ.ಹಿಂದಿನಿಂದ ಬಿಲ್ಲನ್ನು ಕತ್ತರಿಸುವ ಅನೀತಿಗೆ ಕರ್ಣನ
ಮನಸ್ಸು ಇಲ್ಲಿ ಅಳುಕುತ್ತಿಲ್ಲ, ಮಗ ಎಂಬ ಮಮಕಾರ ಬಲಿತರೆ ಕೌರವ ಉಳಿಯಲಾರ ಎಂಬ ಬೌದ್ಧಿಕ
ತಿಳಿವಳಿಕೆಯೇ ಭಾವಕ್ಕಿಂತ ಪ್ರಬಲವಾಗಿ ಆತ ಅಪರಭಾಗದಿಂದ ಬಿಲ್ಲನ್ನು ಕತ್ತರಿಸುತ್ತಾನೆ. ಮಗನ
ಉಳಿವಿಗಿಂತ ಮಿತ್ರನ ಉಳಿವಿಗೆ ಮನಸ್ಸು ಮಾಡುತ್ತಾನೆ.ಅಭಿಮನ್ಯು ಅವನನ್ನು ವ್ಯಂಗ್ಯವಾಗಿ
ಚುಚ್ಚುತ್ತಾನೆ.(ಆವ ಶರಸಂಧಾನ ಲಾಘವದಾವ ಪರಿ......ಸಂ-೬,ಪ-೩೪)</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಅಭಿಮನ್ಯು ಖಡ್ಗದಿಂದ ಯುದ್ಧ ಶುರುಮಾಡುತ್ತಾನೆ.ಕರ್ಣ ಆಗ ಅವನ
ಕರವೆರಡನ್ನು ಕತ್ತರಿಸುತ್ತಾನೆ. ಮೊಂಡುಕೈಯಿಂದ ಚಕ್ರವನ್ನು ಹಿಡಿದು ಅಭಿಮನ್ಯು ಯುದ್ಧವನ್ನು
ಮುಂದುವರಿಸುತ್ತಾನೆ.ದುಶ್ಯಾಸನನ ಮಗ ಎದುರಾಗುತ್ತಾನೆ.ಇಬ್ಬರೂ ಯುದ್ಧದಲ್ಲಿ ಮಡಿಯುತ್ತಾರೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ನೀತಿಯುದ್ಧದ ನಿಯಮ ಇಲ್ಲಿ ಮೀರಿದಂತೆ ಕುಮಾರವ್ಯಾಸ
ಚಿತ್ರಿಸಿದ್ದಾನೆ.ಆರುಜನ ರಥಿಕರು ಒಬ್ಬನ ಬಳಿ ಯುದ್ಧ ಮಾಡುವುದು,ಕರ್ಣ ಹಿಂದಿನಿಂದ ಬಾಣ
ಬಿಡುವುದು ಇವು ನಿಯಮಗಳಲ್ಲ.ಅಭಿಮನ್ಯುವಿನ ವೀರತ್ವವನ್ನು ಅತಿಕರಿಸುವ ಉತ್ಸಾಹದಲ್ಲಿ ಕುಮಾರವ್ಯಾಸ
ಕರ್ಣನ ಘನತೆಯನ್ನು ಕುಗ್ಗಿಸಿದ್ದಾನೆ. ಈ ಮಾತು ವ್ಯಾಸರು ಚಿತ್ರಿಸಿದ ರೀತಿಯನ್ನು ಗಮನಿಸಿದರೆ
ಸ್ಪಷ್ಟವಾಗುತ್ತದೆ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">***</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">***<o:p></o:p></span></div>
<div class="MsoNormal">
<span lang="KN" style="line-height: 115%;">ಕುಮಾರವ್ಯಾಸ ಅಭಿಮನ್ಯುವಿನ ವೀರತ್ವ ಚಿತ್ರಿಸುತ್ತಾನೆ,ಅವನ
ವಿವೇಕವನ್ನು ಚಿತ್ರಿಸಿಲ್ಲ. ಅವನ ವೀರತ್ವ ಚಿತ್ರಿಸುವಾಗ ತನ್ನನ್ನು ತಾನೇ ಮರೆತಂತೆ
ತೋರುತ್ತದೆ.ವ್ಯಾಸರು ಆ ರೀತಿಯಲ್ಲಿ ನಿಯಂತ್ರಣ ಕಳೆದುಕೊಂಡಿಲ್ಲ.ಅವರ ಅಭಿಮನ್ಯು ವೀರ ಮತ್ತು
ವಿವೇಕಿ.ವ್ಯಾಸರಲ್ಲಿ ಅಭಿಮನ್ಯುವಿನ ಸಾವಲ್ಲಿ ಧರ್ಮರಾಯ ಮತ್ತು ಭೀಮರ ಪಾಲೂ ಇದೆ. ಕುಮಾರವ್ಯಾಸನಲ್ಲಿ
ಅಭಿಮನ್ಯು ತನ್ನ ಸಾವಿಗೆ ತಾನೇ ಜವಾಬ್ದಾರ.</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">***</span><span style="line-height: 115%;"><o:p></o:p></span></div>
<div class="MsoNormal">
<span lang="KN" style="line-height: 115%;">ಇಲ್ಲಿ ವ್ಯಾಸರ ಚಿತ್ರಣವನ್ನು ವಿವರಿಸಲು ಭಾರತ ದರ್ಶನ ಮುದ್ರಣಾಲಯದವರ
ಅನುವಾದವನ್ನು ಆಧರಿಸಲಾಗಿದೆ.</span><span style="line-height: 115%;"><o:p></o:p></span></div>
<div class="MsoNormal">
</div>
<div class="MsoNormal">
<span lang="KN" style="line-height: 115%;">ದ್ರೋಣ ಪರ್ವ,೩೩ ನೆಯ ಅಧ್ಯಾಯದಿಂದ ೪೯ನೆಯ ಅಧ್ಯಾಯದವರೆಗೆ.</span><span style="font-size: 12.0pt; line-height: 115%; mso-bidi-language: KN;"><o:p></o:p></span></div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com7tag:blogger.com,1999:blog-5355400587468753863.post-29664841128024526942016-08-31T08:23:00.000+05:302016-08-31T08:23:42.647+05:30ಒಂದು ಪದ್ಯ.<div dir="ltr" style="text-align: left;" trbidi="on">
<div class="MsoNormal" style="text-align: justify;">
<span style="font-size: x-small;"><br /></span></div>
<div class="MsoNormal" style="text-align: justify;">
<span lang="KN" style="line-height: 115%;">ಕುಮಾರವ್ಯಾಸ ಮಹಾಕವಿ ರೂಪಕ ಚಕ್ರವರ್ತಿ.ರೂಪಕ,ಹೋಲಿಕೆಗಳ ಮೂಲಕ ಕಾವ್ಯವನ್ನು ಕಟ್ಟುವ ಅವನ
ಸಾಮರ್ಥ್ಯ ಬೆರಗು ಹುಟ್ಟಿಸುತ್ತದೆ.ಕವಿಯೊಬ್ಬನ ಕಾವ್ಯಶಕ್ತಿಯನ್ನು ರೂಪಕ ನಿರ್ಮಾಣದಲ್ಲಿ ಮಾತ್ರ
ಅಳೆಯದೆ ರೂಪಕರಹಿತವಾದ,ಹೋಲಿಕೆರಹಿತವಾದ ಚಿತ್ರಣಗಳಲ್ಲೂ ಗಮನಿಸಬೇಕು.ಅಲ್ಲಿ ಯಶಸ್ವಿಯಾಗುವ
ಕವಿಯದು ನಿಜವಾದ ಸಾಧನೆ.<o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಅಂತಹ ಒಂದು ಪದ್ಯದ ವಿಶ್ಲೇಷಣೆ ಈ ಲೇಖನದ ಆಶಯ.<o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ದ್ರೋಣ ಪರ್ವ,ಸಂಧಿ ೧೮</span><span style="line-height: 115%;">,</span><span lang="KN" style="line-height: 115%;">ಪದ್ಯ ೩೫</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span style="line-height: 115%;">“</span><span lang="KN" style="line-height: 115%;">ಮುಂದೆಹೋಗುವತಿಬಳರು ಹಾರಿತು</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಹಿಂದಣವರನು ಹಿಂದೆ ನಿಲುವರು</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಮುಂದಣವರಾಸೆಯಲಿ ನಿಂದುದು ಪಾರ್ಥಪರಿಯಂತ</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಅಂದು ಪಾರ್ಥನು ಕೃಷ್ಣಬಲದಲಿ</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ನಿಂದನೇವೇಳುವೆನುನಿನ್ನವ</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ರೆಂದು ಗೆಲ್ಲರು ಗಾಹುಗತಕವನುಳಿದು ಕಾದುವರೆ</span><span style="line-height: 115%;">”<o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ದ್ರೋಣಪರ್ವದ ಕೊನೆಯ ದಿನದ ಯುದ್ಧದಲ್ಲಿ ಭೀಮಾರ್ಜುನಸಹಿತ ಪಾಂಡವಸೇನೆ ದ್ರೋಣರನ್ನು
ಮುತ್ತಿದಾಗ</span><span style="line-height: 115%;">, </span><span lang="KN" style="line-height: 115%;">ದ್ರೋಣರು
ಮಾಡಿದ ಯುದ್ಧದ ಪರಿಣಾಮ ಇಲ್ಲಿ ಚಿತ್ರಿತವಾಗಿದೆ.</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಮುಂದೆಹೋಗುವತಿಬಳರು ಹಾರಿತು ಹಿಂದಣವರನು:ಎಲ್ಲರಿಗಿಂತ ಮುಂದೆ ಇದ್ದ ಯೋಧರು ದ್ರೋಣರ ಬಾಣದ ಘಾತದಿಂದ
ಪಾರಾಗಲು ಅವರ ಹಿಂದೆ ಬರುತ್ತಿದ್ದವರ ಹಿಂದೆ ಹಾರಿದರು. ಹಾರಿದರು ಎಂಬ ಪದಪ್ರಯೋಗವನ್ನು
ಗಮನಿಸಬೇಕು.ಅವರು ನಡೆದು ಅಥವ ಓಡಿ ಹಿಂದಾಗಲಿಲ್ಲ.ಅದಕ್ಕೆ ಅವಕಾಶವಿರಲಿಲ್ಲ.ಆದ್ದರಿಂದ ಹಾರಿ
ಹಿಂದೆ ನಿಂತರು.<o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಹಿಂದೆ ನಿಲುವರು ಮುಂದಣವರಾಸೆಯಲಿ:ಇಲ್ಲಿಯವರೆಗೂ ಹಿಂದೆ ಇದ್ದವರು ಈಗ ನೋಡಿದರೆ ದ್ರೋಣರ
ಎದುರೇ ಬಂದುಬಿಟ್ಟಿದ್ದಾರೆ.ಹಾಗೆ ಮುಂದಾದವರು ಭಯಪಟ್ಟು ತಾವು ಹಿಂದೆ ಹೋದರೆ ಉಳಿಯಬಹುದು
ಎಂಬಾಸೆಯಿಂದ ತಮ್ಮ ಹಿಂದೆ ಇದ್ದವರ ಹಿಂದೆ ಹೋಗಿ ನಿಂತರು.</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ನಿಂದುದು ಪಾರ್ಥಪರಿಯಂತ: ಹೀಗೆ ಹಿಂದೆ ಹಿಂದೆ ಹೋಗುತ್ತ ಪಾರ್ಥ ನಿಂತಲ್ಲಿಯವರೆಗೂ ಹೋಗಿ</span><span style="line-height: 115%;">,</span><span lang="KN" style="line-height: 115%;">ಅವನ ಹಿಂದೆ ನಿಂತರು.ಹೀಗೆ ಇಡೀ ಸೈನ್ಯ ಪಾರ್ಥನ ಹಿಂದೆ ಅವನ
ರಕ್ಷಣೆಯನ್ನು ನಿರೀಕ್ಷಿಸಿ ನಿಂತಿತು.ಆದರೆ...</span><span style="line-height: 115%;"><o:p></o:p></span></div>
<div class="MsoNormal" style="text-align: justify;">
<span lang="KN" style="line-height: 115%;">ಅಂದು ಪಾರ್ಥನು ಕೃಷ್ಣಬಲದಲಿ ನಿಂದನು: ಅವತ್ತು ಪಾರ್ಥನು ಕೃಷ್ಣನ ಬಲವಿರುವ ಕಾರಣದಿಂದ
ಅಲ್ಲಿ ನಿಂತನು.ಪಾರ್ಥನೂ ಕೂಡ ದ್ರೋಣರರೆದುರು ನಿಂತಿದ್ದು ಕೃಷ್ಣನ ಬಲದಿಂದ.ಇಲ್ಲವಾದರೆ ಅವನಿಗೂ
ನಿಲ್ಲಲು ಆಗುತ್ತಿರಲಿಲ್ಲ.<o:p></o:p></span></div>
<div class="MsoNormal" style="text-align: justify;">
</div>
<div class="MsoNormal" style="text-align: justify;">
<span lang="KN" style="line-height: 115%;">ಈ ಪದ್ಯದ ಸೂಕ್ಷ್ಮವಾದ ಧ್ವನಿಯನ್ನು ಗುರುತಿಸಬೇಕು.ಪಾಂಡವ ಸೇನೆಯ ಯೋಧರಿಗೆ ಅರ್ಜುನ ತಮಗೆ
ಆಶ್ರಯ ನೀಡಬಲ್ಲವ ಎಂಬ ನಂಬಿಕೆ ಇದೆ. ಅದರೆ ಅರ್ಜುನನಿಗೆ ಆ ಶಕ್ತಿ ಇರುವುದು ಕೃಷ್ಣನ ಅಭಯ,ರಕ್ಷಣೆ
ಇರುವುದರಿಂದ. ಶಸ್ತ್ರಧಾರಿಗಳಾದವರು ಶಸ್ತ್ರಧಾರಿಯಾದವನ ಎದುರು ನಿಲ್ಲಲಾರದೆ,ಶಸ್ತ್ರವನ್ನು
ಹಿಡಿಯದವನ ರಕ್ಷಣೆಯಲ್ಲಿ ನಿಲ್ಲುತ್ತಿದ್ದಾರೆ ಎಂಬುದನ್ನು ಚಿತ್ರಿಸುವ ಮೂಲಕ,ಕುಮಾರವ್ಯಾಸ
ಕೃಷ್ಣನ ಸಾಮರ್ಥ್ಯವನ್ನು,ಯುದ್ಧರಂಗದಲ್ಲಿ ನಡೆದ ಸಹಜವಾದ ಒಂದು ಕ್ರಿಯೆಯ ವರ್ಣನೆಯ ಮೂಲಕ
ಧ್ವನಿಸುತ್ತಿದ್ದಾನೆ.ಜೊತೆಗೆ ದ್ರೋಣನ ಅವತ್ತಿನ ಶೌರ್ಯ</span><span style="line-height: 115%;">, </span><span lang="KN" style="line-height: 115%;">ಅರ್ಜುನನನ್ನೂ ಸೇರಿದಂತೆ ಪಾಂಡವಸೈನ್ಯದ ಭೀತಿ</span><span style="line-height: 115%;">,
</span><span lang="KN" style="line-height: 115%;">ಮತ್ತು ಅರ್ಜುನ ಸಹಿತ ಪಾಂಡವಸೇನೆಗಿರುವ
ಕೃಷ್ಣನ ರಕ್ಷಣೆ ಈ ಮೂರೂ ಅಂಶಗಳು ಇಲ್ಲಿ ವ್ಯಕ್ತವಾಗಿವೆ.ಇಲ್ಲಿ
ಕುಮಾರವ್ಯಾಸ ತನ್ನ ಪ್ರಬಲ ಅಸ್ತ್ರವಾದ ರೂಪಕವನ್ನು ಬಳಸಿಲ್ಲ ಎಂಬುದೂ ಗಮನಾರ್ಹ.ಒಂದೂ ರೂಪಕ
ಬಳಸದೆ ಆತ ಹುಟ್ಟಿಸುವ ಧ್ವನಿಶಕ್ತಿ ಅಪೂರ್ವವಾದದ್ದು. </span><span style="font-size: 12.0pt; line-height: 115%; mso-bidi-language: KN; mso-fareast-font-family: "Arial Unicode MS";"><o:p></o:p></span></div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com3tag:blogger.com,1999:blog-5355400587468753863.post-30242927681654113042016-08-15T19:41:00.000+05:302016-08-15T19:41:07.449+05:30ಸುಪ್ರತೀಕ.<div dir="ltr" style="text-align: left;" trbidi="on">
<div class="MsoNormal">
<br /></div>
<div class="MsoNormal">
<span lang="KN">ಸುಪ್ರತೀಕ ಗಜ
ಯುದ್ಧಕ್ಕೈದಿದ ಪ್ರಸಂಗ ಕುಮಾರವ್ಯಾಸ ಭಾರತದಲ್ಲಿ ಮನೋಜ್ಞವಾಗಿ ಚಿತ್ರಿತವಾಗಿದೆ.ಆ ಸೊಗಸನ್ನು ಈ
ಲೇಖನದಲ್ಲಿ ಗ್ರಹಿಸುವ ಪ್ರಯತ್ನ ಮಾಡಿದ್ದೇನೆ.(ದ್ರೋಣ ಪರ್ವ,ಸಂಧಿ-೩)</span><o:p></o:p></div>
<div class="MsoNormal">
<span lang="KN">ಸುಪ್ರತೀಕ ಎಂಬುದು ಭಗದತ್ತನ
ಆನೆಯ ಹೆಸರು. ಭಗದತ್ತ ಪ್ರಾಗ್ಜ್ಯೋತಿಷಪುರದ ರಾಜ. ನರಕಾಸುರನ ಮಗ. ಮಹಾಭಾರತದ ಯುದ್ಧದಲ್ಲಿ ಈತ
ಕೌರವನ ಪರವಾಗಿದ್ದ. <o:p></o:p></span></div>
<div class="MsoNormal">
<span lang="KN">ಇವನ ಆನೆ ಹೇಗಿತ್ತು
ಎಂಬ ಚಿತ್ರಣದೊಂದಿಗೆ ವಿವರಣೆಯನ್ನು ಶುರುಮಾಡಬಹುದು.</span><o:p></o:p></div>
<div class="MsoNormal">
<span lang="KN">ಜಗದ ನಿಡುನಿದ್ರೆಯಲಿ
ಮೋಹರ</span><o:p></o:p></div>
<div class="MsoNormal">
<span lang="KN">ದೆಗೆದ ಮುಗಿಲೋ
ಮೇಣಖಿಲ ಕುಲ</span><o:p></o:p></div>
<div class="MsoNormal">
<span lang="KN">ದಿಗಿಭವೆಂಟೊಂದಾಯ್ತೋ
ಕೈಕಾಲ್ ಮೂಡಿತೋ ನಭಕೆ</span><o:p></o:p></div>
<div class="MsoNormal">
<span lang="KN">ಅಗಿದು ಮೆಟ್ಟಿದಡವನಿ
ಪಡುವಲು </span><o:p></o:p></div>
<div class="MsoNormal">
<span lang="KN">ನೆಗೆದುದಡರಿದು
ಮುಂದೆ ಮೆಟ್ಟಲು</span><o:p></o:p></div>
<div class="MsoNormal">
<span lang="KN">ಚಿಗಿದುದಿಳೆ ಮೂಡಲು
ಮಹಾಗಜವೈದಿತಾಹವವ|| (ದ್ರೋ.ಪ, ಸಂ೩, ಪ-೯)</span><o:p></o:p></div>
<div class="MsoNormal">
<span lang="KN">ಯುದ್ಧಕ್ಕೆ ತಯಾರಾದ
ಆನೆ ಹೇಗೆ ಕಾಣುತ್ತಿತ್ತು?</span><o:p></o:p></div>
<div class="MsoNormal">
<span lang="KN">೧]ಜಗತ್ತಿನ ನಿದ್ರೆ
ಅಂದರೆ ಪ್ರಳಯವಾಗಿ ಇನ್ನೂ ಯಾವುದೇ ಸೃಷ್ಟಿ ಆಗಿರದಿದ್ದ ಕಾಲ.ಅಂತಹ ಸಮಯದಲ್ಲಿ ದಂಡುಗಟ್ಟಿದ
ಮೋಡಗಳಂತೆ.</span><o:p></o:p></div>
<div class="MsoNormal">
<span lang="KN">೨] ಅಷ್ಟದಿಗ್ಗಜಗಳು
ಒಂದಾದಂತೆ</span><o:p></o:p></div>
<div class="MsoNormal">
<span lang="KN">(ಐರಾವತ,ಪುಂಡರೀಕ,ವಾಮನ,ಕುಮುದ,ಅಂಜನ,ಪುಷ್ಪದಂತ,ಸಾರ್ವಭೌಮ,ಸುಪ್ರತೀಕ.)</span><o:p></o:p></div>
<div class="MsoNormal">
<span lang="KN">೩] ಆಕಾಶಕ್ಕೆ ಕೈ
ಮತ್ತು ಕಾಲು ಹುಟ್ಟಿದಂತೆ.</span><o:p></o:p></div>
<div class="MsoNormal">
<span lang="KN">ಇಲ್ಲಿ ಕುಮಾರವ್ಯಾಸನ
ಹೋಲಿಕೆಯ ಶಕ್ತಿಯನ್ನು ಗಮನಿಸಬೇಕು.ಮೊದಲಿಗೆ ಮೋಡದ ಹೋಲಿಕೆ. ಆದರೆ ಮೋಡಕ್ಕೆ ನಿಖರವಾದ
ಆಕಾರವಿಲ್ಲ.ಆದ್ದರಿಂದ ಮೋಡ ಮೂರ್ತವಾದ,ನಿಖರ ಆಕಾರವಿರುವ ಆನೆಯನ್ನು ಸಮೀಕರಿಸಲಾರದು ಎಂಬ
ಕಾರಣದಿಂದ ಎಂಟು ಆನೆಗಳೂ ಸೇರಿದಂತೆ ಎಂಬ ಮತ್ತೊಂದು ಹೋಲಿಕೆ ಕೊಡುತ್ತಾನೆ. ಈ ಆನೆಗಳು ಒಗ್ಗೂಡಿದರೆ
ಬರುವ ಗಾತ್ರ ಸುಪ್ರತೀಕ ಒಂದರಲ್ಲಿಯೇ ಇತ್ತು. ಆದರೆ ಸುಪ್ರತೀಕದ ಗಾತ್ರಕ್ಕೆ ಆ ಹೋಲಿಕೆಯೂ
ಸಾಕಾಗದು ಅನಿಸಿ ಆಕಾಶಕ್ಕೆ ಕೈಕಾಲ್ ಮೂಡಿದೆ ಎಂದು ಹೇಳಿದ್ದಾನೆ. ಗಾತ್ರದಲ್ಲಿ ಆಕಾಶವನ್ನು
ಮೀರಿಸುವ ಏನೂ ಇರಲು ಸಾಧ್ಯವಿಲ್ಲ.ಈ ಗಜ ಅಂತಹ ಗಾತ್ರವನ್ನು ಹೊಂದಿದೆ.</span><o:p></o:p></div>
<div class="MsoNormal">
<span lang="KN">***ಜಲಪ್ರಳಯ ಕಾಲದ
ಮೋಡಕ್ಕೆ ಹೋಲಿಸುವ ಮೂಲಕ ಈ ಗಜ ಮುಂದೆ ಯುದ್ಧದಲ್ಲಿ ಪ್ರಳಯಕಾಲದಲ್ಲಿ ಆಗುವ ನಾಶಕ್ಕೆ
ಸಮನಾದುದನ್ನೂ ಮಾಡುತ್ತದೆ ಎಂಬುದೂ ಸೂಚಿತವಾಗುತ್ತದೆ.***</span><o:p></o:p></div>
<div class="MsoNormal">
<span lang="KN">ಇದು ಆನೆಯ ಭೌತಿಕ
ರೂಪದ ಚಿತ್ರಣ.ಇಲ್ಲಿ ಆನೆಯ ದೈಹಿಕ ಗಾತ್ರದ ಚಿತ್ರಣ ಮಾತ್ರ ಆಗಿದೆ.ಆದರೆ ಅದರ ಬಲ ಯಾವ
ಪ್ರಮಾಣದ್ದು ಎಂಬುದು ಸೂಚಿತವಾಗಿಲ್ಲ.ಎಂಟು ಆನೆಗಳು ಸೇರಿದಂತೆ ಕಾಣುವುದು ಗಾತ್ರಕ್ಕೆ ಮಾತ್ರ
ಹೋಲಿಕೆಯಲ್ಲ,ಬಲಕ್ಕೂ ಹೌದು ಎಂಬುದನ್ನು,ಎರಡನೆಯ ಭಾಗದಲ್ಲಿ, ಈ ಬಲ ಉಂಟುಮಾಡಿದ ಪರಿಣಾಮವನ್ನು
ಚಿತ್ರಿಸುವ ಮೂಲಕ ವ್ಯಕ್ತಪಡಿಸಿದ್ದಾನೆ.ಪೂರ್ವ ದಿಕ್ಕಿನ ಕಾಲನ್ನು ನೆಲಕ್ಕಿಟ್ಟಾಗ ಅದರ ಪದಹತಿಗೆ
ಭೂಮಿ ಪಶ್ಚಿಮದಿಕ್ಕಿನಲ್ಲಿ ಮೇಲೆದ್ದಿತು.(ತಕ್ಕಡಿಯನ್ನು ಕಲ್ಪಿಸಿಕೊಳ್ಳಬಹುದು).ಪಶ್ಚಿಮದಿಕ್ಕಿನ
ಪಾದವನ್ನೂರಿದಾಗ ಪೂರ್ವ ದಿಕ್ಕಿನ ಭೂಮಿ ಮೇಲೆದ್ದಿತು.ಒಂದು ಹೆಜ್ಜೆಯನ್ನು ಸುಮ್ಮನೆ ಇಟ್ಟರೆ, ಈ
ಆನೆಯನ್ನೂ ಸೇರಿದಂತೆ ಅಪಾರ ಚರಾಚರಗಳನ್ನು ಹೊತ್ತ ಭೂಮಿಯ ಮೇಲೆ ಈ ಪರಿಣಾಮ ಆಗಬೇಕಿದ್ದರೆ ಆ ಬಲ
ಯಾವ ಮಟ್ಟದ್ದಿರಬಹುದು ಎಂದು ನಾವು ಊಹಿಸಬಹುದು.</span><o:p></o:p></div>
<div class="MsoNormal">
<span lang="KN">ಇಂತಹ ಆನೆ
ಯುದ್ಧಕ್ಕೆ ಹೊರಟಿತು. ಇದರ ಯುದ್ಧ ತುಂಬಾ ಭೀಕರ ವಾದದ್ದು.</span><span lang="KN">ಪಾಂಡವಸೇನೆಯಲ್ಲಿ</span><span lang="KN"> ಯಾರಿಗೂ ಅದನ್ನು ನಿಯಂತ್ರಿಸಲು ಆಗುವುದಿಲ್ಲ.ಭೀಮ
ತನ್ನ ಗದೆ ಹಿಡಿದು ಎದುರಾಗುತ್ತಾನೆ. ಆನೆ ಯುದ್ಧ ಮಾಡುವ ಪರಿಯ ವರ್ಣನೆ ನೋಡಿ.</span><o:p></o:p></div>
<div class="MsoNormal">
<span lang="KN">“ಅರೆದುದೋ ಪರಬಲವ
ಕಾಲನ</span><o:p></o:p></div>
<div class="MsoNormal">
<span lang="KN">ಹೊರೆದುದೋ ಮಾರಣದ
ಮಂತ್ರವ</span><o:p></o:p></div>
<div class="MsoNormal">
<span lang="KN">ಬರೆದುದೋ ಬವರಕ್ಕೆ
ಬಲುಗೈಗಳನು ಕೈ ನೆಗಹಿ</span><o:p></o:p></div>
<div class="MsoNormal">
<span lang="KN">ಕರೆದುದೋ ಬಲವೆಲ್ಲ
ನೀರಲಿ</span><o:p></o:p></div>
<div class="MsoNormal">
<span lang="KN">ನೆರೆದುದೋ ಮಾರ್ಬಲದ
ವೀರರ </span><o:p></o:p></div>
<div class="MsoNormal">
<span lang="KN">ಹರೆದುದೋ ಹವಣಿಲ್ಲ
ದಂತಿಯ ಸಮರಸೌರಂಭ || ದ್ರೋ.ಪ,ಸಂ ೩,ಪ-೧೭||</span><o:p></o:p></div>
<div class="MsoNormal">
<span lang="KN">ಶತ್ರುಬಲವನ್ನು
ಅರೆಯಿತು.ಸಾವಿನ ಒಡೆಯನಾದ ಯಮನನ್ನು ಸಾಕಿತು.(ಯಮನನ್ನು ಸಾಕುವುದು ಎಂದರೆ ಆತನಿಗೆ ಕೆಲಸ
ನೀಡುವುದು.ಅಂದರೆ ಜನರನ್ನು ಕೊಂದು ಆತನ ಆಲಯಕ್ಕೆ ಕಳಿಸುವುದು.)ಮಹಾಸಂಹಾರದ ಮಂತ್ರವನ್ನು
ಬರೆಯಿತು. ಯುದ್ಧಕ್ಕೆ ಬರಲು ಒಪ್ಪದ ವೀರರನ್ನು ಯುದ್ಧಕ್ಕೆ ಬನ್ನಿ ಎಂದು ಕರೆಯಿತು. ಪರಬಲದವರು
ಬೆವರಿ ನೆನೆದರು. ಎದುರು ಬಂದ ವೀರರು ದಿಕ್ಕಾಪಾಲಾಗಿ ಓಡಿದರು.ದ್ರುಪದನು ಓಡಿಯೇ ಹೋದ.ಭೀಮ
ಪಕ್ಕಕ್ಕೆ ಹಾರಿಕೊಂಡ.ಹಾಗೆ ಮಾಡಲಾಗದೆ ಅದಕ್ಕೆ ಸಿಕ್ಕಿದವರ ದೇಹ ಮತ್ತು ಉಸಿರಿನ ಸಂಬಂಧ
ಅಳಿಯಿತು.(“ಹಿಡಿಹಿಡಿಯಲೋಡಿದನು ದ್ರುಪದನು ಸಿಡಿದು ಕೆಲಸಾರಿದನು ಪವನಜನೊಡಲುಸರ ಸಂಬಂಧವಳಿದುದು
ಸಿಲುಕಿದನಿಬರಿಗೆ” ಪ-೨೫.)</span><o:p></o:p></div>
<div class="MsoNormal">
<span lang="KN">ಮತ್ತೆ ಭೀಮ
ಅದಕ್ಕೆದುರಾಗುತ್ತಾನೆ.ಆನೆಯ ಅಕ್ಕಪಕ್ಕ ,ಹಿಂದೆ ಮುಂದೆ ಸಂಚರಿಸುತ್ತ ಭೀಮ ಅದರ ಜತೆ
ಕಾದುತ್ತಾನೆ.ಆಗ ಆನೆಯ ಪ್ರತಿಕ್ರಿಯೆಯ ವರ್ಣನೆ:</span><o:p></o:p></div>
<div class="MsoNormal">
<span lang="KN">“ನೆಳಲುಗಂಡವ್ವಳಿಸುವುದು
ಸುಂ</span><o:p></o:p></div>
<div class="MsoNormal">
<span lang="KN">ಡಿಲನು ತೂಗಾಡುವುದು
ಹೋರಿದು</span><o:p></o:p></div>
<div class="MsoNormal">
<span lang="KN">ಬಳಲುವುದು ಮೊಗನೆಗಹಿ
ಭೀಮನ ದನಿಯನಾಲಿಪುದು</span><o:p></o:p></div>
<div class="MsoNormal">
<span lang="KN">ಅಳಿಯ ಮುತ್ತಿಗೆಗಳನು
ಬೀಸದೆ</span><o:p></o:p></div>
<div class="MsoNormal">
<span lang="KN">ನೆಲಕೆ ಕಿವಿಯನು
ಜೋಲುಬಿಡುವುದು </span><o:p></o:p></div>
<div class="MsoNormal">
<span lang="KN">ಬಲುಕಣಿಯ ಹಿಡುಹಿಂಗೆ
ಲಾಗಿಸುತಿರ್ದುದಾ ದಂತಿ ||ಪ-೩೭||</span><o:p></o:p></div>
<div class="MsoNormal">
<span lang="KN">(ಬಲುಕಣಿ=ಬಲ್ಕಣಿ=ಮಹಾ
ಪರಾಕ್ರಮಿ)</span><o:p></o:p></div>
<div class="MsoNormal">
<span lang="KN">ಭೀಮ ಪಕ್ಕಕ್ಕೆ
ಬಂದಾಗ ಅವನ ನೆರಳು ಕಂಡು ಅದರ ಅಧಾರದಲ್ಲಿ ಭೀಮ ಎಲ್ಲಿರಬಹುದೆಂದು ಊಹಿಸಿ ಅಪ್ಪಳಿಸುವುದು. ಭೀಮ
ಸಿಕ್ಕಬಹುದು ಎಂಬಾಸೆಯಲ್ಲಿ ಸೊಂಡಿಲನ್ನು ತೂಗಾಡಿಸುವುದು.ಹಾಗೆ ಮಾಡಿ ಬಳಲುವುದು. ಮುಖವನ್ನೆತ್ತಿ
ಭೀಮನ ಮಾತು ಆಲಿಸುವುದು. ತನಗೆ ಹಾಕಿರುವ ಆಭರಣಗಳನ್ನು ಅಲ್ಲಾಡಿಸದೆ,ಕಿವಿಯನ್ನು ಜೋಲಿಸಿ(ಭೀಮನ
ಹಜ್ಜೆಯ ಸದ್ದು ಗ್ರಹಿಸಲು) ಮಹಾಪರಾಕ್ರಮಿಯಾದ ಭೀಮನನ್ನು ಹಿಡಿಯಲು ಯೋಜನೆ ರೂಪಿಸುವುದು.<o:p></o:p></span></div>
<div class="MsoNormal">
<span lang="KN">ರುದ್ರಭೀಕರವಾಗಿ
ಯುದ್ಧಪ್ರವೃತ್ತವಾದ ಆನೆಯನ್ನು ಗೆಲ್ಲಲು ಭೀಮನಿಗೂ ಆಗುವುದಿಲ್ಲ. ಪಾಂಡವಸೇನೆ
ಪರಾಜಿತಗೊಳ್ಳುತ್ತಿರುವುದನ್ನು ಕಂಡ ಕೃಷ್ಣನು ಅರ್ಜುನನನ್ನು ಭಗದತ್ತನೆದುರು ಕರೆತರುತ್ತಾನೆ.ಭೀಮನ
ಯುದ್ಧ ಆನೆಯ ಜೊತೆಯಾದರೆ ಅರ್ಜುನ ಆನೆಯ ಮೇಲೆ ಕುಳಿತಿದ್ದ ಭಗದತ್ತನ ಜೊತೆ
ಯುದ್ಧಕ್ಕಿಳಿಯುತ್ತಾನೆ.ಅವರ ನಡುವೆ ಭೀಕರ ಯುದ್ಧ ನಡೆಯುತ್ತದೆ.ಕಡೆಗೆ ಭಗದತ್ತ, “ಕುಡಿ ಕಿರೀಟಿಯ
ರಕುತವನು ಹಗೆ ಕೆಡಲಿ ಕೌರವನಾಳಲಿ ಪೊಡವಿಯನು” ಎಂದು ಘೋಷಿಸಿ ವೈಷ್ಣವಾಸ್ತ್ರವನ್ನು
ಪ್ರಯೋಗಿಸುತ್ತಾನೆ.<o:p></o:p></span></div>
<div class="MsoNormal">
<span lang="KN">ಆ ಅಸ್ತ್ರ
ಹೇಗಿತ್ತು? “ದಿನಪಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ...(ಪ-೫೫), “ಕಾಳೋರಗನ
ಕುಡಿನಾಲಗೆ...(ಪ-೫೬),<o:p></o:p></span></div>
<div class="MsoNormal">
<span lang="KN">ಆಗ ಕೃಷ್ಣನು ಆ
ಅಸ್ತ್ರ ಮತ್ತು ಅರ್ಜುನನ ನಡುವೆ ನಿಂತು ತನ್ನ ಎದೆಯೊಡ್ಡಿ ಅಸ್ತ್ರವನ್ನು ಸ್ವೀಕರಿಸುತ್ತಾನೆ.
ಅಸ್ತ್ರ “ಕೌಸ್ತುಭದ ಮಣಿ ಮರಿಯನಿಳುಹಿದವೊಲು” ಕೃಷ್ಣನ ಕೊರಳಲ್ಲಿ ತೂಗಾಡುತ್ತದೆ.<o:p></o:p></span></div>
<div class="MsoNormal">
<span lang="KN">ಇಲ್ಲಿಗೆ
ಸುಖಾಂತ್ಯವಾಗಬೇಕಿತ್ತು.ಆದರೆ ಘಟನೆಗಳು
ವ್ಯಕ್ತಿಗಳನ್ನು ಪ್ರಚೋದಿಸುವ ಸಾಧ್ಯತೆಗಳು ಅನಂತ.<o:p></o:p></span></div>
<div class="MsoNormal">
<span lang="KN">ಅಂತಹ ಒಂದು
ವಿಕ್ಷಿಪ್ತವಾದ ಘಟನೆ ನಡೆಯುತ್ತದೆ.<o:p></o:p></span></div>
<div class="MsoNormal">
<span lang="KN">“ಕೌತುಕವನಿದಕಂಡು
ಫಲುಗುಣ <o:p></o:p></span></div>
<div class="MsoNormal">
<span lang="KN">ಕಾತರಿಸಿ ನುಡಿದನು
ಮುರಾಂತಕ<o:p></o:p></span></div>
<div class="MsoNormal">
<span lang="KN">ಸೂತತನಕಲಸಿದನ ಕಾದಲಿ
ಕೌರವನ ಕೂಡೆ<o:p></o:p></span></div>
<div class="MsoNormal">
<span lang="KN">ಸೂತತನವೇ ಸಾಕು
ತನಗೆನು<o:p></o:p></span></div>
<div class="MsoNormal">
<span lang="KN">ತಾ ತತುಕ್ಷಣ ಧನುವ
ಬಿಸುಟು ವಿ<o:p></o:p></span></div>
<div class="MsoNormal">
<span lang="KN">ಧೂತ ರಿಪುಬಲ
ಪಾರ್ಥನಿದ್ದನು ಹೊತ್ತ ದುಗುಡದಲಿ ||(ಸಂ ೩,ಪ-೬೨)<o:p></o:p></span></div>
<div class="MsoNormal">
<span lang="KN">ಕಾದುವಾತನು ನೀನು
ವೈರಿಯ<o:p></o:p></span></div>
<div class="MsoNormal">
<span lang="KN">ಕೈದುವನು ನೀ
ಗೆಲಿದೆಯಿನ್ನುರೆ<o:p></o:p></span></div>
<div class="MsoNormal">
<span lang="KN">ಕಾದುವವರಾವಲ್ಲ
ಸಾರಥಿತನವೆ ಸಾಕೆಮಗೆ<o:p></o:p></span></div>
<div class="MsoNormal">
<span lang="KN">ಕೈದುವಿದೆಕೋ ಕೃಷ್ಣ
ನೀನೇ <o:p></o:p></span></div>
<div class="MsoNormal">
<span lang="KN">ಕಾದು ವಾಘೆಯ ತಾ
ಎನಲು ಮರು<o:p></o:p></span></div>
<div class="MsoNormal">
<span lang="KN">ಳಾದನೈ ನರನೆನುತ
ಮುರಾರಿಯಿಂತೆಂದ ||ಪ-೬೪||<o:p></o:p></span></div>
<div class="MsoNormal">
<span lang="KN">ಮಹಾಸ್ತ್ರ
ಕೌಸ್ತುಭಮಣಿಯ ಮರಿಯಂತೆ ಕೃಷ್ಣನ ಕೊರಳಲ್ಲಿ ಶೋಭಿತವಾದ ಕೌತುಕ ಕಂಡರೂ ಅರ್ಜುನನಿಗೆ ಕೃಷ್ಣ
ಹಾಗೆ ಯಾಕೆ ಮಾಡಿದ,ಆ ಅಸ್ತ್ರದ ಶಕ್ತಿ ಎಂಥದು ಎಂಬುದು ಅರ್ಥವಾಗಲಿಲ್ಲ.ಆತನಿಗೆ ದುಗುಡವಾಯಿತು.ಆತ
ಯೋಚಿಸಿದ್ದು ಕೃಷ್ಣನಿಗೆ ಸಾರಥಿತನದ ಬಗ್ಗೆ ಆಲಸ್ಯವಾಯಿತೇ ಎಂದು. ಸಾರಥಿಯಾಗಿ ಮಾತ್ರ ನಾನು
ಭಾಗವಹಿಸುವೆ ಎಂದ ಕೃಷ್ಣ ಹೀಗೆ ಮಾಡುವುದಾದರೆ ಕೌರವನ ಬಳಿ ಅವನೇ ಯುದ್ಧ ಮಾಡಲಿ, ತಾನವನ
ಸಾರಥಿಯಾಗುತ್ತೇನೆ ಎಂದು ಅರ್ಜುನ ಧನುವನ್ನು ಬಿಸಾಡುತ್ತಾನೆ.ನಾನಿನ್ನು ಯುದ್ಧ
ಮಾಡುವವನಲ್ಲ,ನೀನೇ ಆಯುಧ ಹಿಡಿ,ತನಗೆ ವಾಘೆಯನ್ನು ಕೊಡು ಎಂದು ಅರ್ಜುನ ಹೇಳುತ್ತಾನೆ.<o:p></o:p></span></div>
<div class="MsoNormal">
<span lang="KN">ಅರ್ಜುನನ ಈ
ಪ್ರತಿಕ್ರಿಯೆ ಕುತೂಹಲಕಾರಿಯಾದದ್ದು.ಅವನಿಗೆ ಕೃಷ್ಣನ ಈ ವರ್ತನೆ ಹಿಡಿಸಿಲ್ಲ ಎಂಬುದು
ಮೊದಲನೆಯದು. ಹಿಡಿಸದಿರುವ ಕಾರಣ ತನ್ನ ಶೌರ್ಯದ ಬಗ್ಗೆ ಕೃಷ್ಣನಿಗೆ ಅನುಮಾನವಿದೆ ಮತ್ತು ಅವನ ಈ
ವರ್ತನೆ ತನಗೆ ಅವಮಾನಕಾರಿಯಾದದ್ದು ಎಂಬ ಭಾವನೆ.(...ವೈರಿಯ ಕೈದುವನು ನೀ ಗೆಲಿದೆಯಿನ್ನುರೆ
ಕಾದುವವರಾವಲ್ಲ.....)<o:p></o:p></span></div>
<div class="MsoNormal">
<span lang="KN">ಅರ್ಜುನನ ಸ್ವಾಭಿಮಾನ,
ಕೃಷ್ಣ ಹೀಗೆ ಮಾಡಲು ಏನೋ ಕಾರಣವಿರಬೇಕು ಎಂಬುದನ್ನು ಊಹಿಸಲಾರದಷ್ಟು ಪ್ರಬಲವಾಗಿ ಅಹಂಕಾರರೂಪಿಯಾಗಿತ್ತು
ಎಂಬುದು ಎರಡನೆಯದು.(ಈ ಯುದ್ಧದಲ್ಲಿ ಕೃಷ್ಣ ತಾನೇ ನೇರವಾಗಿ ಅಸ್ತ್ರದೆದುರು ನಿಂತ ಸಂದರ್ಭ
ಇದೊಂದೇ.ಬೇರೆ ಎಲ್ಲ ಸನ್ನಿವೇಶಗಳಲ್ಲೂ ತಂತ್ರ ಮಾಡಿ ಸಮಸ್ಯೆಯನ್ನು ಪರಿಹರಿಸಿದ್ದಾನೆಯೇ ಹೊರತು
ನೇರವಾಗಿ ಭಾಗಿಯಾಗಿ ಅಲ್ಲ.ಉದಾಹರಣೆಗೆ ಜಯದ್ರಥ ವಧೆ,ದ್ರೋಣವಧೆ,ಸರ್ಪಾಸ್ತ್ರ ಪ್ರಸಂಗ
ಇತ್ಯಾದಿಗಳನ್ನು ಗಮನಿಸಬಹುದು.)<o:p></o:p></span></div>
<div class="MsoNormal">
<span lang="KN">ಆಗ ಕೃಷ್ಣ ಆ
ಅಸ್ತ್ರದ ಶಕ್ತಿಯನ್ನು ಅವನಿಗೆ ವಿವರಿಸುತ್ತಾನೆ.ತಾನಲ್ಲದೆ ಬೇರೆ ಯಾರಿಗೂ ಆ ಅಸ್ತ್ರವನ್ನು
ನಿಷೇಧಿಸಲು ಆಗದು,ಆ ಕಾರಣದಿಂದ ತಾನು ಹಾಗೆ ಮಾಡಿದ್ದು ಎಂಬ ಅವನ ವಿವರಣೆ ಅರ್ಜುನನಿಗೆ ಸಮಾಧಾನ
ನೀಡುತ್ತದೆ.<o:p></o:p></span></div>
<div class="MsoNormal">
<span lang="KN">ಈ ಚಿತ್ರಣ ಆನೆಯ
ಯುದ್ಧದ ವೈಖರಿಯ ಚಿತ್ರಣ ಮಾತ್ರವಾಗದೆ, ಮನುಷ್ಯನ ಅಭಿಮಾನ ಅವನ ವಿವೇಕವನ್ನು ಕ್ಷಣಿಕ ಕಾಲವಾದರೂ
ಕುಂಠಿತಗೊಳಿಸಬಹುದು ಎಂಬುದರ ಸೂಚಕವಾಗಿದೆ.<o:p></o:p></span></div>
<div class="MsoNormal">
<span lang="KN">***<o:p></o:p></span></div>
<div class="MsoNormal">
<span lang="KN">ಈ ಪ್ರಸಂಗದಲ್ಲಿ
ಕುಮಾರವ್ಯಾಸನ ಕಾವ್ಯಶಕ್ತಿ ಪ್ರಕಟವಾದ ಕೆಲವು ಸಾಲುಗಳು:<o:p></o:p></span></div>
<div class="MsoNormal">
<span lang="KN">೧] ಗಿರಿಯ ಮುತ್ತಿದ
ಮಿಂಚುಬುಳುವಿನ ಹೊರಳಿಯಂತಿರೆ ಹೊನ್ನ ಬರಹದ ಸರಳು ಮೆರೆದವು-ಪ ೨೬<o:p></o:p></span></div>
<div class="MsoNormal">
<span lang="KN">೨] ಹಾವಿನ ಕೊಡನು
ದೋಷಿಗೆ ಸುಲಭವೇ-- ಪ ೨೮<o:p></o:p></span></div>
<div class="MsoNormal">
<span lang="KN">೩] ಬೆತ್ತ
ಬೆಳದದ್ರಿಯವೊಲಿದ್ದುದು ಮತ್ತಗಜ—ಪ ೩೯<o:p></o:p></span></div>
<div class="MsoNormal">
<span lang="KN">೪] ಸದರವೇ
ಉರಿಗೆಂಡವೊರಲೆಯ ಬಾಯ್ಗೆ—ಪ ೬೦<o:p></o:p></span></div>
<div class="MsoNormal">
<span lang="KN">೫] ಚಾಪದ ನಾರಿ
ಬೆಸಲಾಗಲಿ—ಪ ೭೩<o:p></o:p></span></div>
<div class="MsoNormal">
<span lang="KN">೬] ಅಪರಜಲಧಿಯೊಳುರಿವ
ವಡಬನ ದೀಪ್ತ ಶಿಖರದೊಳೆರಗುವಂತೆ ಪತಂಗ ಮಂಡಲವಿಳಿದುದಂಬರವ—ಪ ೮೦<o:p></o:p></span></div>
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<span lang="KN" style="font-family: "Arial Unicode MS","sans-serif"; font-size: 18.0pt; line-height: 115%; mso-ansi-language: EN-US; mso-bidi-language: KN; mso-fareast-font-family: Calibri; mso-fareast-language: EN-US; mso-fareast-theme-font: minor-latin;"><br clear="all" style="mso-special-character: line-break; page-break-before: always;" />
</span>
<br />
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<div class="MsoNormal">
<br /></div>
<br />
<div class="MsoNormal" style="text-align: justify;">
<br /></div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com5tag:blogger.com,1999:blog-5355400587468753863.post-19925351914640928592015-09-15T17:33:00.000+05:302015-09-15T17:33:31.904+05:30ಒಂದು ಪ್ರತಿಮೆ<div dir="ltr" style="text-align: left;" trbidi="on">
<h2 style="text-align: left;">
<br /></h2>
<div>
<div>
ಅಡಿಗರು ತಮ್ಮ ಭೂಮಿಗೀತ ಕವನದಲ್ಲಿ ಬಳಸಿರುವ ಒಂದು ಪ್ರತಿಮೆಯ ವಿವರಣೆ ಈ ಲೇಖನದ ಆಶಯ. ಈ ಪ್ರತಿಮೆಯ ಧ್ವನಿಗ್ರಹಿಕೆ ಮಾತ್ರ ನನ್ನ ಉದ್ದೇಶವೇ ಹೊರತು ಇವು ಕವನದಲ್ಲಿ ಹೇಗೆ ಸಂಗತವಾಗಿವೆ ಎಂಬುದಲ್ಲ. ಕವನವನ್ನು ಒಟ್ಟಂದದಲ್ಲಿ ಗ್ರಹಿಸುವಲ್ಲಿ ಆ ಸಾಂಗತ್ಯ ಹೊಳೆಯುತ್ತದೆ. </div>
<div>
************</div>
<div>
"ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ, ಸಾಯಿಸಲಿಕಲ್ಲದೇ ಬರಳು ಕುಂತಿ."( ಭೂಮಿಗೀತ-೮೨ನೆಯ ಸಾಲು)</div>
<div>
ಅಡಿಗರು ಪೂರ್ವಕೃತಿಗಳ ಘಟನೆಗಳನ್ನು ಪ್ರತಿಮೆಯಾಗಿ ಕೆಲವು ಕಡೆ ಬಳಸಿದ್ದಾರೆ. ಈ ವಿಧಾನ ತುಂಬಾ ವಿವರವಾಗಿ ಹೇಳಬೇಕಾದುದನ್ನು ಸಂಕ್ಷಿಪ್ತವಾಗಿ,ಧ್ವನಿಪೂರ್ವಕವಾಗಿ ಹೇಳುತ್ತದೆ. ಅದರೆ ಪ್ರತಿಮೆಯ ಧ್ವನಿಯನ್ನು ಗ್ರಹಿಸಲು ನಮಗೆ ಮುಂಚಿತವಾಗಿಯೇ ಘಟನೆಯ ವಿವರ ತಿಳಿದಿರಬೇಕಾಗುತ್ತದೆ. ಇದು ಅಂತಹ ಪ್ರತಿಮೆಗಳಲ್ಲಿ ಒಂದು. ಮಹಾಭಾರತದ ಎರಡು ಘಟನೆಗಳನ್ನುಇಲ್ಲಿ ಪ್ರತಿಮೆಯಾಗಿ ಬಳಸಿಕೊಳ್ಳಲಾಗಿದೆ.</div>
<div>
೧.ಗಂಗೆಯಲಿ ತೇಲಿಬಂದನು ಕರ್ಣ,ರಾಧೇಯ</div>
<div>
೨.ಸಾಯಿಸಲಿಕಲ್ಲದೇ ಬರಳು ಕುಂತಿ.</div>
<div>
ಮಂತ್ರಪರೀಕ್ಷೆಯ ತವಕದಲ್ಲಿ ಕನ್ಯೆಯಾಗಿರುವ ಕುಂತಿ ಕರ್ಣನಿಗೆ ಜನ್ಮ ನೀಡುತ್ತಾಳೆ. ಅಪವಾದ ಬರುತ್ತದೆ ಎಂಬ ಭಯದಿಂದ ಮಗುವನ್ನು ಗಂಗೆಯಲ್ಲಿ ತೇಲಿಬಿಡುತ್ತಾಳೆ. ಈ ಮಗು,ಕರ್ಣ,ಸೂತನಾದ ಅಧಿರಥನಿಗೆ ಸಿಗುತ್ತದೆ. ಅವನ ಪತ್ನಿ ರಾಧೆ ಈ ಮಗುವನ್ನು ಸಾಕುತ್ತಾಳೆ. ರಾಧೆಯ ಮಗ ರಾಧೇಯ ಆಗಿ ಬೆಳೆಯುತ್ತದೆ.</div>
<div>
ಇಲ್ಲಿ ಅಡಿಗರು ಉದ್ದೇಶಪೂರ್ವಕವಾಗಿ ಕುಂತಿ ಮಗುವನ್ನು ತ್ಯಜಿಸಿದ ಸೂಚನೆ ಕೊಡುವುದಿಲ್ಲ. ಬರಿದೇ ಗಂಗೆಯಲಿ ತೇಲಿಬಂದನು ಎಂದು ಹೇಳುತ್ತಾರೆ. ಅಡಿಗರು ಅದನ್ನು ಹೇಳಿದ್ದರೆ ಕರ್ಣ ಈ ಸನ್ನಿವೇಶದ ಮಟ್ಟಿಗೆ ಕೌಂತೇಯ ಆಗುತ್ತಿದ್ದ. ಅವನು ಕುಂತಿಯಮಗನಾದರೂ ಕೌಂತೇಯನಾಗಲಿಲ್ಲ,ರಾಧೇಯನಾದ ಎಂಬುದನ್ನು ಧ್ವನಿಸಲು ಕುಂತಿ ತೇಲಿಬಿಟ್ಟ ಸೂಚನೆ ನೀಡದೆ ಬರಿದೆ ತೇಲಿಬಂದನು ಎಂಬ ಪ್ರಯೋಗ ಬಳಸಿದ್ದಾರೆ. ಇಲ್ಲಿ ಇನ್ನೊಂದು ಅಂಶವನ್ನೂ ಗಮನಿಸಬಹುದು. ಒಂದುವೇಳೆ ಕೌಂತೇಯ ಎಂಬ ಪ್ರಯೋಗ ಮಾಡಿದ್ದರೆ ಸಾಯಿಸಲಿಕಲ್ಲದೇ ಬರಳು ಕುಂತಿ ಎಂಬ ಮುಂದಿನ ಹೇಳಿಕೆ ದುರ್ಬಲವಾಗುತ್ತಿತ್ತು. ಸಾಯಿಸಲಿಕಲ್ಲದೇ ಬರಳು ಎಂಬ ಹೇಳಿಕೆಯನ್ನು ಬಲಪಡಿಸುವ ಕಾರ್ಯವನ್ನು ಮೊದಲ ಸಾಲಿನಲ್ಲಿ ಅಡಿಗರು ಮಾಡುತ್ತಾರೆ. ಇದು ಪ್ರಭಾವಶಾಲಿ ಅನಿಸುವುದು ಎರಡನೆಯ ಭಾಗವನ್ನು ನಾವು ಗ್ರಹಿಸಿದಾಗ.</div>
<div>
ಕೃಷ್ಣನ ಸೂಚನೆಯಂತೆ ಕುಂತಿ ಕರ್ಣನನ್ನು ಮೊದಲ ಭಾರಿ ಭೇಟಿಯಾಗುವುದು ಅವನಿಂದ ತೊಟ್ಟ ಬಾಣವನ್ನು ಮರಳಿ ತೊಡಬಾರದು ಮತ್ತು ತನ್ನ ಐವರು ಮಕ್ಕಳನ್ನು ಕೊಲ್ಲದೆ ಕಾಯಬೇಕು ಎಂಬೆರಡು ಮಾತು ಪಡೆಯಲು. ಮೊದಲ ಮಾತೇ ಮುಂದೆ ಕರ್ಣನ ಸಾವಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಸಿಕೊಂಡರೆ ಕುಂತಿ ಬರುವುದು ಕರ್ಣನ ಸಾವನ್ನು ಬೇಡಿ ಎಂಬ ಎರಡನೆಯ ಸಾಲಿನ ಅರ್ಥವಿವರ ಸ್ಪಷ್ಟವಾಗುತ್ತದೆ.</div>
<div>
ಇವೆರಡೂ ಹೇಳಿಕೆಗಳನ್ನು ಒಟ್ಟಿನಲ್ಲಿ ಗ್ರಹಿಸಿದರೆ ಒಂದಕ್ಕೊಂದು ಸಂಗತವಾಗುವ ಸಂಬಂಧ ಸ್ಪಷ್ಟವಾಗುತ್ತದೆ. ಕರ್ಣ ರಾಧೇಯನಾಗಿದ್ದರಿಂದಲೇ ಕುಂತಿಗೆ ಮಾತು ಕೊಡು ಎಂದು ಕೇಳಲು ಸಾಧ್ಯವಾಯಿತು. ಅವನು ಕೌಂತೇಯನಾಗಿದ್ದರೆ ಅವಳಿಗೆ ಈ ಮಾತನ್ನು ಕೇಳಲು ಆಗುತ್ತಿರಲಿಲ್ಲ. ಇಡೀ ಕವನದ ಅರ್ಥವ್ಯಾಪ್ತಿಯನ್ನು ಆವರಿಸುವ ಎರಡನೆಯ ವಾಕ್ಯದ ಧ್ವನಿಯನ್ನು ಬಲಪಡಿಸವುದೇ ಮೊದಲ ವಾಕ್ಯ. ರಾಧೇಯ ಎಂಬುದರ ಬಳಕೆಯ ಉದ್ದೇಶ ಎರಡನೆಯ ವಾಕ್ಯದ ತೀವ್ರತೆಯನ್ನು ಹೆಚ್ಚಿಸುವುದು.( ಇವು ಇವಳ ಸಹಜ ಸಂತಾನ ಎಂಬ ಕವನದ ಸಾಲಿನ ಹಿನ್ನೆಲೆಯಲ್ಲಿ ಗಮನಿಸಬಹುದು.)</div>
</div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com1tag:blogger.com,1999:blog-5355400587468753863.post-1562169483731896642014-03-24T09:36:00.000+05:302014-03-24T09:36:02.823+05:30 ಏಕದಂತ. <div dir="ltr" style="text-align: left;" trbidi="on">
<div style="text-align: center;">
</div>
<div class="separator" style="clear: both; text-align: center;">
<a href="http://1.bp.blogspot.com/-tEe1tbKh0lw/Uy-tPikeN8I/AAAAAAAAAUc/7iXUvBaImQE/s1600/ganapa.jpg" imageanchor="1" style="margin-left: 1em; margin-right: 1em;"><img border="0" src="http://1.bp.blogspot.com/-tEe1tbKh0lw/Uy-tPikeN8I/AAAAAAAAAUc/7iXUvBaImQE/s1600/ganapa.jpg" /></a></div>
<div style="text-align: center;">
<br /></div>
<div style="text-align: justify;">
<br /></div>
<div class="separator" style="clear: both; text-align: left;">
<span style="text-align: justify;">ಕೆಲವು ಸಲ ನನ್ನಲ್ಲಿ ಹುಟ್ಟುವ ಕುತೂಹಲಕ್ಕೆ ಕಾರಣವೇನು ಎಂಬುದು ನನಗೂ ಗೊತ್ತಾಗುವುದಿಲ್ಲ. ಇದ್ದಕ್ಕಿದ್ದಂತೆ ಯಾವುದೋ ಸಣ್ಣ ಕಾರಣ ನಿಮಿತ್ತವಾಗುತ್ತದೆ. ನಿನ್ನೆ ಹಾಗೇ ಆಯಿತು. ಎಲ್ಲೋ ಹಾಕಿದ್ದ ಮೈಕಲ್ಲಿ ನಮ್ಮ ಗಣಪತಿಯ ಸ್ತೋತ್ರ. ಅದರಲ್ಲಿ ಬರುವ "ಏಕದಂತಾಯ" ಎಂಬುದನ್ನು ಕೇಳಿ ಎಲಾ! ಈ ಗಣಪ ಯಾಕೆ ಏಕದಂತನಾದ ಎಂಬ ಕುತೂಹಲ ಹುಟ್ಟಿತು. ಇಲ್ಲಿಯವರೆಗೂ ಗಣಪನ ಈ ಹೆಸರು ಕೇಳಿದ್ದರೂ ಈ ಕುತೂಹಲ ಬಂದಿರಲಿಲ್ಲ. ಗಣಪನಿಗೆ ಆನೆಯ ತಲೆ ತರುವವರು ಒಂದೇ ದಂತ ಇರುವುದನ್ನು ಗಮನಿಸದೆ ತಂದರೇ? ಪಾರ್ವತಿಯಿಂದ ಬೈಸಿಕೊಳ್ಳುತ್ತಿದ್ದ ಈಶ್ವರ ಗಡಿಬಿಡಿಯಲ್ಲಿ ಗಮನಿಸದಿದ್ದರೂ ತಾಯಿ ಪಾರ್ವತಿ ಅದನ್ನು ಗಮನಿಸಿ ಈ ಮುಖ ಬೇಡ ಎಂದು ತಕರಾರು ಎತ್ತಬಹುದಿತ್ತಲ್ಲ. ಯಾಕೆ ಹೀಗಾಯಿತು? ಇದರ ಮೂಲ ಪತ್ತೆ ಹಚ್ಚಬೇಕು ಎಂಬ ಉತ್ಸಾಹ ಹುಟ್ಟಿತು. ನಮ್ಮ ಸ್ತೋತ್ರಮಾಲಿಕೆಗಳಲ್ಲಿ ಸಾಲಾಗಿ ನಾಮಾವಳಿ ಇರುತ್ತದೆಯೇ ಹೊರತು ವಿವರ ಇರುವುದು ಕಡಿಮೆ. ಸ್ಥಳೀಯ ಪಂಡಿತರೊಬ್ಬರನ್ನು ಕೇಳಿದಾಗ ಗಣಪ ಒಮ್ಮೆ ಬಿದ್ದಿದ್ದನಲ್ಲ..ನೋಡು ಚಂದ್ರ ನಕ್ಕು ಶಾಪ ಬಂತಲ್ಲ..ಆಗ ಮುರಿಯಿತು ಎಂದು ನಿಖರವಾಗಿ ಹೇಳಿದರು. ಇದ್ದರೂ ಇರಬಹುದು..ಬಿದ್ದು ಹಲ್ಲು ಮುರಿದುಕೊಂಡರೆ ನೋಡುವವರು ನಕ್ಕರದು ತಪ್ಪಲ್ಲ. ಅಂತೂ ಅವತ್ತಿಂದ ಗಣಪನಿಗೆ ಮತ್ತೊಂದು ಹೆಸರು ಬಂದಂತಾಯಿತು</span></div>
<div class="separator" style="clear: both; text-align: left;">
<span style="text-align: justify;">(ಅಲ್ಲಿಯವರೆಗೆ ಅವನ ನಾಮಾವಳಿಯಲ್ಲಿ ೯೯೯ "ನಾಮ"ಗಳು ಮಾತ್ರ ಇದ್ದವೇ?)</span></div>
<div style="text-align: justify;">
<br /></div>
<div style="text-align: justify;">
ಆದರೆ ನಮ್ಮ ಪಂಡಿತರು ಸುಮ್ಮನೆ ಬುರುಡೆ ಬಿಟ್ಟರು ಎಂಬುದು ಮೊನ್ನೆ ಬ್ರಹ್ಮಾಂಡ ಪುರಾಣ ಓದುತ್ತಿದ್ದಾಗ ತಿಳಿಯಿತು. ಅಲ್ಲಿದೆ ಗಣಪ ಏಕದಂತನಾದ ಕಾರಣ. ನೀವೂ ತಿಳಿದುಕೊಳ್ಳಿ.</div>
<div style="text-align: justify;">
ಈಶ್ವರನಿಂದ ವರಪಡೆದು ಕ್ಷತ್ರಿಯ ಕುಲ ಸಂಹರಿದ ಪರಶುರಾಮ ಒಮ್ಮೆ ಈಶ್ವರನ ದರ್ಶನಕ್ಕೆಂದು ಕೈಲಾಸಕ್ಕೆ ಆಗಮಿಸಿದ. ಅವೇಳೆ. ಈಶ್ವರ ಆ ಸಮಯದಲ್ಲಿ ಪಾರ್ವತಿಯೊಂದಿಗೆ ಸಲ್ಲಾಪದಲ್ಲಿದ್ದ. ತಾಯಿ ಸ್ನಾನಕ್ಕೆ ಹೋದಾಗ ಕಾಯುತ್ತ ನಿಂತಂತೆ ಗಣಪ ಈಗಲೂ ಹೊರಗೆ ಕಾವಲು ನಿಂತಿದ್ದ.(ಭಕ್ತರನ್ನು ಕಾಯುವುದು ಇಲ್ಲಿಂದಲೇ ಕಲಿತಿರಬೇಕು.) ತನ್ನ ಕರ್ತವ್ಯಪರತೆಯನ್ನು ಮೆರೆದು ಪರಶುರಾಮನನ್ನು ತಡೆದ. ಈಗ ಈಶ್ವರನ ಭೇಟಿ ಸಾಧ್ಯವಿಲ್ಲ.ನಿಮಗೆ ಬೇರೆ ಸಮಯ ನಿಗದಿ ಮಾಡಿಕೊಡಲಾಗುವುದು.ಕಾಯಿರಿ. ಎಂದು ಪರಶುರಾಮನ ಕೋರಿಕೆಯನ್ನು ನಿರಾಕರಿಸಿದ. ಪರಶುರಾಮ ಪದೇಪದೇ ವಿನಂತಿಸಿದರೂ ಗಣಪ ತಲೆ(ಸೊಂಡಿಲು?) ಅಲ್ಲಾಡಿಸಿ ನಿರಾಕರಿಸಿದ. ಬಂತು ನೋಡಿ ಪರಶುರಾಮನಿಗೆ ಭಯಂಕರ ಸಿಟ್ಟು! ಆತ ತನ್ನ ಆಯುಧವಾದ ಪರಶುವನ್ನು ಗಣಪನ ಮೇಲೆ ಪ್ರಯೋಗಿಸಲು ತಯಾರಾದ. ಅವನು ಪ್ರಯೋಗಿಸುತ್ತಾನೆ ಎಂಬುದು ಗಣಪನಿಗೆ ಮುಂಚೆಯೇ ತಿಳಿದು ಗಣಪನನ್ನು ಅನಾಮತ್ತಾಗಿ ಸೊಂಡಿಲಿಂದ ಎತ್ತಿ ಮೇಲಿನ ಏಳು+ವೈಕುಂಠ+ಗೋಲೋಕವನ್ನೂ ಮತ್ತು ಕೆಳಗಿನ ಏಳು ಲೋಕವನ್ನೂ ತೋರಿಸಿಬಿಟ್ಟ. ಪರಶುರಾಮನಿಗೆ ಒಂದೆಡೆ ಖುಷಿ ಮತ್ತೊಂದೆಡೆ ದುಃಖ. ನಿರಾಯಾಸವಾಗಿ ಎಲ್ಲ ಲೋಕಗಳನ್ನೂ ನೋಡಿದ ಖುಷಿ. ಆಯುಧ ಪ್ರಯೋಗಕ್ಕಿಂತ ಮುಂಚೆಯೇ ಸೋತದ್ದಕ್ಕೆ ಬೇಸರ. ಆದರೂ ಬುದ್ಧಿ ಕಲಿಯದ ಪರಶುರಾಮ ಆತ ಸೊಂಡಿಲಿಂದ ಇಳಿಸಿದ ಕೂಡಲೇ ಪರಶುವನ್ನು ಪ್ರಯೋಗಿಸಿಯೇ ಬಿಟ್ಟ. ಈಶ್ವರನಿಂದ ಪ್ರಾಸಾದಿತವಾದ ಈ ಪರಶುವನ್ನು ನಿರಾಕರಿಸುವುದು ಅಥವಾ ಗೆಲ್ಲುವುದು ಈಶ್ವರನಿಗೆ(ಅಪ್ಪನಿಗೆ) ಮಾಡುವ ಅವಮಾನ ಎಂಬ ವಿನೀತ ಭಾವದಿಂದ ಗಣಪ ಅದನ್ನು ತನ್ನ ಕುಂಭದ ಎಡಭಾಗದಿಂದ ತಡೆದ. ಘಾತವಾಯಿತು ನೋಡಿ. ಗಣಪನ ಎಡದಂತ ಮುರಿದುಬಿತ್ತು. ಹೀಗೆ ಗಣಪ ಏಕದಂತನಾದ.</div>
<div style="text-align: justify;">
(ಈ ಕತೆ ಇನ್ನೂ ಇದೆ. ಆದರೆ ಗಣಪ ಹೊಸದಂತ ಕಟ್ಟಿಸಿಕೊಳ್ಳಲಿಲ್ಲವಾದ್ದರಿಂದ ಕತೆಯನ್ನು ವಿಸ್ತರಿಸುವ ಅಗತ್ಯವಿಲ್ಲ.)</div>
<div style="text-align: justify;">
(ಆಸಕ್ತರ ಗಮನಕ್ಕೆ:ಮೇಲಿನ ಏಳು ಲೋಕಗಳು-ಭೂ, ಭುವಃ, ಸ್ವಃ, ಮಹಃ, ಜನಃ, ತಪಃ, ಸತ್ಯ</div>
<div style="text-align: justify;">
ಕೆಳಗಿನ ಏಳು ಲೋಕಗಳು-ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ.) </div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com3tag:blogger.com,1999:blog-5355400587468753863.post-77189074338888775302013-07-25T09:55:00.000+05:302013-07-25T09:55:28.319+05:30ಭೂಮಿಗೀತ ಕವನದ ನಾಲ್ಕು ಸಾಲುಗಳು.<div dir="ltr" style="text-align: left;" trbidi="on">
<div style="text-align: justify;">
<span style="color: orange;"><span style="font-family: 'tunga';"><br /></span></span></div>
<div style="margin: 0px; text-align: justify; text-indent: 0px;">
<span style="font-family: 'tunga';">ನರ್ಸುಗಳು ಡಾಕ್ಟರರು ಹೆರಿಗೆಮನೆಯೊಳಹೊರಗೆ.</span></div>
<div style="margin: 0px; text-align: justify; text-indent: 0px;">
<span style="font-family: 'tunga';">ಅವರ ಬೆನ್ನಿಗೆ ಸದಾ ನಾಲ್ಕುಮಂದಿ;</span></div>
<div style="margin: 0px; text-align: justify; text-indent: 0px;">
<span style="font-family: 'tunga';">ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ;</span></div>
<div style="margin: 0px; text-align: justify; text-indent: 0px;">
<span style="font-family: 'tunga';">ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ.</span></div>
<div style="margin: 0px; text-align: justify; text-indent: 0px;">
<span style="font-family: 'tunga';">(ಗೋಪಲಕೃಷ್ಣ ಅಡಿಗ-ಸಮಗ್ರ ಕಾವ್ಯ-ಪುಟ ೨೬೪) </span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಇತ್ತೀಚೆಗೆ ಕೊಂಡ ಅಡಿಗರ ಸಮಗ್ರ ಕಾವ್ಯ ಓದುತ್ತಿದ್ದೆ. ಅವರ ಕವನಗಳನ್ನು ನಾನು ಬಿ.ಎ. ಓದುತ್ತಿದ್ದ ಕಾಲದಿಂದಲೂ ಓದುತ್ತಿದ್ದೆ.ಅವರ ಧೋರಣೆಗಳು ಏನೇ ಇರಲಿ ಅವರ ಕವನಕಟ್ಟುವ ರೀತಿ ಒಂದು ವಿಸ್ಮಯ. ಕಲ್ಲು ಕೆತ್ತಿ ವಿಗ್ರಹ ನಿರ್ಮಿಸಿದಂತೆ. ಈಗ ಮತ್ತೆ ಅವರ ಭೂಮಿಗೀತ ಕವನದ ಈ ಸಾಲುಗಳನ್ನು ಓದುವಾಗ ಓಂದಿಷ್ಟು ಹೊಳೆಯಿತು. ಮುಂಚೆ ಏನು ಹೊಳೆದಿತ್ತು ಎಂದು ನನಗೇ ಕುತೂಹಲವಾಗಿ ನನ್ನ ಸಂಗ್ರಹದಲ್ಲಿದ್ದ ಅವರ ಭೂಮಿಗೀತ ಸಂಕಲನ ಹುಡುಕಿ ತೆಗೆದು ನೋಡಿದೆ. ಪುಣ್ಯಕ್ಕೆ ಅದರಲ್ಲಿ ನಾನು ಬರಕೊಂಡ ಟಿಪ್ಪಣಿಗಳಿದ್ದವು. ಅವನ್ನು ಮತ್ತೆ ಈಗಿನ ಒಂದಿಷ್ಟನ್ನು ಸೇರಿಸಿ ಬರೆಯುವ ಹುಮ್ಮಸ್ಸು ಬಂತು. ನಾನಿಲ್ಲಿ ಇಡೀ ಕವನದ ಬಗ್ಗೆ ಬರೆಯುತ್ತಿಲ್ಲ. ಬದಲಿಗೆ ಮೇಲಿನ ನಾಲ್ಕು ಸಾಲುಗಳನ್ನು ಓದಿದಾಗ ನನಗೆ ಅನಿಸಿದ್ದನ್ನು ಮಾತ್ರ ಬರೆಯುತ್ತಿದ್ದೇನೆ.</span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಇಲ್ಲಿ ಮೂರು ಬಿಡಿ ನೋಟಗಳಿವೆ.1)"ನರ್ಸುಗಳು.........ಸದಾ ನಾಲ್ಕು ಮಂದಿ" 2)"ತೊಟ್ಟಿಲಂಗಡಿಯಲ್ಲಿ.........ಅಗ್ಗ" 3)"ಜಾತಕರ್ಮದಿ......ಪಾರಂಗತ" ಮೊದಲನೆಯದು ಕ್ರಿಯಾತ್ಮಕವಾಗಿರುವ ಒಂದು ಸನ್ನಿವೇಶ. ಇಲ್ಲಿ "ಒಳಹೊರಗೆ" ಎಂಬ ಪದ ಡಾಕ್ಟರ್ ಮತ್ತು ನರ್ಸುಗಳ ಓಡಾಟವನ್ನು ಸೂಚಿಸುತ್ತಿದೆ. ಹೆರಿಗೆಯ ಸಂದರ್ಭದಲ್ಲಿ ಓಡಾಟ ಅಂದರೆ ಒಂದು ಜೀವ ಹುಟ್ಟುತ್ತಿರುವ ಸೂಚನೆ. ಅವರ ಬೆನ್ನಿಗೆ ಸದಾ ನಾಲ್ಕು ಮಂದಿ ಎಂಬುದು ಅವರ ಸಹಾಯಕರನ್ನು ಸೂಚಿಸುತ್ತದೆ. </span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಎರಡನೆಯ ಸಾಲು ಹುಟ್ಟಿನ ಅನಂತರ ಮಗುವನ್ನು ತೊಟ್ಟಿಲಲ್ಲಿ ಇಟ್ಟ ಸ್ಥಿತಿಯನ್ನು ಸೂಚಿಸುತ್ತದೆ. ಹಿಂದೆ ತೊಟ್ಟಿಲನ್ನು ಬೊಂಬಿನಿಂದ ಮಾಡುತ್ತಿದ್ದ ಕಾರಣ ಆ ಪದವನ್ನು ಬಳಸಲಾಗಿದೆ. ತೊಟ್ಟಿಲು ತಯಾರಿಸಲು ಬೊಂಬು ಬೇಕಾದ ಕಾರಣ ಅದರ ಸಂಗ್ರಹ ಸಾಕಷ್ಟು ತೊಟ್ಟಿಲಂಗಡಿಯಲ್ಲಿ ಇರುತ್ತದೆ.ಹಾಗಾಗಿ ಅಲ್ಲಿ ಅದು ಅಗ್ಗ. ಅಂದರೆ ಮಗುವಿಗೆ ಒಂದು ಗುರುತನ್ನು(identity) ಕೊಡುತ್ತಿರುವ ಸೂಚನೆ. </span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಮೂರನೆಯ ಸಾಲು ನಾಮಕರಣದ ಕ್ರಿಯೆಯನ್ನು ಸೂಚಿಸುತ್ತಿದೆ. ಸಧ್ಯಕ್ಕೆ ನಾಮಕರಣ ಪ್ರಕ್ರಿಯೆ ನಡೆಯುತ್ತಿದೆ ಎಂಬುದನ್ನು ಜಾತಕರ್ಮದಿ ನಿರತ ಎಂಬ ಹೇಳಿಕೆ ಸೂಚಿಸುತ್ತದೆ.ಇದು ವರ್ತಮಾನಕಾಲದ ಸೂಚಕ. ಹೀಗೆ ನಿರತನಾಗಿರುವ ಭಟ್ಟ ಸಾವಿನ ಅನಂತರದ ಕ್ರಿಯೆಯಲ್ಲೂ ಪಾರಂಗತನಿದ್ದಾನೆ ಎಂಬುದು ಹೇಳಿಕೆ.ಇದು ಮುಂದೆ ಬರುವ ಕಾಲದ ಅಥವಾ ಕ್ರಿಯೆಯ ಸೂಚಕ. </span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಇದಷ್ಟೇ ಈ ಸಾಲುಗಳ ಧ್ವನಿಯಾಗಿದ್ದರೆ ತುಂಬಾ ಸರಳವಾದ ಹೇಳಿಕೆಯ ರೂಪದಲ್ಲೇ ಉಳಿದುಬಿಡುತ್ತಿತ್ತು. ಹುಟ್ಟನ್ನು ಸೂಚಿಸುವ ಹೆರಿಗೆಮನೆಯೊಳಹೊರಗಿನ ಡಾಕ್ಟರರ ಬೆನ್ನ ಹಿಂದಿನ ನಾಲ್ಕು ಮಂದಿ ಹೆಣಹೊರುವ ನಾಲ್ಕು ಮಂದಿಯ ಸಂಕೇತವಾಗುತ್ತಾರೆ. ಈ ಧ್ವನಿಯನ್ನು ಮುಂದಿನ ಸಾಲುಗಳು ಪುಷ್ಟೀಕರಿಸುತ್ತವೆ. ತೊಟ್ಟಿಲಂಗಡಿಯಲ್ಲಿ ಸಿಗುವ ಬೊಂಬು ಚಟ್ಟಕಟ್ಟಲೂ ಬಳಕೆಯಾಗುತ್ತದೆ. ನಾಮಕರಣ ಮಾಡುತ್ತಿರುವ ಭಟ್ಟ ಅಪರಕ್ರಿಯೆಯಲ್ಲೂ ಪಾರಂಗತ ಎಂದರೆ ಸಾವಿನ ಅನಂತರ ಗುರುತನ್ನು ಅಳಿಸುವ ಕ್ರಿಯೆಯನ್ನು ಸೂಚಿಸುತ್ತದೆ. ಅಂದರೆ ಮೂರು ಸಾಲುಗಳು ಹುಟ್ಟು ಮತ್ತು ಸಾವಿನ ಸಂಬಂಧವನ್ನು ಅನಿವಾರ್ಯತೆಯನ್ನು ವಿವರಿಸುತ್ತವೆ. </span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಇನ್ನೂ ಗಮನಿಸಬೇಕಾದ ಅಂಶವೆಂದರೆ ಈ ಮೂರೂಸಾಲುಗಳು ಹುಟ್ಟುಸಾವಿನ ಅನಿವಾರ್ಯತೆಯನ್ನು ಕವನದಲ್ಲಿ ಬೆಳೆಸುವರೀತಿ. ಮೊದಲ ಸಾಲಿನಲ್ಲಿ ಮಗು ಹುಟ್ಟಿದೆಯೋ ಇಲ್ಲವೋ ಗೊತ್ತಿಲ್ಲ. ಹುಟ್ಟಿದ ಅಥವಾ ಇನ್ನೀಗ ಹುಟ್ಟಲಿರುವ ಸೂಚನೆ ಇದೆ. ಹಾಗೆ "ನಾಲ್ಕು ಮಂದಿ" ಎಂಬ ಪದಬಳಕೆ ಈಗಾಗಲೆ ಸತ್ತಿರುವ ಅಥವಾ ಇನ್ನೀಗ ಸಾಯಲಿರುವ ವ್ಯಕ್ತಿಯ ಸೂಚನೆ ನೀಡುತ್ತದೆ. ಮುಂದಿನ ಸಾಲು ಮಗು ಹುಟ್ಟಿದೆ ಎಂಬುದನ್ನು ಸೂಚಿಸುತ್ತದೆ. ತೊಟ್ಟಿಲು ಬಂದಿದೆ. ಹಾಗೆಯೇ ಚಟ್ಟ ಕಟ್ಟಲು ಬಳಸುವ ಬೊಂಬು ವ್ಯಕ್ತಿ ಸತ್ತ ಸಂಕೇತ. "ತೊಟ್ಟಿಲ" ಪದ ಬಳಕೆಯ ಮೂಲಕ ಹುಟ್ಟಿದ್ದು ನಿಖರವಾದಂತೆ ಸತ್ತಿದ್ದು ಕೂಡ ನಿಖರವಾಗಿದೆ. ಇಲ್ಲವಾದರೆ ಬೊಂಬಿನ ಅಗತ್ಯವಿಲ್ಲ. ಮೂರನೆಯ ಸಾಲಿನಲ್ಲಿ ನಾಮಕರಣ. ಇದು ಇನ್ನೂ ತುಸು ಮುಂದಿನ ಹಂತ. ಹಾಗೆಯೇ ಸಾವಿನ ಅನಂತರದ ಮುಂದಿನ ಕ್ರಿಯೆಯಾದ ಅಪರ ಕ್ರಿಯೆಯ ಸೂಚನೆ "ಅಪರ ಕ್ರಿಯೆಯಲ್ಲೂ ಪಾರಂಗತ" ಎಂಬ ಹೇಳಿಕೆಯಲ್ಲಿದೆ. ಅಂದರೆ ಹುಟ್ಟಿನ ಅನಂತರದ ಮೂರು ಘಟನೆಗಳು ಮತ್ತು ಸಾವಿಗೆ ಸಂಬಧಿಸಿದ ಮೂರು ಘಟನೆಗಳನ್ನು ಒಟ್ಟಿಗಿಡುವ ಮೂಲಕ ಹುಟ್ಟಿನಿಂದ ಸಾವಿನತ್ತದ ಚಲನೆಯನ್ನು ಸೂಚಿಸುವ ಪರಿ ಸಮರ್ಥವಾಗಿ ಮೂಡಿಬಂದಿದೆ.</span></div>
<div style="margin: 0px; text-align: justify; text-indent: 0px;">
<span style="font-family: 'tunga';"> ಅಡಿಗರ ಬಹಳಷ್ಟು ಕವನಗಳು ಒಂದು ಸ್ಥಿತಿಯ ಚಿತ್ರಣವಷ್ಟೇ ಅಲ್ಲ.ಅವು ತಮ್ಮೊಳಗೇ ಬೆಳೆಯುವ ಕುಸುರಿ ಕೆಲಸ. ಕ್ಷಣವನ್ನು ಕ್ಯಾಮರದಲ್ಲಿ ಸೆರೆಹಿಡಿವ ರೀತಿಯದಲ್ಲ. ಶಿಲ್ಪಿ ಕಲ್ಲನ್ನು ಕೆತ್ತಿ ಮೂರ್ತಿಯನ್ನು ಮಾಡುವ ಅಥವಾ ಚಿತ್ರಕಾರ ಒಂದೊಂದೇ ಗೆರೆಗಳನ್ನು ಎಳೆಯುತ್ತ ಬಣ್ಣ ತುಂಬತ್ತಾ ಚಿತ್ರವಾಗಿಸುವ ರೀತಿ. ಕವನದ ಈ ಚಲನಶೀಲತೆಯನ್ನು ಗ್ರಹಿಸದಿದ್ದಲ್ಲಿ ಕವನದ ಧ್ವನಿಯನ್ನು ಗ್ರಹಿಸುವುದೂ ಕಷ್ಟವಾಗುತ್ತದೆ. </span></div>
<div style="margin: 0px; text-align: justify; text-indent: 0px;">
<span style="font-family: 'tunga';"> </span></div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com3tag:blogger.com,1999:blog-5355400587468753863.post-34347265349464900592012-11-01T18:43:00.000+05:302012-11-01T18:47:07.776+05:30<div dir="ltr" style="text-align: left;" trbidi="on">
<span style="font-size: x-small;"><br /></span>
<br />
<div class="MsoNormal" style="text-align: justify;">
<span lang="KN" style="font-family: "Arial Unicode MS"; font-size: large;">ಮತ್ತೆ ಬರೆಯುವತ್ತ...</span><span lang="KN" style="font-family: "Arial Unicode MS"; font-size: x-small;">.<o:p></o:p></span></div>
<div class="separator" style="clear: both; text-align: center;">
<a href="https://blogger.googleusercontent.com/img/b/R29vZ2xl/AVvXsEi1qfWeYDh9g3BUdFm_eEaWoPXw3DgOaGPTubdZYpwkxKY0DaBkmaQ3o4LrrGuDOGvkfcz7aXagw3HEmf9Hz-WlgJ0RzbYfSQ5z7tH-SMQ8GyC2d_vfJmthndlfNCb8atl9Ep6rWS0FVqcq/s1600/IMG_6090.JPG" imageanchor="1" style="margin-left: 1em; margin-right: 1em;"><span style="font-size: x-small;"><img border="0" height="213" src="https://blogger.googleusercontent.com/img/b/R29vZ2xl/AVvXsEi1qfWeYDh9g3BUdFm_eEaWoPXw3DgOaGPTubdZYpwkxKY0DaBkmaQ3o4LrrGuDOGvkfcz7aXagw3HEmf9Hz-WlgJ0RzbYfSQ5z7tH-SMQ8GyC2d_vfJmthndlfNCb8atl9Ep6rWS0FVqcq/s320/IMG_6090.JPG" width="320" /></span></a></div>
<div class="MsoNormal" style="text-align: justify;">
<span lang="KN" style="font-family: "Arial Unicode MS"; font-size: x-small;"><br /></span></div>
<div class="MsoNormal" style="text-align: justify;">
<span style="font-size: x-small;"><br /></span></div>
<div class="MsoNormal" style="text-align: justify;">
<span lang="KN" style="font-family: "Arial Unicode MS";">ಜನವರಿ ತಿಂಗಳ ಅನಂತರ
ಏನನ್ನೂ ಬರೆಯಲಿಲ್ಲ. ನನ್ನ ಕಾವ್ಯಾರ್ಥ ಲೇಖನಕ್ಕೆ ಶ್ರೀಪಾದು ಬರೆದ ಪ್ರತಿಕ್ರಿಯೆಗೆ ಉತ್ತರ
ಕೊಡುವುದು ಉಳಿದಿದೆ. ತುಸು ದೀರ್ಘವಾದ ಉತ್ತರವೇ ಆಗುತ್ತದೆ. ಅದಕ್ಕೂ ಮುಂಚೆ ಯಾಕೆ ಏನನ್ನೂ
ಬರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುವುದು ಸೂಕ್ತ.</span><span style="font-family: "Arial Unicode MS";"><o:p></o:p></span></div>
<div class="MsoNormal" style="text-align: justify;">
<br /></div>
<div class="MsoNormal" style="margin-right: -27.0pt;">
<span lang="KN" style="font-family: "Arial Unicode MS";">ನಿವೃತ್ತಿಯ ಅನಂತರ
ನನ್ನ ಜೀವನದ ಚಟುವಟಿಕೆಗಳು ಅತ್ಯಂತ ಶಿಸ್ತುಬದ್ಧವಾಗಿದ್ದವು. ಬೇರೆಯವರಿಗೆ ನನ್ನ ಕಾಲವನ್ನು
ನ್ಯಾಸವಾಗಿ ಇಟ್ಟಿರದ ಕಾರಣದಿಂದ ನನಗೆ ಅನಿಸಿದಂತೆ ಇರಲು ಸಾಧ್ಯವಾಗಿತ್ತು.ನಿರ್ದಿಷ್ಟ ಸಮಯದಲ್ಲಿ
ನಿರ್ದಿಷ್ಟವಾದ ಚಟುವಟಿಕೆ. ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ಅಗತ್ಯವಿಲ್ಲದ ಸ್ವಂತದ
ಬದುಕು. ನನ್ನ ಪ್ರೀತಿಯ ಮಡದಿಯೂ ನನ್ನ ಈ ಶಿಸ್ತಿನ ಜೀವನಕ್ಕೆ ಭಂಗ ಬರದಂತೆ ಕಾಳಜಿ ವಹಿಸಿದ್ದರು.<o:p></o:p></span></div>
<div class="MsoNormal" style="margin-right: -27.0pt;">
<br /></div>
<div class="MsoNormal" style="margin-right: -27.0pt;">
<span lang="KN" style="font-family: "Arial Unicode MS";">ಆದರೆ ಇವೆಲ್ಲ
ಇದ್ದಕ್ಕಿದ್ದಂತೆ ಬದಲಾಗಿಹೋಯಿತು. ಯಾವುದೋ ಹೊತ್ತಿಗೆ ಏಳಬೇಕಾದ, ನಿದ್ದಿಸಬೇಕಾದ,ಊಟ ಸ್ನಾನ
ಮಾಡಬೇಕಾದ ಅನಿವಾರ್ಯತೆ ಬಂತು. ನಮ್ಮೆಲ್ಲರ ಚಟುವಟಿಕೆಗಳನ್ನು ನಿಯಂತ್ರಿಸುವ ಮೊಮ್ಮಗಳು ಬಂದಳು.
ತನ್ನಿಷ್ಟದಂತೆ ತಾನು ಇದ್ದಿದ್ದಲ್ಲದೆ ತನ್ನಿಷ್ಟದಂತೆ ನಾವೂ ಇರುವಂತೆ ಮಾಡಿದಳು. ನಮಗೆ ಪ್ರೀತಿಯ
ಸಿಟ್ಟು ತರಿಸಿದಳು. ಸಂಭ್ರಮ ಉಕ್ಕಿಸಿದಳು. ನಿಸ್ಸಹಾಯಕತೆಯಲ್ಲಿ ನಾವು ಗೊಂದಲಗೊಳ್ಳುವಂತೆ
ಮಾಡಿದಳು. ನಮ್ಮನ್ನು ಬೆರಗಿಗಿಕ್ಕಿದಳು.ಸಾಹಿತ್ಯ, ತತ್ವ ಇವೆಲ್ಲ ಅವಳ ಶುದ್ಧ ಮುಗ್ಧತೆಯೆದುರು
ಅಡಗಿ ಕೂತವು. ಇವೆಲ್ಲ ಈಗ ನೆನಪು. ಮೊನ್ನೆ ಬೆಂಗಳೂರಿಗೆ ಹೋದಳು. <o:p></o:p></span></div>
<div class="MsoNormal" style="margin-right: -27.0pt;">
<br /></div>
<div class="MsoNormal" style="margin-right: -27.0pt;">
<span lang="KN" style="font-family: "Arial Unicode MS";">ಈಗ ಮನೆಯಲ್ಲಿ ಮೌನ.
ಕುತೂಹಲ, ಸಂಭ್ರಮ ತರಿಸುವ ಸ್ವಾರಸ್ಯದ ಹೊಸ ಸಂಗತಿಗಳೂ ಇಲ್ಲ. ಮತ್ತೆ ನನ್ನ ಓದಿಗೆ ಮರಳಬೇಕು.
ಮೌನದಲ್ಲಿ ನನ್ನ ದನಿಗೆ ನಾನೇ ಕಿವಿಯಾಗಬೇಕು. ಆಗ ಮತ್ತೆ ಬರೆಯಲು ಏನಾದರೂ ತೋಚಬಹುದು.<span style="font-size: large;"><o:p></o:p></span></span></div>
</div>
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com4tag:blogger.com,1999:blog-5355400587468753863.post-88386523068637514532012-01-15T21:48:00.000+05:302012-01-15T21:48:25.069+05:30ಕಾವ್ಯಾರ್ಥ..<div dir="ltr" style="text-align: left;" trbidi="on"><br />
<div class="MsoNormal" style="mso-layout-grid-align: none; text-align: justify; text-autospace: none;"><span style="font-family: 'Arial Unicode MS';"><b><br />
</b></span></div><div class="MsoNormal" style="mso-layout-grid-align: none; text-align: justify; text-autospace: none;"><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> <span lang="KN">ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂದು ಶ್ರೀಪಾದು ಘೋಷಿಸಿದ</span>. <span lang="KN">ಅವರ ಮನೆಯ ಅಂಗಳದಲ್ಲಿ ಕೂತು ಮಾತಾಡುತ್ತಿದ್ದೆವು</span>. <span lang="KN">ನನ್ನನ್ನು ನವ್ಯಕಾವ್ಯದ ಸಮರ್ಥಕ ಎಂದು ಆತ ಬಲವಾಗಿ ನಂಬಿದ್ದಾನೆ</span>. <span lang="KN">ಕಾರಣ ಗೊತ್ತಿಲ್ಲ</span>.<span lang="KN">ಭೈರಪ್ಪನವರ ಕೃತಿಗಳ ಬಗ್ಗೆ ನಾನು ಇಲ್ಲಿಯವರೆಗೂ ಒಂದೂ ಮಾತಾಡದಿದ್ದರೂ ನಿನಗೆ ಅವರನ್ನು ಕಂಡರೆ ಆಗುವುದಿಲ್ಲ</span>,<span lang="KN">ನವ್ಯ ಬುದ್ಧಿಜೀವಿಗಳಿಗೇ ಹಾಗೆ ಎಂದು ನನ್ನನ್ನು ಬುದ್ಧಿಜೀವಿಗಳ ಗುಂಪಿಗೆ ಸೇರಿಸಿದ</span>. <span lang="KN">ಬುದ್ಧಿ ಇರುವ ಜೀವಿಗಳೆಂದರೆ ಎಲ್ಲರಿಗೂ ಅಲರ್ಜಿ</span>.<o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> <span lang="KN">ಅವನೊಡನೆ ವಾದಮಾಡುವ ಮನಸ್ಸಿರಲಿಲ್ಲ</span>. <span lang="KN">ಅರ್ಥವಾಗದಂತೆ ಬರೆಯುವುದೇ ನವ್ಯಕಾವ್ಯ ಎಂಬ ಮಾತು ತುಂಬಾ ಹಿಂದಿನಿಂದಲೂ ಇದೆ</span>.<span lang="KN">ನಾನು ಎಮ್</span>.<span lang="KN">ಎ</span>.. <span lang="KN">ಓದುತ್ತಿದ್ದಾಗಲೂ ನನ್ನ ಕೆಲ ಅಧ್ಯಾಪಕರು ಹಾಗೇ ಹೇಳುತ್ತಿದ್ದರು</span>. <span lang="KN">ಆಗೆಲ್ಲ ನಾನು ಮತ್ತು ದೇವನೂರು ಮಹಾದೇವ ನವ್ಯ ಕಾವ್ಯವನ್ನು ಸಮರ್ಥಿಸುವುದೇ ನಮ್ಮ ಜೀವನದ ಪರಮ ಗುರಿ ಎಂಬ ರೀತಿಯಲ್ಲಿ ನವ್ಯಕಾವ್ಯದ ಪರ ವಕಾಲತ್ತು ವಹಿಸುತ್ತಿದ್ದೆವು</span>.<span lang="KN">ಆದರೆ ಈಗ ನನಗೆ ಒಂದು ಪ್ರಶ್ನೆ ಕಾಡತೊಡಗಿತು</span>. <span lang="KN">ಕಾವ್ಯಅಥವಾ ಸಾಹಿತ್ಯ ಅರ್ಥವಾಗುವುದು ಅಂದರೇನು</span>?<o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> <span lang="KN">ಸಾಹಿತಿ ಬರೆದದ್ದು ನಮ್ಮ ಸಂವೇದನೆಯನ್ನು ತಾಗುವುದು ಎಂಬುದನ್ನು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ</span>?<span lang="KN">ಸಾಹಿತಿಯ ಕಾಣ್ಕೆ</span>,<span lang="KN">ದರ್ಶನ ಅಥವಾ ಅನುಭವ ಇವು ನಮಗೆ ಗ್ರಾಹ್ಯವಾಗುವುದು ಸಾಹಿತ್ಯ ಅರ್ಥವಾಗುವುದು ಎನ್ನಬಹುದೇ</span>? <span lang="KN">ಇವೆರೆಡೂ ಹೇಳಿಕೆಗಳನ್ನು ಈ ಲೇಖನದ ಮಟ್ಟಿಗೆ ಒಪ್ಪಿ ಮುಂದುವರೆಯುತ್ತೇನೆ</span>.<o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> <span lang="KN">ಸಾಹಿತ್ಯದ ಮಾಧ್ಯಮ ಭಾಷೆ</span>. <span lang="KN">ನಮ್ಮ ದಿನಬಳಕೆಯ ಸಂವಹನದ ಮಾಧ್ಯಮವೂ ಭಾಷೆ</span>.<span lang="KN">ದಿನಬಳಕೆಯಲ್ಲಿ ಭಾಷೆ ಹೆಚ್ಚು</span> <span lang="KN">ವಾಚ್ಯವಾಗಿಯೂ</span>,<span lang="KN">ಸಾಹಿತ್ಯದ ಬಳಕೆಯಲ್ಲಿ ಹೆಚ್ಚು ಧ್ವನ್ಯಾತ್ಮಕವಾಗಿಯೂ ಕೆಲಸ ಮಾಡುತ್ತದೆ</span>.<span lang="KN">ವಾಚ್ಯಾರ್ಥಕ್ಕೆ ಸಂಬಂಧಿಸಿದಂತೆ ಭಾಷೆಯ ಈ ಎರಡು ರೀತಿಯ ಬಳಕೆಯಲ್ಲು ವ್ಯತ್ಯಾಸವಿಲ್ಲ</span>. <span lang="KN">ಸಹಜವಾದ ಮಾತಿಗಿರುವಂತೆ ಸಾಹಿತ್ಯದ ಭಾಷೆಗೂ ವಾಚ್ಯಾರ್ಥವಿರಲೇಬೇಕು</span>,<span lang="KN">ಇರುತ್ತದೆ</span>. <span lang="KN">ಹಾಗಾದರೆ ಮಾತು ಸಾಹಿತ್ಯವಾಗಲು ಈ ವಾಚ್ಯಾರ್ಥವನ್ನು ಮೀರಿದ ಮತ್ತೊಂದು ಅರ್ಥ ಸ್ಫುರಿಸಬೇಕು</span>. <span lang="KN">ಅಂದರೆ</span>, <span lang="KN">ಸಾಹಿತ್ಯ ಅರ್ಥವಾಗುವುದು ಅಂದರೆ ಈ ವಾಚ್ಯಾರ್ಥ ಮತ್ತು ಅದನ್ನು ಮೀರಿದ ಮತ್ತೊಂದು ಅರ್ಥ ಎರಡೂ ಅರ್ಥವಾಗುವುದು</span>.<span lang="KN">ಒಂದೆರೆಡು ಉದಾಹರಣೆಯ ಮೂಲಕ ನನ್ನ ಹೇಳಿಕೆಯನ್ನು ವಿಸ್ತರಿಸುತ್ತೇನೆ</span>.<o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> "<span lang="KN">ಗಂಗೆಯಲಿ ತೇಲಿ ಬಂದನು ಕರ್ಣ</span>,<span lang="KN">ರಾಧೇಯ</span>,<span lang="KN">ಸಾಯಿಸಿಲಕಲ್ಲದೇ ಬರಳು ಕುಂತಿ</span>". <span lang="KN">ಅಡಿಗರ ಭೂಮಿಗೀತ ಕವನದ ಒಂದು ಸಾಲು ಇದು</span>.<span lang="KN">ಕರ್ಣ ಕುಂತಿಯ ಕತೆ ಗೊತ್ತಿರುವ ನಮಗೆ ಇದರ ವಾಚ್ಯಾರ್ಥ ಸುಲಭವಾಗಿ ಹೊಳೆಯುತ್ತದೆ</span>. <span lang="KN">ಹುಟ್ಟಿದ ಕೂಡಲೇ ಗಂಗೆಯಲ್ಲಿ ಕರ್ಣನನ್ನು ತೇಲಿಬಿಟ್ಟ ಕುಂತಿ ಮತ್ತವನನ್ನು ಭೇಟಿಯಾಗುವುದು ಅವನ ಬಳಿ ಮಾತು ಪಡೆಯಲು</span>. <span lang="KN">ಹೀಗೆ ಕುಂತಿ ಪಡೆದ ಮಾತು ಕರ್ಣನ ಸಾವಿಗೂ ಕಾರಣವಾಗುತ್ತದೆ</span>. <o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none; text-justify: distribute-all-lines;"><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> <span lang="KN">ಕುಂತಿ ತನ್ನ ಮಗನ ಪ್ರಾಣವನ್ನೇ ತನ್ನುಳಿದ ಮಕ್ಕಳ ಉಳಿವಿಗಾಗಿ ಕೇಳುವುದು ಹೇಗೆ ಸಾಧ್ಯ</span>? <span lang="KN">ಇದು ಸೂಕ್ಷ್ಮವಾಗಿ ತಾಯ್ತನವನ್ನು ಅಗೌರವಿಸಿದಂತಲ್ಲವೇ</span>? <span lang="KN">ಅದ್ದರಿಂದ</span> <span lang="KN">ರಾಧೇಯ ಎಂಬ ಪದಪ್ರಯೋಗ ಮಾಡುವ ಮೂಲಕ ತೇಲಿಬಿಟ್ಟಾಗ ಕರ್ಣನಾಗಿದ್ದವ ಮತ್ತೆ ಕುಂತಿ ಕಂಡಾಗ</span> <span lang="KN">ರಾಧೆಯ ಮಗ ರಾಧೇಯನಾಗಿದ್ದ</span>, <span lang="KN">ಆತ ಕೌಂತೇಯ ಆಗಿರಲೇ ಇಲ್ಲ</span>,<span lang="KN">ಆದ್ದರಿಂದ ಕುಂತಿಗೆ ನೈತಿಕ ಸಂಕಟ ಎದುರಾಗಲಿಲ್ಲ ಅಥವಾ ಎದುರಾದರೂ ತನ್ನ ಮಗ ಎಂದು ಒಪ್ಪಿ ಬಿಡುವಷ್ಟು ಪ್ರಬಲವಾಗಿರಲಿಲ್ಲ ಎಂಬೆಲ್ಲ ಧ್ವನಿ ಹುಟ್ಟಿಸುತ್ತಾರೆ</span>. <span lang="KN">ಗಂಗೆಯಲಿ ತೇಲಿ ಬಂದನು ಕರ್ಣ ಸಾಯಿಸಿಲಿಕಲ್ಲದೇ ಬರಳು ಕುಂತಿ ಎಂದು ಬರೆದಿದ್ದರೆ ವಾಚ್ಯಾರ್ಥದಲ್ಲಿ ಬಹಳ ಬದಲಾವಣೆಯೇನೂ ಆಗುತ್ತಿರಲಿಲ್ಲ</span>. <span lang="KN">ಮಗನನ್ನೇ ಸಾಯಿಸಲು ಬರುವ ಕುಂತಿ ಎಂಬುದು ತುಸು ಕಾವ್ಯದ ಓಟಕ್ಕೆ ಧಕ್ಕೆ ತರುತ್ತಿತ್ತು</span>. <span lang="KN">ಈಗ</span> <o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">ರಾಧೇಯ ಎಂಬುದರ ಮೂಲಕವಾಗಿ ಆತ ಕುಂತಿಯ ಮಗ ಆಗಿರಲಿಲ್ಲ, ರಾಧೆಯ ಮಗನಾಗಿದ್ದ,ಆದ್ದರಿಂದ ಪ್ರಾಣ ಪಡೆವ ಮಾತು ಪಡೆಯಲು ಕುಂತಿಗೆ ಹಿಂಸೆಯಾಗಲಿಲ್ಲ ಎಂಬ ಅರ್ಥ ಧ್ವನಿಸುವಂತೆ ಮಾಡುತ್ತಾರೆ. ಇಡೀ ಭೂಮಿಗೀತ ಕವನದ ಕೇಂದ್ರವಾಗಿರುವ ಪರಕೀಯತೆಯ ಹಿನ್ನೆಲೆಯಲ್ಲಿ ಇದರ ಅರ್ಥ ಇನ್ನಷ್ಟು ವಿಸ್ತಾರ ಪಡೆಯುತ್ತದೆ. (ರಾಧೆಯ ಮಗನಾಗಿದ್ದ ಕರ್ಣನಿಗೆ ಕುಂತಿ ಪರಕೀಯಳಾಗಿದ್ದಳು. ತಾನು ಕುಂತಿಯ ಮಗ ಎಂದು ತಿಳಿದ ಕ್ಷಣದಿಂದ ಅವನು ರಾಧೆಗೂ ಪರಕೀಯನಾಗಿಬಿಡುತ್ತಾನೆ.) </span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">ಭಾಷೆ ವಿವರಗಳನ್ನು ಚಿತ್ರಿಸುವಾಗ ಅರ್ಥವಾಗುವುದು ಸುಲಭ. ಭಾಷೆಯನ್ನು ನಾವು ದಿನನಿತ್ಯ ಹಾಗೆಯೇ ಬಳಸುತ್ತೇವೆ. ವಿವರಗಳ ಮೂಲಕ ಸನ್ನಿವೇಶವನ್ನು ಕಟ್ಟುವುದು ಗದ್ಯದ ಸಹಜತೆ,ಸ್ವರೂಪ. ವಿವರಗಳೇ ಇಲ್ಲದ ಕಥೆ ಕಾದಂಬರಿಗಳು ಇರುವುದು ಬಲು ಅಪರೂಪ.(ಇದ್ದರೂ ಅವು ಮತ್ತೆಅರ್ಥವಾಗದ ನವ್ಯಕಥೆ ಎಂಬ ಹಣೆಪಟ್ಟಿ ಕಟ್ಟಿಕೊಳ್ಳುತ್ತವೆ.)ಯಾವುದೇ ವಿವರಣೆಯ ವಾಚ್ಯಾರ್ಥ ಸುಲಭವಾಗಿ ಆಗುವುದರಿಂದ ನಮಗೆ ಅದು ಅರ್ಥವಾಯಿತು ಅನಿಸುತ್ತದೆ. ಈ ರೀತಿಯ ವಿವರಣಾತ್ಮಕ ಚಿತ್ರಣದ ಮೂಲಕವಾಗಿ ಮತ್ತೊಂದನ್ನು ಧ್ವನಿಸುತ್ತಿರುವುದು ನಮಗೆ ಅರ್ಥವಾಗದಿದ್ದರೂ ವಿವರಣಾತ್ಮಕವಾದ ಚಿತ್ರಣ ಅರ್ಥವಾಗಿರುವ ಕಾರಣ ಅದು ಅರ್ಥವಾಯಿತು ಎಂದು ಭಾವಿಸುತ್ತೇವೆ. ತೇಜಸ್ವಿಯವರ ಕರ್ವಾಲೋ, ಚಿದಂಬರ ರಹಸ್ಯ ಮೊದಲಾದ ಕಾದಂಬರಿಗಳ ಧ್ವನ್ಯಾರ್ಥ ಅರ್ಥವಾಗದವರಿಗೂ ಅವುಗಳ ವಾಚ್ಯಾರ್ಥ ಅರ್ಥವಾಗುವುದರಿಂದ ಓದಲು ತೊಂದರೆಯಾಗುವುದಿಲ್ಲ. ಬೇಂದ್ರೆಯವರ ಬೆಳಗು ಕವನದ ಧ್ವನಿಸೂಕ್ಷ್ಮತೆ ಗ್ರಹಿಕೆಯಾಗದಿದ್ದರೂ ಆ ಕವನಗ ಸೊಗಸಾದ ವಾಚ್ಯಾರ್ಥದ ಕಾರಣ ಅರ್ಥವೇ ಆಗುತ್ತಿಲ್ಲ ಎಂದು ಅನಿಸುವುದಿಲ್ಲ. </span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">ಆದರೆ ನವ್ಯಕಾವ್ಯ ವಿವರಣೆಯನ್ನು ಮುಖ್ಯವಾಗಿಸಿಕೊಳ್ಳದೆ ಹೆಚ್ಚು ರೂಪಕವಾಗಿ, ರೂಪಕಗಳ ನಡುವಿನ ಸಂಬಂಧದ ಮೂಲಕವಾಗಿ ಅರ್ಥ ಕಟ್ಟುವ ವಿಧಾನ ಬಳಸಿದ್ದರಿಂದ ಅರ್ಥವಾಗುವುದು ಕಷ್ಟವಾಯಿತು. ಮೊದಲಿಗೆ ರೂಪಕ ಅರ್ಥವಾಗಬೇಕು.ಅನಂತರ ಒಂದು ರೂಪಕ ಮತ್ತೊಂದು ರೂಪಕದೊಡನೆ ಪಡೆಯುವ ಸಂಬಂಧ ಅರ್ಥವಾಗಬೇಕು.ಅನಂತರ ಈ ರೀತಿಯ ಸಂಬಂಧ ಸೃಷ್ಟಿಸುವ ಧ್ವನಿ ಅರ್ಥವಾಗಬೇಕು. ಇವಿಷ್ಟು ತುಂಬಾ ಸರಳವಾಗಿ ಸಹಜವಾಗಿ ಆಗಬೇಕು. ತಾರ್ಕಿಕ ಬೆಳವಣಿಗೆ ಸಾಹಿತ್ಯ ಅರ್ಥವಾಗುವಲ್ಲಿ ಸಹಕಾರಿ. ನವ್ಯಕಾವ್ಯದಲ್ಲಿ ಈ ರೀತಿಯ ಸಹಜ ತಾರ್ಕಿಕ ಬೆಳವಣಿಗೆ ಇರದೆ ರೂಪಕಗಳ,ಅಥವಾ ವಿವರಣೆಗಳ ಅತಾರ್ಕಿಕ ಜೋಡಣೆಯ ಮೂಲಕ ತಾರ್ಕಿಕ ಅರ್ಥ ಹೊರಡಿಸುವ ಕಸಬುದಾರಿಕೆಯ ಕಾರಣದಿಂದ ಅರ್ಥವಾಗುವುದು ಕಷ್ಟ ಅನಿಸಬಹುದು. ಮೂರು ಉದಾಹರಣೆಗಳು:</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">೧. ಬಾನಚೆಜ್ಜದ ಕೆಳಗೆ ಹೆಬ್ಬಾವಿನುಬ್ಬಸದ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಹತ್ತಿಬಿಲ್ಲಿನ ಕಸದ ಕತ್ತಲೆಯಲಿ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಗಂಟೆ ಎಷ್ಟೆಂದು ಕೇಳಿದರೇನ ಹೇಳಲಿ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಎಷ್ಟೊಂದು ಗಡಿಯಾರ ಅಂಗಡಿಯಲಿ.</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">೨. ಕಾಡು ಮರಗಳ ಮಧ್ಯೆ ಮನೆ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಸಿಮೆಂಟು ಬಿರುಕಿನಲ್ಲಿ ಹುಲ್ಲು</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಅಮೆರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ </span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಸೊಪ್ಪು.</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">೩. ಡಾಕ್ಟರರು ನರ್ಸುಗಳು ಹೆರಿಗೆ ಮನೆಯೊಳಹೊರಗೆ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಅವರ ಬೆನ್ನಿಗೆ ಸದಾ ನಾಲ್ಕು ಮಂದಿ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ತೊಟ್ಟಿಲಂಗಡಿಯಲ್ಲಿ ಬೊಂಬು ತುಂಬಾ ಅಗ್ಗ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಕ್ರಿಯೆಯಲ್ಲಿ </span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"> ಪಾರಂಗತ</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><b><span lang="KN" style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";">(ನನ್ನ ನೆನಪನ್ನು ನಂಬಿ ಈ ಸಾಲುಗಳನ್ನು ಬರೆದಿದ್ದೇನೆ. ತಪ್ಪಿದ್ದರೆ ಕ್ಷಮಿಸಿ ಮತ್ತು ಸರಿಮಾಡಿಕೊಂಡು ಓದಿ)</span></b><b><span style="font-family: "Arial Unicode MS"; mso-ascii-font-family: "Arial Unicode MS"; mso-bidi-language: KN; mso-fareast-font-family: "Times New Roman"; mso-hansi-font-family: "Times New Roman";"><o:p></o:p></span></b></div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal" style="mso-layout-grid-align: none; text-align: justify; text-autospace: none;"><br />
</div><div class="MsoNormal"><br />
</div></div>ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com5tag:blogger.com,1999:blog-5355400587468753863.post-18980018606188938592011-06-29T22:33:00.000+05:302011-06-29T22:33:01.931+05:30ಕಾವ್ಯ ಧ್ವನಿ<div dir="ltr" style="text-align: left;" trbidi="on"><br />
<br />
ಒಂದು ಪದ ಅಥವಾ ಒಂದು ಪದಗುಚ್ಛ ಕಾವ್ಯದ ಧ್ವನಿಶಕ್ತಿಯನ್ನು ವಿಸ್ತರಿಸುವ ಅನೇಕ ಉದಾಹರಣೆಗಳು ಇವೆ. ಕಾವ್ಯ ಅರ್ಥವಾಗುವುದು ಅಂದರೆ ನಿರ್ದಿಷ್ಟ ಸನ್ನಿವೇಶದಲ್ಲಿ ಉಪಯೋಗಿಸಿದ ಪದಗಳ ಅರ್ಥವಾಗುವುದು ಮತ್ತು ಆ ಸನ್ನಿವೇಶದ ವಾಚ್ಯಾರ್ಥವಾಗುವುದು ಮಾತ್ರವಲ್ಲ. ಜೊತೆಗೇ ಪದಗಳ ಬಳಕೆಯಲ್ಲಿ, ಸಂಯೋಜನೆಯಲ್ಲಿ ವಾಚ್ಯಾರ್ಥವನ್ನು ಮೀರುವ,ಸನ್ನಿವೇಶದ ಸೂಕ್ಷ್ಮತೆಯನ್ನು ವಿಸ್ತರಿಸುವ ಒಂದು ಹೊಳಹನ್ನು ಗ್ರಹಿಸುವುದು. ಈ ಹೊಳಹು ಆ ಸನ್ನಿವೇಶಕ್ಕೆ ಪೂರಕವಾಗಿದ್ದು ಕಾವ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ. ಅಂತಹ ಒಂದೆರಡು ಸನ್ನಿವೇಶಗಳನ್ನು ಕುರಿತು ನಾನು ಬರೆಯುತ್ತಿದ್ದೇನೆ. ಪ್ರತಿ ಬಾರಿ ಓದಿದಾಗಲೂ ಕುಮಾರವ್ಯಾಸನ ಭಾರತ ಮತ್ತು ಅಡಿಗರ ಕಾವ್ಯ ನನಗೆ ಹೊಸದೆಂಬಂತೆ ಕಾಣುತ್ತವೆ.ಅಲ್ಲಿಂದ ಆರಿಸಿದ ಉದಾಹರಣೆಗಳಿವು. ನಾನು ಕಾವ್ಯವನ್ನು ಗ್ರಹಿಸಿದ ರೀತಿ ತಪ್ಪೂ ಇರಬಹುದು ಎಂಬ ಎಚ್ಚರವೂ ನನಗಿದೆ. ಇದರ ನಿರ್ಧಾರ ಓದುಗರದ್ದು.<br />
*****<br />
ಅಭಿಮನ್ಯು ಚಕ್ರವ್ಯೂಹ ಭೇದನಕ್ಕಾಗಿ ಹೊರಟು ನಿಂತಾಗ, ಆತನ ಸಾರಥಿಯು ಕರ್ಣ, ದ್ರೋಣ,ಕೃಪ, ಜಯದ್ರಥ ಮುಂತಾದವರ ಜೊತೆ ಸಂಗರ ಅಭಿಮನ್ಯುವಿಗೆ ಸಾಧ್ಯವಾಗಲಿಕ್ಕಿಲ್ಲ ಎಂಬ ಶಂಕೆಯನ್ನು ವ್ಯಕ್ತಪಡಿಸುತ್ತಾನೆ.ಸಾರಥಿ ಆಡುವ ಮಾತು:"ಕೊರಳಿನ ಬಲುಹನರಿಯದೆ ಗಿರಿಯ ಹೊರಲಂಘೈಸುವರೆ ಭಟರು" (ಬಲುಹು=ಸಾಮರ್ಥ್ಯ, ಅಂಘೈಸು=ಒಪ್ಪು,ಸಮ್ಮತಿಸು). ಇದಕ್ಕೆ ಪ್ರತಿಯಾಗಿ ಅಭಿಮನ್ಯು ಕೊಡುವ ಉತ್ತರ:<br />
"ಬವರವಾದರೆ ಹರನ ವದನಕೆ<br />
ಬೆವರ ತಹೆನವಗೆಡಿಸಿದರೆ ವಾ<br />
ಸವನ ಸದೆವೆನು ಹೊಕ್ಕಡಹುದೆನಿಸುವೆನು ಭಾರ್ಗವನ<br />
ಜವನ ಜವಗೆಡಿಸುವೆನು ಸಾಕಿ<br />
ನ್ನಿವರವರಲೇನರ್ಜುನನು ಮಾ<br />
ಧವನು ಮುನಿದೊಡೆ ಗೆಲುವೆನಂಜದೆ ರಥವ ಹರಿಸೆಂದ" (ಕು.ವ್ಯಾ.-ದ್ರೋ.ಪ.-೪-೫೬)<br />
(ಇದರ ಸರಳ ರೂಪಾಂತರ ಹೀಗೆ: ಬವರವಾದರೆ ಹರನ ವದನಕೆ ಬೆವರ ತಹೆ, ಅವಗೆಡಿಸಿದರೆ ವಾಸವನ ಸದೆವೆ, ಹೊಕ್ಕಡೆ ಅಹುದು ಎನಿಸುವೆನು ಭಾರ್ಗವನ, ಜವನ ಜವಗೆಡಿಸುವೆನು, ಸಾಕಿನ್ನು ಅವರು ಇವರಲಿ ಏನು ಅರ್ಜುನನು ಮಾಧವನು ಮುನಿದೊಡೆ ಗೆಲುವೆನು ಅಂಜದೆ ರಥವ ಹರಿಸೆಂದ)(ಬವರ=ಯುದ್ಧ,ವಾಸವ=ಇಂದ್ರ,ಭಾರ್ಗವ= ಪರಶುರಾಮ,ಜವ=ಯಮ)<br />
ಅಭಿಮನ್ಯುವಂತಹ ಬಿಸಿರಕ್ತದವೀರ ಆಡಬಹುದಾದ ಸಹಜವಾದ ಮಾತಿದು. ನನಗೆ ಅದ್ಭುತವೆನಿಸಿದ್ದು ಬವರವಾದರೆ ಹರನ ವದನಕೆ ಬೆವರ ತಹೆ ಎಂಬ ಹೇಳಿಕೆ.ಇದನ್ನು ವಿಶ್ಲೇಷಿಸುವಾ.<br />
<br />
ಹರನ ವದನಕ್ಕೂ ಉಳಿದವರ ವದನಕ್ಕೂ ಒಂದು ಅಂತರವಿದೆ. ಹರನ ವದನದಲ್ಲಿ ಮೂರನೆಯ ಕಣ್ಣುಂಟು ಮತ್ತು ಈ ಕಣ್ಣಿನಲ್ಲಿ ಶಕ್ತಿ ಕಾವಿನ ರೂಪದಲ್ಲಿದೆ. ಈ ಕಾವು ಕ್ಷಣಮಾತ್ರದಲ್ಲಿ ಇಡೀ ಬ್ರಹ್ಮಾಂಡವನ್ನು ಸುಡಬಲ್ಲದು. ಉಳಿದ ಯಾರ ವದನದಲ್ಲೂ ಇಂತಹ ವಿಶೇಷತೆ ಇಲ್ಲ. ಜವನ ವದನದಲ್ಲೂ ಇಲ್ಲ. ಇಡೀ ಜಗತ್ತನ್ನು ಕ್ಷಣದಲ್ಲಿ ದಹಿಸಬಲ್ಲ ಕಾವಿರುವ ಕಣ್ಣು ವದನದಲ್ಲಿ ಇರುವಾಗಲೂ ಶಿವನ ಮುಖ ಬೆವರುವುದಿಲ್ಲ.ಕಾವು ಅತಿಯಾದಾಗ ಮುಖ ಬೆವರುವುದು ಸಹಜ.ಅಂತಹ ಕಾವಿಗೂ ಬೆವರದ ಮುಖವನ್ನು ತನ್ನ ಯುದ್ಧದ ಕಾವಿನಲ್ಲಿ ಬೆವರುವಂತೆ ಮಾಡುತ್ತೇನೆ ಎಂಬ ಮಾತನ್ನು ಅಭಿಮನ್ಯು ಆಡಿದಾಗ ವ್ಯಕ್ತವಾಗುವುದು ಕವಿಯ ಪ್ರತಿಭೆ.ಬವರವಾದರೆ ಜವನ ವದನಕೆ ಬೆವರ ತಹೆನು...............ಶಿವನ ಜವಗೆಡಿಸುವೆನು ಎಂದು ಹೇಳಿದ್ದರೂ ಛಂದಸ್ಸು ತಪ್ಪುತ್ತಿರಲಿಲ್ಲ,ವಾಚ್ಯಾರ್ಥ ಬದಲಾಗುತ್ತಿರಲಿಲ್ಲ,ಆದರೆ ಈ ಧ್ವನಿ ಮಾತ್ರ ಇರುತ್ತಿರಲಿಲ್ಲ.<br />
<br />
ಈ ರೀತಿ ಪದಗಳ ಬಳಕೆಯಲ್ಲಿಯೇ ವಿಶೇಷತೆಯನ್ನು ವ್ಯಕ್ತಪಡಿಸಿದ ಕೆಲವು ಉದಾಹರಣೆಗಳನ್ನು ಗಮನಿಸಿ.<br />
<br />
ಭೀಷ್ಮ ಶರಶಯ್ಯಾಗತನಾದ ದಿನದ ಸೂರ್ಯಾಸ್ತವನ್ನು ಕುಮಾರವ್ಯಾಸ ವರ್ಣಿಸುವುದು ಹೀಗೆ: "ಪಡುವಣ ಶೈಲ ವಿಪುಲಸ್ತಂಭದೀಪಿಕೆಯಂತೆ ರವಿ ಮೆರೆದ"(ಭೀ.ಪ-೧೦-೪೨). ("ಪಡುವಣ ಶೈಲ ವಿಪುಲಸ್ತಂಭದೀಪಿಕೆ"ಎಂಬುದೇ ಒಂದು ಅದ್ಭುತ ರೂಪಕ). ಇಲ್ಲಿ ಮೆರೆದ ಎಂಬ ಪ್ರಯೋಗವನ್ನು ಗಮನಿಸಿ. ಸೂರ್ಯ ಅಸ್ತಮಿಸಲಿಲ್ಲ,ಮೆರೆಯುತ್ತಾನೆ. ಭೀಷ್ಮ ಸಾಯಲಿಲ್ಲ,ಶರಮಂಚದಲ್ಲಿ ಮೆರೆಯುತ್ತಿದ್ದಾನೆ.ಭೀಷ್ಮನ ಇಡೀ ಬದುಕಿನ ವೈಭವವನ್ನು ಈ ಒಂದು ಪದದ ಮೂಲಕ ಕುಮಾರವ್ಯಾಸ ಚಿತ್ರಿಸುತ್ತಾನೆ.ಮೆರೆದ ಎಂಬ ಪದದ ಬದಲು ಬೇರೆ ಯಾವ ಪದಪ್ರಯೋಗವಾಗಿದ್ದರೂ ಇಂತಹ ಧ್ವನಿ ಹೊರಡುತ್ತಿರಲಿಲ್ಲ. <br />
<br />
ಭೀಷ್ಮ ಶರಶಯ್ಯೆ ಸೇರಿದ ದಿನದ ರವಿಯನ್ನು ಕುಮಾರವ್ಯಾಸ ಮೆರೆಸಿದರೆ ದ್ರೋಣನ ಮರಣದ ದಿನದ ಸೂರ್ಯಾಸ್ತವನ್ನು ಚಿತ್ರಿಸಿದ ರೀತಿಯನ್ನು ಗಮನಿಸಿ."ರವಿ ಮುಸುಡ ತಿರುಹಿ ವಿರಾಗದಲಿ ಬೀಳ್ಕೊಟ್ಟನಂಬರವ"(ದ್ರೊ.ಪ.-೧೯-೫೫).ದ್ರೋಣನ ಸಾವಿನ ಚಿತ್ರಣದ ಹಿನ್ನೆಲೆಯಲ್ಲಿ (ಆಸಕ್ತರು ದ್ರೋಣಪರ್ವದ ಹದಿನೆಂಟನೆಯ ಸಂಧಿಯ ೬೬ ಮತ್ತು ೬೭ ನೆಯ ಪದ್ಯಗಳನ್ನು ಓದಬಹುದು). ಈ ವರ್ಣನೆಯನ್ನು ಗ್ರಹಿಸಿ. ಮಗ ಸತ್ತ ಸುದ್ದಿ ಕೇಳಿಯೂ ಯುದ್ಧ ಮಾಡುತ್ತಿರುವ ದ್ರೋಣ ತನ್ನ ಬಗೆಗಿನ ಭೀಮನ ವ್ಯಂಗಭರಿತ ಟೀಕೆಯಿಂದ ನೊಂದು ಸಾಕೀ ದೇಹವೆಂದು ವಿರಾಗದಲ್ಲಿ ಯುದ್ಧವಿಮುಖನಾಗುತ್ತಾನೆ. ರವಿ ಕೂಡ ವಿರಾಗದಲ್ಲಿ ಮುಸುಡ(=ಮುಖ) ತಿರುಹುತ್ತಾನೆ. ರವಿ ಅಂಬರವನ್ನು ಬೀಳ್ಕೊಡುತ್ತಾನೆ. ಅಂಬರ ಎಂಬ ಪದಕ್ಕೆ ಆಕಾಶ ಎಂಬ ಜನಜನಿತ ಅರ್ಥವಲ್ಲದೆ ಬಟ್ಟೆ,ಅರಿವೆ ಎಂಬ ಅರ್ಥವೂ ಉಂಟು. ದೇಹವನ್ನು ಅತ್ಮದ ಬಟ್ಟೆ ಎನ್ನುತ್ತಾರೆ. ರವಿ ಆಕಾಶವನ್ನು ಬೀಳ್ಕೊಟ್ಟರೆ ದ್ರೋಣ ದೇಹವನ್ನು ಬೀಳ್ಕೊಡುತ್ತಾನೆ. ಸೂರ್ಯಾಸ್ತವನ್ನು ವಾಚ್ಯಾರ್ಥದಲ್ಲಿ ವರ್ಣಿಸುತ್ತಲೇ ದ್ರೋಣನ ಸಾವಿನ ಸನ್ನಿವೇಶಕ್ಕೆ ಹೊಸ ಹೊಳಹನ್ನು ಕುಮಾರವ್ಯಾಸ ಕೊಡುತ್ತಾನೆ.<br />
<br />
ಇನ್ನು ಕರ್ಣನ ಸಾವಿನ ದಿನದ ಸೂರ್ಯಾಸ್ತವನ್ನು ಗಮನಿಸಿ.<br />
.........ಬಿಸುಟನಂಬುಜ ಮಿತ್ರನಂಬರವ|| (ಕ.ಪ-೨೭-೩೦)<br />
ದ್ಯುಮಣಿ ಕರ್ಣದ್ಯುಮಣಿಸಹಿತ<br />
ಸ್ತಮಿಸೆ ಕಮಲಿನಿ ಕೌರವನ ಮುಖ<br />
ಕಮಲ ಬಾಡಿತು ತಿಮಿರ ಹೆಚ್ಚಿತು ಶೋಕತಮದೊಡನೆ|<br />
ಅಮಳ ಚಕ್ರಂಗಕ್ಕೆ ಭೂಪೋ<br />
ತ್ತಮನ ವಿಜಯಾಂಗನೆಗೆ ಅಗಲಿಕೆ<br />
ಸಮನಿಸಿತು ಕೇಳಯ್ಯ ಜನಮೇಜಯ ಮಹೀಪಾಲ||(ಕ.ಪ.-೨೭-೩೧)<br />
<br />
ಇಲ್ಲಿ ಸೂರ್ಯನನ್ನು ಅಂಬುಜ ಮಿತ್ರ ಎಂದು ಸೂಚಿಸಿರುವುದನ್ನು ಗಮನಿಸಿ. ಅಂಬುಜಮಿತ್ರನಾದ ರವಿ ಅಂಬುಜವನ್ನು ಬಿಟ್ಟು ಅಸ್ತಮಿಸುತ್ತಾನೆ. ಕರ್ಣ ಮತ್ತು ಸುಯೋಧನನ ಸ್ನೇಹದ ಹಿನ್ನೆಲೆಯಲ್ಲಿ ಈ ಹೋಲಿಕೆ ನೀಡುವ ಧ್ವನಿಯ ಬಗ್ಗೆ ಮತ್ತೆ ವಿಸ್ತಾರವಾಗಿ ಬರೆಯುವುದು ಅನಗತ್ಯ. ೩೧ನೆಯ ಪದ್ಯದಲ್ಲಿ ಒಂದರ ಜತೆ ಮತ್ತೊಂದನ್ನು ಜೋಡಿಯಾಗಿಸುವ ಮೂಲಕ ಕರ್ಣ ಸುಯೋಧನರ ಜೋಡಿತನದ ಚಿತ್ರಣವನ್ನು ಸೂಚಿಸುವ ಪರಿ ಬೆರಗು ಹುಟ್ಟಿಸುತ್ತದೆ.<br />
<br />
ಅಡಿಗರ ಕಾವ್ಯದಲ್ಲಿ ಬರುವ ಇಂತಹ ಕೆಲವು ಚಿತ್ರಣಗಳ ಬಗೆಗೂ ಬರೆವ ಯೋಚನೆಯಿತ್ತು. ಈ ಲೇಖನವೇ ಸಾಕಷ್ಟು ಉದ್ದವಾಯಿತು. ಅಡಿಗರ ಬಗ್ಗೆ ಇನ್ನೊಮ್ಮೆ..ಎಂದಾದರೂ. <br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
</div>ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com5tag:blogger.com,1999:blog-5355400587468753863.post-16939028227988519532011-06-06T21:46:00.032+05:302011-06-06T22:06:49.626+05:30ವೇದೀಯ ಗಣಿತ- ಒಂಭತ್ತರ ಮಾಯಾಲೋಕ.<div dir="ltr" style="text-align: left;" trbidi="on"><br />
<div class="MsoNormal" style="margin-right: -.75in;"><span class="Apple-style-span" style="font-family: Tunga;"><br />
</span></div><div class="MsoNormal" style="margin-right: -.75in;"><br />
</div><div class="MsoNormal" style="margin-right: -.75in;"><span lang="KN" style="font-family: Tunga;"> ಗಣಿತವೆಂದರೆ ಮೊದಲಿಂದಲೂ ನನಗೆ ಕುತೂಹಲ,ಜೊತೆಗೆ ಭಯ. ಎರಡರ ಬೆಲೆ ಯಾಕೆ ಎರಡೇ ಆಗಿರಬೇಕು?</span><br />
<span lang="KN" style="font-family: Tunga;"> ನಾಲ್ಕು ಯಾಕೆ ಆಗಬಾರದು? ಈ ತರಹದ ಕುತೂಹಲ. ಒಂದು ಹೆಜ್ಜೆ ತಪ್ಪಿದರೆ ಇಡಿ ದಾರಿಯನ್ನೇ ಬದಲಾಯಿಸುವ</span><br />
<span lang="KN" style="font-family: Tunga;"> ಗಣಿತದ ಪರಿ ಭಯಕ್ಕೆ ಕಾರಣ. ಲೆಕ್ಕ ಬಿಡಿಸುವಾಗ + ಹಾಕುವಲ್ಲಿ </span>–<span lang="KN" style="font-family: Tunga;"> ಹಾಕಿದರೆ ಅಷ್ಟೇ ಸಾಕು ಲೆಕ್ಕದ ದಿಕ್ಕೇ ಬದಲಾ</span><span class="Apple-style-span" style="font-family: Tunga;">ಗಿ </span><br />
<span class="Apple-style-span" style="font-family: Tunga;">ಎಲ್ಲೋ ತಲುಪಿ ಕಕ್ಕಾಬಿಕ್ಕಿಯಾಗುತ್ತೇವೆ. ಈ ಭಯದಿಂದಾಗಿ ಕೆಲವೊಮ್ಮೆ ಸರಿಯಾಗಿ ಬಿಡಿಸಿದ್ದ ಲೆಕ್ಕವನ್ನೂ ಮತ್ತೆ ತಿದ್ದಿ</span><br />
<span class="Apple-style-span" style="font-family: Tunga;"> ತಪ್ಪು ಮಾಡಿದ ಉದಾಹರಣೆಗಳುಂಟು.ನಮ್ಮ ಗಣಿತದ ಮೇಲಿನ ಭಯವನ್ನು ಹೋಗಲಾಡಿಸಲು ಒಂಭತ್ತರ</span><br />
<span class="Apple-style-span" style="font-family: Tunga;"> ವಿಶೇಷತೆಯನ್ನು ಆಗ ಹೇಳಿಕೊಟ್ಟಿದ್ದರು. ಕೆಲವು ಉದಾಹರಣೆಗಳು:</span><br />
<o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;"> </span>1<span lang="KN" style="font-family: Tunga;">. </span>9<span lang="KN" style="font-family: Tunga;"> ರಿಂದ ಯಾವುದೆ ಅಂಕೆಯನ್ನು ಗುಣಿಸಿ ಬಂದ ಉತ್ತರದ ಅಂಕೆಗಳನ್ನು ಕೂಡಿದರೆ ಬರುವುದು ಒಂಭತ್ತೇ.</span><o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;"> </span>2.<span lang="KN" style="font-family: Tunga;"> </span>9 <span lang="KN" style="font-family: Tunga;">ರಿಂದ ಮತ್ತು </span>9<span lang="KN" style="font-family: Tunga;">ರಿಂದ ಕೊನೆಗೊಳ್ಳುವ ಸಂಖ್ಯೆಯಿಂದ ಯಾವುದೇ ಸಂಖ್ಯೆಯನ್ನು ಗುಣಿಸಿದರೆ ಬರುವ</span><br />
<span lang="KN" style="font-family: Tunga;"> ಉತ್ತರದಲ್ಲಿನ ಅಂಕೆಗಳ ಮೊತ್ತ </span>9<span lang="KN" style="font-family: Tunga;"> ಆಗಿರುತ್ತದೆ ಮತ್ತು ಸರಣಿ ಸಂಖ್ಯೆಯಾದಲ್ಲಿ ಸರಣಿ ಉತ್ತರಗಳ ಸಂಖ್ಯೆಯ</span><br />
<span lang="KN" style="font-family: Tunga;"> ಕೊನೆಯ ಅಂಕೆ ಹಿಂದಿನ ಕೊನೆಯ ಅಂಕೆಗಿಂತ ಒಂದು ಕಡಿಮೆಯಾಗಿರುತ್ತದೆ. ಉದಾ:</span><o:p></o:p></div><div class="MsoNormal" style="margin-right: -.75in;">9*21=189 (1+8+9=18>1+8=9)<o:p></o:p></div><div class="MsoNormal" style="margin-right: -.75in;">9*22=198<o:p></o:p></div><div class="MsoNormal" style="margin-right: -.75in;">9*23=207<o:p></o:p></div><div class="MsoNormal" style="margin-right: -.75in;">9*2546=22914(2+2+9+1+4=18=1+8=9)<o:p></o:p></div><div class="MsoNormal" style="margin-right: -.75in;">9*2547=22923<o:p></o:p></div><div class="MsoNormal" style="margin-right: -.75in;">9*2548=252252<o:p></o:p></div><div class="MsoNormal" style="margin-right: -.75in;">99*23=2277<o:p></o:p></div><div class="MsoNormal" style="margin-right: -.75in;">99*24=2376<o:p></o:p></div><div class="MsoNormal" style="margin-right: -.75in;">99*25=2475<span lang="KN" style="font-family: Tunga;">...ಹೀಗೆ..<o:p></o:p></span></div><div class="MsoNormal" style="margin-right: -.75in;"> 3.<span lang="KN" style="font-family: Tunga;"> ಸರಣಿ ಸಂಖ್ಯೆಯನ್ನು ಕೊನೆಯ ಅಂಕೆ </span>9<span lang="KN" style="font-family: Tunga;"> ಆಗಿರುವ ಯಾವುದೇ ಸಂಖ್ಯೆಯಿಂದ ಗುಣಿಸಿದಾಗ ಬರುವ ಸರಣಿ</span><br />
<span lang="KN" style="font-family: Tunga;"> ಉತ್ತರದ ಸಂಖ್ಯೆಯ ಕೊನೆಯ ಅಂಕೆ ಹಿಂದಿನ ಕೊನೆಯ ಅಂಕೆಗಿಂತ ಒಂದು ಕಡಿಮೆಯಾಗಿರುತ್ತದೆ. ಉದಾ:</span><o:p></o:p></div><div class="MsoNormal" style="margin-right: -.75in;">49*52=2548<o:p></o:p></div><div class="MsoNormal" style="margin-right: -.75in;">69*53=3657<o:p></o:p></div><div class="MsoNormal" style="margin-right: -.75in;">459*2342=1074978<o:p></o:p></div><div class="MsoNormal" style="margin-right: -.75in;">459*2343=1075437<o:p></o:p></div><div class="MsoNormal" style="margin-right: -.75in;">459*2344=1075896<o:p></o:p></div><div class="MsoNormal" style="margin-right: -.75in;">6789*12516=84971124<o:p></o:p></div><div class="MsoNormal" style="margin-right: -.75in;">6789*12517=84977913…..<span lang="KN" style="font-family: Tunga;">ಹೀಗೇ..</span><o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;"> ಇತ್ತೀಚೆಗೆ ವೇದಗಣಿತ ಹಿಡಿದು ಕೂತೆ. ಕುಮಾರವ್ಯಾಸ,ಪಂಪರನ್ನು ಓದಿ ಓದಿ, ಕಣ್ಣು ಬಿಟ್ಟಿರುವಾಗ,ಮುಚ್ಚಿರುವಾಗ</span><br />
<span lang="KN" style="font-family: Tunga;"> ಯಾವಾಗಲೂ ಕೃಷ್ಣ,ಕರ್ಣ,ಕುಂತಿ ಇವರೇ ಕಾಣತೊಡಗಿದ್ದರು. ಎಷ್ಟು ದಿನ ಇವರ ಮುಖವನ್ನೇ ನೋಡುತ್ತಾ ಇರಲು</span><br />
<span lang="KN" style="font-family: Tunga;"> ಸಾಧ್ಯ? ಹಾಗಾಗಿ ಮುಖವಿರದ ಗಣಿತದ ಅಂಕಿಗಳತ್ತ ಗಮನ ಹರಿಸಿದೆ. ಇಲ್ಲಿ ನನಗೆ ಅಂಕೆ ಒಂಭತ್ತರ ಇನ್ನಷ್ಟು</span><br />
<span lang="KN" style="font-family: Tunga;"> ಮಾಯೆಯ ಮುಖಗಳು ಕಂಡವು. ಒಂಭತ್ತೆಂದರೆ ಮಾಯಾವಿ ಕೃಷ್ಣನಂತೆ ಅನಿಸಿತು!( ನೋಡಿ ಮತ್ತೆ ಕೃಷ್ಣ ಬಂದ.)</span><o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;"> </span>9<span lang="KN" style="font-family: Tunga;">ರಿಂದ ಅಥವಾ </span>99, 999, 9999 <span lang="KN" style="font-family: Tunga;">ಇತ್ಯಾದಿ ಸಂಖ್ಯೆಗಳಿಂದ ಅಷ್ಟೆ ಅಂಕೆಗಳಿರುವ ಸಂಖ್ಯೆಗಳನ್ನು ಗುಣಿಸುವು</span><span lang="KN" style="font-family: Tunga;">ದು</span><br />
<span lang="KN" style="font-family: Tunga;"> ತುಂಬಾ ಸುಲಭ. </span>48<span lang="KN" style="font-family: Tunga;">ನ್ನು </span>99<span lang="KN" style="font-family: Tunga;">ರಿಂದ</span>, 567<span lang="KN" style="font-family: Tunga;">ನ್ನು </span>999<span lang="KN" style="font-family: Tunga;">ರಿಂದ, </span>4893<span lang="KN" style="font-family: Tunga;">ನ್ನು </span>9999<span lang="KN" style="font-family: Tunga;">ರಿಂದ ಗುಣಿಸುವಾ. ನಮ್ಮ ಕಲಿಕಾ </span><br />
<span lang="KN" style="font-family: Tunga;">ವಿಧಾನದಲ್ಲಿ ಇದನ್ನು ಗುಣಿಸುವುದು:</span><br />
<o:p></o:p></div><div class="MsoNormal" style="margin-right: -.75in;"><br />
</div><div class="MsoNormal" style="margin-right: -.75in;"><br />
</div><div style="border-bottom: solid windowtext 1.0pt; border: none; margin-left: 0in; margin-right: -.75in; mso-border-bottom-alt: solid windowtext .75pt; mso-element: para-border-div; padding: 0in 0in 1.0pt 0in;"><div class="MsoNormal" style="border: none; mso-border-bottom-alt: solid windowtext .75pt; mso-padding-alt: 0in 0in 1.0pt 0in; padding: 0in;">48*99<span lang="KN" style="font-family: Tunga;"> </span>567*999 4893*9999<o:p></o:p></div></div><div class="MsoNormal" style="margin-right: -.75in;"> 432 6993 29997<o:p></o:p></div><div style="border-bottom: solid windowtext 1.0pt; border: none; margin-left: 0in; margin-right: -.75in; mso-border-bottom-alt: solid windowtext .75pt; mso-element: para-border-div; padding: 0in 0in 1.0pt 0in;"><div class="MsoNormal" style="border: none; mso-border-bottom-alt: solid windowtext .75pt; mso-padding-alt: 0in 0in 1.0pt 0in; padding: 0in;">396 5994 89991<o:p></o:p><br />
------ 4995 79992</div></div><div class="MsoNormal" style="margin-right: -.75in;">4752 -------- 39996<o:p></o:p></div><div class="MsoNormal">------- 566433 ------------ </div><div class="MsoNormal" style="margin-right: -.75in;"> 48925107 <o:p></o:p></div><div class="MsoNormal" style="margin-right: -.75in;"> <o:p></o:p></div><div class="MsoNormal" style="margin-right: -.75in;"> <span lang="KN" style="font-family: Tunga;">ಈ ರೀತಿಯ ಲೆಕ್ಕಗಳನ್ನು ಬಿಡಿಸಲು ವೇದ ಒಂದು ಸರಳ ಉಪಾಯ ಹೇಳಿದೆ. ಗುಣಿಸಬೇಕಾದ ಎರಡು ಸಂಖ್ಯೆಗಳಲ್ಲಿ</span><br />
<span lang="KN" style="font-family: Tunga;"> ಮೊದಲ ಸಂಖ್ಯೆಯ ಕೊನೆಯ ಅಂಕೆಯನ್ನು </span>10<span lang="KN" style="font-family: Tunga;">ರಿಂದ ಉಳಿದ ಅಂಕೆಗಳನ್ನು </span>9<span lang="KN" style="font-family: Tunga;">ರಿಂದ ಕಳೆಯಿರಿ.</span><o:p></o:p></div><div class="MsoNormal" style="margin-right: -.75in;">4893*9999=/5107. <span lang="KN" style="font-family: Tunga;">ಬಂದ ಉತ್ತರದ ಎಲ್ಲ ಅಂಕೆಗಳನ್ನು </span>9<span lang="KN" style="font-family: Tunga;">ರಿಂದ ಕಳೆಯಿರಿ=</span>4892. <span lang="KN" style="font-family: Tunga;">ಈ ಉತ್ತರದ ಮುಂದೆ ಮುಂಚೆ</span><br />
<span lang="KN" style="font-family: Tunga;"> ಬಂದ ಉತ್ತರ ಬರೆಯಿರಿ=</span>48925107. <span lang="KN" style="font-family: Tunga;">ಉತ್ತರ ಬಂತಲ್ಲ!</span><o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;"> </span>7452*9999=7451/2548. 39758642*99999999=3975864160241358.<o:p></o:p></div><div class="MsoNormal" style="margin-right: -.75in;"> <span lang="KN" style="font-family: Tunga;">ಇಷ್ಟನ್ನು ಕಲಿತ ಅನಂತರ ವೇದ ಈ ರೀತಿಯ ಗುಣಾಕಾರಕ್ಕೆ ಉತ್ತರ ಕಂಡು ಹಿಡಿಯುವ ಇನ್ನೂ ಸರಳ ವಿಧಾನವನ್ನು</span><br />
<span lang="KN" style="font-family: Tunga;"> ಹೇಳುತ್ತದೆ. </span>39758642*99999999 <span lang="KN" style="font-family: Tunga;">ಎಂಬ ಲೆಕ್ಕವನ್ನೇ ನೋಡೋಣ. ಇಲ್ಲಿ ಮೊದಲ ಸಂಖ್ಯೆಯಲ್ಲಿ ಒಂದನ್ನು ಕಳೆದು</span><br />
<span lang="KN" style="font-family: Tunga;"> ಉತ್ತರ ಬರೆದುಕೊಳ್ಳಿ. </span>39758642-1=39758641/ <span lang="KN" style="font-family: Tunga;">ಹೀಗೆ ಬಂದ ಉತ್ತರದ ಅಂಕೆಗಳನ್ನು </span>9<span lang="KN" style="font-family: Tunga;">ರಿಂದ ಕಳೆಯುತ್ತ ಬನ್ನಿ.</span> 39758641/60241358. <span lang="KN" style="font-family: Tunga;">ಉತ್ತರ ಬಂತಲ್ಲ! ಅದೂ ಒಂದೇ ಸಾಲಲ್ಲಿ! ಗುಣಾಕಾರದ ಲೆಕ್ಕದಲ್ಲಿ ಗುಣಿಸುವ ರಗಳೆಯೇ ಇಲ್ಲ.</span><br />
<span lang="KN" style="font-family: Tunga;">ಕೂಡುವುದು ಮತ್ತೆ ಕಳೆಯುವುದು. </span><o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;"> </span>987465321789*999999999999=987465321788012534678211.<o:p></o:p></div><div class="MsoNormal" style="margin-right: -.75in;"> 845693215879654*999999999999999=845693215879653154306784120346<o:p></o:p></div><div class="MsoNormal" style="margin-right: -.75in;"> <span lang="KN" style="font-family: Tunga;">ನೀವೇ ಇನ್ನಷ್ಟು ಲೆಕ್ಕ ಬಿಡಿಸಿ ಪರೀಕ್ಷಿಸಿ.</span><span lang="KN"> </span><span lang="KN" style="font-family: Tunga;">(ಮುಂಚೆ ಸೂಚಿಸಿದ ನಿಯಮದಂತೆ ಈ ಎಲ್ಲ ಲೆಕ್ಕಗಳ ಉತ್ತರದ ಅಂಕೆಗಳ </span><br />
<span lang="KN" style="font-family: Tunga;">ಮೊತ್ತ </span>9 <span lang="KN" style="font-family: Tunga;">ಆಗಿದೆ)</span><o:p></o:p></div><div class="MsoNormal" style="margin-right: -.75in;"><span lang="KN" style="font-family: Tunga;">ಇನ್ನಷ್ಟು ಇನ್ನೊಮ್ಮೆ.<o:p></o:p></span></div><div class="MsoNormal" style="margin-right: -.75in;"> <span lang="KN" style="font-family: Tunga;"><o:p></o:p></span></div></div>ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com2tag:blogger.com,1999:blog-5355400587468753863.post-70457815812100725082011-02-21T17:55:00.000+05:302011-02-21T17:55:23.528+05:30ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ. (ಕಂತು-೨)<div dir="ltr" style="text-align: left;" trbidi="on"><br />
<br />
ಈಗ ಕರ್ಣಭೇದನದ ಪ್ರಸಂಗವನ್ನು ವಿಶ್ಲೇಷಿಸುವಾ. ತನ್ನ ತಾಯಿ ಎಂದು ತಿಳಿದ ಅನಂತರ ಕರ್ಣ ಕುಂತಿಯನ್ನು ಮೊದಲ ಬಾರಿಗೆ ಭೇಟಿಯಾಗುವುದು, ತಾಯಿ ಮೊದಲ ಬಾರಿಗೆ ಮಗನ ಬಳಿ ಮಾತನಾಡುವುದು, ಹಾಗೆ ಮಾತನಾಡುವ ಉದ್ದೇಶ ಮಗನ ಸಾವನ್ನು ನಿಶ್ಚಯಿಸುವ ಸಂಗತಿಯೇ ಆಗಿರುವುದು ಈ ಸನ್ನಿವೇಶದ ಸಾರಾಂಶ. ಇಡಿಯ ಸನ್ನಿವೇಶವನ್ನು ಹೇಗೆ ಚಿತ್ರಿಸಲಾಗಿದೆ ಎಂಬುದಕ್ಕಿಂತ ಮುಖ್ಯವಾಗಿ ಕುಂತಿಯ ವರ್ತನೆಯನ್ನು ವಿಶ್ಲೇಷಿಸುವಷ್ಟರ ಮಟ್ಟಿಗೆ ಈ ಲೇಖನದ ಆಶಯ ಸೀಮಿತವಾಗಿದೆ.<br />
****<br />
ಸಂಧಿಯ ಪ್ರಯತ್ನ ವಿಫಲವಾದ ಅನಂತರ, ಕೃಷ್ಣ ವಿದುರನ ಮನೆಯಲ್ಲಿದ್ದ ಕುಂತಿಗೆ ಕರ್ಣನನ್ನು ಬೇಡಿಕೋ ಎಂಬ ಸಲಹೆಯನ್ನೀಯುತ್ತಾನೆ.<br />
“ಬಂದು ವಿದುರನ ಮನೆಗೆ ದೇವ ಮು<br />
ಕುಂದ ಕುಂತಿಯ ಕರೆದು ನಿನ್ನಯ<br />
ಕಂದರೈವರ ಮೇಲೆ ಕೌರವ ನೃಪನ ಖತಿ ಹಿರಿದು|<br />
ಇಂದು ಮುರಿದುದು ಸಂಧಿ ನಿನ್ನಯ<br />
ಕಂದ ಕರ್ಣನ ಬೇಡಿಕೊಳು ನೀ<br />
ನೆಂದು ನೇಮಿಸಿ ಮರಳಿದನು ಮುರವೈರಿ ಹರುಷದಲಿ ||” (ಉ.ಪ.-೯-೨೭)<br />
ಕೃಷ್ಣನ ಮಾತಿನಲ್ಲಿ ಗಮನಿಸಬೇಕಾದ ಮೂರು ಅಂಶಗಳು:-೧. ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿದೆ,೨. ಕರ್ಣನನ್ನು ಬೇಡು,೩. ಮುರವೈರಿ ಹರುಷದಲಿ ಮರಳಿದನು.ಕೌರವನಿಗೆ ಪಾಂಡವರ ಮೇಲೆ ತುಂಬಾ ದ್ವೇಷವಿರುವುದರಿಂದ,ಅವರ ಸಾವನ್ನು ಕೌರವ ಬಯಸುತ್ತಾನೆ ಮತ್ತು ಅದಕ್ಕೆ ಕರ್ಣನ ಸಹಾಯವನ್ನು ನಿರೀಕ್ಷಿಸುತ್ತಾನೆ.ಹಾಗಾಗಿ ಕೃಷ್ಣ ಏನನ್ನು ಬೇಡಲು ಹೇಳಿರಬಹುದು ಎಂಬುದರ ಬಗ್ಗೆ ಅನುಮಾನವೇ ಇಲ್ಲ.ಕೃಷ್ಣ ಹರುಷದಿಂದ ಮರಳಿದ ಎಂದಾದರೆ ಕುಂತಿ ಕೃಷ್ಣ ಹೇಳಿದ್ದಕ್ಕೆಲ್ಲ ಒಪ್ಪಿರಲೇ ಬೇಕು. ಸುಲಭವಾಗಿ ಊಹಿಸಬಹುದಾದ ವಿಷಯ. ಆದರೆ ಕುಂತಿ ಏನನ್ನೂ ಹೇಳದೆ ಕೃಷ್ಣ ಹೇಳಿದ್ದನ್ನು ಒಪ್ಪಿದ್ದು ಹೇಗೆ? ಕೃಷ್ಣ,ಅವನೂ ನನ್ನ ಮಗ ಎಂಬ ಮಾತು ಬರಲಿಲ್ಲವೇ? ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಯ ಮನಸ್ಸಿನಲ್ಲಿ ಹುಟ್ಟಿರಬಹುದಾದ ತಳಮಳವನ್ನು ಕುಮಾರವ್ಯಾಸ ಯಾಕೆ ಚಿತ್ರಿಸಲಿಲ್ಲ? ಈ ಭಾವಾತ್ಮಕ ಬಿಕ್ಕಟ್ಟನ್ನು ನಿರ್ವಹಿಸುವ ಶಕ್ತಿ ಇಲ್ಲದೆ ಬಿಟ್ಟನೇ? ಅಥವಾ ಭಾವಾತ್ಮಕ ಬಿಕ್ಕಟ್ಟನ್ನು ಗ್ರಹಿಸುವಷ್ಟು ಸೂಕ್ಷ್ಮಸಂವೇದಿ ಆತನಾಗಿರಲಿಲ್ಲವೇ? ಆದರೆ ಇತರ ಸಂದರ್ಭಗಳಲ್ಲಿ ವ್ಯಕ್ತವಾದ ಆತನ ಕಾವ್ಯಚಿತ್ರಣ ಸಾಮರ್ಥ್ಯ ನನ್ನ ಈ ಯೋಚನೆಯಲ್ಲಿ ಏನೋ ತಪ್ಪಿದೆ ಎಂದು ನನಗೆ ಅನಿಸುವಂತೆ ಮಾಡುತ್ತಿತ್ತು. ಮತ್ತೆ ಮತ್ತೆ ಓದುತ್ತಿದ್ದೆ,ಯೋಚಿಸುತ್ತಿದ್ದೆ. ಒಮ್ಮೆ ಅನಿಸಿತು: ಕವಿ ಉದ್ದೇಶಪೂರ್ವಕವಾಗಿ ಕುಂತಿಯ ಭಾವನೆಗಳನ್ನು ಚಿತ್ರಿಸಲಿಲ್ಲ. ಯಾಕೆಂದರೆ ಕೃಷ್ಣನ ಈ ಸೂಚನೆಯನ್ನು ಕೇಳಿದಾಗ ಕುಂತಿಗೆ ಕೃಷ್ಣನ ಸೂಚನೆಯನ್ನು ಪಾಲಿಸಬೇಕು ಎಂಬುದನ್ನು ಬಿಟ್ಟರೆ ಬೇರೆ ಭಾವನೆಗಳೇ ಇರಲಿಲ್ಲ. ಅವಳಲ್ಲಿ ಭಾವನಾತ್ಮಕ ಬಿಕ್ಕಟ್ಟು ಹುಟ್ಟಿರಲೇ ಇಲ್ಲ. ಅವಳಿಗೆ ಕರ್ಣನ ಬಗೆಗೆ ತಾಯ್ತನದ ಭಾವನೆ ಉದ್ದೀಪನಗೊಳ್ಳಲಿಲ್ಲ. ಹುಟ್ಟಿದಕೂಡಲೇ ತ್ಯಜಿಸಿದ್ದವನ ಬಳಿ ಈಗ ನಿಂತು ನಾನು ನಿನ್ನ ತಾಯಿ ಎಂದು ತಿಳಿಸಿ ಹೇಗೆ ಬೇಡಲಿ ಎಂಬ ಭಾವನೆ ಬರಲಿಲ್ಲ. ಬಂದಿದ್ದರೆ ಭಾವಾತ್ಮಕ ಬಿಕ್ಕಟ್ಟು ಎದುರಾಗುತ್ತಿತ್ತು. ಯಾಕೆ ಬರಲಿಲ್ಲ? ಕರ್ಣನನ್ನು ತ್ಯಜಿಸುವಾಗ ಆಕೆ ಗಂಗೆಗೆ ಹೇಳಿದ್ದೇನು?“ಕಂದನ ಕಾಯಿ ಮೇಣ್ ಕೊಲ್ಲೆನುತ” (ನನ್ನ ಹಿಂದಿನ ಲೇಖನದಲ್ಲಿ ಈ ಬಗ್ಗೆ ವಿವರಣೆಯಿದೆ.) ಗಂಗೆ ಕಾದು ಕೊಟ್ಟಳು. ಕುಂತಿಗುಳಿದದ್ದು ಕೊಲ್ಲುವುದು. ಕರ್ಣ ಮಗ ಎಂಬ ಭಾವನೆಯೇ ಇಲ್ಲದಿರುವಾಗ ಭಾವನಾತ್ಮಕ ಬಿಕ್ಕಟ್ಟು ಹೇಗೆ ಬಂದೀತು? ಇದನ್ನು ಧ್ವನಿಸುವ ಉದ್ದೇಶದಿಂದಲೇ ಕವಿ ಹೀಗೆ ಚಿತ್ರಿಸಿದ್ದಾನೆ. ಕವಿ ಬರೆದಿದ್ದರ ಮೂಲಕ ನಾವು ಗ್ರಹಿಸುವಷ್ಟೇ ಸೂಕ್ಷ್ಮವಾಗಿ, ಬರೆಯದೇ ಬಿಟ್ಟಿದ್ದರ ಮೂಲಕವೂ ಗ್ರಹಿಸಬೇಕಾಗುತ್ತದೆ!<br />
**<br />
ಹಾಗಾಗಿ ಭಾವಾತ್ಮಕವಾದ ದ್ವಂದ್ವ ಇಲ್ಲದೆ ಕುಂತಿ ಕರ್ಣನನ್ನು ಭೇಟಿಯಾಗುತ್ತಾಳೆ. ಕರ್ಣನನ್ನು ಕಂಡ ಕೂಡಲೇ ಕುಂತಿಗೆ ದುಃಖ ಉಕ್ಕುತ್ತದೆ. ಇದು ಯಾತಕ್ಕೆ ಎಂಬ ಚಿತ್ರಣ ಇಲ್ಲ. ಮೊದಲಬಾರಿ ತನ್ನ ಮಗನನ್ನು ಕಂಡ ಕಾರಣದಿಂದ ಇರಬಹುದು ಅಥವಾ ಮಗನಾಗಿದ್ದರೂ ಮಗ ಎಂದು ತಾನು ಭಾವಿಸದವನ ಬಳಿ ಬೇಡುವ ಸ್ಥಿತಿ ಬಂದಿದ್ದಕ್ಕೂ ಇರಬಹುದು. ನಾನು ನಿನ್ನ ತಾಯಿ ಎಂದು ಕುಂತಿ ಕರ್ಣನಿಗೆ ಇಲ್ಲೂ ಹೇಳುವುದಿಲ್ಲ. ಇಲ್ಲೂ ಕೂಡ ಅವಳಲ್ಲಿ ತಾಯ್ತನದ ಭಾವನೆ, ತನ್ನ ತಪ್ಪಿನ ಬಗ್ಗೆ ಪಶ್ಚಾತ್ತಾಪ ಬರಲಿಲ್ಲ. ಅಳುವ ಕುಂತಿಗೆ “ಬಿಜಯಂಗೈದ ಹದನನು ವುಸುರಬೇಹುದು ತಾಯೆ” ಎಂದು ಕರ್ಣ ಹೇಳಿದಾಗ ಆಕೆ ಹೇಳುವ ಮೊದಲ ಮಾತು: “ಮಗನೆ ತಮ್ಮಂದಿರನು ಪಾಲಿಸು”. ಪಾಲಿಸು ಎಂಬುದಕ್ಕೆ ಎರಡು ಅರ್ಥವಿದೆ.೧.ರಕ್ಷಿಸು,ಕಾಪಾಡು,೨. ಆಳ್ವಿಕೆ ಮಾಡು. ಕುಂತಿ ಈ ಎರಡೂ ಅರ್ಥದಲ್ಲಿ ಮಾತನ್ನಾಡಿದ್ದಾಳೆ.“ನೀನೋಲಗಿಸುವರೆ ಕುರುಪತಿಯ ನಿನಗವರಿದಿರೆ ಇತ್ತಂಡ ಸೊಗಸು” ಎಂಬ ಮಾತು ನೀನು ಆಳು ಎಂಬ ಅಭಿಪ್ರಾಯವನ್ನು ಸೂಚಿಸುತ್ತದೆ. ಕರ್ಣ ಇದಕ್ಕೊಪ್ಪುವುದಿಲ್ಲ. ನಯವಾಗಿ ಕುಂತಿಯ ಸಲಹೆಯನ್ನು ತಿರಸ್ಕರಿಸುತ್ತಾನೆ.“ರಾಯನೆನ್ನನು ನೆಚ್ಚಿ ಹೊರೆದನು” ಎಂಬ ಅವನ ಮಾತಿನಲ್ಲಿ ನೀನು ನನ್ನನ್ನು ಹೊರೆಯಲಿಲ್ಲ ಎಂಬ ಸೂಕ್ಷ್ಮಧ್ವನಿಯೂ ಇದೆ. ಕುಂತಿ ನಿಜವಾಗಿ ಬಂದ ಉದ್ದೇಶ ಇದಲ್ಲ ಎಂಬುದು ಅವನಿಗೂ ಗೊತ್ತು.“ಇಂದು ನಿಮ್ಮಡಿ ಬಂದ ಕಾರ್ಯವ ಬೆಸಸಿ” ಎನ್ನುತ್ತಾನೆ. ತಾಯ್ತನದ ಭಾವನೆ ಇದ್ದಿದ್ದರೆ ಕುಂತಿ ಇದಲ್ಲದೆ ಬೇರೆ ಕಾರ್ಯವೇನೂ ಇಲ್ಲ ಅನ್ನಬೇಕಿತ್ತು. ಆದರೆ ಆಕೆ ಮೂರು ಭರವಸೆಯನ್ನು ಅಪೇಕ್ಷಿಸುತ್ತಾಳೆ.(ತಮ್ಮಂದಿರನ್ನು ಪಾಲಿಸಬೇಕಾದ ರೀತಿ.ಪಾಲಿಸು ಪದದ ಮತ್ತೊಂದು ಅರ್ಥ.)<br />
೧.ಆದೊಡೈವರ ಮಕ್ಕಳನು ತಲೆಗಾಯ್ದು ತೋರೈ ೨.ಹೋದ ಬಾಣವ ಮರಳಿ ತೊಡದಿರು.೩.ಮಾದು ಕಳೆ ವೈರವ.<br />
ಈ ಮೂರೂ ಬೇಡಿಕೆಗಳು ಪಾಂಡವರೈವರ ಪಕ್ಷಪಾತಿಯಾಗಿರುವುವೇ ಹೊರತು ಕರ್ಣಪಕ್ಷಿಪಾತಿಯಲ್ಲ. ಕರ್ಣನನ್ನು ಕುಂತಿ ಮತ್ತೆ ತ್ಯಜಿಸುತ್ತಾಳೆ.<br />
***<br />
ಈ ಮೂರೂ ಸನ್ನಿವೇಶಗಳಲ್ಲಿ ಕುಂತಿಯ ವರ್ತನೆಯನ್ನು ಗಮನಿಸಿದ ಅನಂತರದ ನನ್ನ ಅನಿಸಿಕೆ: ಕುಂತಿಗೆ ಕರ್ಣನನ್ನು ತ್ಯಜಿಸಿದ್ದರ ಬಗ್ಗೆ ಅಪರಾಧೀ ಭಾವ ಇರಲಿಲ್ಲ.ತ್ಯಜಿಸಿದ್ದು ಅಪರಾಧ,ಆದರೆ ಅನಿವಾರ್ಯವಾಗಿತ್ತು ಎಂದು ನಮಗೆ ಅನಿಸಿದರೂ ಕುಂತಿಗೆ ಹಾಗೆ ಅನಿಸಿತ್ತು ಎಂಬುದನ್ನು ಒಪ್ಪುವುದು ಕಷ್ಟ. ಕುಂತಿಯ ಅವಿವೇಕಜನ್ಯ ಕುತೂಹಲ ಮತ್ತು ಭಯಜನ್ಯ ನಿರಾಕರಣೆ ಕರ್ಣನ ದುರಂತ ಬದುಕಿನ ಕಾರಣವಾಯಿತು ಎಂಬುದಂತೂ ಸತ್ಯ.<br />
*** <br />
ಅಡಿಟಿಪ್ಪಣಿ.<br />
೧)ಮುನಿಯ ಶಾಪಕ್ಕೆ ಪಕ್ಕಾದ ಪಾಂಡು ಕುಂತಿ,ಮಾದ್ರಿಯರ ಜೊತೆ ಕಾಡಲ್ಲಿರುವಾಗ ಕುಂತಿ ಮಕ್ಕಳನ್ನು ಪಡೆವ ಆಸೆಯನ್ನು ವ್ಯಕ್ತಪಡಿಸುತ್ತಾಳೆ. ಕುಂತಿ ಪಾಂಡುವಿನಿಂದ ಮಕ್ಕಳನ್ನು ಪಡೆವ ಹಾಗಿಲ್ಲ. ಆಗ ಪಾಂಡು ಮುನಿಗಳಿಂದ ಮಂತ್ರೋಪದೇಶ ಪಡೆಯಲು ಕುಂತಿಗೆ ಸೂಚಿಸುತ್ತಾನೆ.<br />
ಈ ಸಂದರ್ಭದಲ್ಲಿ ಕುಂತಿ ತನಗೆ ದೂರ್ವಾಸಮುನಿ ಕೊಟ್ಟ ಐದು ಮಂತ್ರಗಳಿವೆ ಅನ್ನುತ್ತಾಳೆಯೇ ಹೊರತು ಮೊದಲ ಮಂತ್ರದಿಂದ ಮಗನನ್ನು ಪಡೆದ ಸುದ್ದಿ ಹೇಳುವುದಿಲ್ಲ. ನಾಲ್ಕು ಮಂತ್ರಗಳ ಪ್ರಯೋಗದಿಂದ ಐವರು ಮಕ್ಕಳು ಜನಿಸುತ್ತಾರೆ. ಇನ್ನೊಂದು ಮಂತ್ರ ಏನಾಯಿತು ಎಂದು ಪಾಂಡುವೂ ಕೇಳುವುದಿಲ್ಲ! <br />
೨)ಯುದ್ಧದ ಅನಂತರ ಕುರುಕ್ಷೇತ್ರದರ್ಶನದ ವೇಳೆಯಲ್ಲಿ ಕುಂತಿ ಕರ್ಣನ ಶವದ ಮೇಲೆ ಬಿದ್ದು ಹೊರಳಾಡುತ್ತಾಳೆ.“ಮಾಯಾವಿ ಮಧುಸೂದನನೆ ಮರೆಯಿಸಿ ಕೊಂದನ್” ಎನ್ನುತ್ತಾಳೆ. ತನ್ನ ತಪ್ಪನ್ನು ಕೃಷ್ಣನ ಮೇಲೆ ಹೊರಿಸುತ್ತಾಳೆ.<br />
<br />
<br />
<br />
<div><br />
</div></div>ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com3tag:blogger.com,1999:blog-5355400587468753863.post-6259580714060841932011-01-04T20:28:00.000+05:302011-01-04T20:28:32.269+05:30ಒಂದು ತುತ್ತು ಅನ್ನ. ಅಲ್ಲಿಯವರೆಗೂ ಸಣ್ಣದಾಗಿ ಹನಕುತ್ತಿದ್ದ ಮಳೆ ಶ್ರೀಧರನ ಅಂಗಡಿ ಹೊಗುವ ಹೊತ್ತಿಗೆ ಜೋರಾಗಿ ರಪರಪ ಬಾರಿಸತೊಡಗಿತು. ಸಾಯಂಕಾಲ ಇಳಿವ ಹೊತ್ತಿಗೇ ಮಳೆಯ ಮೋಡಗಳು ದಟ್ಟೈಸಿದ್ದ ಕಾರಣದಿಂದಾಗಿ ಅಂಗಡಿಯ ಬದಿ ಯಾರೂ ತಲೆ ಹಾಕಿರಲಿಲ್ಲ. ಏನೂ ಮಾಡಲು ತೋಚದೆ ಬೆಳಗಿಂದ ಓದುತ್ತಿದ್ದ ಪೇಪರನ್ನೇ ಮತ್ತೆ ಮಗುಚುತ್ತಿದ್ದ ಶ್ರೀಧರ ಬಾ ಮಾರಾಯ ಬಾ ಕತೆ ಹೊಡೆಯುವಾ.. ಮಳೆ ಜೋರೇ ಹೊಡೀತದೆ ಕಾಣ್ಸ್ತದೆ..ಅಂದ. ಒಳಹೊಕ್ಕು ಅದೂ ಇದೂ ಮಾತಾಡುತ್ತಾ ಕೂತೆವು. ಎಲ್ಲೆಲ್ಲೋ ಹೊರಳಾಡುತ್ತಾ ಮಾತು ಈರುಳ್ಳಿ, ತರಕಾರಿಯ ಏರುತ್ತಿರುವ ದರಗಳ ಬಳಿ ಬಂದು ನಿಂತಿತು. ಪುಣ್ಯಕ್ಕೆ ಅಕ್ಕಿ ದರ ಈ ರಭಸದಲ್ಲಿ ಏರಿಲ್ಲ ನೋಡು..ಇಲ್ದಿದ್ರೆ ಒಂದು ತುತ್ತು ಊಟಕ್ಕೂ ಒದ್ದಾಟ ಆಗ್ತಿತ್ತು ಅಲ್ವಾ? ಅಂದ. ತಟ್ಟನೆ ಏನೋ ಹೊಳೆಯಿತು. ಏ ! ೫ ಗ್ರಾಂ ಅಕ್ಕಿ ತೂಗೋ ಅಂದೆ. ಏನೋ ಬಂಗಾರ ತೂಗ್ಸೋ ಹಾಗೆ ಅಕ್ಕಿ ತೂಕ ಮಾಡು ಅಂತೀಯಲ್ಲ ಅಂದ. ತೂಗು ಅಂದೆ. ಎಲ್ಲೋ ಮೂಲೆಯಲ್ಲಿ ಬೆಲೆ ಕಳಕೊಂಡು ಬಿದ್ದಿದ್ದ ೫ ಗ್ರಾಂ.ಕಲ್ಲನ್ನು ಹುಡುಕಿ ತೆಗೆದ. ತೂಗಿದ.<br />
ಈಗ ಕಾಳುಗಳನ್ನು ಎಣಿಸಿದೆವು. ೫ ಗ್ರಾಂ ಅಭಿಲಾಷಾ ಅಕ್ಕಿಯಲ್ಲಿ ನುಚ್ಚು ಕಳೆದು ೧೩೨ ಕಾಳುಗಳಿದ್ದವು. ಇದು ಒಂದು ತುತ್ತು ಆಗಬಹುದು ಎಂದು ನಾವು ತೀರ್ಮಾನಿಸಿದೆವು. ಲೆಕ್ಕ ಶುರುವಾಯಿತು. ಭಾರತದ ಜನಸಂಖ್ಯೆ ೧೧೫ ಕೋಟಿ. ದಿನಕ್ಕೊಂದು ಊಟದಂತೆ ಲೆಕ್ಕ ಹಿಡಿದರೂ ೧೧೫ ಕೋಟಿ ಊಟವಾಯಿತು. ಪ್ರತಿ ಊಟಕ್ಕೆ ಒಂದು ತುತ್ತು ಅಂದರೆ ಗ್ರಾಂ ಲೆಕ್ಕದಲ್ಲಿ ೧೧೫೦೦೦೦೦೦೦*೫=೫೭೫೦೦೦೦೦೦೦ ಗ್ರಾಂ=೫೭೫೦೦೦೦ ಕಿ.ಗ್ರಾಂ ಆದಂತಾಯಿತು. ಅಂದರೆ ೫೭೫೦೦ ಕ್ವಿಂಟಾಲ್. ಅಭಿಲಾಷಾ ಅಕ್ಕಿ ಒಂದು ಕ್ವಿಂಟಾಲ್ ಗೆ ರೂ.೧೮೫೦/-.೫೭೫೦೦ ಕ್ವಿಂ.ಗೆ ರೂ.೧೦,೬೩,೭೫,೦೦೦/- ಆದಂತಾಯಿತು. ಪ್ರತಿಯೊಬ್ಬರೂ ಒಂದು ತುತ್ತು ಅನ್ನವನ್ನು ವ್ಯರ್ಥಮಾಡಿದರೆ ಆಗುವ ನಷ್ಟ ಇದು.<br />
ಸುರಿವ ಮಳೆ ನೋಡುತ್ತಾ ಈಗಷ್ಟೆ ಮುಗಿಸಿದ ಲೆಕ್ಕ ಹುಟ್ಟಿಸಿದ ಗಾಬರಿಯನ್ನು ಗ್ರಹಿಸುತ್ತಾ ಕೂತೆವು. ಮಾತು ಹಿಂಚಿತು.ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com8tag:blogger.com,1999:blog-5355400587468753863.post-82201057206744353582010-12-18T09:26:00.000+05:302010-12-18T09:26:26.031+05:30ಕುಮಾರವ್ಯಾಸನ ಕುಂತಿ: ಒಂದು ಅಧ್ಯಯನ."ಅರಿಯದ ಮುಗ್ಧ ಕನ್ಯೆ ಕುಂತಿಯಿಂದಾದ ಅಪರಾಧವಲ್ಲದ ಅಪರಾಧ!" ಎಂಬ ಅಭಿಪ್ರಾಯವನ್ನು ನನ್ನ "ವಂಶವನರುಹಿ ಕೊಂದನು" ಎಂಬ ಲೇಖನಕ್ಕೆ ಪ್ರತಿಕ್ರಿಯೆಯಾಗಿ ತೇಜಸ್ವಿನಿ ಹೆಗಡೆ ವ್ಯಕ್ತಪಡಿಸಿದ್ದು, ಮತ್ತು "ಮನದದನಿ" ಬ್ಲಾಗಿನಲ್ಲಿ ಪ್ರಕಟವಾದ ಲೇಖನವೊಂದು( http://manadadani.blogspot.com/2010/09/blog-post_21.html)ಈ ಲೇಖನ ಬರೆಯಲು ಪ್ರೇರಣೆ. ಕರ್ಣನಿಗೆ ಸಂಬಂಧಿಸಿದಂತೆ ಕುಂತಿ ವರ್ತಿಸುವ ಮೂರು ಸನ್ನಿವೇಶಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವ ಪ್ರಯತ್ನವಿದು. ಕುಂತಿಯದು ಅಪರಾಧವೇ ಅಲ್ಲವೇ ಅಥವಾ ಅವಳ ವರ್ತನೆ ತಪ್ಪೇ ಸರಿಯೇ ಇವುಗಳ ಬಗ್ಗೆ ತೀರ್ಮಾನ ಕೊಡುವ ಉದ್ದೇಶವೂ ಈ ಲೇಖನಕ್ಕಿಲ್ಲ.<br />
ನಾನು ಆರಿಸಿಕೊಂಡದ್ದು ಕುಮಾರವ್ಯಾಸ ಭಾರತದ ಮೂರು ಸನ್ನಿವೇಶಗಳು.<br />
೧) ಕರ್ಣನ ಜನನ. (ಆದಿಪರ್ವ-೩ - ೧೪,೧೫,೧೭,೨೧,೨೨)<br />
೨)ವಿದ್ಯಾ ಪ್ರದರ್ಶನ. (ಆ.ಪ.-೭ - ೫೩)<br />
೩)ಕರ್ಣ ಭೇದನ (ಉ.ಪ. ೧೧ - ೨೭,೩೧,೩೫)<br />
ಕರ್ಣನ ಜನನ:<br />
"ಮಗುವುತನದಲಿ ಬೊಂಬೆಯಾಟಕೆ<br />
ಮಗುವನೇ ತಹನೆಂದು ಬಂದಳು<br />
ಗಗನನದಿಯಲಿ ಮಿಂದುಟ್ಟಳು ಲೋಹಿತಾಂಬರವ |<br />
ವಿಗಡಮುನಿಪನ ಮಂತ್ರವನು ನಾ<br />
ಲಗೆಗೆ ತಂದಳು ರಾಗರಸಗಲಿ<br />
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ ||"<br />
ಮಂತ್ರೋಪದೇಶಿತಳಾದ ಕುಂತಿ ಬೊಂಬೆಯಾಟಕೆ ಮಗುವನ್ನು ತರಲೆಂದು ಮಂತ್ರ ಪ್ರಯೋಗಕ್ಕೆ ಸಿದ್ಧವಾಗುತ್ತಾಳೆ. ಬೊಂಬೆಯಾಟಕ್ಕೆ ಮಗುವನ್ನೇ ತರುವೆ ಎಂಬುದು ಸಹಜವಾಗಿ "ಮಗುವುತನ" ಹೌದು. ಆದರೆ ಕುಂತಿಯ ಮಟ್ಟಿಗೆ ಇಲ್ಲಿ ಅದನ್ನು ಅನ್ವಯಿಸುವುದು ಎಷ್ಟು ಸಮರ್ಥನೀಯ? ಆಕೆಯ ವರ್ತನೆ ಗಮನಿಸಿ."ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ." ಅಂದರೆ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವು ಕುಂತಿಗಿತ್ತು. ಮತ್ತು ಸೂರ್ಯನನ್ನು ಅಹ್ವಾನಿಸುವ ವಿಧಾನ ಹೇಗೆ ಎಂಬುದೂ ತಿಳಿದಿತ್ತು. ಅಂದರೆ ಅವಳದ್ದು "ಮಗುವುತನ"ದ ಮುಗ್ಧತೆ ಅಲ್ಲ, ಒಂದೋ ಮುನಿಯ ಮಾತನ್ನು ಪರೀಕ್ಷಿಸುವ ಬಯಕೆ ಅಥವಾ ನಿಜವಾಗಿ ಮಗುವನ್ನು ಪಡೆವ ಆಸೆ. ಕನ್ಯೆ ಎಂದು ತಿಳಿದೂ ಮಗುವನ್ನು ಪಡೆವ ಆಸೆ ಇತ್ತು ಅಥವಾಮುನಿಯ ಮಾತನ್ನು ಪರೀಕ್ಷಿಸುವ ಬಯಕೆ ಇತ್ತು ಎಂದೇ ಭಾವಿಸಬೇಕಾಗುತ್ತದೆ. ದೂರ್ವಾಸನ ಶಕ್ತಿ ಗೊತ್ತಿದ್ದೂ ಪರೀಕ್ಷಿಸ ಹೊರಡುವ ಕುಂತಿಯ ವರ್ತನೆ ವಿವೇಕವೇ?<br />
"ಮಗುವುತನದಲಿ" ಎಂಬ ಕುಮಾರವ್ಯಾಸನ ಹೇಳಿಕೆಯನ್ನು ಸಮರ್ಥಿಸುವ ಯಾವ ವಿವರಗಳೂ ಸನ್ನಿವೇಶದ ಚಿತ್ರಣದಲ್ಲಿ ಇಲ್ಲ. ನನ್ನ ಈ ಹೇಳಿಕೆಗೆ ಪೂರಕವಾಗಿ ಈ ಚಿತ್ರಣಗಳನ್ನು ಗಮನಿಸಿ.<br />
"ಇಂದು ಕುಂತೀಭೋಜನೊಡೆತನ<br />
ಬೆಂದುಹೋಗಲಿಯೆಂಬ ಶಾಪವ<br />
ನಿಂದುಮುಖಿ ನಿಲಿಸಿದಳು ಹೊರಳಿದಳವರ ಚರಣದಲಿ||"<br />
ದೂರ್ವಾಸಮುನಿ ನೃಪ ಮಂದಿರಕ್ಕೆ ಬಂದಾಗ, ಕುಂತೀಭೋಜ ಅವರನ್ನು ಆದರಿಸಿ ಸತ್ಕರಿಸಲು ಮರೆತಾಗ, ಕುಂತಿ ದೂರ್ವಾಸನ ಚರಣಗಳಲ್ಲಿ ಹೊರಳಿ ಶಾಪವನ್ನು ನಿಲ್ಲಿಸುತ್ತಾಳೆ. ಮುಂದೆ "ಮುನಿಯನುಪಚರಿಸಿದಳು ವಿವಿಧಾನ್ನ ಪಾನ ರಸಾಯನಂಗಳಲಿ"<br />
ಅಂದರೆ ಕುಂತಿಗೆ ದೂರ್ವಾಸ ಮುನಿಯ ಶಕ್ತಿಯ ಬಗೆ ತಿಳಿದಿತ್ತು. ಮತ್ತು ಅವರ ಕೋಪವನ್ನು ನಿಯಂತ್ರಿಸಬೇಕು ಎಂಬ ವಿವೇಕವೂ, ಪ್ರಬುದ್ಧತೆಯೂ ಇತ್ತು. ಅವಳ ಉಪಾಚಾರಕ್ಕೆ ಮೆಚ್ಚಿದ ದೂರ್ವಾಸ ಮಂತ್ರೋಪದೇಶ ಮಾಡುವಾಗ ಹೇಳುವ ಎಚ್ಚರಿಕೆಯ ಮಾತುಗಳನ್ನು ಗಮನಿಸಿ:<br />
"ಮಗಳೆ ಬಾ ಕೊಳ್ ಐದು ಮಂತ್ರಾ<br />
ಳಿಗಳನಿವು ಸಿದ್ಧಪ್ರಯೋಗವು<br />
ಸೊಗಸು ದಿವಿಜರೊಳಾರ ಮೇಲುಂಟವರ ನೆನೆ ಸಾಕು|<br />
ಮಗನು ಜನಿಸುವನೆಂದು......"<br />
ದೂರ್ವಾಸ ಹೇಳುವ "ಸಿದ್ಧಪ್ರಯೋಗ" "ಮಗನು ಜನಿಸುವ" ಎಂಬುದು ಕುಂತಿಗೆ ಅರ್ಥವಾಗದಷ್ಟು ಅಪ್ರಬುದ್ಧಳಾಗಿದ್ದಳು ಎಂದು ನಾವು ಭಾವಿಸಲು ಸಾಧ್ಯವಿಲ್ಲ. ಯಾಕೆಂದರೆ ಆಕೆ ದುರ್ವಾಸನನ್ನು ಉಪಚರಿಸಿದ ರೀತಿ ಅದಕ್ಕೆ ಅಸ್ಪದ ಕೊಡುವುದಿಲ್ಲ. ದೂರ್ವಾಸನನ್ನು ಉಪಚರಿಸುವಾಗ ಆಕೆ ವಿವೇಕಿಯೂ,ಪ್ರಬುದ್ಧೆಯೂ ಆಗಿದ್ದಳು ಮತ್ತು ಅನಂತರ ಅವಳು ಮುಗ್ಧಳಾದಳು ಎಂದು ಭಾವಿಸುವುದು ಕಥೆಯ ಚಲನೆಗೆ ವಿರುದ್ಧವಾಗುತ್ತದೆ.<br />
***<br />
ಸೂರ್ಯ ಕರ್ಣನನ್ನು ದಯಪಾಲಿಸಿದ ಅನಂತರ ಕುಂತಿಯ ವರ್ತನೆಯನ್ನು,ವಿಚಾರವನ್ನು ಗಮನಿಸಿ.<br />
"ಕುಲದಸಿರಿ ತಪ್ಪುವುದಲಾ ಸಾ<br />
ಕಿಳುಹಬೇಕೆಂದೆನುತ ಗಂಗಾ<br />
ಜಲದೊಳಗೆ ಹಾಯ್ಕಿದಳು ಜನದಪವಾದ ಭೀತಿಯಲಿ||"<br />
"ಬೊಂಬೆಯಾಟಕೆ ಮಗನನೇ ತಹನೆಂದು" ತೀರ್ಮಾನಿಸುವಾಗ ಇರದ ಜನದಪವಾದದ ಭೀತಿ ಈಗ ಬಂದಿದೆ. ಮಂತ್ರಪ್ರಯೋಗದಿಂದ ಮಗ ಬಂದರೆ ಅಪವಾದ ಬರುತ್ತದೆ ಎಂದು ಕುಂತಿಗೆ ಪ್ರಯೋಗಕ್ಕಿಂತ ಮುಂಚೆ ತಿಳಿಯದಷ್ಟು ಮೌಢ್ಯವಿತ್ತೇ?<br />
ಗಂಗೆಯಲ್ಲಿ ಕುಂತಿಯನ್ನು ಹಾಕುವಾಗಲೂ ಕುಂತಿ ಹೇಳುವುದನ್ನು ಗಮನಿಸಿ:<br />
"ತಾಯೆ ಬಲ್ಲಂದದಲಿ ಕಂದನ<br />
ಕಾಯಿ ಮೇಣ್ ಕೊಲ್ಲೆನುತ......."<br />
"ಬಲ್ಲಂದದಲಿ ಕಂದನ ಕಾಯಿ"ಎನ್ನುವುದು ಸಹಜ ಮಾತೃತ್ವದ ಭಾವನೆ,ಆಸೆ. ಕಂದನನ್ನು ಕೊಂದರೂ ಅಡ್ಡಿಯಿಲ್ಲ ಎಂಬ ಭಾವನೆ!? ಅಪವಾದ ಭೀತಿಯಿಂದ ಮಗುವನ್ನು ನೀರಿಗೆ ಹಾಕುವುದನ್ನು ಸರಿ ಅಂತ ಭಾವಿಸೋಣ. ಕೊಲ್ಲೆನುತ ಎಂಬ ಸೂಚನೆಯನ್ನು ಹೇಗೆ ಅರ್ಥೈಸುವುದು? ಸಮರ್ಥಿಸುವುದು?<br />
ಆದ್ದರಿಂದ ಕುಂತಿ ಮುಗ್ಧೆಯಾಗಿರಲಿಲ್ಲ, ಮಂತ್ರಪ್ರಯೋಗಕ್ಕೆ ಸಿದ್ಧವಾದದ್ದು ಕುತೂಹಲ ಮತ್ತು ಅವಿವೇಕಿತನದಿಂದ ಎಂದೇ ಭಾವಿಸಬೇಕಾಗುತ್ತದೆ. ಪೂರ್ವಾಪರ ವಿವೇಚಿಸದೆ ವರ್ತಿಸಿದ್ದು ಕುಂತಿಯ ತಪ್ಪಲ್ಲವೇ?<br />
*****<br />
ವಿದ್ಯಾ ಪ್ರದರ್ಶನ.<br />
ಈ ಸನ್ನಿವೇಶವನ್ನು ಕುಮಾರವ್ಯಾಸ ತುಂಬಾ ಸಂಕ್ಷಿಪ್ತವಾಗಿಸಿದ್ದಾನೆ. ಅರ್ಜುನನೆದುರು ಬಂದವ ತನ್ನ ಮಗನಿರಬಹುದು ಎಂಬ ಅನುಮಾನ ಕುಂತಿಗೆ ಬರುತ್ತದೆ. ಆದರೆ ಆಕೆ ಮೂರ್ಛೆ ಹೋಗುತ್ತಾಳೆ. ಕುಂತಿ ಇಲ್ಲಿ ತನ್ನ ಮಗನ ಬಗ್ಗೆ ಯಾಕೆ ಮಾತಾಡಲಿಲ್ಲ ಎಂಬುದರ ಬಗೆಗೆ ಕುಮಾರವ್ಯಾಸನಿಗೂ ಉತ್ತರ ಕೊಡುವುದು ತೊಡಕಾಗಿ ಕಂಡು, ಕುಂತಿಗೆ ಹಾಗಾಗಲು ಕಾರಣ ವಿಷ್ಣುಮಾಯೆ ಎಂದುಬಿಡುತ್ತಾನೆ. "ವಿಷ್ಣುಮಾಯೆಯ ಬಿನ್ನಣವಲೇ ಮಾತು ಬಿಗಿದುದು ಮನವನೊಳಗಿಕ್ಕಿ ತನ್ನ ತಾನೇ ಮರುಗಿ ಮೂರ್ಛಾಪನ್ನೆಯಾದಳು ಕುಂತಿ"<br />
(ಮುಂದುವರಿಯುವುದು)<br />
<br />
<br />
<br />
<br />
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com3tag:blogger.com,1999:blog-5355400587468753863.post-90838142167894001882010-11-11T22:07:00.000+05:302010-11-11T22:07:14.680+05:30"ಎನ್ನೊಡಲನಾಂ ತವಿಪೆಂ"ನನ್ನ ಹಿಂದಿನ ಲೇಖನದಲ್ಲಿ ಕರ್ಣಭೇದನ ಪ್ರಸಂಗವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯ ಬಗೆಗೆ ಬರೆದಿದ್ದೆ. ಈ ಲೇಖನದಲ್ಲಿ ಈ ಪ್ರಸಂಗವನ್ನು ಕನ್ನಡದ ಆದಿಕವಿ ಎನ್ನಿಸಿಕೊಂಡ ಪಂಪ ಚಿತ್ರಿಸಿದ ರೀತಿಯ ಬಗೆಗೆ ಬರೆಯುತ್ತಿದ್ದೇನೆ.<br />
ಇಲ್ಲಿ ಪೀಠಿಕೆಯಾಗಿ ಒಂದೆರಡು ಮಾತುಗಳನ್ನು ಹೇಳಬೇಕು. ವ್ಯಾಸರಿಗೆ ಮಹಾಭಾರತ ಇಡೀ ಜಗತ್ತಿನ ಕಥೆ, ಕೇವಲ ಕುರು-ಪಾಂಡವರ ಕಥೆಯಲ್ಲ. ಅದರಲ್ಲಿ ಬರುವ ಉಪಕಥೆಗಳು ಕುರು ಪಾಂಡವರ ಕಥೆಯಷ್ಟೇ,ಅಥವಾ ಅದಕ್ಕಿಂತಲೂ, ಗಾತ್ರದಲ್ಲಿ,ಸತ್ವದಲ್ಲಿ ವಿಸ್ತಾರ, ಮಹತ್ವವುಳ್ಳದ್ದು. ಅದ್ದರಿಂದ ಅದಕ್ಕೆ ಐದನೆಯ ವೇದ ಎಂದು ಕರೆದರು. ಜಗತ್ತಿನ ಕಥೆಯಾದ ಈ ಜಯವೆಂಬ ಭಾರತವನ್ನು ಕುಮಾರವ್ಯಾಸ ಕುಗ್ಗಿಸಿಕೊಂಡ. ಅವನಿಗೆ ಜಗತ್ತಿನ ಕಥೆ ಹೇಳುವುದು ಉದ್ದೇಶವೇ ಆಗಿರಲಿಲ್ಲ. ಅವನ ಉದ್ದೇಶ ಕೃಷ್ಣನ ಕಥೆ ಹೇಳುವುದು.<br />
"ತಿಳಿಯ ಹೇಳುವೆ ಕೃಷ್ಣ ಕಥೆಯನು<br />
ಇಳೆಯ ಜಾಣರು ಮೆಚ್ಚುವಂತಿರೆ<br />
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ" -(ಆ.ಪ.-೧-೧೩)<br />
ಇಳೆಯ ಜಾಣರು ಮತ್ತು ಕೃಷ್ಣ ಮೆಚ್ಚಲಿ ಎಂದು ತಾನು ಈ ಕಥೆ ಹೇಳುತ್ತೇನೆ ಎಂಬುದು ಅವನ ಘೋಷಣೆ. ಅಂದರೆ ಅವನು ಭಾರತದ ಕಥೆಯನ್ನು ಕೃಷ್ಣನ ಕೇಂದ್ರದಲ್ಲಿ ನೋಡಿದ,ಕೃಷ್ಣನ ಲೀಲೆ ಎಂಬಂತೆ ನೋಡಿದ.<br />
"ವಿಕ್ರಮಾರ್ಜುನ ವಿಜಯ" ಎಂಬ ಪಂಪ ಭಾರತ ಈ ಕೃತಿಗಿಂತ ಸರಿಸುಮಾರು ೬೦೦ ವರ್ಷಗಳ ಹಿಂದಿನದು. . ಕುಮಾರವ್ಯಾಸನ ಭಾಷೆ ನಡುಗನ್ನಡ. ಪಂಪನದು ಹಳೆಗನ್ನಡ. ಭಾವ ಅರ್ಥವಾಗುವುದು ಕಷ್ಟವಲ್ಲವಾದರೂ ಭಾಷೆ ನಮಗೆ ಬಳಕೆಯಲ್ಲಿ ಇಲ್ಲದ್ದು.( ಕುಮಾರವ್ಯಾಸನ ಭಾಷೆ ತುಂಬಾ ಸರಳ, ನಾವು ಬಳಸುವ ಭಾಷೆಗೆ ಸಮೀಪದ್ದು ಎನಿಸಿದರೂ ಆ ಭಾಷೆಯಲ್ಲಿ ಆತ ಬಲಿಯುವ ಭಾವ ಬಹಳ ಸಂಕೀರ್ಣವಾದದ್ದು. ಕೆಲವು ಉದಾಹರಣೆಗಳು:(ಸನ್ನಿವೇಶದ ಹಿನ್ನೆಲೆಯಲ್ಲಿ ಗಮನಿಸಿ) "ಪಡುವಣ ಶೈಲ ವಿಪುಲ ಸ್ತಂಭ ದೀಪಿಕೆಯಂತೆ ರವಿ ಮೆರೆದ"(ಭೀ.ಪ.-೧೦-೪೨), " ಹಿಂಗದಿನ್ನೂ ದ್ವಾಪರದ ಸರ್ವಾಂಗವೀ ದ್ವಾಪರದ ಸೀಮಾಸಂಗದಲಿ ಸಿಗುರೆದ್ದ ಕಲಿಕೆಯ ಸೊಗಡ ಸೋಹಿನಲಿ ಸಂಗಡಿಸಿತಧರೋತ್ತರದ ಸಮರಂಗ"(ಕ.ಪ.-೧೭-೫೨), "ದೈವವಿಕ್ಕಿದ ಕೊರಳುಗಣ್ಣಿಯ ಕುಣಿಕೆಯಾರಲಿ ಹರಿವುದೈ" (ಸ.ಪ.- ೧೩-೪). ಇದೇ ಒಂದು ದೀರ್ಘ ಲೇಖನವಾಗಿಬಿಡಬಹುದು.ಇಷ್ಟು ಸಾಕು.)<br />
ಪಂಪನಿಗೆ ಈ ಕಥೆ ಜಗತ್ತಿನ ಕಥೆಯೂ ಅಲ್ಲ,ಕೃಷ್ಣನ ಕಥೆಯೂ ಅಲ್ಲ. ಈ ಕಥೆಯ ಮೂಲಕವಾಗಿ ಅರ್ಜುನನನ್ನು ವೈಭವೀಕರಿಸುವುದು ಅವನ ಉದ್ದೇಶ. ಅರ್ಜುನನ ಮೂಲಕವಾಗಿ ಈ ಕಥೆಯನ್ನು ನಿರೂಪಿಸುವುದು ಅವನ ಗುರಿ. ಇದಕ್ಕೆ ಕಾರಣವೂ ಇದೆ. ಅವನೇ ಹೇಳುವಂತೆ "ಈ ಕಥೆಯೊಳ್ ಪೋಲಿಪೊಡೆನಗೞ್ತಿಯಾದುದು ಗುಣಾರ್ಣವ ಭೂಭುಜನಂ ಕಿರೀಟಿಯೊಳ್". ತನ್ನ ರಾಜನಾದ,ತನಗೆ ಅಶ್ರಯವನ್ನಿತ್ತ ಅರಿಕೇಸರಿಯನ್ನು ಅರ್ಜುನನ ಜೊತೆ ಸಮೀಕರಿಸಿ ಬರೆಯುತ್ತಾನೆ. ಹಾಗಾಗಿ ಅವನ ಕಥೆಯ ನಾಯಕ ಅರ್ಜುನ. (ವ್ಯಾಸರಿಗೆ ಕಥೆಯೇ ನಾಯಕ ಪಾತ್ರವಾಯಿತು. ಕುಮಾರವ್ಯಾಸನಿಗೆ ಕೃಷ್ಣ ನಾಯಕನಾದ.)<br />
****<br />
ಸಂಧಿ ವಿಫಲವಾದ ಅನಂತರ ಹೊರಟ ಕೃಷ್ಣ ಕರ್ಣನನ್ನು ರಥಕ್ಕೇರಿಸಿಕೊಂಡು ಸ್ವಲ್ಪ ದೂರ ಹೋದ ಅನಂತರ ರಥವನ್ನು ನಿಲ್ಲಿಸಿ ಕರ್ಣನನ್ನುದ್ದೇಶಿಸಿ ಹೇಳುತ್ತಾನೆ:<br />
"ಭೇದಿಸಲೆಂದೆ ದಲ್ ನುಡಿದರೆನ್ನದಿರೊಯ್ಯನೆ ಕೇಳ ಕರ್ಣ ನಿ |<br />
ನ್ನಾದಿಯೊಳಬ್ಬೆ ಕೊಂತಿ ನಿನಗಮ್ಮನಹರ್ಪತಿ ಪಾಂಡುನಂದನರ್ ||<br />
ಸೋದರರೆಯ್ದೆ ಮೈದುನನೆನಾಂ ಪೆಱತೇಂ ಪಡೆಮಾತೋ ನಿನ್ನದೀ |<br />
ಮೇದಿನಿ ಪಟ್ಟಮುಂ ನಿನತೆ ನೀನಿರೆ ಮತ್ತೆ ಪೆಱರ್ ನರೇಂದ್ರರೇ || (ನವಮಾಶ್ವಾಸ-೬೪)<br />
ಕರ್ಣನಿಗೆ ಜನ್ಮವೃತ್ತಾಂತ ತಿಳಿಸುವ ರೀತಿ, ಪ್ರಲೋಭನೆ ಒಡ್ಡುವ ರೀತಿ ಕುಮಾರವ್ಯಾಸ ಮತ್ತು ಪಂಪರಲ್ಲಿ ಸರಿಸುಮಾರು ಒಂದೇ ರೀತಿಯಿದೆ. ಇಲ್ಲಿಂದ ಮುಂದೆ ಪಂಪ ಒಂದು ಸಣ್ಣ ಬದಲಾವಣೆ ಮಾಡಿದ್ದಾನೆ.<br />
"ನಿನ್ನುತ್ಪತ್ತಿಯನಿಂತೆಂ<br />
ದೆನ್ನರುಮಣಮಱಿಯಱಿವೆನಾಂ ಸಹದೇವಂ ||<br />
ಪನ್ನಗಕೇತು ದಿನೇಶಂ |<br />
ನಿನ್ನಂಬಿಕೆ ಕುಂತಿಯಿಂತಿವರ್ ನೆಱೆ ಬಲ್ಲರ್ || (ಆ-೯, ೬೬)<br />
(ಪದವಿಭಾಗ:ನಿನ್ನ ಉತ್ಪತ್ತಿಯನ್ ಇಂತೆಂದು ಎನ್ನರುಂ ಅಣಂ ಅರಿಯರ್ ಅರಿವೆನ್ ಆಂ ಸಹದೇವಂ ಪನ್ನಗಕೇತು ದಿನೇಶಂ ನಿನ್ನ ಅಂಬಿಕೆ ಕುಂತಿ ಇವರ್ ನೆರೆ ಬಲ್ಲರ್. ಸರಳಾನುವಾದ: ನಿನ್ನ ಹುಟ್ಟು ಈ ರೀತಿ ಎಂಬುದು ಯಾರಿಗೂ ತಿಳಿದಿಲ್ಲ. ನಾನು,ಸಹದೇವ, ದುರ್ಯೊಧನ, ಸೂರ್ಯ ಮತ್ತು ಕುಂತಿ-ಇಷ್ಟು ಜನರಿಗೆ ಮಾತ್ರ ಗೊತ್ತು.)<br />
ದುರ್ಯೋಧನ ಮತ್ತು ಸಹದೇವ ಇವರಿಗೂ ಗೊತ್ತಿತ್ತು ಎಂದು ಕೃಷ್ಣ ಹೇಳಿದ ಅಂಶವನ್ನು ಗಮನಿಸಬೇಕು.<br />
ದುರ್ಯೋಧನನಿಗೆ ಇದು ಹೇಗೆ ತಿಳಿಯಿತು ಎಂಬುದನ್ನು ಕೃಷ್ಣನ ಮೂಲಕ ಪಂಪ ಹೇಳಿಸುವದನ್ನು ನೋಡಿ.<br />
ಒಮ್ಮೆ ದುರ್ಯೊಧನ ಕರ್ಣ ಇಬ್ಬರೂ ಗಂಗಾನದಿತೀರದಲ್ಲಿ ಬೇಟೆಯಾಡಿದ ಅನಂತರ ಸಮೀಪದ ಸತ್ಯಂತಪರೆಂಬ ಮುನಿಯ ಆಶ್ರಮಕ್ಕೆ ಹೋಗುತ್ತಾರೆ. ಇಬ್ಬರೂ ಮುನಿಗಳಿಗೆ ನಮಸ್ಕರಿಸುತ್ತಾರೆ. ಇಬ್ಬರಿಗೂ ಹರಸಿದ ಮುನಿಗಳು ಕೂರಲು ಆಸನವನ್ನ ಮೊದಲು ಕರ್ಣನಿಗೆ ನೀಡುತ್ತಾರೆ. ಇದು ದುರ್ಯೋಧನನಿಗೆ ಆಶ್ಚರ್ಯವನ್ನುಂಟುಮಾಡುತ್ತದೆ. ಅವನು ಕರ್ಣನನ್ನು ಮೊದಲು ಹೊರಗೆ ಕಳುಹಿಸಿ "ಆನಿರೆ ನೀಮಿದೇಕೆ ದಯೆಗೆಯ್ದಿರೋ ಮೀಂಗುಲಿಗಂಗೆ" ಎಂದು ಮುನಿವರ್ಯರನ್ನು ಕೇಳುತ್ತಾನೆ.( ಮೀಂಗುಲಿಗಂಗೆ= ಬೆಸ್ತರ ಕುಲದವನು ಎಂಬ ಪ್ರಯೋಗವನ್ನು ಗಮನಿಸಿ. ದುರ್ಯೋಧನ ಮೀಂಗುಲಿಗ ಎಂದು ತನ್ನನ್ನು ಸಂಬೋಧಿಸಿದ ಎಂಬುದು ಕರ್ಣನಿಗೆ ತಿಳಿದರೆ ಕೌರವನ ಬಗ್ಗೆ ಅವನಿಗೆ ಸಂಶಯ ಬರಬಹುದು.ತನ್ನನ್ನು ಕೌರವ ಈ ರೀತಿ ಭಾವಿಸಿದ್ದಾನೆ ಎಂದು ತಿಳಿದರೆ ಕರ್ಣನ ಮನಸ್ಸು ಖಿನ್ನವಾಗಲು ಬಲವಾದ ಮಾನಸಿಕ ಕಾರಣವೊಂದು ಸಿಕ್ಕಂತಾಗುತ್ತದೆ.) ಮುನಿಗಳಿಂದ ಈತ ಪಾಂಡವರ ಹಿರಿಯ ಎಂಬುದನ್ನು ತಿಳಿದು ಕೌರವ ಆಡುವ ಮಾತು ಕೇಳಿ :"ಪಾಟಿಸುವೆನೊಯ್ಯನೆ ಮುಳ್ಳೊಳ್ಳೆ ಮುಳ್ಳನ್"( ಮುಳ್ಳನ್ನು ಮುಳ್ಳಿಂದ ಕೀಳುತ್ತೇನೆ.)ಕೃಷ್ಣ ಈ ಮಾತನ್ನು ಹೇಳಲು ಕಾರಣ ಕರ್ಣನಿಗೆ ಪಾಂಡವರ ಬಗ್ಗೆ ಮೃದು ಧೋರಣೆ ಬಂದರೆ ಸಾಲದು,ಕೌರವನ ಬಗ್ಗೆ ಅನುಮಾನ ಬರಬೇಕು. ದುರ್ಯೋಧನ ಈ ರೀತಿಯ ಮಾತನ್ನು ಅಂದ ಎಂದು ಕೃಷ್ಣ ತಿಳಿಸಿದಾಗ ಕರ್ಣನ ಮೇಲೆ ಆಗುವ ಪರಿಣಾಮ ಗ್ರಹಿಸಿ. ಕೌರವನಿಗೆ ಪಾಂಡವರು ಮುಳ್ಳು.ಗೊತ್ತಿರುವ ವಿಚಾರ. ತಾನೂ ಕೂಡ ಮುಳ್ಳು. ಇಲ್ಲಿಯವರೆಗೂ ಇದು ತಿಳಿದಿರಲಿಲ್ಲ. ಆತನ ಆಪ್ತತೆ ಸೋಗು. ಅಪ್ತತೆ ಬರಿಯ ನಟನೆ.ನಿಜವಾಗಿ ಇರುವುದು ಈ ದುರುದ್ದೇಶ. ಹೀಗೆ ಕರ್ಣನಿಗೆ ಅನಿಸಿದ ಕ್ಷಣವೇ ತನ್ನನ್ನು ಈ ರೀತಿ ಬಳಸಿಕೊಳ್ಳಲು ಹೊಂಚುತ್ತಿರುವ ಕೌರವನ ಪರವಾಗಿ ಹೋರಾಡುವ ಬದಲು ಸಾಯುವುದು ಸೂಕ್ತ, ತನ್ನ ಸಾವೇ ಎಲ್ಲದರ ಪರಿಹಾರ ಅನಿಸಬಹುದು. ಕೃಷ್ಣನಿಗೆ ಬೇಕಾದದ್ದು ಅದೇ. ಲೌಕಿಕವಾಗಿ ಪಾಂಡವರನ್ನು ಒಪ್ಪದೆ,ಆದರೆ ಮಾನಸಿಕವಾಗಿ ಒಪ್ಪಿ, ಜೊತೆಜೊತೆಗೇ ಲೌಕಿಕವಾಗಿ ಕೌರವನನ್ನು ತ್ಯಜಿಸದೆ, ಅದರೆ ಮಾನಸಿಕವಾಗಿ ತ್ಯಜಿಸಲು ಹಿನ್ನೆಲೆಯಾಗಿ ಬೇಕಾದ ಬಲವತ್ತರವಾದ ನೆಲೆಯೊಂದನ್ನು ಈ ಚಿತ್ರಣದ ಮೂಲಕ ಪಂಪ ಕಟ್ಟುತ್ತಾನೆ.<br />
***<br />
ದುರ್ಯೊಧನನಿಗೆ ಗೊತ್ತಿದೆ ಎಂಬ ಅಂಶವನ್ನುಕೃಷ್ಣನ ಮೂಲಕ ಪಂಪ ಹೇಳಿಸಿದ್ದಕ್ಕೆ ಬಹುಷಃ ಕಾರಣ: ೧) ಕುಲವನ್ನ ಕೃಷ್ಣ ತಿಳಿಸಿದರೂ ಅದನ್ನು ಅಷ್ಟು ಸುಲಭವಾಗಿ ನಂಬಿ, ಕೌರವನಿಗೆ ಮೋಸ ಮಾಡುವಷ್ಟು ಲಘುವ್ಯಕ್ತಿತ್ವ ಕರ್ಣನದಲ್ಲ. ೨) ಹಾಗೆ ನಂಬಿದರೂ ಕೌರವನ ಬಗ್ಗೆ ಅವನ ಗೌರವ,ವಿಶ್ವಾಸ ಬದಲಾಗುವುದಿಲ್ಲ.<br />
ಆದರೆ ಕಥೆಯ ಪ್ರಕಾರ ಕರ್ಣ ರಣದಲ್ಲಿ ತನ್ನೊಡಲನ್ನು ಸಮರ್ಪಿಸುವ ನಿಲುವು ತೆಗೆದುಕೊಳ್ಳುತ್ತಾನೆ. ಪಾಂಡವರು ತಮ್ಮಂದಿರು ಎಂದು ತಿಳಿದ ಮಾತ್ರಕ್ಕೆ ತನ್ನನ್ನು ಸಾಕಿದ,ಸಲಹಿದ,ಘನತೆ ಗೌರವ ನೀಡಿದ, ಸಮಾನನಂತೆ ತನ್ನನ್ನು ಕಂಡ ಕೌರವನ ಪರವಾಗಿ ಪ್ರಾಮಾಣಿಕವಾಗಿ ಹೋರಾಡುವ ನಿರ್ಧಾರವನ್ನು ತ್ಯಜಿಸಿ "ಎನ್ನೊಡಲನಾಂ ತವಿಪೆಂ ರಣರಂಗ ಭೂಮಿಯೊಳ್" ಎಂದು ತೀರ್ಮಾನಿಸಲು ಪಾಂಡವರು ತಮ್ಮಂದಿರು ಎಂಬೊಂದೇ ಕಾರಣ ತುಂಬಾ ದುರ್ಬಲವಾಗುತ್ತದೆ ಮತ್ತು ಕರ್ಣನಂತಹ ವ್ಯಕ್ತಿತ್ವವುಳ್ಳವನಿಗೆ ಇದು ಶೋಭೆ ತರುವ ಸಂಗತಿಯಲ್ಲ ಎಂದು ಪಂಪನಿಗೆ ಅನ್ನಿಸಿರಬೇಕು.ಕರ್ಣ ಅಂತಹ ತೀರ್ಮಾನಕ್ಕೆ ಬರಲು ಮಾನಸಿಕವಾದ ಬಲವಾದ ಬೇರೆ ಯಾವುದಾದರೂ ಕಾರಣ ಇರಬೇಕು ಎಂದು ಪಂಪನಿಗೆ ಅನ್ನಿಸಿರಬೇಕು.(ಕೃಷ್ಣನಿಗೂ ಕೂಡ).<br />
ದುರುದ್ದೇಶದಿಂದ ದುರ್ಯೊಧನ, ತಾನು ಪಾಂಡವರ ಹಿರಿಯ ಎಂದು ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿದ,ತನ್ನನ್ನು ಸಾಕಿ,ಸಲಹಿ ಅತ್ಯಂತ ಆಪ್ತನಂತೆ ಕಂಡ ಎಂಬ ಅನುಮಾನ ಕರ್ಣನಿಗೆ ಬಂದರೆ ಅದು ಸಹಜ. ಅವನ ಆಪ್ತತೆ ಸಹಜವಲ್ಲ,ಗುರಿಯೊಂದರ ಈಡೇರಿಕೆಗಾಗಿ ನಟಿಸಿದ ಆಪ್ತತೆ ಎಂದು ಕರ್ಣನಿಗೆ ಅನಿಸಿದರೆ ಮಾತ್ರ ಆತ ಪಾಂಡವರನ್ನು ಒಪ್ಪದೆ ಕೌರವನನ್ನೂ ನಂಬದೆ "ಎನ್ನೊಡಲನಾಂ ತವಿಪೆಂ" ಎಂದು ಹೇಳಲು ಸಾಧ್ಯ. ಮುಂದೆ ಆತ ಕುಂತಿಗೆ ಮಾತು ಕೊಡುವುದು ಅಸಹಜ ಅನಿಸುವುದಿಲ್ಲ, ಇದರದೇ ಮುಂದಿನ ಭಾಗವಾಗುತ್ತದೆ.<br />
ಪಂಪ ಈ ಸನ್ನಿವೇಶವನ್ನು ನಿರ್ವಹಿಸಿದ ರೀತಿ ಪಾತ್ರಗಳ ಮಾನಸಿಕ ಸ್ಥಿತಿ,ತುಮುಲಗಳನ್ನು ಆತ ಗ್ರಹಿಸುವ ಕಲಾವಂತಿಕೆಗೆ ಸಾಕ್ಷಿಯಾಗುತ್ತದೆ.ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com11tag:blogger.com,1999:blog-5355400587468753863.post-24089024212795137792010-10-30T10:14:00.000+05:302010-10-30T10:14:29.753+05:30ವಂಶವನರುಹಿ ಕೊಂದನು...<br />
ತನ್ನ ಹುಟ್ಟಿನ ಮಾಹಿತಿಯನ್ನು ಕೃಷ್ಣನಿಂದ ತಿಳಿದ ಸಂದರ್ಭವನ್ನು ಕುಮಾರವ್ಯಾಸ ಚಿತ್ರಿಸಿದ ರೀತಿಯನ್ನು ವಿವರಿಸಿ,ವಿಶ್ಲೇಷಿಸುವುದು ಈ ಲೇಖನದ ಉದ್ದೇಶ.<br />
ಸಂಧಾನದ ಪ್ರಯತ್ನ ವಿಫಲವಾದ ಅನಂತರ,ಕೌರವನ ಸಭೆಯಿಂದ ಹೊರಟ ಕೃಷ್ಣ ಕರ್ಣನನ್ನು ಕರೆದು ರಥವೇರಿಸಿಕೊಳ್ಳುತ್ತಾನೆ."ಮೈದುನತನದ ಸರಸವನೆಸಗಿ ರಥದೊಳು ದನುಜರಿಪು ಕುಳ್ಳಿರಿಸಿದನು ಪೀಠದಲಿ".ಕರ್ಣನಿಗೆ ಭಯ, ವಿಸ್ಮಯ, ಗಾಬರಿ. " ಎನಗೆ ನಿಮ್ಮಡಿಗಳಲಿ ಸಮಸೇವನೆಯೇ ದೇವ ಮುರಾರಿಯಂಜುವೆ" " ವಂಶವಿಹೀನನು ನಿಮ್ಮಡಿಗಳೊಡನೆ ಸಮಾನಿಸುವರೇ " ಎಂದಾಗ ಕೃಷ್ಣ ಅವನಿಗೆ ಅವನ ಜನ್ಮದ ವಿವರಣೆ ನೀಡುತ್ತಾನೆ."ಲಲನೆ ಪಡೆದೀಯೈದು ಮಂತ್ರಗಳಲಿ ಮೊದಲಿಗ ನೀನು". ನೀನು ಎಲ್ಲರಿಗೂ ಹಿರಿಯ.ನೀನೊಪ್ಪಿದರೆ ಈ ಯುದ್ಧವನ್ನು ತಪ್ಪಿಸಬಹುದು."ಪಾಂಡವರಲೈವರ ಮೊದಲಿಗನು ನೀನಿರಲು ಧರಣಿಯ ಕದನವಿತ್ತಂಡಕ್ಕೆ ಕಾಮಿತವಲ್ಲ ಭಾವಿಸಲು". ಅಷ್ಟೇ ಅಲ್ಲ ಅವನಿಗೆ ಪ್ರಲೋಭನೆ ಒಡ್ಡುತ್ತಾನೆ. "ನಿನಗೆ ಕಿಂಕರವೆರಡು ಸಂತತಿ" "ಎಡದ ಮೈಯಲಿ ಕೌರವೇಂದ್ರರ ಗಡಣ ಬಲದಲಿ ಪಾಂಡುತನಯರ ಗಡಣವಿದಿರಲಿ ಮಾದ್ರ ಮಾಗಧ ಯಾದವಾದಿಗಳು ನಡುವೆ ನೀನೋಲಗದೊಳುಪ್ಪುವ ಕಡು ವಿಲಾಸವ ಬಿಸುಟು ಕುರುಪತಿ ನುಡಿಸೆ ಜೀಯ ಹಸಾದವೆಂಬುದು ಕಷ್ಟ ನಿನಗೆಂದ" ತಾನು ಕುಲವಿಹೀನ ಎಂಬ ಕೀಳರಿಮೆಯಿಂದ ಬಳಲುತ್ತಿದ್ದ ಕರ್ಣ ಈ ಆಹ್ವಾನವನ್ನು ಒಪ್ಪಿದ್ದರೆ ಆತನಿಗೆ ಕುಲವೂ ಸಿಗುತ್ತಿತ್ತು, ಅಧಿಕಾರವೂ ಸಿಗುತ್ತಿತ್ತು. ಆದರೆ ಹಾಗಾಗುವುದಿಲ್ಲ. ಕರ್ಣನ ಪ್ರತಿಕ್ರಿಯೆ ಗಮನಿಸಿ.ಕರ್ಣನ ಕಂಠ ಬಿಗಿಯಿತು. ಕಣ್ಣೀರು ಉಕ್ಕಿತು."ಕೊರಳಸೆರೆ ಹಿಗ್ಗಿದವು ದೃಗುಜಲ ಉರವಣಿಸಿ ಕಡು ನೊಂದನಕಟಾ ಕುರುಪತಿಗೆ ಕೇಡಾದುದೆಂದನು ಮನದೊಳಗೆ" ಸತ್ಕುಲಜಾತನಾದ ತನಗೆ ಇಲ್ಲಿಯವರೆಗೂ ಬಂದ ಕಷ್ಟಗಳ ನೆನದು ದುಃಖವಾದದ್ದಲ್ಲ,...ಅಯ್ಯೋ.! ಕುರುಪತಿಗೆ ಕೇಡಾಯಿತಲ್ಲ! ಎಂದು.ಅಧಿಕಾರ ಸಿಗುತ್ತದೆ ಎಂಬ ಸಂತೋಷವಿಲ್ಲ. ಗೆಳೆಯನಿಗೆ ಅನ್ಯಾಯವಾಯಿತಲ್ಲ ಎಂಬುದು ಅವನ ಮೊದಲ ಪ್ರತಿಕ್ರಿಯೆ. ಕರ್ಣನಿಗೆ ಅವನ ವಂಶ ತಿಳಿದರೆ ಕೌರವನಿಗೆ ಹೇಗೆ ಅನ್ಯಾಯವಾಗುತ್ತದೆ? "ಕಾದಿ ಗೆಲುವೊಡೆ ಪಾಂಡು ಸುತರು ಸಹೋದರರು ಕೊಲಲಿಲ್ಲ ಕೊಲ್ಲದೆ ಕಾದೆನಾದೊಡೆ ಕೌರವಂಗವನಿಯಲಿ ಹೊಗಲಿಲ್ಲ." ವಂಶ ತಿಳಿದ ಅನಂತರ, ಸಹೋದರರಾದ ಪಾಂಡವರನ್ನು ಕೊಲ್ಲುವ ಹಾಗಿಲ್ಲ. ಕೊಲ್ಲದಿದ್ದರೆ ಕೌರವನಿಗೆ ಅವನಿ ಇಲ್ಲ. ಇಲ್ಲಿ "ಕೊಲ್ಲದೆ ಕಾದೆನಾದೊಡೆ" ಎಂಬ ಪ್ರಯೋಗ ಗಮನಿಸಬೇಕು.ಕಾದು ಎಂಬ ಪದಕ್ಕೆ ಕಾಳಗ ಮಾಡು ಎಂಬ ಅರ್ಥವಲ್ಲದೆ ಕಾಪಾಡು ಎಂಬ ಅರ್ಥವೂ ಇದೆ. ಆದ್ದರಿಂದ ಈ ಹೇಳಿಕೆಯನ್ನು ಪಾಂಡವರನ್ನು ಕೊಲ್ಲದೆ ಯುದ್ಧ ಮಾಡಿದರೆ ಎಂಬಂತೆಯೂ, ಹಾಗೆಯೇ ಪಾಂಡವರನ್ನು ಕೊಲ್ಲದೆ ರಕ್ಷಿಸಿದರೆ ಎಂಬಂತೆಯೂ ಅರ್ಥ ಮಾಡಬಹುದು. ಯಾವರೀತಿಯಲ್ಲಿ ಕರ್ಣ ವರ್ತಿಸಿದರೂ "ಕೌರವಂಗವನಿಯಲಿ ಹೊಗಲಿಲ್ಲ." ಕೌರವನಿಗೆ ಕೇಡಾಗುತ್ತದೆ ಎಂದು ಕರ್ಣನಿಗೆ ಅನ್ನಿಸಲು ಇದು ಕಾರಣ.<br />
ಕರ್ಣನ ಮುಂದಿನ ಪ್ರತಿಕ್ರಿಯೆ: "ತನ್ನ ವಂಶವನರುಹಿ ಕೊಂದನು". ವಂಶ ತಿಳಿಯಿತು ಎಂಬ ಸಂಭ್ರಮವಿಲ್ಲ, ಬದಲಿಗೆ ಆದದ್ದು ಚಿಂತೆ. ವಂಶವನ್ನರುಹಿ ಯಾರನ್ನು ಕೊಂದ? ವಂಶ ತಿಳಿದರೆ ಕರ್ಣ ಯಾಕೆ ಸಾಯಬೇಕು? ಯಾಕೆಂದರೆ ಇನ್ನು ಮುಂದೆ ಕರ್ಣನಿಗೆ ಅರ್ಜುನ ವೈರಿಯಲ್ಲ,ತಮ್ಮ. "ವಿಜಯನಗಡುಬಾಣಕೆ ಬಲಿಯನಿಕ್ಕುವ ಹದನ ಮಾಣಿಸಿದೆ". ತಮ್ಮ ಎಂದು ತಿಳಿದೂ ಕರ್ಣ ಹೇಗೆ ಕೊಲ್ಲಬಲ್ಲ? ಹಾಗಂತ ತಾನು ಅರ್ಜುನನನ್ನು ಕೊಲ್ಲದಿದ್ದರೆ ಅರ್ಜುನ ಅಂತೂ ತನ್ನನ್ನು ಬಿಡುವವನಲ್ಲ. ಹಾಗಾಗಿ ಸಾವು ನಿಶ್ಚಿತ. ಕರ್ಣನ ಮಟ್ಟಿಗೆ ತನ್ನ ಹುಟ್ಟಿನ ಬಗೆಗಿನ ಅರಿವು ಸಾವಿನ ಕಾರಣವಾಗುತ್ತಿದೆ ಎಂಬ ಧ್ವನಿಯನ್ನು ತುಂಬಾ ಸರಳವಾದ "ವಂಶವನರುಹಿ ಕೊಂದನು" ಎಂಬ ಹೇಳಿಕೆಯ ಮೂಲಕ ಕುಮಾರವ್ಯಾಸ ಸೂಚಿಸುತ್ತಾನೆ.<br />
(ಕೌರವ ಮತ್ತು ಕರ್ಣ ಇವರದು ಬಹಳ ಆಪ್ತವಾದ ಸ್ನೇಹ ಎಂಬುದು ನಮಗೆ ಗೊತ್ತು. ಸ್ನೇಹದ ತೀವ್ರತೆಯಿಂದಾಗಿಯೇ ಕರ್ಣನ ಮೊದಲ ಪ್ರತಿಕ್ರಿಯೆ " ಕುರುಪತಿಗೆ ಕೇಡಾದುದು".<br />
ಇವರಿಬ್ಬರ ಸ್ನೇಹದ ಬಗ್ಗೆ ಬೇರೆಯವರಿಗೂ ಯಾವ ಭಾವನೆಯಿತ್ತು ಎಂಬುದರ ಸೊಗಸಾದ ಚಿತ್ರಣ ಇಲ್ಲಿದೆ; ಕರ್ಣನ ಮರಣಾನಂತರ ಕೃಪ ಹೇಳುವ ಮಾತು:<br />
"ಅರಸ ಕರ್ಣಚ್ಛೇದವೇ ಜಯ<br />
ಸಿರಿಯ ನಾಸಾಚ್ಛೇದವಿನ್ನರ<br />
ವರಿಸದಿರು ಹೊಯ್ದಾಡಿ ಹೊಗಳಿಸು ಬಾಹು ವಿಕ್ರಮವ ||<br />
ಗುರುನದೀಸುತರಳಿದ ಬಳಿಕೀ<br />
ಧರೆಗೆ ನಿನಗಸ್ವಾಮ್ಯ ಕರ್ಣನ<br />
ಮರಣದಲಿ ನೀನರ್ಧದೇಹನು ಭೂಪ ಕೇಳೆಂದ || ---ಶಲ್ಯಪರ್ವ, ೧-೧೬.)<br />
ಯಾರೇನು ಹೇಳಿದರೂ, ತಾನು ಯಾವ ವಂಶಜನಾದರೂ ಅರ್ಜುನನನ್ನು ಕೊಲ್ಲುತ್ತೇನೆ ಎಂದು ಕರ್ಣ ತೀರ್ಮಾನಿಸದೆ ತನ್ನ ಸಾವನ್ನು ಯಾಕೆ ನಿಶ್ಚಯಿಸಿದ? ಆತ ಕೃಷ್ಣನಿಗೆ ಹೇಳುವ ಮಾತನ್ನು ಗಮನಿಸಿ: "ಹಲವು ಮಾತೇನಖಿಳ ಜನಕೆನ್ನುಳಿವು ಸೊಗಸದು". ಕೌರವನನ್ನು ಹೊರತುಪಡಿಸಿ ಉಳಿದೆಲ್ಲರಿಂದಲೂ ಸದಾ ಅವಮಾನವನ್ನು ಅನುಭವಿಸುತ್ತಿದ್ದ,ಭರ್ತ್ಸನವನ್ನೇ ಕೇಳುತ್ತಿದ್ದ ಕರ್ಣನಿಗೆ ಅನ್ನಿಸಿತ್ತು: ಯಾರಿಗೂ ತನ್ನ ಬದುಕು ಇಷ್ಟವಿಲ್ಲ. ಹಾಗಾಗಿ ತನಗೂ ಬದುಕು ಬೇಡ. (ಉಳಿವು= ಬದುಕು, ಜೀವನ). ಕೃಷ್ಣ ವಂಶವನ್ನು ತಿಳಿಸಿದಾಗ ತಾನು ಬದುಕುವುದು ಕೃಷ್ಣನಿಗೂ ಇಷ್ಟವಿಲ್ಲ ಎಂದು ಕರ್ಣನಿಗೆ ಅನಿಸಿರಬೇಕು. ತನ್ನ ಸಾವು ಕೃಷ್ಣನ ಗುರಿಯಾಗಿರುವುದರಿಂದಲೇ "ವಂಶವನರುಹಿ ಕೊಂದನು". ಎಂದು ಕರ್ಣನಿಗೆ ಅನ್ನಿಸುತ್ತದೆ. ತನ್ನ ಸಾವನ್ನು ನಿಶ್ಚಯಿಸಿಕೊಂಡ ಬಳಿಕ ಕರ್ಣ ಕೃಷ್ಣನಿಗೆ ಭರವಸೆ ಕೊಡುತ್ತಾನೆ: "ಪತಿಯವಸರಕ್ಕೆ ಶರೀರವನು ನೂಕುವೆನು ನಿನ್ನಯ ವೀರರೈವರ ನೋಯಿಸೆನು "(ಕಾದಿ ಕೊಲುವೊಡೆ) ಪಾಂಡುಸುತರು ಸಹೋದರರು ಎಂಬ ಭಾವನೆ ,ತನ್ನ ಸಾವನ್ನು ನಿಶ್ಚಯಿಸಿದ ಅನಂತರ ಬದಲಾಗುತ್ತದೆ. "ನಿನ್ನಯ ವೀರರೈವರು" ಎನ್ನುತ್ತಾನೆ. ಆ ಐವರ ಮಾತ್ರ ನಿನ್ನವರು, ನಾನು ಅದೇ ವಂಶಜನಾದರೂ ನಿನ್ನವನಲ್ಲ ಎಂಬ ಧ್ವನಿಯನ್ನೂ ಗಮನಿಸಬಹುದು.ಕೌರವ ಸತ್ತು ತಾನುಳಿದರೂ ತನಗೆ ಆಪ್ತರಿಲ್ಲ. ಯಾಕೆಂದರೆ "ಕೌರವೇಶ್ವರನೊಲುಮೆ ತಪ್ಪಿಸಿ ಭುವನದೊಳಗೆನಗಾಪ್ತ ಜನವಿಲ್ಲ." ಪಾಂಡವರು ತಮ್ಮಂದಿರು ಎಂದಾದರೂ ಕೌರವನಷ್ಟು ಆಪ್ತರಾಗಲು ಸಾಧ್ಯವಿಲ್ಲ. ಹುಟ್ಟಿನ ಸಂಬಂಧಕ್ಕಿಂತ ಒಡನಾಟದ ಸಂಬಂಧ ಹೆಚ್ಚು ಎಂಬುದನ್ನು ಕರ್ಣ ನಂಬುತ್ತಾನೆ. ಅತ್ತ ಪಾಂಡವರಿಗೂ ಆಪ್ತನಾಗದೆ ಇತ್ತ ಕೌರವನಿಗೂ ನ್ಯಾಯ ಕೊಡದೆ ಬದುಕುವ ಬದಲು ಸಾಯುವುದೇ ಲೇಸು ಎಂದು ಕರ್ಣ ತೀರ್ಮಾನಿಸುತ್ತಾನೆ."ಪತಿಯವಸರಕ್ಕೆ ಶರೀರವನು ನೂಕುವೆನು"ಎಂದು ತೀರ್ಮಾನಿಸುತ್ತಾನೆ.<br />
***ಕುಮಾರವ್ಯಾಸ ಭಾರತವನ್ನು ಮತ್ತೆ ಮತ್ತೆ ಓದುತ್ತೇನೆ. ಆಗೆಲ್ಲ ನನಗೆ ಎದುರಾಗುವ ಅನೇಕ ಪ್ರಶ್ನೆಗಳಿವೆ. ಯಾಕೆ ಕೃಷ್ಣ ಕರ್ಣನಿಗೆ ಅವನ ಕುಲವನ್ನು ತಿಳಿಸಿದ? ಅದೂ ಸಂಧಿಯ ಪ್ರಯತ್ನ ವಿಫಲವಾದ ಅನಂತರ?<br />
ಕರ್ಣ ಅರ್ಜುನನನ್ನು ಕೊಲ್ಲಬಹುದು ಎಂಬ ಅನುಮಾನವಿತ್ತೇ? ಭೀಷ್ಮ,ದ್ರೋಣ ಇವರು ಕೌರವನ ಪಕ್ಷವಾದರೂ ಅವರ ಮನಸ್ಸು ಪಾಂಡವರ ಕಡೆಗೆ ಎಂಬುದು ತಿಳಿದಿತ್ತು. ಹಾಗಾಗಿ ಅವರನ್ನು ಗೆಲ್ಲುವ ಬಗ್ಗೆ ಅನುಮಾನವಿಲ್ಲ. ಆದರೆ ಕರ್ಣ ಹಾಗಲ್ಲ. ಅವನು ಪಕ್ಕಾ ಪಾಂಡವವಿರೋಧಿ. ಅವನನ್ನು ಈ ತಂತ್ರದಿಂದ ಮಾತ್ರ ಮಣಿಸಬಹುದು ಎಂದು ತರ್ಕಿಸಿದನೇ? ಅಥವಾ ಕೃಷ್ಣನಿಗೆ ಅರ್ಜುನನ ಶೌರ್ಯದ ಬಗ್ಗೆ ಅನುಮಾನವಿತ್ತೇ?(ಮಹಾಭಾರತದ ಯುದ್ಧದಲ್ಲಿ ಭೀಷ್ಮ,ದ್ರೋಣ, ಕರ್ಣ, ಜಯದ್ರಥ ಎಲ್ಲರನ್ನೂ ಅರ್ಜುನ ಗೆದ್ದದ್ದು ಕೃಷ್ಣನ ತಂತ್ರಗಾರಿಕೆಯಿಂದ ಎಂಬ ಅಂಶವನ್ನೂ ಗಮನಿಸಬಹುದು.) ಸಂಧಿಪ್ರಯತ್ನಕ್ಕಿಂತ ಮೊದಲೇ ಕರ್ಣನಿಗೆ ಅವನ ಕುಲ ತಿಳಿಸಿದರೆ, ಅಕಸ್ಮಾತ್ ಕರ್ಣ ಕೌರವನಿಗೆ ಪಾಂಡವರಿಗೆ ಐದು ಗ್ರಾಮಗಳನ್ನು ಕೊಟ್ಟುಬಿಡು ಎಂದು ಹೇಳಿದರೆ..ಕೌರವ ಹಾಗೇ ಮಾಡಿದರೆ....ಈ ಅನುಮಾನವೂ ಕೃಷ್ಣನಿಗೆ ಇತ್ತೇ? ಹಾಗಾಗಿ ಸಂಧಿಯ ಅನಂತರ, ಇನ್ನು ಯುದ್ಧ ತಪ್ಪಲಾರದು ಎಂದು ಖಾತ್ರಿಯಾದ ಅನಂತರವೇ ವಂಶ ತಿಳಿಸಿದನೇ?ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com6tag:blogger.com,1999:blog-5355400587468753863.post-74201127906811177172010-10-23T17:39:00.000+05:302010-10-23T17:39:43.784+05:30ಕಾಲ ಪರಿಮಾಣ.ಕಾಲ ಅಭೌತಿಕವಾದದ್ದು. ಅದು ಅನುಭವಾತೀತ. ಕಾಲದಲ್ಲಿ ನಾವು ಬೇರೆಲ್ಲವನ್ನೂ ಅನುಭವಿಸಬಹುದೇ ಹೊರತು ಕಾಲವನ್ನೇ ನೇರವಾಗಿ ಅನುಭವಿಸಲು ಸಾಧ್ಯವಿಲ್ಲ.ಇಡೀ ಜಗತ್ತಿನ ಅಸ್ತಿತ್ವ ಕಾಲ ಮತ್ತು ದೇಶದ(Time and Space) ನೆಯ್ಗೆಯಲ್ಲಿದೆ. ದೇಶವನ್ನು ಉದ್ದ, ಅಗಲ, ಎತ್ತರ ಎಂಬ ಮೂರು ಆಯಾಮಗಳ ಮೂಲಕ ಗ್ರಹಿಸಿ ಅಳೆಯಬಹುದಾದಂತೆ, ಏಕಮುಖೀ ಚಲನೆಯುಳ್ಳ, ನಾಲ್ಕನೆಯ ಆಯಾಮವಾದ ಕಾಲವನ್ನು ನೇರವಾಗಿ ಅಳೆಯಲಾರೆವು. ನಡೆಯುತ್ತಿರುವ ಒಂದು ಘಟನೆಯನ್ನು, ಅಥವಾ ಎರಡು ಘಟನೆಗಳ ನಡುವಿನ ಅಂತರವನ್ನು ಗ್ರಹಿಸಲು ಕಾಲವನ್ನು ಬಳಸಬಹುದೇ ಹೊರತು ನೇರವಾಗಿ ಕಾಲವನ್ನು-ದೇಶವನ್ನು ಅಳೆಯುವಂತೆ- ಅಳೆಯಲು ಸಾಧ್ಯವಿಲ್ಲ. ದೇಶಕ್ಕಿರುವಂತೆ ಕಾಲಕ್ಕೆ ಪೂರ್ವಸ್ಥಿತಿ ಇಲ್ಲ. ಉದಾಹರಣೆಗೆ, ಐದು ನಿಮಿಷದಿಂದಲೂ ಪೂಜೆ ನಡೀತಿದೆ ಅನ್ನುವಾಗ, ಗ್ರಹಿಕೆಗೆ ಸಿಗುವುದು ನಡೆಯುತ್ತಿರುವ ಪೂಜೆಯೇ ಹೊರತು ಕಾಲವಲ್ಲ. ಆದರೆ ಕಾಲದ ಮೂಲಕವಾಗಿ ಆರಂಭ, ಅಂತ್ಯ ಮತ್ತು ಚಲನೆಯನ್ನು ನಾವು ಅಳೆಯುತ್ತೇವೆ. ಹಾಗಾಗಿ ಕಾಲ ಒಂದು ಮಾಪಕವಾಗಿ ಅಗತ್ಯವಿದೆ.<br />
ಕಾಲವನ್ನು ವಿವಿಧ ನಾಗರೀಕತೆಗಳು ವಿವಿಧ ರೀತಿಯಲ್ಲಿ ಅಳೆದಿವೆ. ವೇದದಲ್ಲಿ ಕಾಲವನ್ನು ಅದರ ಅತಿ ಸೂಕ್ಷ್ಮತೆಯಿಂದ ಪ್ರಾರಂಭಿಸಿ, ಅದರ ಅತಿ ಸ್ಥೂಲದವರೆಗೂ ಗುರುತಿಸಿದ್ದಾರೆ.<br />
ಅಣು, ಪರಮಾಣು ಮತ್ತು ತ್ರಸರೇಣು ಎಂಬ ಕಾಲದ ಅಳತೆಯ ಮೊದಲ ಮೂರು ಕಲ್ಪನೆಗಳ ನಿರ್ದಿಷ್ಟ ವಿವರಣೆ ಸಿಗುತ್ತಿಲ್ಲ. ಎರಡು ಅಣುಗಳು ಸೇರಿ ಒಂದು ಪರಮಾಣು, ಇಂತಹ ಮೂರು ಪರಮಾಣು ಸೇರಿದರೆ ಒಂದು ತ್ರಸರೇಣು ಎಂಬ ವಿವರವಿದೆ. ಆದರೆ ಒಂದು ಅಣುವಿನಷ್ಟು ಕಾಲ ಎಂದರೆಷ್ಟು ಎಂಬ ವಿವರ ಸಿಗುವುದಿಲ್ಲ. ಇಂತಹ ೩ ತ್ರಸರೇಣು ಒಂದು ತ್ರುಟಿಗೆ ಸಮ. ಇದು ೧/೧೬೫೭.೫ ಸೆಕಂಡುಗಳಿಗೆ ಸಮ. ಆದುದರಿಂದ ನಮ್ಮ ಕಾಲ ಗಣನೆಯನ್ನು ಇಲ್ಲಿಂದ ಪ್ರಾರಂಭಿಸಬಹುದು.<br />
೧) ೩ ತ್ರಸರೇಣು = ೧ ತ್ರುಟಿ.<br />
೨) ೧೦೦ ತ್ರುಟಿ = ೧ ವೇಧಾ<br />
೩) ೩ ವೇಧಾ = ೧ ಲವ<br />
೪) ೩ ಲವಗಳು = ಒಂದು ನಿಮೇಷ.(=ಒಮ್ಮೆ ಕಣ್ಣು ಮುಚ್ಚಿ ತೆರೆಯಲು ತಗುಲುವ ಕಾಲ.)<br />
೫) ೩ ನಿಮೇಷಗಳು = ೧ ಕ್ಷಣ.<br />
೬) ೫ ಕ್ಷಣಗಳು = ೧ ಕಷ್ಟಸ್( ಸರಿಸುಮಾರು ೮ ಸೆಕೆಂಡುಗಳು.)<br />
೭) ೧೫ ಕಷ್ಟಸ್ = ೧ ಲಘು<br />
೮) ೧೫ ಲಘುಗಳು = ೧ ದಂಡ ಅಥವಾ ೧ ನಾಡಿಕಾ<br />
೯) ೨ ನಾಡಿಕಾಗಳು = ೧ ಮುಹೂರ್ತ<br />
೧೦) ೬/೭ ಮುಹೂರ್ತಗಳು = ೧ ಯಾಮ ಅಥವಾ ಪ್ರಹರ<br />
೧೧) ೪ ಯಾಮಗಳು+ ೪ ಯಾಮಗಳು = ೧ ಹಗಲು + ೧ ರಾತ್ರಿ =ಒಂದುದಿನ.<br />
೧೨) ೧೫ ದಿನಗಳು = ೧ ಪಕ್ಷ<br />
೧೩) ೨ ಪಕ್ಷಗಳು = ೧ ಮಾಸ<br />
೧೪) ೨ ಮಾಸಗಳು = ೧ ಋತು<br />
೧೫) ೩ ಋತುಗಳು = ೧ ಆಯನ<br />
೧೬) ೨ ಆಯನಗಳು = ೧ ವರ್ಷ/ ಸಂವತ್ಸರ.<br />
೧೭) ೪೩೨೦೦೦ ವರ್ಷಗಳು = ೧ ಚರಣ ಅಥವಾ ಪಾದ<br />
೧೮) ೧೦ ಚರಣ = ೧ ಮಹಾಯುಗ =೪೩೨೦೦೦೦ ವರ್ಷಗಳು.<br />
[ ಟಿಪ್ಪಣಿ: ೧ ಮಹಾಯುಗದಲ್ಲಿ ೪ ಯುಗಗಳಿವೆ.ಒಂದು ಪಾದದ ಕಲಿಯುಗ(೪೩೨೦೦೦ ವರ್ಷಗಳು) +ಎರಡು ಪಾದಗಳ ದ್ವಾಪರ ಯುಗ (೮೬೪೦೦೦ ವರ್ಷಗಳು) +ಮೂರು ಪಾದಗಳ ತ್ರೇತಾಯುಗ (೧೨೯೬೦೦೦ ವರ್ಷಗಳು) +ನಾಲ್ಕು ಪಾದಗಳ ಕೃತಯುಗ (೧೭೨೮೦೦೦ ವರ್ಷಗಳು.)]<br />
ಇಲ್ಲಿಯವರೆಗಿನ ಕಾಲದ ವಿಭಾಗವನ್ನು ಸೂಕ್ಷ್ಮದ ಗುಂಪಿಗೆ ಸೇರಿಸಬಹುದು.೪೩೨೦೦೦೦ ವರ್ಷಗಳು ಹ್ಯಾಗೆ ಸೂಕ್ಷ್ಮ ಮಾರಾಯರೆ?ನಿಮಗೆ ಏನಾಗಿದೆ ಎಂದು ಕೇಳಬೇಡಿ. ಇನ್ನೂ ಮುಂದೆ ಹೋಗುವಾ.ಬನ್ನಿ.<br />
೧೦೦೦ ಮಹಾಯುಗಗಳು = ೧ ಕಲ್ಪ = ಬ್ರಹ್ಮನ ಒಂದು ಹಗಲು. ಬ್ರಹ್ಮನ ಒಂದು ರಾತ್ರಿ ಕೂಡ ೧ ಕಲ್ಪಕ್ಕೆ ಸಮ.<br />
೬೦ ಕಲ್ಪಗಳು = ಬ್ರಹ್ಮನ ಒಂದು ತಿಂಗಳು.<br />
೧೨ ತಿಂಗಳು =ಬ್ರಹ್ಮನ ಒಂದು ವರ್ಷ<br />
೧೦೦ ವರ್ಷಗಳು= ಬ್ರಹ್ಮನ ಆಯುಷ್ಯ.ಇದನ್ನು ಪರ ಅಥವಾ ಮಹಾಕಲ್ಪ ಎಂದೂ ಕರೆಯುತ್ತಾರೆ. ಇದು ೩೧೧೦೪೦೦೦೦೦೦೦೦೦೦ ಮಾನವ ವರ್ಷಗಳಿಗೆ ಸಮ.<br />
ಒಂದು ಮಹಾಯುಗ ಇದರ ೧.೮೮೮೯ % ಗೆ ಸಮವಾಗುವುದರಿಂದ ಅದನ್ನು ಕಾಲವಿಭಾಗದಲ್ಲಿ ಸೂಕ್ಷ್ಮಕ್ಕೆ ಸೇರಿಸಿದ್ದು!<br />
ಉತ್ಸಾಹಿಗಳು ಬ್ರಹ್ಮನ ಆಯುಷ್ಯದಲ್ಲಿ ಎಷ್ಟು ತ್ರುಟಿಗಳಿವೆ ಎಂದು ಲೆಕ್ಕ ಹಾಕಲು ಪ್ರಯತ್ನಿಸಬಹುದು. ಆ ಬ್ರಹ್ಮನು ಅವರಿಗೆ ಒಳ್ಳೆಯದು ಮಾಡಲಿ.<br />
(ಅಡಿ ಟಿಪ್ಪಣಿ: ಇದಲ್ಲದೆ ಈ ಕಾಲದಲ್ಲಿ ಒಳವಿಭಾಗಗಳಾಗಿ ಮನ್ವಂತರ, ಸಂಧ್ಯ,ಸಂಧ್ಯಾಂಶಗಳಿವೆ. ಕೋರಿಕೆ ಬಂದರೆ ಅದರ ಬಗ್ಗೆ ಬರೆದರಾಯಿತು.ಸಧ್ಯಕ್ಕಿಷ್ಟು ಸಾಕು.)<br />
(ಆಧಾರ;೧. "ಪುರಾಣ ನಾಮ ಚೂಡಾಮಣಿ" ೨. " A Concise Encyclopaedia of Hinduism")ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com12tag:blogger.com,1999:blog-5355400587468753863.post-66900372224915419102010-10-20T20:42:00.000+05:302010-10-20T20:42:54.473+05:30ಮತ್ತೆ ಅಕ್ಷೌಹಿಣಿ.. ಮಹಾಭಾರತದ ಯುದ್ಧದಲ್ಲಿ ಉತ್ತರ ಭಾರತದ ಎಲ್ಲ ರಾಜರ ಸೈನ್ಯವೂ ಸೇರಿ ೧೮ ಅಕ್ಷೌಹಿಣಿ ಆಗಿತ್ತು.(ನನ್ನ ಹಿಂದಿನ ಲೇಖನದಲ್ಲಿ ಅಕ್ಷೋಹಿಣಿ ಎಂದು ತಪ್ಪಾಗಿ ಬರೆದಿದ್ದೆ. ಅದು ಅಕ್ಷೌಹಿಣಿ ಎಂದಾಗಬೇಕು.ತಪ್ಪಿಗೆ ಕ್ಷಮೆ ಕೋರುತ್ತೇನೆ.) ಒಂದು ಅಕ್ಷೌಹಿಣಿ ಅಂದರೆ ಲೆಕ್ಕ ಗೊತ್ತಾಯಿತು.ಸರಿ.ಆದರೆ ಎಷ್ಟೊ ಪುಟುಗೋಸಿ ರಾಜರ ಬಳಿ ಅಕ್ಷೌಹಿಣಿ ಸೈನ್ಯ ಇರದಿದ್ದರೆ ಹ್ಯಾಗೆ ಎಣಿಕೆ ಎಂಬ ಅನುಮಾನ ಬಂತು. ಈ ಅನುಮಾನಗಳೇ ಹಾಗೆ.ಹನುಮಂತನ ಬಾಲದ ತರಹ.ಬಟ್ಟೆ ತೋರಿದಷ್ಟೂ ಬೆಳೆಯುತ್ತದೆ! ಅದಕ್ಕೂ ಉತ್ತರ ಸಿಕ್ಕಿತು!<br />
ಕುತೂಹಲವಿದ್ದರೆ ಮುಂದೆ ಓದಿ.<br />
೧ ರಥ + ೧ ಆನೆ + ೩ ಕುದುರೆ + ೫ ಕಾಲಾಳು = ೧ ಪತ್ತಿ<br />
೩ ಪತ್ತಿ = ೧ ಸೇನಾಮುಖ.<br />
೩ ಸೇನಾಮುಖ = ೧ ಗುಲ್ಮ<br />
೩ ಗುಲ್ಮ = ೧ ಗಣ<br />
೩ ಗಣ =೧ ವಾಹಿನಿ<br />
೩ ವಾಹಿನಿ =೧ ಪೃತನಾ<br />
೩ ಪೃತನಾ = ೧ ಚಮೂ<br />
೩ ಚಮೂ = ೧ ಅನೀಕಿನಿ<br />
೧೦ ಅನೀಕಿನಿ = ೧ ಅಕ್ಷೌಹಿಣಿ.<br />
ಸರಿ. ಆದರೆ ಈಗ ಮತ್ತೊಂದು ಅನುಮಾನ ಶುರುವಾಗಿದೆ. ಒಂದು ವೇಳೆ ಒಬ್ಬ ಚಿಲ್ರೆ ರಾಜನ ಸೈನ್ಯದಲ್ಲಿ ೫ ರಥ, ೮ ಆನೆ, ೧೫ ಕುದುರೆ ಮತ್ತು ೫೦೦ ಕಾಲಾಳುಗಳಿದ್ದರೆ ಅದನ್ನು ಏನೆಂದು ಕರಿಯೋದು?<br />
<div><br />
</div>ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com4tag:blogger.com,1999:blog-5355400587468753863.post-50778811335256123822010-09-28T16:27:00.000+05:302010-09-28T16:27:22.425+05:30ಅಕ್ಷೋಹಿಣಿ.ಕಪಿಗಳ ಸೈನ್ಯದ ಎಣಿಕೆ ಮುಗಿದ ಅನಂತರ ನನಗೆ ಮಹಾಭಾರತದ ಕಾಲದ ಸೈನ್ಯದ ಎಣಿಕೆಯ ಬಗ್ಗೆ ಕುತೂಹಲ ಹುಟ್ಟಿತು. ದ್ವಾಪರ ಯುಗದಲ್ಲಿ ಸೈನ್ಯವನ್ನು ಅಕ್ಷೋಹಿಣಿಯ ಲೆಕ್ಕದಲ್ಲಿ ಎಣಿಸುತ್ತಿದ್ದರು. ಕುರುಕ್ಷೇತ್ರದ ಯುದ್ಧದಲ್ಲಿ ಒಟ್ಟು ೧೮ ಅಕ್ಷೋಹಿಣಿ ಸೈನ್ಯ ಭಾಗವಹಿಸಿತ್ತಂತೆ. ೨೧೮೭೦ ಆನೆಗಳು, ೨೧೮೭೦ ರಥಗಳು, ೬೫೬೧೦ ಕುದುರೆಗಳು ಮತ್ತು ೧೦೯೩೫೦ ಕಾಲಾಳುಗಳು ಸೇರಿದರೆ ಒಂದು ಅಕ್ಷೋಹಿಣಿ ಆಗುತ್ತದೆ. ಇಂತಹ ೧೮ ಅಕ್ಷೋಹಿಣಿ ಅಂದರೆ ೩೯೩೬೬೦ ಆನೆಗಳು, ಅಷ್ಟೇ ಸಂಖ್ಯೆಯ ರಥಗಳು,೧೧೮೦೯೮೦ ಕುದುರೆಗಳು ಮತ್ತು ೧೯೬೮೩೦೦ ಕಾಲಾಳುಗಳು ಆದಂತಾಯಿತು. ಇದ್ದರೂ ಇರಬಹುದು.ಕಪಿಗಳ ಸಂಖ್ಯೆಗೆ ಹೋಲಿಸಿದರೆ ಇದು ತೀರ ಹೆಚ್ಚಲ್ಲ.ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com5tag:blogger.com,1999:blog-5355400587468753863.post-53075905874214337272010-09-16T20:15:00.000+05:302010-09-16T20:15:51.663+05:30ಕಪಿಸೇನೆ.ಸೀತಾದೇವಿಯನ್ನು ಬಿಡಿಸಲು ರಾಮನಿಗೆ ರಾವಣನ ಜೊತೆ ಯುದ್ಧ ಅನಿವಾರ್ಯವಾಯಿತು. ಈ ಯುದ್ಧಕ್ಕೆ ರಾಮನ ಸಹಾಯಕ್ಕೆ ಬಂದದ್ದು ಸುಗ್ರೀವನ ಕಪಿಸೇನೆ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಎಷ್ಟು? ಮಾಡಲೇನೂ ಮಹತ್ಕಾರ್ಯ ಇಲ್ಲದ ನನಗೆ ಉತ್ತರ ಹುಡುಕುವ ಕುತೂಹಲ ಹುಟ್ಟಿತು. ಉತ್ತರ ಸಿಕ್ಕಿತು ಕೂಡ. ಸುಗ್ರೀವನ ಸೈನ್ಯದಲ್ಲಿದ್ದ ಕಪಿಗಳ ಸಂಖ್ಯೆ ಒಂದು ಕೋಟಿ ಮಹೌಘ. ಸರಿ..ಒಂದು ಮಹೌಘ ಎಂದರೆಷ್ಟು? ಅದನ್ನೂ ಹುಡುಕಿದ್ದಾಯಿತು. ಎಣಿಸಿಕೊಳ್ಳಿ.<br />
೧ ಲಕ್ಷ ಕೋಟಿ= ೧ ಶಂಖ. ೧೦೦೦೦೦೦೦೦೦೦೦೦<br />
೧ ಲಕ್ಷ ಶಂಖ.=೧ ಮಹಾಶಂಖ. *೧೦೦೦೦೦೦೦೦೦೦೦೦<br />
೧ ಲಕ್ಷಮಹಾಶಂಖ=೧ ಬೃಂದ *೧೦೦೦೦೦೦೦೦೦೦೦೦<br />
೧ ಲಕ್ಷ ಬೃಂದ= ೧ ಮಹಾ ಬೃಂದ *೧೦೦೦೦೦೦೦೦೦೦೦೦<br />
೧ ಲಕ್ಷ ಮಹಾ ಬೃಂದ=ಒಂದು ಪದ್ಮ *೧೦೦೦೦೦೦೦೦೦೦೦೦<br />
೧ ಲಕ್ಷ ಪದ್ಮ= ೧ ಮಹಾಪದ್ಮ *೧೦೦೦೦೦೦೦೦೦೦೦೦<br />
೧ ಲಕ್ಷ ಮಹಾಪದ್ಮ= ೧ ಖರ್ವ *೧೦೦೦೦೦೦೦೦೦೦೦೦<br />
೧ ಲಕ್ಷ ಖರ್ವ= ೧ ಮಹಾಖರ್ವ *೧೦೦೦೦೦೦೦೦೦೦೦೦<br />
೧ ಲಕ್ಷ ಮಹಾಖರ್ವ=೧ ಸಮುದ್ರ *೧೦೦೦೦೦೦೦೦೦೦೦೦<br />
೧ ಲಕ್ಷ ಸಮುದ್ರ=೧ ಔಘ *೧೦೦೦೦೦೦೦೦೦೦೦೦<br />
೧ ಲಕ್ಷ ಔಘ= ೧ ಮಹೌಘ. *೧೦೦೦೦೦೦೦೦೦೦೦೦<br />
ಅಂದರೆ ಒಂದರ ಮುಂದೆ ೧೩೨ ಸೊನ್ನೆಗಳನ್ನು ಹಾಕಿದರೆ ಒಂದು ಮಹೌಘ ಆಗುತ್ತದೆ. ಇಂತಹ ಒಂದು ಕೋಟಿಯಷ್ಟು ಸಂಖ್ಯೆಯ ಕಪಿಗಳು ಸೈನ್ಯದಲ್ಲಿದ್ದುವಂತೆ. ಒಂದು ಕೋಟಿ ಮಹೌಘವೆಂದರೆ ಇನ್ನೆಷ್ಟು ಸೊನ್ನೆಗಳು ಬೇಕು? ನಿಮಗೇ ಬಿಟ್ಟಿದ್ದೇನೆ.<br />
(ವಿ.ಸೂ. ಅಕಸ್ಮಾತ್ ಮೊದಲಿನ ಸಂಖ್ಯೆಯಲ್ಲಿ ಸೊನ್ನೆಗಳ ಲೆಕ್ಕ ತಪ್ಪಿದ್ದರೆ ತಿದ್ದಿಕೊಳ್ಳಿ. ನನಗೆ ಶೂನ್ಯವೆಂದರೆ ಬಲು ಪ್ರೀತಿ! ಗಣಿತದಲ್ಲಿ ನನ್ನ ಮೇಷ್ಟ್ರು ಅದನ್ನೇ ನನಗೆ ಪ್ರೀತಿಯಿಂದ ಕೊಡುತ್ತಿದ್ದರು!)ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com12tag:blogger.com,1999:blog-5355400587468753863.post-57461932942793548652010-09-08T10:38:00.000+05:302010-09-08T10:38:46.309+05:30ಸರಿ-ತಪ್ಪು,ಲಾಭ-ನಷ್ಟ.<br />
ಸರಿ -ತಪ್ಪು ಮತ್ತು ಲಾಭ- ನಷ್ಟ ಇವು ನಮ್ಮ ಯೋಚನೆ,ಕ್ರಿಯೆಗಳನ್ನು ಸದಾ ನಿಯಂತ್ರಿಸುವ,ಪ್ರಚೋದಿಸುವ ತತ್ವಗಳು. ಸರಿ ಮತ್ತು ತಪ್ಪು ನೀತಿಯ ವಲಯಕ್ಕೆ ಸಂಬಂಧಿಸಿದ್ದು. ಲಾಭ, ನಷ್ಟ ವ್ಯಾವಹಾರಿಕ ವಲಯಕ್ಕೆ ಸಂಬಂಧಿಸಿದ್ದು. ಲಾಭವೂ ಆಗಬೇಕು ಮತ್ತು ಅದು ಸರಿಯಾದ ಮಾರ್ಗವೂ ಆಗಿರಬೇಕು ಎಂದು ಅಪೇಕ್ಷೆಪಟ್ಟು ಅದನ್ನು ಪಾಲಿಸುವವರು ನೈತಿಕವಾಗಿ ಹಾಗೂ ವ್ಯಾವಹಾರಿಕವಾಗಿ ಉತ್ತಮರು. ನಷ್ಟವಾದರೂ ಚಿಂತೆಯಿಲ್ಲ ಸರಿಯಾದದ್ದನ್ನು ಮಾಡುತ್ತೇನೆ ಎನ್ನುವವರು ನೈತಿಕವಾಗಿ ಉತ್ತಮರು,ವ್ಯಾವಹಾರಿಕವಾಗಿ ದಡ್ಡರು. ಇವರ ಜೊತೆ ತುಂಬ ಭರವಸೆಯಿಂದ ವ್ಯವಹರಿಸಬಹುದು. ತಪ್ಪು ಎಂದು ಗೊತ್ತಿದ್ದೂ ಕೇವಲ ಲಾಭಕ್ಕಾಗಿ ಮಾಡುವುದು ನಯವಂಚನೆ.ಇವರು ನೈತಿಕವಾಗಿ ಅಧಮರು,ವ್ಯಾವಹಾರಿಕವಾಗಿ ಪರಮ ಸ್ವಾರ್ಥಿಗಳು ಮತ್ತು ಬುದ್ಧಿವಂತರು. ಇವರ ಜೊತೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು. ಇವರು ಯಾವಾಗ ಹೇಗೆ ಎಂಬುದು ತಿಳಿಯುವುದಿಲ್ಲ. ಇನ್ನು ತಪ್ಪನ್ನೂ ಮಾಡುತ್ತಾ ನಷ್ಟ ಅನುಭವಿಸುವವರು ಮೂರ್ಖರು.ಒಂದೋ ಇವರಿಗೆ ತಿಳಿ ಹೇಳಬೇಕು ಅಥವಾ ಇವರಿಂದ ದೂರವಿರಬೇಕು.<br />
*****<br />
ಸಾಮಾನ್ಯವಾಗಿ, ಯಾವುದೇ ಸಂಗತಿಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಾಗ ಆ ಸಂಗತಿ ನಮಗೆ ಸಂಬಂಧಿಸಿದ್ದು ಅಲ್ಲವಾದರೆ ನಾವು ಸರಿ-ತಪ್ಪುಗಳ ತತ್ತ್ವವನ್ನು ಬಳಸುತ್ತೇವೆ. ನಮಗೆ ಸಂಬಂಧಿಸಿದ ಸಂಗತಿಯಾದರೆ ಸರಿ-ತಪ್ಪುಗಳ ಬದಲು ಲಾಭ-ನಷ್ಟದ ತತ್ವ ಬಳಸುತ್ತೇವೆ. ಉದಾಹರಣೆಗೆ ವಿದ್ಯುತ್ ನಿಗಮದ ನೌಕರರು ಮುಷ್ಕರ ಮಾಡಿದರೆ ಬ್ಯಾಂಕ್ ನೌಕರರು "ಇವರಿಗೆ ಎಷ್ಟು ಸವಲತ್ತು ಕೊಟ್ಟರೂ ಸಾಲಲ್ಲ!ಹೀಗಾದರೆ ದೇಶ ಉದ್ಧಾರವಾದಂತಯೇ!" ಎಂದು ಟೀಕಿಸುತ್ತಾರೆ. ಆದರೆ ಅದೇ ಉದ್ದೇಶಕ್ಕಾಗಿ ಅವರೂ ಮುಷ್ಕರ ಮಾಡುತ್ತಾರೆ. ಆವಾಗ ಮೇಲಿನಂತೆ ಟೀಕೆ ಮಾಡುವ ಸರದಿ ವಿದ್ಯುತ್ ನೌಕರರದು.ನಮ್ಮೆಲ್ಲ ತೀರ್ಮಾನಗಳು ವ್ಯಕ್ತಿನಿಷ್ಟತೆಯಲ್ಲಿ ತೀರ್ಮಾನವಾಗುತ್ತದೆಯೇ ಹೊರತು ವಸ್ತುನಿಷ್ಠತೆಯಲ್ಲಿ ಅಲ್ಲ. ನೈತಿಕ ನಷ್ಟಕ್ಕಿಂತ ಆರ್ಥಿಕ ಲಾಭವೇ ಹೆಚ್ಚು ಮುಖ್ಯವಾದದ್ದು ಅಥವಾ/ಹಾಗೂ ಈ ವ್ಯವಸ್ಥೆ ಹಾಳಾಗಿದೆ ಮತ್ತು ಹೀಗೆ ಹಾಳಾಗಲು ನನ್ನೊಬ್ಬನನ್ನು ಬಿಟ್ಟು ಉಳಿದೆಲ್ಲರು/ಉಳಿದೆಲ್ಲವೂ ಕಾರಣ ಎಂಬ ಒಳನಂಬಿಕೆಯೇ ಈ ಪ್ರವೃತ್ತಿಯ ಕಾರಣವಿರಬಹುದೇ?ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com8tag:blogger.com,1999:blog-5355400587468753863.post-90992607062742275352010-09-04T09:57:00.000+05:302010-09-04T09:57:15.410+05:30ಕೌರವಶತನಾಮಾವಳಿ<span class="Apple-style-span" style="font-family: Arial; font-size: small;"><span class="Apple-style-span" style="font-size: 13px;"><br />
<div style="text-align: justify;"><span class="Apple-style-span" style="font-size: medium;"><span class="Apple-style-span" style="color: #444444;"> ತುಂಬಾ ವರ್ಷಗಳ ಹಿಂದಿನ ಘಟನೆ.ಸಾಗರದ ಸಮೀಪದ ಶಿರುವಂತೆಯಲ್ಲಿ ಒಂದು ತಾಳಮದ್ದಲೆ. ಶೇಣಿ,ಆನಂದ ಮಾಸ್ತರ,ದೇರಾಜೆ,ಸಾಮಗ ಮೊದಲಾದ ಆಗಿನ ಕಾಲದ ಘಟಾನುಘಟಿ ಅರ್ಥಧಾರಿಗಳು. ಪ್ರಸಂಗ ಸರಿಯಾಗಿ ನೆನಪಿಗೆ ಬರುತ್ತಿಲ್ಲ.ಶೇಣಿಯವರಿಗೆ ಪ್ರಶ್ನೆ ಕೇಳಿ ಎಲ್ಲರನ್ನೂ ಸೋಲಿಸುವ ತವಕ. ಯಾವುದೋ ಸಂದರ್ಭದ ಸಂವಾದದಲ್ಲಿ ಅನಂದಮಾಸ್ತರರು "ನೂರು ಜನ ಕೌರವರು.."ಎಂದು ಹೇಳಿದ್ದೇ ತಡ ಶೇಣಿಯವರು,ಅನಂದಮಾಸ್ತರರನ್ನು ಸಿಕ್ಕಿಸಲು "ಯಾವ ನೂರು ಜನ? ಹೆಸರು ಗೊತ್ತ?"ಎಂಬ ಕೊಂಕು ಪ್ರಶ್ನೆಯನ್ನು ಎಸೆದರು.ಸಭೆ ಸ್ತಬ್ಧವಾಯಿತು. ಸ್ವತಃ ಧೃತರಾಷ್ಟ್ರನಿಗೂ,ಗಾಂಧಾರಿಗೂ ಬಹುಷಃ ತಮ್ಮ ನೂರು ಮಕ್ಕಳ ಹೆಸರು ಗೊತ್ತಿತ್ತೋ ಇಲ್ಲವೋ! ಅನಂದ ಮಾಸ್ತರರು ಅಳುಕಲಿಲ್ಲ.ಒಮ್ಮೆ ನಕ್ಕರು."ನೂರುಜನರ ಹೆಸರು ಬೇಕಾ? ಕೇಳಿ"ಎಂದವರೇ ದುರ್ಯೊಧನ,ಯುಯುತ್ಸು,ದುಶ್ಯಾಸನ....ಇತ್ಯಾದಿ ಶತ ನಾಮ ಪಠಿಸಿದರು.ಅನಂದಮಾಸ್ತರರ ಮಾತು ಬಲು ಚುರುಕು. ಅವರು ಮಾತನಾಡುವಾಗ ಒಂದು ಪದಕ್ಕೂ ಮತ್ತೊಂದು ಪದಕ್ಕೂ ಅಂತರ ತುಂಬಾ ಕಡಿಮೆ.ನೂರು ಕೌರವರ ಹೆಸರನ್ನು ಯಾವ ರಭಸದಲ್ಲಿ ಹೇಳಿದರೆಂದರೆ ಡಬ್ಬದಲ್ಲಿ ಕಲ್ಲು ಹಾಕಿ ಗಡಗಡ ಅಲ್ಲಾಡಿಸಿದಂತಾಯಿತು! ಶೇಣಿಯವರನ್ನೂ ಸೇರಿದಂತೆ ಯಾರಿಗೂ ಮೊದಲ ನಾಲ್ಕಾರು ಹೆಸರು ಬಿಟ್ಟರೆ ಬೇರೆ ಯಾವ ಹೆಸರೂ ಏನು ಎಂಬುದು ತಿಳಿಯಲಿಲ್ಲ."ತಿಳಿಯತಲ್ಲ ನೂರುಜನರ ಹೆಸರು" ಎಂದು ಶೇಣಿಯವರನ್ನು ಕೇಳಿ ತಮ್ಮ ಅರ್ಥ ಮುಂದುವರೆಸಿದರು.</span></span></div><div style="text-align: justify;"><span class="Apple-style-span" style="font-size: medium;"><span class="Apple-style-span" style="color: #444444;">ಯಾಕೋ ಇವತ್ತು ಆ ಘಟನೆ ನೆನಪಾಯಿತು.ನನಗೂ ಕುತೂಹಲ. ನೂರು ಕೌರವರ ಹೆಸರು ಏನಿರಬಹುದು?ನಮ್ಮ ಸ್ಥಳೀಯ ತಾಳಮದ್ದಲೆ ಕಲಾವಿದ ಗೊರಮನೆ ಮಂಜುನಾಥ ಅವರನ್ನು ವಿಚಾರಿಸಿದೆ. ಅವರು ಹೇಳಿದ್ದನ್ನು ಇಲ್ಲಿ ದಾಖಲಿಸಿದ್ದೇನೆ.ನಮ್ಮ ತಲೆಯಲ್ಲಿ ನಾವು ತುಂಬಿಕೊಂಡಿರುವ,ನಮಗೆ ಬೇಕಿಲ್ಲದ ಮಾಹಿತಿಗಳ ಗುಂಡಿಗೆ ಇದನ್ನೂ ತುಂಬಿಸಿಕೊಳ್ಳೋಣ.</span></span></div><div style="text-align: justify;"><span class="Apple-style-span" style="font-size: medium;"><span class="Apple-style-span" style="color: #444444;">೧.ದುರ್ಯೋಧನ ೨.ಯುಯುತ್ಸು ೩.ದುಶ್ಯಾಸನ ೪.ದುಸ್ಸಹ ೫.ದುಶ್ಯಲ ೬.ಜಲಸಂಧ ೭.ಸಮ ೮.ಸಹ ೯.ವಿಂದ ೧೦.ಅನುವಿಂದ ೧೧.ದುರ್ಧರ್ಷ ೧೨.ಸುಬಾಹು ೧೩.ದುಷ್ಟ್ರಧರ್ಷಣ ೧೪.ದುರ್ಮರ್ಷಣ ೧೫.ದುರ್ಮುಖ ೧೬.ದುಷ್ಕರ್ಣ ೧೭.ಕರ್ಣ ೧೮.ವಿವಿಶಂತಿ ೧೯.ವಿಕರ್ಣ ೨೦.ಶಲ ೨೧.ಸತ್ವ ೨೨.ಸುಲೋಚನ ೨೩.ಚಿತ್ರ ೨೪.ಉಪಚಿತ್ರ ೨೫.ಚಿತ್ರಾಕ್ಷ ೨೬.ಚಾರುಚಿತ್ರ ಶರಾಸನ ೨೭.ದುರ್ಮದ ೨೮.ದುರ್ವಿಗಾಹ ೨೯.ವಿವಿತ್ಸು ೩೦.ವಿಕಟಾನನ ೩೧.ಊರ್ಣನಾಭ ೩೨.ಸುನಾಭ ೩೩.ನಂದ ೩೪.ಉಪನಂದ ೩೫.ಚಿತ್ರಬಾಣ ೩೬.ಚಿತ್ರವರ್ಮ ೩೭.ಸುವರ್ಮ ೩೮.ದುರ್ವಿರೋಚನ ೩೯.ಅಯೋಬಾಹು ೪೦.ಚಿತ್ರಾಂಗ ೪೧.ಚಿತ್ರಕುಂಡಲ ೪೨.ಭೀಮವೇಗ ೪೩.ಭೀಮಬಲ ೪೪.ಬಲಾಕಿ ೪೫.ಬಲವರ್ಧನ ೪೬.ಉಗ್ರಾಯುಧ ೪೭.ಸುಷೇಣ ೪೮.ಕುಂಡೋದರ ೪೯.ಮಹೋದರ ೫೦.ಚಿತ್ರಾಯುಧ ೫೧.ನಿಷಂಗೀ ೫೨.ಪಾಶೀ ೫೩.ವೃಂದಾರಕ ೫೪.ದೃಢವರ್ಮ ೫೫.ದೃಢಕ್ಷತ್ರ ೫೬. ಸೋಮಕೀರ್ತಿ ೫೭.ಅನೂದರ ೫೮. ದೃಢಸಂಧ ೫೯. ಜರಾಸಂಧ ೬೦. ಸತ್ಯಸಂಧ ೬೧.ಸದಃಸುವಾಕ್ ೬೨.ಉಗ್ರಶ್ರವಸ ೬೩.ಉಗ್ರಸೇನ ೬೪.ಸೇನಾನೀ ೬೫.ದುಷ್ಪರಾಜಯ ೬೬.ಅಪರಾಜಿತ ೬೭.ಪಂಡಿತಕ ೬೮.ವಿಶಾಲಾಕ್ಷ ೬೯.ದುರಾಧರ ೭೦.ದೃಢಹಸ್ತ ೭೧.ಸುಹಸ್ತ ೭೨.ವಾತವೇಗ ೭೩.ಸುವರ್ಚಸ ೭೪.ಆದಿತ್ಯಕೇತು ೭೫.ಬಹ್ವಾಶೀ ೭೬.ನಾಗದತ್ತ ೭೭.ಅಗ್ರಯಾಯೀ ೭೮.ಕವಚೀ ೭೯.ಕ್ರಥನ ೮೦.ದಂಡೀ ೮೧.ದಂಡಧಾರ ೮೨.ಧನುರ್ಗ್ರಹ ೮೩.ಉಗ್ರ ೮೪.ಭೀಮರಥ ೮೫.ವೀರಬಾಹು ೮೬.ಅಲೋಲುಪ ೮೭.ಅಭಯ ೮೮.ರೌದ್ರಕರ್ಮಾ ೮೯.ದ್ರುಢರಥಾಶ್ರಯ ೯೦.ಅನಾಧೃಷ್ಯ ೯೧.ಕುಂಡಭೇದೀ ೯೨.ವಿರಾವೀ ೯೩.ಪ್ರಮಥ ೯೪.ಪ್ರಮಾಥೀ ೯೫.ದೀರ್ಘರೋಮ ೯೬.ದೀರ್ಘಬಾಹು ೯೭.ವ್ಯೂಢೋರು ೯೮.ಕನಕಧ್ವಜ ೯೯.ಕುಂಡಾಶೀ ೧೦೦.ವಿರಸಜ .</span></span></div><div style="text-align: justify;"><span class="Apple-style-span" style="font-size: medium;"><span class="Apple-style-span" style="color: #444444;">ನೂರೊಂದನೆಯವಳು ದುಶ್ಯಲಾ. </span></span></div><div style="text-align: justify;"><span class="Apple-style-span" style="font-size: medium;"><span class="Apple-style-span" style="color: #444444;">(ನೋಡಿ:ವ್ಯಾಸಭಾರತದ ಆದಿಪರ್ವ-೧೧೭ನೆಯ ಅಧ್ಯಾಯ.)</span></span></div><div style="text-align: justify;"><span class="Apple-style-span" style="font-size: medium;"><span class="Apple-style-span" style="color: #444444;"> </span></span></div></span></span>ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com8tag:blogger.com,1999:blog-5355400587468753863.post-30356222046715559482010-08-09T20:47:00.000+05:302010-08-09T20:47:54.116+05:30ದೇವರೆಂಬ ಮಾಯೆ೧<br />
<br />
ಹನೂರು ಎಂಬುದು ಹನೂರಿನ ಹೆಸರು. ಸಾಗರದಿಂದ ಜೋಗಕ್ಕೆ ಹೋಗುವ ಹೆದ್ದಾರಿಯಲ್ಲಿ ಸುಮಾರು ಇಪ್ಪತ್ತು ಕಿ.ಮೀ. ಹೋದರೆ, ಈ ದಾರಿಯಿಂದಲೇ ಹುಟ್ಟಿತೆಂಬಂತೆ ಕಾಣುವ ಇಳುಕಲಾದ ಮಣ್ಣಿನ ದಾರಿಯೊಂದು ಎರಡು ಗುಡ್ಡಗಳ ನಡುವೆ ಇದೆ. ಇಳುಕಲು ಹಾದಿಯಲ್ಲಿ ಒಂದಿಪ್ಪತ್ತು ಹೆಜ್ಜೆ ನಡೆದರೆ ಬಲಬದಿಯ ಗುಡ್ಡವನ್ನೇರುವ ಶಿಥಿಲವಾಗಿರುವ ಕಲ್ಲಿನ ಮೆಟ್ಟಿಲುಗಳು ಕಾಣುತ್ತವೆ. ಇದೇ ಊರಿನ ಆರಂಭ. ಹಾಗೇ ಮಣ್ಣಿನ ರಸ್ತೆಯಲ್ಲಿ ಮುಂದುವರಿದರೆ ರಸ್ತೆಯ ಎಡಬದಿಗೆ ಸಾಲಾಗಿ ಮನೆಗಳು. ಬಲಗಡೆಗೆ ತೋಟ. ಈ ರಸ್ತೆ ಸುಮಾರು ಎರಡು ಕಿ.ಮಿ. ಸಾಗಿ ಶಿರಸಿಗೆ ಹೋಗುವ ಟಾರು ರಸ್ತೆಯನ್ನು ಸೇರುತ್ತದೆ. ಸೇರುವ ಮುನ್ನ ಪ್ರಾರಂಭದ ಇಳುಕಲಿಗೆ ಸಮನಾದ ಏರಿದೆ. ಆಕಾಶದಿಂದ ನೋಡಿದರೆ ಊರು ಒಂದು ಗುಂಡಿಯಲ್ಲಿ ಇರುವ ಹಾಗೆ ಕಾಣಬಹುದು. ನೋಡಿದವರು ಯಾರೂ ಇಲ್ಲ.<br />
<br />
ಶಿಥಿಲವಾದ ಕಲ್ಲಿನ ಮೆಟ್ಟಿಲುಗಳ ಮೇಲೆ ಎಚ್ಚರಿಕೆಯಿಂದ ಹೆಜ್ಜೆಯಿಡುತ್ತ ಊರಿನ ಆರಂಭದಲ್ಲಿರುವ ಗುಡ್ಡವನ್ನು ಏರಿ. ನೂರು ನೂರಿಪ್ಪತ್ತು ಮೆಟ್ಟಿಲುಗಳಿರಬಹುದು. ಅಷ್ಟೆ. ಅಷ್ಟು ಏರಿದರೆ ಯಾರೋ ಅರ್ಧ ಗುಡ್ಡವನ್ನು ಕಡಿದಂತೆ ಮಟ್ಟಸವಾದ ತುಸು ವಿಸ್ತಾರವಾದ ಜಾಗ ಕಾಣುತ್ತದೆ. ಈ ಜಾಗದ ನಡುವೆ ಒಂದು ಕಪ್ಪು ಶಿಲೆಗಳ ಕಟ್ಟಡ. ಸುಮಾರು ಹದಿನೈದು ಅಡಿ ಉದ್ದ ಅಗಲದ ಚಚ್ಚೌಕದ ರಚನೆ. ನಾಲ್ಕೂ ಮೂಲೆಯಲ್ಲಿ ನಾಲ್ಕು ದಪ್ಪ ಕಲ್ಲಿನ ಕಂಬಗಳು. ಇವುಗಳ ನಡುವೆ ಐದಡಿಗೊಂದರಂತೆ ಕಲ್ಲಿನ ಕಂಬಗಳು. ಮೇಲೂ ಕಲ್ಲಿನ ಮುಚ್ಚಿಗೆ. ಕಟ್ಟಡದ ಸರಿಯಾಗಿ ಮಧ್ಯಭಾಗದಲ್ಲಿ ಉತ್ತರಕ್ಕೆ ಮುಖ ಮಾಡಿರುವ ಕಪ್ಪು ಶಿಲೆಯ ಹನುಮನ ಮೂರ್ತಿ. ಮೂಲೆಯಲ್ಲಿ ಚಕ್ರಗಳು ನೆಲಕ್ಕೆ ಹೂತಿರುವ ಒಂದು ಒರಟು ಕೆತ್ತನೆಯ ಕಲ್ಲಿನ ರಥ. ಈಶಾನ್ಯ ದಿಕ್ಕಿನಲ್ಲಿ ಒಂದು ಪುಟ್ಟ ಹೊಂಡ. ಕಿರುಬೆರಳು ಗಾತ್ರದಲ್ಲಿ ನೀರು ಈ ಹೊಂಡದಿಂದ ಹರಿದು ಗುಡ್ಡವನ್ನಿಳಿದು ಆ ಬದಿ ಇರುವ ಕೆರೆಯನ್ನು ಸೇರುತ್ತದೆ. ಈ ನೀರಿನ ಸೆಲೆ ಎಂದೂ ಬತ್ತಿದ್ದಿಲ್ಲ. ಊರಿನ ಬಾವಿಗಳು ಬತ್ತುವಂತಾದಗಲೂ ಈ ಹೊಂಡದಿಂದ ಹೀಗೇ ನೀರು ಹರಿಯುತ್ತದೆ. ರಾಮಶರದಿಂದ ನಿರ್ಮಾಣವಾದ ಕಾರಣ ಇದು ಎಂದೂ ಬತ್ತದು ಎಂದು ಅರ್ಚಕ ರಾಮಚಂದ್ರಭಟ್ಟರು ಹೇಳುತ್ತಾರೆ. ಈ ಊರಿಗೆ ಹನೂರು ಎಂಬ ಹೆಸರು ಬರಲೂ ಈ ಮೂರ್ತಿಯೇ ಕಾರಣ ಎಂಬುದು ಅವರ ನಂಬಿಕೆ. ಹನುಮನೂರು ಹನುಮೂರು ಆಗಿ ಅಲ್ಲಿಂದ ಹನೂರು ಆಗಿದೆ ಎಂಬ ಅವರ ವಿವರಣೆ ಸುಳ್ಳು ಎನ್ನುವ ಯಾವ ದಾಖಲೆಯೂ ಇಲ್ಲ. ತುಂಬ ಹಿಂದಿನಿಂದಲೂ ಈ ಗುಡಿ ಇತ್ತು. ಪೂಜೆ ಮಾತ್ರ ಇರಲಿಲ್ಲ. ಪಟೇಲರಿಗೆ ಹನುಮ ಕನಸಲ್ಲಿ ಕಂಡು ತನಗೆ ನಿತ್ಯಪೂಜೆಗೆ ವ್ಯವಸ್ಥೆ ಮಾಡದಿದ್ದರೆ ಊರಿಗೆ ಉಳಿಗಾಲವಿಲ್ಲ ಎಂದು ಹೇಳಿದ್ದರಿಂದ ತಮಗೆ ಅರ್ಧ ಎಕರೆ ಜಮೀನು ಬರೆದುಕೊಡುವ ಭರವಸೆ ಕೊಟ್ಟು, ಹನುಮಂತ ದೇವರ ಅರ್ಚನೆಗೆಂದೇ ಈ ಊರಿಗೆ ಕರೆದುತಂದರು. ಹೇಳಿದಂತೆ ತಮ್ಮ ಹೆಸರಿಗೆ ಜಮೀನು ಬರೆದುಕೊಟ್ಟ ಮಹಾನುಭಾವರು. ಇವತ್ತು ಹನುಮ ದೇವರು ಪೂಜೆ ಕಾಣುತ್ತಿರುವುದು, ತಮ್ಮ ಸಂಸಾರ ಅನ್ನ ಕಾಣುತ್ತಿರುವುದು ಪಟೇಲರ ಕೃಪೆಯಿಂದ ಎಂದು ಯಾರಿಗಾದರೂ ರಾಮಚಂದ್ರಭಟ್ಟರು ಹೇಳುವಾಗ, ಅವರ ಧ್ವನಿಯಲ್ಲಿಯೇ ಪಟೇಲರ ಬಗೆಗಿನ ಅವರ ಗೌರವ ಎದ್ದು ಕಾಣುತ್ತದೆ. ಈ ದೇವಸ್ಥಾನದ ಬಗೆಗೆ ಭಟ್ಟರು ಶ್ರಧ್ಧೆಯಿಂದ ಹೇಳುವುದು ಕೇಳಿ.<br />
<br />
ಈ ದೇವಸ್ಥಾನವನ್ನು ಸ್ವತಃ ರಾಮನೇ ತನ್ನ ಸೇವಕ ಹಾಗೂ ಭಕ್ತ ಹನುಮನಿಗಾಗಿ ಕಟ್ಟಿಸಿದ. ಇದಕ್ಕೆ ಬೇಕಾದ ಕಲ್ಲನ್ನ ಸ್ವತಃ ಹನುಮನೇ ಎಲ್ಲಿಂದಲೋ ತಂದ. ಈ ಜಾತಿಯ ಕಲ್ಲು ಇಲ್ಲಿ ಹತ್ತಿರದಲ್ಲಿ ಎಲ್ಲಿಯಾದರೂ ಉಂಟಾ? ಹೇಳಿ ನೋಡುವಾ! ಈ ಗಾತ್ರದ ಕಲ್ಲನ್ನು ಈ ಗುಡ್ಡದ ಮೇಲೆ ತಂದು ಹೀಗೆ ಜೋಡಿಸುವುದು ಮನುಷ್ಯರಿಗೆ ಸಾಧ್ಯವಾ? ಸರಿಯಾದ ಮಾತು. ಆ ಜಾತಿಯ ಕಲ್ಲು ಔಷಧಿಗೆ ಬೇಕು ಅಂದರೂ ಸಮೀಪದಲ್ಲಿ ಎಲ್ಲೂ ಸಿಗುವುದಿಲ್ಲ. ಈ ಮಾತಿಗೆ ಉತ್ತರ ಹೇಳಲಾಗದೆ ಅಲ್ಲ ಭಟ್ರೇ! ಆ ರಾಮ ಹೋಗಿ ಹೋಗಿ ಇಲ್ಯಾಕೆ ಅವನಿಗೆ ಗುಡಿ ಕಟ್ಟಿಸಿದ್ದು? ಅಯೋಧ್ಯೆಯ ಹತ್ತಿರವೇ ಅಲ್ವಾ ಕಟ್ಟಬೇಕಾದ್ದು? ಈ ಕೊಂಪೆ ರಾಮನಿಗೆ ಕಂಡದ್ದಾದರೂ ಹ್ಯಾಗೆ? ಎಂದು ಕೀಟಲೆ ಮಾಡುವ ಊರಿನ ಪರಮ ನಾಸ್ತಿಕ ಗೋವಿಂದನಿಗೂ ಉತ್ತರ ಉಂಟು. ರಾಮ ಸೀತಾಪಹರಣದ ಅನಂತರ ಸೀತೆಯನ್ನು ಹುಡುಕುತ್ತ ಈ ದಾರಿಯಲ್ಲಿಯೇ ಅಲ್ವಾ ಹೋಗಿದ್ದು? ಅಲ್ಲ ಎಂದು ಹೇಳಲು ಗೋವಿಂದನ ಬಳಿ ಏನೂ ಆಧಾರಗಳಿಲ್ಲ. ಭಟ್ಟರ ಈ ಮಾತುಗಳನ್ನು ಯಾರ್ಯಾರು ನಂಬುತ್ತಾರೋ ಗೊತ್ತಿಲ್ಲ. ಆದರೆ ಈ ದೇವಸ್ಥಾನಕ್ಕೆ, ಊರಿಗೆ ಒಂದು ಪೌರಾಣಿಕ ಅಸ್ತಿತ್ವವನ್ನೂ ಈ ಐತಿಹ್ಯದ ಮೂಲಕ ಭಟ್ಟರು ಕೊಡಿಸಿದ್ದಾರೆ. ಭಟ್ಟರಿಗಂತೂ ಇದರ ಬಗ್ಗೆ ಲವಲೇಶವೂ ಸಂಶಯವಿಲ್ಲ. ಭಟ್ಟರು ಹೇಳಿದ್ದರ ಬಗ್ಗೆ ನಂಬಿಕೆ ಇರದಿದ್ದರೂ ಊರಿನವರು ತಮ್ಮಲ್ಲಿಗೆ ಬಂದ ನೆಂಟರಿಗೆ ಇದೇ ಕತೆಯನ್ನು ಇನ್ನೂ ರಸವತ್ತಾಗಿ ಹೇಳುತ್ತಾರೆ. ಗುಡ್ಡ ಹತ್ತಿಸುತ್ತಾರೆ. ಕೆಲವರು ಭಕ್ತಿಯಿಂದಲೂ, ಕೆಲವರು ದಾಕ್ಷಿಣ್ಣ್ಯದಿಂದಲೂ ದೇವರಿಗೆ ನಮಸ್ಕರಿಸುತ್ತಾರೆ.<br />
<br />
ಇದೇ ಶ್ರಧ್ಧೆಯಿಂದ ಭಟ್ಟರು ನಿತ್ಯಪೂಜೆ ಮಾಡುತ್ತಾರೆ. ಬೆಳಗ್ಗೆ ಐದಕ್ಕೇ ಎದ್ದು ನಿತ್ಯವಿಧಿಗಳನ್ನು ಮುಗಿಸಿ, ಮಂತ್ರ ಹೇಳುತ್ತಾ ತಣ್ಣೀರಲ್ಲಿ ಮಿಂದು ,ಮಡಿಯುಟ್ಟು ಹೂ, ತುಳಸಿ, ದೂರ್ವೆ ಕೊಯ್ದು, ಮನೆಯ ದೇವರ ಪೂಜೆ ಮುಗಿಸಿ, ಒಂದು ದೊಡ್ಡ ಹರಿವಾಣದಲ್ಲಿ ಪೂಜೆಗೆ ಬೇಕಾದ ಎಲ್ಲ ಸಾಮಗ್ರಿಗಳನ್ನೂ ಒಪ್ಪವಾಗಿ ಜೋಡಿಸಿಕೊಂಡು ದೇವಸ್ಥಾನದತ್ತ ಹೊರಡುತ್ತಾರೆ. ಈಗ ಸರಿಯಾಗಿ ಏಳು ಗಂಟೆ. ಸೂರ್ಯ ಹುಟ್ಟುವುದು ತುಸು ಹಿಂದು ಮುಂದಾಗಬಹುದು, ಭಟ್ಟರ ಟೈಮ್ ತಪ್ಪದು ಎಂಬುದು ಜನಜನಿತ ನುಡಿ. ಭಟ್ಟರು ಹೋಗುವುದರೊಳಗೆ ಗೌರಮ್ಮ ಪ್ರಾಂಗಣವನ್ನು ಗುಡಿಸಿ, ಗುಡಿಯ ಸುತ್ತಲೂ ಇರುವ ಗಿಡಗಳಿಗೆ ಅಲ್ಲಿಯೇ ಇರುವ ಹೊಂಡದಿಂದ ಒಂದೊಂದೇ ಚೆಂಬು ನೀರು ತಂದು ಹಾಕಿ, ಆ ಗಿಡಗಳಲ್ಲಿ ಬಿಟ್ಟಿರುವ ಹೂ ಕೊಯ್ದು ಇಟ್ಟಿರುವಳು. ಗೌರಮ್ಮ ವಿಧವೆ. ಅವಳು ಯಾವಾಗಿಂದ ವಿಧವೆ ಎಂಬುದು ಬೇರೆಯವರಿಗೆ ಹಾಗಿರಲಿ, ಸ್ವತಃ ಆಕೆಗೂ ತಿಳಿದಿಲ್ಲವೇನೋ. ಸದಾ ಕೆಂಪು ಸೀರೆ ಸುತ್ತಿ ಅದನ್ನೇ ಬೋಳು ತಲೆಯ ಮೇಲೆ ಹೊದ್ದಿರುವ ರೂಪವಲ್ಲದೆ, ಬೇರೆಯದಾದ ಒಂದು ರೂಪ ಅವಳಿಗೆ ಇದ್ದಿರಬಹುದಾದ ಕಲ್ಪನೆಯೂ ಯಾರಿಗೂ ಇರಲಿಲ್ಲ. ತೀರಾ ಹಿರಿತಲೆಗಳನ್ನು ಕೇಳಿದರೆ, ಅವಳ ಮದುವೆಯ ದಿನ ಭರ್ಜರಿ ಮಳೆ ಬಂದಿತ್ತು, ಮಾರನೆಯ ದಿನವೇ ಅವಳ ಗಂಡ ಹಾವು ಕಚ್ಚಿ ಸತ್ತುಹೋದ, ಈಕೆ ಮತ್ತೆ ತವರಿಗೇ ಬಂದಳು, ಯಾವ ಜನ್ಮದ ಶಾಪವೋ ಎಂಬಷ್ಟು ವಿವರಗಳು ಸಿಗುತ್ತವೆ. ಅವಳು ಹೇಗಿದ್ದಳು ಎಂಬುದರ ಬಗ್ಗೆ ನೆನಪನ್ನು ಎಷ್ಟು ಕೆರೆದುಕೊಂಡರೂ ಅವರಿಗೂ ಗೊತ್ತಿಲ್ಲ. ಅವತ್ತಿಂದಲೂ ಗುಡಿಯ ಪ್ರಾಂಗಣ ಗುಡಿಸುವ, ಗಿಡಕ್ಕೆ ನೀರು ಹಾಕುವ ಕೆಲಸ ಅವಳಾಗಿಯೇ ವಹಿಸಿಕೊಂಡಿದ್ದಳು.<br />
<br />
ಊರಿನ ಜನವಲ್ಲದೆ ಈ ದೇವಸ್ಥಾನಕ್ಕೆ ಬೇರೆಯವರು ಬಂದದ್ದಿಲ್ಲ. ಭಟ್ಟರ ಬಾಯಿಯಿಂದ ಬರುವ ಐತಿಹ್ಯ ಬಿಟ್ಟರೆ ಬೇರೇನೂ ವಿಶೇಷತೆಯೂ ಈ ಗುಡಿಯಲ್ಲಿ ಯಾರಿಗೂ ಕಾಣುವುದಿಲ್ಲ. ಭಟ್ಟರು ಮತ್ತು ಗೌರಮ್ಮನನ್ನು ಬಿಟ್ಟರೆ ಗುಡಿಗೆ ನಿತ್ಯ ಬಂದು ಹೋಗುವವರು ಯಾರೂ ಇಲ್ಲ. ಊರಿನ ಜನರಿಗೆ ಹಾಗಂತ ಭಕ್ತಿಯಿಲ್ಲ ಅಂತಲ್ಲ. ದಾರಿಯಲ್ಲಿ ಹೋಗುವವರು ಮೆಟ್ಟಿಲು ಬುಡದಲ್ಲಿ ನಿಂತು ಚಪ್ಪಲಿ ಕಳಚಿ, ಕೈ ಮುಗಿಯುವಾಗ ಭಕ್ತಿ ಭಾವ ಮುಖದಲ್ಲಿ ಕಂಡೇ ಕಾಣುತ್ತದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಗುಡ್ಡವನ್ನೇರಿ, ಗುಡಿಗೆ ಪ್ರದಕ್ಷಿಣೆ ಹಾಕಿ, ತೆಂಗಿನಕಾಯಿ ನೈವೇದ್ಯ ಮಾಡಿಸಿಕೊಂಡು ಹೋಗುವ ಸಂಪ್ರದಾಯ ಇದ್ದೇ ಇದೆ. ಆ ದಿನ ಭಟ್ಟರಿಗೆ ದಕ್ಷಿಣೆ ತುಸು ಜಾಸ್ತಿ ಸಿಗುತ್ತದೆ. ಅವರೇನೂ ಅದಕ್ಕಾಗಿ ಕಾಯುವವರಲ್ಲ. ಅವರ ಶ್ರಧ್ಧೆ ಯಾವಾಗಲೂ ಒಂದೇ ಮಟ್ಟದ್ದು. ಪರೀಕ್ಷೆಯ ಸಂದರ್ಭದಲ್ಲಿ ಹುಡುಗ ಹುಡುಗಿಯರ ಭಕ್ತಿ ಜಾಸ್ತಿಯಾಗುತ್ತದೆ. ಅವರೇನೂ ದಕ್ಷಿಣೆ ಕೊಡುವವರಲ್ಲವಾದರೂ ಭಟ್ಟರು ತುಂಬ ಶ್ರಧ್ಧೆಯಿಂದ ಪೂಜೆಮಾಡಿ, ಬಾಯಿ ತುಂಬ ಆಶೀರ್ವಾದ ಮಾಡುತ್ತಾರೆ. ಅವರ ಆಶೀರ್ವಾದಕ್ಕೆ ವರಬಲವೇನಾದರೂ ಇದ್ದಿದ್ದರೆ ಈ ಊರಲ್ಲಿ ಯಾರೂ ಫೇಲೇ ಆಗುತ್ತಿರಲಿಲ್ಲ. ಹಾಗೆ ಫೇಲಾದವರಿಗೂ ಅವರು ಸಾಂತ್ವನ ಹೇಳುತ್ತಾರೆ. ರಾಮನಂಥ ದೇವರೇ ಅನುಭವಿಸಿದ ಕಷ್ಟಗಳನ್ನು ವಿವರಿಸಿ ಉತ್ಸಾಹ ತುಂಬುತ್ತಾರೆ. ಇವರ ಆಶೀರ್ವಾದದ ಫಲವೋ, ದೇವರಿಗೆ ಪೂಜೆ ಮಾಡಿಸಿದ ಫಲವೋ, ಸ್ವಂತ ಪರಿಶ್ರಮದ ಫಲವೋ ಈ ಊರಿನ ಕೆಲವರು ಓದಿ ಬೆಂಗಳೂರು, ಮೈಸೂರು, ಅಮೇರಿಕಗಳಲ್ಲಿ ಒಳ್ಳೆಯ ನೌಕರಿ ಸೇರಿದ್ದಾರೆ. ಅವರು ಆಗೀಗ ಊರಿಗೆ ಬಂದಾಗ ಈ ಗುಡ್ಡವನ್ನೇರುತ್ತಾರೆ. ಮೈ ಸವರುವ ತಣ್ಣನೆಯ ಗಾಳಿಗೆ, ಕಣ್ತುಂಬುವ ಹಸಿರಿಗೆ ಒಡ್ಡಿಕೊಳ್ಳುತ್ತಾರೆ. ತಮ್ಮ ಬಾಲ್ಯವನ್ನು ನೆನಪಿಸಿಕೊಳ್ಳುತ್ತಾರೆ. ಭಟ್ಟರನ್ನು ಕಂಡು ಮುದ್ದಾಮಾಗಿ ಒಂದು ಪೂಜೆ ಮಾಡಿಸುತ್ತಾರೆ. ತಮ್ಮ ಆಢ್ಯತೆ ಪ್ರದರ್ಶಿಸಲು ನೂರರ ನೋಟನ್ನೆ ದಕ್ಷಿಣೆಗೆ ಹಾಕುವುದೂ ಉಂಟು. ಒಮ್ಮೆ ಅಮೆರಿಕದಿಂದ ಬಂದ ಹರಿ ಐನೂರರ ನೋಟು ಹಾಕಿದಾಗ, ಭಟ್ಟರು ಅಯ್ಯೋ! ಇದು ನನ್ನ ಯೋಗ್ಯತೆಗೆ ಮೀರಿದ್ದು ಮಾರಾಯ ಎಂದು ಹುಂಡಿಗೆ ಹಾಕಿದ್ದರು. ಹಾಗೆ ಯಾರಾದರೂ ಬಲವಾದ ದಕ್ಷಿಣೆ ಕೊಟ್ಟಾಗ ಗುಡ್ಡದಿಂದ ಮೇಲೇರುವ ಮೆಟ್ಟಿಲನ್ನ ಸರಿಯಾಗಿ ಕಟ್ಟಿದ್ದರೆ ಒಳ್ಳೆಯದು ಎಂಬ ಮಾತನ್ನು ಆಡುತ್ತಾರೆ. ಕೈ ತುಂಬ ಸಂಬಳ ಎಣಿಸುವ ಯಾರಾದರೂ ಮನಸ್ಸು ಮಾಡಿಯಾರು ಎಂಬುದು ಭಟ್ಟರ ಆಸೆ. ದೂರದೂರಲ್ಲಿ ಇರುವ ಅವರಿಗೆ ಈ ಗುಡಿ ಇದ್ದರೆಷ್ಟು ಹೋದರೆಷ್ಟು? ಊರೇ ಹೋದರೂ ಅವರಿಗೆ ಚಿಂತೆಯಾಗುವುದಿಲ್ಲ. ಇನ್ನು, ಮನೆಯ ಮೆಟ್ಟಿಲನ್ನೆ ರಿಪೇರಿ ಮಾಡಲು ದಿನ ಮುಂದೂಡುವ ಈ ಊರಿನ ಜನರಿಂದ ಅದು ಎಂದು ಆಗುತ್ತದೋ ಆಂಜನೇಯನೇ ಬಲ್ಲ.<br />
<br />
ವರ್ಷಕ್ಕೊಮ್ಮೆ ಇಲ್ಲಿ ದೊಡ್ಡ ಜಾತ್ರೆ ನಡೆಯುತ್ತದೆ. ಊರಿನ ಜನರೆಲ್ಲ ಇಂತಿಷ್ಟು ಎಂದು ವರಾಡ ಕೊಡುತ್ತಾರೆ. ಎಲ್ಲ ಜಾತಿಯವರೂ ಸೇರುತ್ತಾರೆ. ಗುಡಿಯ ಸುತ್ತಲಿನ ಜಾಗವನ್ನು ಸಗಣಿ ಹಾಕಿ ಸಾರಿಸಿ, ಗುಡಿಯನ್ನು, ರಥವನ್ನು ತೊಳೆದು ತೋರಣ ಬಿಗಿಯುತ್ತಾರೆ. ರಥ ಎಳೆಯುವ ಸಂಪ್ರದಾಯ ಇದೆ. ಹುಗಿದು ಹೋಗಿರುವ ಆ ಕಲ್ಲಿನ ರಥವನ್ನು ಎಳೆಯಲು ಸಾಧ್ಯವುಂಟೇ? ರಥದಲ್ಲಿ ಉತ್ಸವಮೂರ್ತಿಯನ್ನು ಕೂರಿಸಿ, ರಥಕ್ಕೆ ಹಗ್ಗ ಕಟ್ಟಿ ಎಳೆಯುವ ಶಾಸ್ತ್ರ ಪೂರೈಸುತ್ತಾರೆ. ಆಗ ಜೈ ಹನುಮಾನ್ ಕೀ, ಜೈ ರಾಮಚಂದ್ರಕೀ ಎಂಬೆಲ್ಲ ಭಕ್ತಿಭರಿತ ಉದ್ಗಾರ ಕೇಳಿಬರುತ್ತದೆ. ಕೆಲವು ಹುಡುಗರು ಉತ್ಸಾಹದಲ್ಲಿ ಜೈ ಮಹಾತ್ಮಾ ಗಾಂಧೀಕೀ ಎಂದೂ ಕೂಗಿ ದೊಡ್ಡವರಿಂದ ಬೈಸಿಕೊಳ್ಳುತ್ತಾರೆ. ಅನಂತರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಹೊತ್ತು ಗುಡಿಯ ಸುತ್ತ ಪ್ರದಕ್ಷಿಣೆ ಹಾಕುತ್ತಾರೆ. ಆಮೇಲೆ ಶಂಖ, ಜಾಗಟೆಗಳ ಕಿವಿಯೊಡೆಯುವ ಸದ್ದಿನ ಜತೆಗೆ ಮಂಗಳಾರತಿ. ಪ್ರಸಾದ ಸ್ವೀಕರಿಸಿದ ಅನಂತರ ಊಟ. ಲಿಂಗ, ಜಾತಿ, ವರ್ಗಕ್ಕನುಗುಣವಾಗಿ ಪಂಕ್ತಿ. ಯಾವುದೇ ತಕರಾರಿಲ್ಲ.<span class="Apple-tab-span" style="white-space: pre;"> </span> ಈ ದಿನ ಇಡೀ ಊರಿಗೆ ಊರೇ ಇಲ್ಲಿ ಸೇರಿರುತ್ತದೆ. ಗುಡ್ಡ ಏರಲಾರದ ಕೆಲವು ಹಳೆ ತಲೆಗಳು ಮಾತ್ರ ಮನೆಯಲ್ಲಿಯೇ ಕೂರುತ್ತಾರೆ. ಮಹಾಮಂಗಳಾರತಿಯ ಸಮಯದ ಶಬ್ದ ಕೇಳಿ ಕೂತಲ್ಲೇ ಭಕ್ತಿಯಿಂದ ನಮಸ್ಕರಿಸುತ್ತಾರೆ. ಊಟದ ಪ್ರಸಾದವಂತೂ ಅವರಿಗಾಗಿಯೇ ಗುಡಿಯಿಂದ ಬರುತ್ತದೆ.<br />
$$$$$$$$$$$$$$ <span class="Apple-tab-span" style="white-space: pre;"> </span><br />
<br />
ಎಷ್ಟೋ ವರ್ಷದಿಂದ ಇದನ್ನು ನೋಡುತ್ತ, ಮಾಡುತ್ತ ಬಂದಿದ್ದ ಭಟ್ಟರಿಗೆ ಈ ಬಾರಿಯ ರಥೋತ್ಸವದ ದಿನ, ಮರುದಿನ ತುಸು ಜಾಸ್ತಿಯೇ ಸುಸ್ತಾದಂತೆ ಅನಿಸಿತು. ಇತ್ತೀಚೆಗೆ ಮುಂಚಿನಂತೆ ಮೆಟ್ಟಿಲು ಹತ್ತಲಾಗುವುದಿಲ್ಲ. ಉಸಿರು ಹಿಡಿಯುತ್ತದೆ. ಬಳಲಿಕೆಯಾಗಿ ಹತ್ತು ಗಳಿಗೆ ಕೂರುವ ಅನ್ನಿಸುತ್ತದೆ. ಕೈಯಲ್ಲಿ ಹಿಡಿದ ಹರಿವಾಣ ಭಾರ ಎನಿಸುತ್ತದೆ. ತಮಗೂ ಎಪ್ಪತ್ತರ ಸಮೀಪ ಬಂತು. ಇನ್ನು ಈ ಪೂಜಾ ಕಾರ್ಯವನ್ನು ಮಗ ಶಂಭುವಿಗೆ ವಹಿಸುವುದು ಸೂಕ್ತ. ಈ ಬಾರಿ ಮಗ ಊರಿಗೆ ಬಂದಾಗ ಈ ಬಗ್ಗೆ ಮಾತನಾಡಬೇಕು. ಹನುಮ ದೇವರಿಗೆ ನಡೆವ ಪೂಜೆಯಲ್ಲಿ ವ್ಯತ್ಯಯ ಆಗಬಾರದಲ್ಲ. ಅವ ಪೂಜೆ ಮಾಡಿದರೂ ತಾವು ದೇವರ ಸನ್ನಿಧಿಗೆ ಹೋಗಬಾರದು ಎಂದೇನೂ ಇಲ್ಲವಲ್ಲ ಎಂದು ತೀರ್ಮಾನಿಸಿಕೊಂಡರು.<br />
<br />
ಶಂಭು ಚುರುಕು ಹುಡುಗ. ಸಿದ್ದಾಪುರದ ಸಂಸ್ಕ?ತ ಶಾಲೆಯಲ್ಲಿ ವೇದ, ಪ್ರಯೋಗಗಳನ್ನು ಶ್ರಧ್ಧೆಯಿಂದ ಕಲಿತಿದ್ದ. ತನ್ನ ಜೊತೆ ಆಡಿ ಬೆಳೆದ ಊರಿನ ಹುಡುಗರು ಇಂಗ್ಲಿಷ್ ಕಲಿತು, ಪಟ್ಟಣ ಸೇರಿ ನೌಕರಿಯಲ್ಲಿ ದುಡ್ಡು ಬಾಚುವುದು ಕಂಡು ಒಮ್ಮೊಮ್ಮೆ ಖಿನ್ನನಾಗುತ್ತಿದ್ದ. ತನ್ನನ್ನು ಪೇಟೆಯ ಶಾಲೆಗೆ ಸೇರಿಸದೆ ಇಲ್ಲಿ ತಂದು ಬಿಟ್ಟಿದ್ದಕ್ಕೆ ತುಂಬ ಬೇಸರಪಟ್ಟಿದ್ದ. ತಾನು ಕಲಿತ ಶಾಲೆಯಲ್ಲಿಯೇ ಈಗ ಪಾಠ ಹೇಳುತ್ತ, ಶಾರದಾಂಬೆಯ ಪೂಜೆ ಮಾಡುತ್ತ ತನಗೂ ಒಂದಲ್ಲ ಒಂದು ದಿನ ಒಳ್ಳೆಯ ದಿನಗಳು ಬರುತ್ತವೆ ಎಂದು ತನ್ನನ್ನು ತಾನೇ ಸಮಾಧಾನಿಸಿಕೊಳ್ಳುತ್ತಿದ್ದ. ತಾನು ಬೆಂಗಳೂರು ಸೇರಿದರೆ ಹೇಗೆ ಎಂದು ಬಹಳ ಬಾರಿ ಯೋಚಿಸಿದ್ದ. ಕಳೆದ ಬಾರಿ ಹರಿ ಅಮೆರಿಕದಿಂದ ಊರಿಗೆ ಬಂದಿದ್ದಾಗ, ಇಬ್ಬರೂ ಹನುಮನ ಗುಡಿಯ ಬಳಿ ಕೂತು ದಿಕ್ಕು ದೆಸೆಯಿಲ್ಲದೆ ಹರಟುತ್ತಿರುವಾಗ, ಇದ್ದಕ್ಕಿದ್ದಂತೆ ಹರಿ ಹೇಳಿದ ಮಾತು ತಲೆಯಲ್ಲಿ ಗುಂಗಿಹುಳುವಾಗಿತ್ತು. ಈ ಕೊಂಪೆಯಲ್ಲಿ ಏನಿದೆ ಅಂತ ಇರ್ತೀಯೋ? ನಿನಗೆ ತಿಳಿದಿರುವದರ ಕಾಲು ಭಾಗವೂ ತಿಳಿದಿರದ ಎಷ್ಟು ಜನ ಬೆಂಗಳೂರಲ್ಲಿ ಜುಂ ಅಂತ ಇದಾರೆ ಗೊತ್ತಾ? ನೀನಿಲ್ಲಿ ಒಂದು ವರ್ಷ ದುಡಿವ ದುಡ್ಡು ಅಲ್ಲಿ ಒಂದು ದಿನದಲ್ಲಿ ಆರತಿ ತಟ್ಟೆಗೆ ಬೀಳುತ್ತೆ. ಇನ್ನು ದೇವರ ವಿಷಯ_ಎಲ್ಲಾ ಕಡೆ ಇರೋ ದೇವರೂ ಒಂದೇ ಅಲ್ವಾ? ಇದೇ ಪೂಜೆ ಅಲ್ಲಿ ಮಾಡು ಅಷ್ಟೆ. ಈ ಬಾರಿ ಊರಿಗೆ ಹೋದಾಗ ಅಪ್ಪಯ್ಯನ ಬಳಿ ಈ ವಿಷಯ ಪ್ರಸ್ತಾಪ ಮಾಡಬೇಕು. ತೀರ್ಮಾನ ದಿನದಿನಕ್ಕೂ ಗಟ್ಟಿಯಾಗುತ್ತ ಬಂತು.<br />
#######<br />
ಹನುಮನಿಗೆ ನಮಸ್ಕರಿಸಿ, ಪಶ್ಚಿಮಕ್ಕೆ ಮುಖ ಮಾಡಿ ಮುಳುಗುವ ಸೂರ್ಯನ ಬದಲಾಗುವ ಬಣ್ಣ ನೋಡುತ್ತ ಕುಳಿತ ಆ ಕ್ಷಣದಲ್ಲಿ ಈ ದಿನ ಅಪ್ಪಯ್ಯನಿಗೆ ತನ್ನ ಯೋಜನೆ ತಿಳಿಸುವುದೇ ಸರಿ ಎಂಬ ನಿರ್ಧಾರ ಮಾಡಿ ಶಂಭು ಮೆಟ್ಟಿಲಿಳಿಯತೊಡಗಿದ. ತಾನು ಈ ಊರಲ್ಲಿ ಸಾವಿರ ವರ್ಷ ಪೂಜೆ ಮಾಡುತ್ತ ಕೂತರೂ ಉಧ್ಧಾರವಾಗುವುದಿಲ್ಲ. ತನ್ನ ಉಧ್ಧಾರ ಊರು ಬಿಡುವುದರಿಂದ ಮಾತ್ರ. ತನ್ನ ಈ ನಿರ್ಧಾರದಿಂದ ಶಂಭುವಿಗೆ ವಿಚಿತ್ರ ಉಮೇದು ಬಂದಿತ್ತು. ಆತ ಓಡುತ್ತಲೇ ಮೆಟ್ಟಿಲಿಳಿದ. ಅಪ್ಪನನ್ನು ಒಪ್ಪಿಸಿ ಬೆಂಗಳೂರಿಗೆ ಹೋಗಬೇಕೆಂಬ ನಿರ್ಧಾರ ಗುಡ್ಡದ ಬುಡ ಮುಟ್ಟುವ ವೇಳೆಗೆ ಅಪ್ಪ ಒಪ್ಪದಿದ್ದರೂ ಹೋಗುವುದೇ ಸರಿ ಎಂದು ಬದಲಾಗಿಬಿಟ್ಟಿತ್ತು.<br />
<br />
ರಾಮಚಂದ್ರಭಟ್ಟರು ಹೆಂಡತಿ ತೀರಿಕೊಂಡ ದಿನದಿಂದ ರಾತ್ರಿಯ ಊಟ ಬಿಟ್ಟುಬಿಟ್ಟಿದ್ದಾರೆ. ಬಾಳೆಹಣ್ಣು ಇದ್ದರೆ ಎರಡು ಹಣ್ಣು ತಿಂದು ಒಂದು ಲೋಟ ಹಾಲು ಕುಡಿಯುತ್ತಾರೆ. ಹಣ್ಣಿರದಿದ್ದರೆ ಬರಿಯ ಹಾಲು ಮಾತ್ರ. ಹಾಗಾಗಿ ರಾತ್ರಿ ಅವರ ಮನೆಯಲ್ಲಿ ಒಲೆ ಉರಿಯುವುದು ಹಾಲು ಕಾಯಿಸಲು ಮಾತ್ರ. ಶಂಭು ಬಂದಾಗ, ಅವನು ರಾತ್ರಿ ಇರುತ್ತಾನೆ ಎಂದಾದರೆ ಮಧ್ಯಾಹ್ನವೇ ತುಸು ಹೆಚ್ಚು ಅನ್ನ ತಯಾರಾಗುತ್ತದೆ. ಶಂಭು ಹಾಲು ಕಾಯಿಸಿ ಅಪ್ಪನಿಗೆ ಕೊಟ್ಟು ಅನಂತರ ತಾನೇ ಬಡಿಸಿಕೊಂಡು ಊಟ ಮುಗಿಸಿ, ನೆಲ ಒರೆಸಿ, ಪಾತ್ರೆ ತೊಳೆದು, ಶಂಕರಮಠದಿಂದ ತಂದ ವೇದಕ್ಕೆ ಸಂಬಂಧಿಸಿದ ಪುಸ್ತಕ ಓದಲು ಕೂರುತ್ತಾನೆ. ರಾಮಚಂದ್ರಭಟ್ಟರು ಜಗಲಿಯಲ್ಲಿ ಕೂತು ಏನಾದರೂ ಶ್ಲೋಕ ಪಠಿಸುತ್ತಾರೆ. ಶಂಭು ತೊಳೆದ ಪಾತ್ರೆ ಜೋಡಿಸಿಡುವ ವೇಳೆ ಒಳಗೆ ಬಂದರೆ ಶಂಭುವಿನ ಬಳಿ ಮಾತನಾಡುವುದಿದೆ ಎಂದರ್ಥ. ಈ ದಿನ ಅವರು ಹಾಗೆ ಒಳಬಂದು ಚಾಪೆ ಹಾಸಿ ಕೂತರು. ಹ್ಯಾಗೆ ತನ್ನ ತೀರ್ಮಾನದ ಸುದ್ದಿ ಎತ್ತುವುದು ಎಂದು ಒಳಗೊಳಗೇ ಯೋಚಿಸುತ್ತಿದ್ದ ಶಂಭುವಿಗೆ ದಾರಿ ಕಂಡಿತು. ಯಥಾಪ್ರಕಾರ ತನ್ನ ಮದುವೆಯ ಸುದ್ದಿ ಪ್ರಸ್ತಾಪ ಮಾಡಬಹುದು. ಮಾಣಿ, ನನಗೂ ವಯಸ್ಸಾಯಿತು. ನಿನ್ನ ವಯಸ್ಸಿನ ಹರಿ, ಶ್ರೀಪಾದ ಅವರಿಗೆ ಮದುವೆಯಾಗಿದೆ. ಒಳ್ಳೊಳ್ಳೆ ಜಾತಕ ಬರ್ತಿವೆ. ಮಾಡ್ಕೋತೀಯಾ? ಈ ಬಾರಿ ಹೀಗೆ ಹೇಳಿದ ಕೂಡಲೇ ತನ್ನ ಯೋಜನೆ ಹೇಳಿಬಿಡುವುದು. ಶಂಭು ಈ ಬಾರಿ ಅಪ್ಪನ ಮಾತಿಗಾಗಿ ತವಕದಿಂದ ಕಾದ. ತಾನು ಹೇಳಬೇಕೆಂದುಕೊಂಡಿದ್ದನ್ನು ಮನಸ್ಸಲ್ಲೇ ಪಠಿಸಿಕೊಂಡ.<br />
ನನಗೂ ವರ್ಷವಾಯಿತು. ಮುಂಚಿನ ಕಸುವು ಮೈಗಿಲ್ಲ. ಪೂಜೆಗೆ ಆ ಗುಡ್ಡ ಹತ್ತುವುದು ದಿನದಿನಕ್ಕೂ ತ್ರಾಸಾಗುತ್ತೆ. ಇಷ್ಟು ವರ್ಷ ದೇವರು ನಡೆಸಿದ. ಇನ್ನು ನೀನು ವಹಿಸಿಕೋಬೇಕು. ಮಠ ಬಿಟ್ಟು ಬಾ. ನಿನಗೆ ಮನಸ್ಸಿದ್ದರೆ ಮದುವೆ ಮಾಡಿಕೋ. ನಿನ್ನಿಷ್ಟ. ಅದಕ್ಕೆ ನನ್ನ ಒತ್ತಾಯವಿಲ್ಲ. ಹಣೇಲಿ ಬರೆದಾಗ ಆಗುತ್ತೆ. ಇವಿಷ್ಟನ್ನು ತಡೆತಡೆದು ಅಪ್ಪ ಹೇಳುವಾಗ ಅವನ ದನಿ ನಡುಗುತ್ತಿತ್ತೇ? ಇಷ್ಟು ವರ್ಷ ಇದೇ ಜೀವನವೆಂಬಂತೆ ಮಾಡುತ್ತಿದ್ದ ಪೂಜೆ ಇನ್ನು ಮಾಡಲಾಗುವುದಿಲ್ಲ ಎಂಬ ಕೊರಗೇ? ನಿನ್ನೆಯಿಂದ ತಯಾರಾಗಿಸಿಕೊಂಡಿದ್ದ ಮಾತುಗಳನ್ನು ಈಗ ಆಡುವುದು ಸರಿಯೇ? ಮದುವೆಯ ಪ್ರಸ್ತಾಪ ಮಾತ್ರವಾಗಿದ್ದರೆ ಸುಲಭವಾಗಿ ಹೇಳಿಬಿಡಬಹುದಿತ್ತು. ಈಗ? ಶಂಭು ಮೌನಿಯಾದ. ವಿಚಾರಮಾಡಿ ನಾಳೆ ಹೇಳು. ಮುಂದಾದರೂ ಈ ಪೂಜೆಯ ಜವಾಬ್ದಾರಿ ನಿಂದೇ ತಾನೇ.ಕೃಷ್ಣ, ಗೋವಿಂದ ಎನ್ನುತ್ತಾ ರಾಮಚಂದ್ರಭಟ್ಟರು ಎದ್ದು ಜಗಲಿಯಲ್ಲಿ ಹಾಸಿಕೊಂಡ ಚಾಪೆಯ ಮೇಲೆ ಮಲಗಿದರು. ದೀಪವಾರಿಸಿ ಶಂಭು ಕವಿದ ಕತ್ತಲಲ್ಲಿ ಮುಂದಿನ ದಾರಿ ಹುಡುಕುತ್ತ ಕೂತೇ ಇದ್ದ.<br />
<br />
ಇವತ್ತು ನೀನೇ ಪೂಜೆ ಮಾಡಿ ಬರ್ತಿಯೇನೋ? ಎಂದು ಬೆಳಗ್ಗೆ ಅಪ್ಪ ಕೇಳಿದಾಗ ಶಂಭುವಿನ ಹಿಂದಿನ ರಾತ್ರಿಯ ಗೊಂದಲ ಹಾಗೇ ಇತ್ತು. ಎಷ್ಟು ದಿನ ಆಗುತ್ತೋ ಅಷ್ಟು ದಿನ ಮಾಡಪ್ಪ. ನಿನಗೂ ತುಸು ನೆಮ್ಮದಿ. ಅದೂ ಸರಿ ಅನ್ನು. ಅನ್ನುತ್ತ ರಾಮಚಂದ್ರಭಟ್ಟರು ಪೂಜಾ ಸಾಮಗ್ರಿ ಹಿಡಿದು ಗುಡಿಯತ್ತ ಮಂತ್ರ ಪಠಿಸುತ್ತ ನಡೆದರು. ನಿಧಾನ ಮೆಟ್ಟಿಲು ಹತ್ತಲು ಶುರುಮಾಡಿದರು. ದಿನಕ್ಕಿಂತ ಹೆಚ್ಚು ಬಳಲಿಕೆಯಾದಂತನಿಸಿ ಕೂತರು. ನಾಳೆಯಿಂದಲೇ ಶಂಭುವಿಗೆ ಪೂಜೆ ವಹಿಸಿಬಿಡುವುದು ವಾಸಿ. ಇಲ್ಲಿಯೇ ಇದ್ದರೆ ತಾನು ಮದುವೆಯ ಪ್ರಸ್ತಾಪ ಪದೇಪದೇ ಮಾಡಬಹುದು ಎಂಬ ಭಯ ಅವನಿಗೆ ಇರಬಹುದು. ಅವನಿಷ್ಟದಂತೇ ಆಗಲಿ. ಅಭ್ಯಾಸಬಲದಿಂದ ಮಂತ್ರ ಪಠಿಸುತ್ತಿದ್ದರೂ ಮನಸ್ಸು ಎಂದಿನಂತೆ ಮಂತ್ರದ ಜೊತೆಗಿರಲಿಲ್ಲ. ಹೀಗೇ ಕೂತರೆ ಪೂಜೆಗೆ ತಡವಾಗುತ್ತೆ ಎಂದು ಏದುಸಿರು ಬಿಡುತ್ತಾ ಗುಡಿ ತಲುಪಿದರು. ತನ್ನ ಕೆಲಸ ಮುಗಿಸಿ ಕೂತಿದ್ದ ಗೌರಮ್ಮ ಯಾಕೋ ಇವತ್ತು ಭಾಳ ತಡ ಎಂದಳು. ವಯಸ್ಸಾಯಿತಲ್ಲ. ಗುಡ್ಡ ಹತ್ತುವುದು ತುಸು ನಿಧಾನವಾಗುತ್ತೆ. ಏನೋ! ನಿನ್ನೆಗಿಂತ ಇವತ್ತು ವಯಸ್ಸು ಎಷ್ಟು ವರ್ಷ ಹೆಚ್ಚಾಯಿತೋ? ಅವಳ ಮಾತಿಗೆ ಏನೂ ಉತ್ತರಿಸದೆ ಹೊಂಡದಿಂದ ನೀರು ಮಗೆದು ಕೈಕಾಲುಮುಖ ತೊಳೆದು ಪೂಜೆ ಮುಗಿಸಿ ಗೌರಮ್ಮನಿಗೆ ಪ್ರಸಾದ ಕೊಟ್ಟು ಕಂಭ ಒರಗಿ ಕೂತರು. ಪ್ರತಿದಿನ ಪೂಜೆ ಮುಗಿಸಿ ಹೀಗೆ ತುಸು ಹೊತ್ತು ಕೂರುವುದು ಅವರ ಅಭ್ಯಾಸ. ಗೌರಮ್ಮ ಕಾಯುತ್ತಾಳೆ. ಅನಂತರ ಇಬ್ಬರೂ ಧರ್ಮಕರ್ಮಗಳ ಬಗ್ಗೆ ಮಾತಾಡುತ್ತಾ ಗುಡ್ಡ ಇಳಿದು ಮನೆ ಸೇರುತ್ತಾರೆ. ಈ ದಿನವೂ ಗೌರಮ್ಮ ಭಟ್ಟರು ಹೊರಡಲಿ ಎಂದು ಮಟ್ಟಿಲ ಮೇಲೆ ಕೂತು ಕಾದಳು. ಎರಡೂ ಬದಿಗೂ ಹಸಿರು ಹೊದ್ದ ಬೆಟ್ಟ. ಬೈತಲೆಯಂತೆ ಕೆಂಪು ಮಣ್ಣಿನ ಬೀದಿ. ಚಂಡೆ ತೂಗಿಸುವ ಅಡಿಕೆಯ ಮರಗಳು. ಪ್ರತಿಬಾರಿ ಅಲ್ಲಿ ಕೂತಾಗಲೂ ಅವಳು ಪರವಶಳಾಗುತ್ತಾಳೆ. ಬದುಕಿನಲ್ಲಿ ತಾನು ಕಳೆದುಕೊಂಡ ಹಸಿರನ್ನು ಇಲ್ಲಿ ಮರಳಿ ಪಡೆಯಲು ಯತ್ನಿಸುವಂತೆ ಗೌರಮ್ಮ ಅವನ್ನೇ ನೋಡುತ್ತ ಕೂರುತ್ತಾಳೆ. ಬೋಳು ನೆತ್ತಿಗೆ ಹೊದ್ದ ಕೆಂಪು ಸೀರೆಯನ್ನು ದಾಟಿ ಸೂರ್ಯನ ಬಿಸಿಲು ನೆತ್ತಿಯನ್ನು ಕಾಯಿಸತೊಡಗಿದಾಗ ಗೌರಮ್ಮ ಈ ಲೋಕಕ್ಕೆ ಬಂದಳು. ನೋಡಿದರೆ ಇನ್ನೂ ಭಟ್ಟರು ಅದೇ ಭಂಗಿಯಲ್ಲಿ ಕಂಭ ಒರಗಿ ಕೂತೇ ಇದ್ದಾರೆ. ಇವತ್ತು ಮನೆಗೆ ಹೋಗುವ ವಿಚಾರ ಇಲ್ವಾ? ಏಳು! ಹೋಗುವಾ ಎಂದು ಎದ್ದು ನಿಂತಳು. ಅದೇ ಮೌನದಲ್ಲಿ ಭಟ್ಟರು ದೇವರನ್ನೇ ನೋಡುತ್ತಿದ್ದರು. ಇವಳ ಮಾತಿಗೆ ಏನೂ ಪ್ರತಿಕ್ರಿಯೆ ಬರಲಿಲ್ಲ. ಆ ಕಲ್ಲಿನ ಕಂಭದಿಂದ ಮೂಡಿದ ಮೂರ್ತಿಯಂತೆ ಕಂಡರು. ಗೌರಮ್ಮನಿಗೆ ಏನೋ ಅನುಮಾನ ಬಂದು ಎದೆ ಧಸಕ್ಕೆಂದಿತು. ದೇವರೇ ಈಗ ತಾನೇ ತನಗನಿಸಿದ್ದು ಪರಮ ಸುಳ್ಳಾಗಲಪ್ಪ ಎಂದು ಆಶಿಸಿದಳು. ವಿಧವೆಯಾದ ದಿನದಿಂದ ಇವತ್ತಿನವರೆಗೂ ಆಕೆ ಗುಡಿಯ ಜಗಲಿ ಹೊಕ್ಕಿರಲಿಲ್ಲ. ದಶಕಗಳ ರೂಢಿ ಹಿಂದೆಳೆದರೂ, ಈಗ ಧುತ್ತೆಂದು ರೂಢಿಗೆ ಹೊರತಾದ ವಾಸ್ತವ ಎದುರಿತ್ತು. ದೇವರೇ ದೇವರೇ ಅನ್ನುತ್ತಾ ಜಗಲಿಯೇರಿ, ಭಟ್ಟರೆದುರು ನಿಂತು ರಾಮಚಂದ್ರ ರಾಮಚಂದ್ರ ಎಂದು ಕೂಗಿದಳು. ಭಟ್ಟರು ಮಿಸುಕಾಡಲಿಲ್ಲ. ಏಳೋ ಎಂದು ಕಂಪಿಸುವ ದನಿಯಲ್ಲಿ ಹೇಳುತ್ತಾ ಜೀವನದಲ್ಲಿ ಮೊದಲ ಬಾರಿ ಪುರುಷನ ಭುಜ ಹಿಡಿದು ಅಲ್ಲಾಡಿಸಿದಳು. ದೇವರಿಗೆ ನಮಸ್ಕರಿಸುವ ಭಂಗಿಯಲ್ಲಿ ಭಟ್ಟರ ದೇಹ ಉರುಳಿಕೊಂಡಿತು.<br />
<br />
ಗೌರಮ್ಮ ಹೇಗೆ ಮೆಟ್ಟಿಲಿಳಿದಳು, ಹೇಗೆ ಶಂಭುವಿನ ಮನೆ ತಲುಪಿದಳು ಎಂಬುದು ಅವಳಿಗೂ ಗೊತ್ತಾಗಲಿಲ್ಲ. ನಿನ್ನಪ್ಪ ದೇವರ ಸನ್ನಿಧಿಯಲ್ಲೀ.....ಎಂದಿಷ್ಟು ಹೇಳುವಷ್ಟರಲ್ಲಿ ಬವಳಿ ಬಂದು ಎಚ್ಚರ ತಪ್ಪಿದಳು. ಪೂಜೆ ಮುಗಿಸಿ ಅಪ್ಪ ಬಂದ ಕೂಡಲೇ, ಜೊತೆಗೆ ಕೂತು, ತಿಂಡಿ ತಿನ್ನುವಾಗ ತನ್ನ ಯೋಜನೆ ಹೇಳುವ ತಯಾರಿಯಲ್ಲಿದ್ದ ಶಂಭುವಿಗೆ ಉರುಳಿಬಿದ್ದ ಗೌರಮ್ಮನನ್ನು ಕಂಡು ದಿಗಿಲಾಯಿತು. ಇವಳ ಪ್ರಾಣವೇ ಹೋಯಿತಾ ಎಂಬ ಗಾಬರಿಯಲ್ಲಿ ಮುಖಕ್ಕೆ ನೀರು ಚಿಮುಕಿಸಿದ. ಎತ್ತಿ ತಂದು ಜಗಲಿಯ ಚಾಪೆಯಲ್ಲಿ ಮಲಗಿಸಿದ. ಇದನ್ನು ಕುತೂಹಲದಿಂದ ನೋಡುತ್ತ ರಸ್ತೆಯಲ್ಲಿ ನಿಂತಿದ್ದ ಪಟೇಲರ ಮೊಮ್ಮಗನನ್ನು ಹೋಗೋ ಅಜ್ಜನಿಗೆ ಹೇಳೋ ಎಂದು ಓಡಿಸಿದ. ಗಾಬರಿಯಲ್ಲಿ ಪಟೇಲರು ಭಟ್ಟರ ಮನೆಯ ಮೆಟ್ಟಲೇರುವುದಕ್ಕೂ ಗೌರಮ್ಮ ಎಚ್ಚರಾಗುವುದಕ್ಕೂ ಸರಿಯಾಯಿತು. ಪುಣ್ಯಾತ್ಮನಪ್ಪ! ನನ್ನ ಬಳಿಯೇ ಇರಲಿ ಎಂದು ಕರೆಸಿಕೊಂಡೇಬಿಟ್ಟ. ನಾನು ಪಾಪಿ. ಯಾವಾಗ ಕಣ್ಬಿಟ್ಟು ಕರೆಸಿಕೊಳ್ತಾನೋ. ಗೌರಮ್ಮನ ಹಲುಬುವಿಕೆ ಪಟೇಲರಿಗೆ, ಶಂಭುವಿಗೆ ಅರ್ಥವಾಗಲು ತುಸು ಹೊತ್ತೇ ಬೇಕಾಯಿತು. ಅರ್ಥವಾಗುತ್ತಲೇ ಶಂಭು ಧಗ್ಗೆಂದು ಎದ್ದು ನಿಂತ. ಒಂದೇ ಉಸಿರಿಗೆ ಗುಡಿ ತಲುಪಿದ. ಅಪ್ಪನ ದೇಹ ನಮಸ್ಕರಿಸುವ ಭಂಗಿಯಲ್ಲೆ ಇತ್ತು. ಗೌರಜ್ಜಿ ಸುಳ್ಳು ಹೇಳುವವಳಲ್ಲ ಎಂಬುದು ಖಚಿತವಿದ್ದರೂ, ಯಾವುದೋ ಆಸೆ ಅವಳು ಹೇಳಿದ್ದು ಸುಳ್ಳಾಗಲಿ ಎಂದು ಬಯಸಿತ್ತು. ಆಸೆ ಭ್ರಮೆಯೆನಿಸಿದ ಆ ಕ್ಷಣ ಶಂಭು ಕುಸಿದು ತಾನೂ ಕಂಬಕ್ಕೊರಗಿದ.<br />
<br />
ಗಾಳಿಯೇ ಹೇಳಿತೋ ಎಂಬಂತೆ ಮನೆಮನೆಗೂ ಸುದ್ದಿ ಮುಟ್ಟಿತು. ಆ ಊರಿನ ಎಲ್ಲ ಜನರು, ಭಟ್ಟರನ್ನು ಬಲ್ಲ ಹತ್ತಿರದ ಊರಿನವರು, ಭಟ್ಟರ ಗುಣಗಾನ ಮಾಡುತ್ತ, ಪೂಜೆ ಮುಗಿಸಿ ದೇವರ ಸನ್ನಿಧಿಯಲ್ಲೇ ಪ್ರಾಣ ಬಿಟ್ಟ ಕಾರಣ ಖಂಡಿತವಾಗಿ ಸ್ವರ್ಗಕ್ಕೇ ಹೋಗುವವರು ಎಂದು ಪರಸ್ಪರ ಖಚಿತಪಡಿಸಿಕೊಳ್ಳುತ್ತ ಬಂದು ಸೇರಿದರು. ಮುಂದಿನ ಕಾರ್ಯಗಳೆಲ್ಲ ಸಾಂಗವಾಗಿ ಪಟೇಲರ ನೇತೃತ್ವದಲ್ಲಿ ನಡೆದು ಭಟ್ಟರ ಭೌತಿಕ ದೇಹ ಪಂಚಭೂತಗಳಲ್ಲಿ ವಿಲೀನವಾಯಿತು.<br />
<br />
೨<br />
ಹರಿ ಅಮೆರಿಕದಿಂದ ಬಂದ ವಿಷಯ ತಿಳಿದ ಶ್ರೀಪಾದ ತಾನೂ ರಜೆ ಹಾಕಿ ಊರಿಗೆ ಹೊರಡುವ ತೀರ್ಮಾನ ಮಾಡಿದ. ಭಟ್ಟರು ತೀರಿಕೊಂಡ ಸುದ್ದಿ ತಿಳಿದಾಗ, ಬರಬೇಕು ಎಂಬ ಅವನ ಬಯಕೆ ,ಅವನು ಯಾವುದೋ ಊರಲ್ಲಿ ಇದ್ದ ಕಾರಣ ಈಡೇರಿರಲಿಲ್ಲ. ಹರಿಯನ್ನು ಕಂಡ ಹಾಗೂ ಆಯಿತು, ಶಂಭುವಿನ ಜತೆಯೂ ನಾಲ್ಕು ಆಪ್ತ ಮಾತುಗಳನ್ನಾಡಿದಂತಾಯಿತು. ತಾನು ಮತ್ತು ಹರಿ ಮಾತ್ರ ಶಂಭುವಿನ ಆಪ್ತರು. ಅಪ್ಪನ ಸಾವಿನ ಅನಂತರ ಒಂಟಿಯಾಗಿರುವ ಶಂಭುವಿಗೆ ತುಸುವಾದರೂ ಸಮಾಧಾನವಾಗಬಹುದು.<br />
###########<br />
ಮೂವರೂ ಗುಡಿಯೆದುರು ಕೂತಿದ್ದರು. ಚಳಿಗಾಲದ ದಿನಗಳು. ಐದಕ್ಕೆಲ್ಲ ಸೂರ್ಯ ಮುಳುಗುವ ತಯಾರಿ ನಡೆಸಿದ್ದ. ಯಾರು ಮುಂಚೆ ಮಾತು ಶುರುಮಾಡಬೇಕು? ಯಾವ ಮಾತಿಂದ? ಯಾವಾಗಲು ಹರಿ ತನ್ನ ಅಮೆರಿಕದ ಯಾವುದೋ ಅನುಭವ ಹೇಳಲು ಶುರುಮಾಡುತ್ತಿದ್ದ. ಹುಟ್ಟಿದ ನದಿ ತನ್ನ ಪಾತ್ರ ತಾನೇ ಹುಡುಕುವಂತೆ, ಅನಂತರ ಅವರ ಹರಟೆ ಎಲ್ಲೆಲ್ಲಿಯೋ ಸಾಗುತ್ತಿತ್ತು. ಶಂಭುವಿನ ಅಪ್ಪನ ಸಾವು ಈಗ ಅವರ ನಡುವೆ ಕೂತು, ಏನು ಮಾತಾಡಿದರೆ ಹೇಗೋ ಎಂಬ ವಿಚಿತ್ರ ಶಂಕೆಹುಟ್ಟಿಸಿತ್ತು. ಯಾವ ಮಾತೂ ಈ ಮೌನದಷ್ಟು ಹಿಂಸೆ ಕೊಡಲಾರದು, ಇನ್ನು ತಡೆಯುವುದು ಸಾಧ್ಯವೇ ಇಲ್ಲ ಎಂಬ ಒತ್ತಡದಲ್ಲಿ ಶ್ರೀಪಾದ ಶಂಭುವಿನತ್ತ ತಿರುಗಿ ಮುಂದೇನು ಅಂತ ಪ್ರಶ್ನೆ ಮಾಡಿದ. ಶಂಭು ಏನೂ ಮಾತಾಡಲಿಲ್ಲ.<br />
ಅಂದ್ರೆ ವಾಪಸು ಸಿದ್ದಾಪುರಕ್ಕೆ ಹೋಗ್ತೀಯೋ ಅಥ್ವಾ ಊರಲ್ಲೆ ಉಳಿದು ನಿನ್ನಪ್ಪ ಇಲ್ಲೀವರೆಗೆ ಮಾಡಿದ್ದನ್ನು ನೀನು ಮಾಡಕ್ಕೆ ಶುರುಮಾಡ್ತೀಯಾ ಅಂತ ಶ್ರೀಪಾದ ಬಿಡಿಸಿ ಕೇಳಿದ. ತಾನು ಬೆಂಗಳೂರಿಗೆ ಹೋಗಬೇಕೆಂದು ತೀರ್ಮಾನಿಸಿದ್ದು, ಆ ದಿನವೇ ಅಪ್ಪ ನೀನು ಬಂದು ಪೂಜಾಕಾರ್ಯ ವಹಿಸ್ಕೋ ಎಂದದ್ದು, ಎಷ್ಟು ದಿನ ಆಗುತ್ತೋ ಅಷ್ಟು ದಿನ ನೀನೇ ಮಾಡು ಎಂದು ತಾನು ಹೇಳಿದ್ದು, ಆ ದಿನವೇ ಪೂಜೆ ಮುಗಿಸಿದ ಅಪ್ಪ ತೀರಿಕೊಂಡದ್ದು ಇವನ್ನೆಲ್ಲ ಶಂಭು ಹೇಳಿ, ಆ ದಿನ ತಾನೇ ಪೂಜೆಗೆ ಹೋಗಿದ್ದರೆ ಅಪ್ಪ ಸಾಯುತ್ತಿರಲಿಲ್ಲವೇನೋ. ತಾನು ತಪ್ಪು ಮಾಡಿದೆ. ಎಂದು ಕಂಪಿಸುವ ದನಿಯಲ್ಲಿ ಹೇಳಿ, ಈಗ ಹೇಳು. ಇದ್ನ ಬಿಟ್ಟು ಎಲ್ಲಿ ಹೋಗಲಿ? ಇದ್ರ ವಿರುಧ್ಧ ಹೋಗೋದು ಅಂದ್ರೆ ಕೊನೆಗಾಲದ ಅಪ್ಪನ ಆಸೆ ವಿರುಧ್ಧ ಹೋದಹಾಗೆ ಅಲ್ವಾ? ಅಪ್ಪನ ಆತ್ಮಕ್ಕೂ ಕೊರಗು ಹಚ್ಚಿದ ಹಾಗೆ ಆಗಲ್ವಾ? ಎಂದ.<br />
ತಾನು ಬೆಂಗಳೂರಿಗೆ ಹೋಗುವ ತೀರ್ಮಾನ ಮಾಡಿದ್ದು ಅಪ್ಪನ ಸೂಕ್ಷ್ಮಕ್ಕೆ ತಿಳಿದು ಅಪ್ಪ ಸಾಯುವ ಸಂಕಲ್ಪ ಮಾಡಿದರು ಎಂಬ ಅನುಮಾನ, ಅನಿಸಿಕೆ ಶಂಭುವಿನ ಮನಸ್ಸಲ್ಲಿ ಕೂತುಬಿಟ್ಟಿತ್ತು. ತನ್ನ ತೀರ್ಮಾನವೇ ಅಪ್ಪನನ್ನು ಕೊಂದಿತೇ ಎಂಬ ಅನುಮಾನ ವಿಚಿತ್ರವಾಗಿ ಅವನ ಮನಸ್ಸನ್ನು ಅಲ್ಲಾಡಿಸುತ್ತಿತ್ತು. ಅದನ್ನೂ ಈಗ ಹೇಳಿದ.<br />
<br />
ಶ್ರೀಪಾದನಿಗೆ ದೊಡ್ಡ ನಗು ಬಂತು. ತಾನು ಹಾಗೆ ನಕ್ಕದ್ದು ತಪ್ಪು ಅಂತ ಕೂಡಲೇ ಅನಿಸಿ, ತನ್ನ ನಗು ಶಂಭುವಿನಲ್ಲಿ ಏನು ಪ್ರತಿಕ್ರಿಯೆ ಹುಟ್ಟಿಸಿತು ಎಂಬ ಆತಂಕದಲ್ಲಿ ಅವನ ಮುಖವನ್ನೆ ನೋಡಿದ. ಅವನು ನಕ್ಕಿದ್ದು ನೋಡಿ, ಗೊಂದಲಗೊಂಡು, ತಾನು ತೀರ ಭಾವುಕತೆಯಲ್ಲಿ ಮಾತನಾಡಿದನೇ ಎಂದು ಶಂಭುವೂ ಅವನ ಮುಖ ನೋಡುತ್ತಿದ್ದ. ಯಾಕೋ ನಕ್ಕಿದ್ದು? ಶಂಭು ಮೃದುವಾಗಿ ಕೇಳಿದಾಗ, ಶ್ರೀಪಾದನ ಆತಂಕ ಇಳಿಯಿತು.<br />
ನಿನ್ನ ಯೋಚನೆಯ ಧಾಟಿ ಕಂಡು ನಗು ಬಂತು. ತಪ್ಪು ತಿಳೀಬೇಡ. ನಿನ್ನ ಅನಿಸಿಕೆಗೂ ಅಪ್ಪ ಸತ್ತಿದ್ದಕ್ಕೂ ಸಂಬಂಧವಿದೆ ಅಂತ ನನಗಂತೂ ಅನ್ನಿಸಲ್ಲ. ಹಾರ್ಟ್ ಫೈಲೂರ್ ಅಲ್ವಾ? ನೀನೇ ಪೂಜೆಗೆ ಹೋಗಿ, ಆಗ ಅಪ್ಪ ಸತ್ತಿದ್ರೆ, ಅಪ್ಪನ ಪೂಜೆ ತಪ್ಪಿಸ್ದೆ, ಹಾಗಾಗಿ ಸತ್ರು ಅಂತ ಕಾರಣ ಹುಡುಕ್ತಿದ್ದೆ. ಈ ಎರಡು ಘಟನೇಗೂ ಸಂಬಂಧ ಕಲ್ಪಿಸೋದು ತಪ್ಪು.<br />
ಆದ್ರೂ ನನಗೇನೋ........... ಶಂಭು ಅರ್ಧಕ್ಕೇ ಮಾತು ನಿಲ್ಲಿಸಿದ.<br />
ಸುಮ್ನೆ ಕಲ್ಪನೆ ಮಾಡು. ಗುಡ್ಡ ಇಳಿವಾಗ ಅಕಸ್ಮಾತ್ ನಾನು ಕಾಲು ಜಾರಿ ಬಿದ್ರೆ ನಾವಿಲ್ಲಿ ಸೇರಿದ್ದೆ ಕಾರಣ ಅಂತ ಹೇಳೋದು ಸರೀನಾ? ನಡಿಯೋದೆಲ್ಲಕ್ಕೂ ನಾವೇ ಕಾರಣ ಅನ್ನೋದು ಒಂದು ರೀತೀಲಿ ಅಹಂಕಾರ, ಮತ್ತೊಂದು ರೀತೀಲಿ ಮೂರ್ಖತನ. ಎಲ್ಲದಕ್ಕೂ ಮನಸ್ಸು ಕಾರಣ ಹುಡುಕೋದು ಅದರ ದೌರ್ಬಲ್ಯ. ಅಥ್ವಾ ಎಲ್ಲ ಕಾರ್ಯವನ್ನೂ ಹಿಂದಿನ ಯಾವುದೋ ಒಂದು ಕಾರ್ಯದ ಜತೆ ಹೊಂದ್ಸಿ ನಿರಂತರತೇನ ಉಳಿಸ್ಕೋಬೇಕು ಅನ್ನೋದು. ಅಷ್ಟೆ.<br />
ಆದ್ರೆ ನೀನು ಇಲ್ಲಿ ಬರ್ಲಿಲ್ಲ ಅಂತಿಟ್ಕೊಂಡ್ರೆ ನೀನು ಬೀಳ್ತಿರಲಿಲ್ಲ ಅನ್ನೋದು ಅಷ್ಟೇ ಸತ್ಯ ಅಲ್ವಾ?<br />
ನಾನು ಇಲ್ಲಿಗೆ ಬಂದದ್ದೂ ಬಿದ್ದಿದ್ದರ ಒಂದು ಕಾರಣ ಅಂತಾದರೆ ಇಲ್ಲಿಗೆ ಬಂದಿದ್ದರ ಕಾರಣ, ಆ ಕಾರಣದ ಕಾರಣ ಹೀಗೆ ಹೋಗಿ ಹೋಗಿ ನಮ್ಮ ಹುಟ್ಟೇ ಕಾರಣ ಅನ್ಬೇಕಾಗುತ್ತೆ. ಮತ್ತೆ ನಮ್ಮ ಹುಟ್ಟಿಗೆ ಹಿಂದಿನ ಜನ್ಮದ ಕರ್ಮ ಕಾರಣ ಅಂತ ನಿನ್ನ ಧರ್ಮಶಾಸ್ತ್ರ ಹೇಳುತ್ತಲ್ಲ. ಹೀಗೆ ಹಿಂದೆ ಹಿಂದೆ ಹೋಗ್ತ ಇದ್ರೆ ನಾವು ಎಲ್ಲಿಗೆ ಮುಟ್ತೀವಿ?<br />
ಮೂವರೂ ಕಕ್ಕಾಬಿಕ್ಕಿಯಾಗಿ ಕೂತರು. ಮುಂದೇನು ಎಂದು ವಿಚಾರ ಮಾಡಲು ಹೊರಟವರು ಹಿಂದೆ ಎಲ್ಲೋ ಹೋಗಿಬಿಟ್ಟಿದ್ದೇವಲ್ಲ! ಒಂದಕ್ಕೊಂದು ಕೊಕ್ಕೊಡುತ್ತ ಸಾಗುವ ಘಟನೆಗಳ ಸರಪಳಿಯಲ್ಲಿ ಯಾವುದು ಕಾರ್ಯ? ಯಾವುದು ಕಾರಣ?<br />
ಈ ನಿರಂತರತೆಯ ಬಯಕೆ ಇಲ್ದಿದ್ರೆ ಮುಂದೇನು ಅಂತ ನಾವು ಕೇಳೋ ಅಗತ್ಯ ಎಲ್ಲಿದೆ? ಹಿಂದೇನೋ ಆಗಿದ್ದನ್ನು ಈಗ ಇಟ್ಕೊಂಡು ಮುಂದಿನ ಬಗ್ಗೆ ಯಾಕೆ ಯೋಚ್ನೆ? ನಮ್ಮ ಈಗಿನ ತೀರ್ಮಾನ ಈಗಂತೂ ಕಾರ್ಯಾನೇ ಹೊರತು ಕಾರಣ ಅಲ್ಲ. ಅದು ಕಾರಣ ಆಗೋದು ಮುಂದಿನ ಕಾರ್ಯ ಆದಮೇಲೇ ತಾನೇ? ಏನಾಗಬಹುದು ಅಂತ ನಾವು ಊಹಿಸಬಹುದೇ ಹೊರತು ಖಚಿತವಾಗಿ ಹೇಳಕ್ಕೆ ಆಗಲ್ಲ. ಹಾಗಾಗಿ ಈಗ ಶಂಭು ಇಲ್ಲೇ ಇರಬೇಕೋ ಅಥ್ವಾ ಹೊರಡಬೇಕೋ ಎಂಬಷ್ಟರ ಬಗ್ಗೆ ಮಾತ್ರ ಮಾತಾಡುವ. ಹರಿ ಹೇಳಿದ.<br />
ಹ್ಯಾಗ್ರಯ್ಯ ಹೊರಡೋದು? ತೋಟ ಏನ್ ಮಾಡೋದು? ಮನೆ?<br />
ಅದೆಲ್ಲಿಂದ ನಿಮ್ಗೆ ಬಂದಿತ್ತೋ ಅವರಿಗೇ ವಾಪಸು ಮಾಡು.ಶ್ರೀಪಾದ ಹೇಳಿದ.<br />
ಸರಿ. ತೋಟ ವಾಪಸು ಕೊಡುವಾ. ಪೂಜೆ? ಪಟೇಲ್ರೇ, ನೀವೇ ಪೂಜೆ ಮಾಡಿ ಅನ್ನೋದೇ? ಇಷ್ಟು ವರ್ಷ ಅಪ್ಪನ ಶ್ರಧ್ಧೆಗೆ ಏನೂ ಬೆಲೆ ಇಲ್ವಾ? ಈ ದೇವರ ಬಗ್ಗೆ ನನಗೆ ಅಪ್ಪನಿಗೆ ಇದ್ದಷ್ಟು ನಂಬಿಕೆ ಇರದಿದ್ರೂ ಎಲ್ಲ ಬಿಡುವಷ್ಟು ಧೈರ್ಯ ಕೂಡ ಇಲ್ಲ.<br />
ಸರಿ, ತೋಟ ಮನೆ ನೋಡ್ಕೊಂಡು, ಪೂಜೆ ಮಾಡ್ತಾ ಇರಲ್ಲ. ಎಲ್ಲಿದೆ ಸಮಸ್ಯೆ? ಆದ್ರೆ ದಿನಕ್ಕೆ ನಾಲ್ಕು ಜನ ಕೂಡ ಬರದ ಈ ಗುಡಿ ಪೂಜೆ ಮಾಡ್ತಾ ಎಷ್ಟು ದಿನ ಇರೋದು? ಅಪ್ಪನಿಗೆ ಈ ದೇವರ ಪೂಜೆಯೇ ಬದುಕಾಗಿತ್ತು. ನಂಗೆ ಹೆಚ್ಚೆಂದರೆ ಇದು ಬದುಕಿನ ಒಂದು ಅಂಗ ಅನ್ನಿಸ್ಬಹುದು... ... ನಂಗೇನೂ ತೋಚ್ತಾ ಇಲ್ಲ. ಶಂಭು ಉಳಿದಿಬ್ಬರ ಮುಖ ನೋಡುತ್ತಾ ಹೇಳಿದ.<br />
ಇದೊಳ್ಳೇ ತರ್ಲೆ ಆಯ್ತಪ್ಪ. ಇರೋಕಾಗಲ್ಲ. ಹೋಗೋ ಮನಸ್ಸಿಲ್ಲ......ನಿನ್ನ ಪ್ರಕಾರ ನೀನು ಇಲ್ಲೇ ಇರ್ಬೇಕು, ಜನ ಬರ್ಬೇಕು. ಇದೊಂದು ಪುಣ್ಯ ಕ್ಷೇತ್ರ ಆಗ್ಬೇಕಷ್ಟೇ. ಇದ್ನ ಯಾರಯ್ಯಾ ಹಾಗೆ ಮಾಡೋರು? ಹರಿ ಹೇಳಿದ.<br />
ನಾವೇ ಯಾಕೆ ಮಾಡ್ಬಾರದು?ಶ್ರೀಪಾದ ಹೇಳುತ್ತಾ ಎದ್ದ. ಅವನ ಈ ಮಾತು ಕೇಳಿ ಇಬ್ಬರೂ ಹಾಗಂದ್ರೆ ಏನು ಅನ್ನುವಂತೆ ಅವನ ಮುಖ ನೋಡಿದರು.ಈ ಗುಡೀನ ಶ್ರೀರಾಮ ಕಟ್ಟಿಸ್ದ ಅನ್ನೊ ದಾಖಲೆ ಇದ್ಯಾ? ಅದ್ರೆ ರಾಮಚಂದ್ರಭಟ್ಟರು ಹಾಗೆ ನಂಬ್ತಾ, ಹೇಳ್ತಾ ಈ ಜಾಗಕ್ಕೆ ಒಂದು ಪೌರಾಣಿಕ ಹಿನ್ನೆಲೆ ಕೊಟ್ಟಿದ್ದರು. ಈ ಗುಡಿಗೆ ರಾಮಾಯಣದ ಸಂಬಂಧ ಹುಡುಕಿದ್ದರು. ನೀನು ಹೇಳಿದ್ಯಲ್ಲ ಈಗ್ತಾನೆ ಪುಣ್ಯಕ್ಷೇತ್ರ ಆಗ್ಬೇಕಷ್ಟೇ ಅಂತ ಅದ್ನೆ ಅವರು ಮಾಡೋ ಪ್ರಯತ್ನ ಮಾಡಿದ್ದು. ಇಲ್ಲಿ ಬರೋ ಊರಿನ ಜನ್ರಿಗೆ ಭಕ್ತಿ, ಶ್ರಧ್ಧೆ ಇರ್ಬೇಕು ಅಂತ ಅವರು ಹಾಗೆ ಹೇಳಿದ್ದೋ ಏನೋ. ಆದ್ರೆ ಈಗ ಜನಕ್ಕೆ ಭಕ್ತಿ, ಶ್ರಧ್ಧೆ ಬೇಡ. ಅವರಿಗೆ ರಾಮಾಯಣ ಕೂಡ ಬೇಡ. ಈಗಿನ ಅವರ ಲೌಕಿಕಕ್ಕೆ ಒದಗೋ ಅಂತಹ, ಹೊಂದೋ ಅಂತಹ ಕಾರಣ ಇದ್ರೆ ಆಸಕ್ತಿ ತೋರಿಸ್ತಾರೆ. ಈಗ, ಇವತ್ತೇ ನನಗೆ ಲಾಭ ಇದೆ ಅನ್ನೋ ನಂಬಿಕೆ ಬರ್ಬೇಕು. ಅವರಿವರಿರ್ಲಿ, ನಮಗೆ ಈ ಗುಡೀ ಬಗ್ಗೆ ಎಲ್ರಯ್ಯಾ ಇದೆ ಶ್ರಧ್ಧೆ? ಶಂಭು ಹೇಳಿದ್ದು ಸರಿ. ಜನ ಬರ್ಬೇಕು, ಬರೋ ಹಾಗೆ ಮಾಡ್ಬೇಕು.ಶ್ರೀಪಾದನ ಅಭಿಪ್ರಾಯ ಸರಿ ಅಂತ ಉಳಿದಿಬ್ಬರಿಗೂ ಅನಿಸಿದರೂ, ಮುಂದೇನು ಅನ್ನೋದು ತಿಳೀಲಿಲ್ಲ. ಶ್ರೀಪಾದನೇ ಹೇಳಲಿ ಎಂಬಂತೆ ಅವನ ಮುಖ ನೋಡಿದರು. ಶ್ರೀಪಾದ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ ರಥದ ಎದುರು ನಿಂತ. ಇಲ್ಲಿರುವ ಏನನ್ನು ವೈಭವೀಕರಿಸಿದರೆ ಜನ ಆಕರ್ಷಿತರಾಗಬಹುದು? ಗುಡಿಯ ಒರಟಾದ ಕಂಬಗಳು. ರಥದ ಕೆತ್ತನೆಯಲ್ಲೂ ನಾಜೂಕಿಲ್ಲ. ಅದನ್ನು ನೋಡಲು ಯಾರೂ ಇಲ್ಲಿಗೆ ಬರಲಾರರು. ಬಂದರೂ ಎಲ್ಲೋ ಕಲೆಯ ಬಗ್ಗೆ ಆಸಕ್ತಿ ಇರುವ ನಾಕಾರು ಮಂದಿ. ಶ್ರೀಪಾದ ಹೊಂಡದ ಬಳಿ ನಿಂತ. ಈ ಹೊಂಡದಿಂದಲೇ ಗೌರಜ್ಜಿ ನಿತ್ಯ ಗಿಡಗಳಿಗೆ ನೀರು ಹಾಕುತ್ತಿದ್ದಳು. ದೇವರ ಅಭಿಷೇಕಕ್ಕು ಇದೇ ನೀರು. ಎಂಥ ಬಿರು ಬೇಸಗೆಯಲ್ಲೂ ಈ ಹೊಂಡದ ನೀರು ಬತ್ತಿದ್ದಿಲ್ಲ. ಕಿರುಬೆರಳ ಗಾತ್ರದ ನೀರು ಸದಾ ಹರಿಯುತ್ತದೆ. ಶ್ರೀಪಾದ ನಮ್ಮ ಪ್ರಶ್ನೆಗೆ ಉತ್ತರ ಸಿಕ್ಕಿತು ಕಣ್ರೋ ಎಂದ. ಶ್ರೀಪಾದನ ಹಿಂದೆಯೇ ಒಡಾಡುತ್ತಿದ್ದ ಇಬ್ಬರೂ ಏನೆಂಬಂತೆ ಅವನನ್ನು ನೋಡಿದರು.<br />
ಈ ಜಾಗಕ್ಕೆ ನಿನ್ನಪ್ಪ ಧಾರ್ಮಿಕವಾದ ಒಂದು ಮಹತ್ವ ಪ್ರಚುರಪಡಿಸಿದ್ದರು. ನಾವೀಗ ಅದನ್ನು ಬಳಸಿಕೊಂಡು ಲೌಕಿಕಲಾಭಕ್ಕೂ ಒದಗುವ ಮಹತ್ವವಿದೆ ಅನ್ನೋ ಪ್ರಚಾರ ಮಾಡ್ಬೇಕು. ಈ ಹೊಂಡದ ನೀರನ್ನು ತೀರ್ಥವಾಗಿ ಪರಿವರ್ತಿಸಬೇಕು.ಸಕಲ ಪಾಪ ನಾಶಕ, ಆರೋಗ್ಯದಾಯಕ, ಪುಣ್ಯಪ್ರದಾಯಕ ಎಂಬುದೇ ಇದರ ಮಹತ್ವ.<br />
ಹಾಗೆ ಮಾಡೋದು ತಪ್ಪಲ್ಲವಾ? ಶಂಭು ಹೇಳಿದ.<br />
ಯಾಕೆ ತಪ್ಪು? ಇದರ ಬಗ್ಗೆ ಊರಿನ ಜನ ಏನು ಅಂದುಕೊಂಡಿದ್ದಾರೋ ಅದನ್ನೇ ನಾವು ಬೇರೆಯವರಿಗೂ ಗೊತ್ತಾಗೋಹಾಗೆ ಮಾಡೋದು. ಇದು ಸುಳ್ಳು ಅಂತ ನೀನು ಅನ್ನೋದಾದ್ರೆ ಈ ಕಲ್ಲಿನ ಮೂರ್ತಿನ ಯಾಕೆ ದೇವರು ಅಂತ ತಿಳೀಬೇಕು? ನೀನು ಇದರ ಪೂಜೆ ಪುನಸ್ಕಾರ ಅಂತ ಯಾಕೆ ಒದ್ದಾಡಬೇಕು? ನೀನು ನಂಬಿರೋದನ್ನೇ ಪ್ರಚಾರ ಮಾಡ್ಬೇಕು ಅಂದಿದ್ದು. ಅದರ ವಿಚಾರ ನನಗೆ ಬಿಡಿ. ಆದ್ರೆ ಒಂದ್ಮಾತು. ನಾವಿಲ್ಲಿ ಇವತ್ತು ಏನೂ ಮಾತಾಡಿಲ್ಲ ತಿಳೀತಾ?ಅವನ ಈ ಮಾತು ಇಡೀ ಸನ್ನಿವೇಶಕ್ಕೆ ಒಂದು ಗೂಢತೆಯನ್ನು ಸೃಷ್ಟಿಸಿತು. ಇಬ್ಬರೂ ತಲೆಯಾಡಿಸಿದರು.<br />
###########<br />
ಶಂಭುವಿಗೆ ತಳಮಳ ಶುರುವಾಗಿತ್ತು. ಈ ಹೊಂಡದ ನೀರು ತೀರ್ಥ ಎಂದು ಪ್ರಚಾರ ಮಾಡುವುದು ಮೋಸವಲ್ಲವೇ? ಜನರಿಗೆ ಭ್ರಮೆ ಹುಟ್ಟಿಸುವುದು ಸರಿಯೇ? ಭ್ರಮೆ ಎಂದಾದರೆ ತಾನು ಈ ಗುಡಿಯನ್ನು ಗುಡಿ ಎಂದು ನಂಬಿದ್ದು, ಈ ಕಲ್ಲಿನ ಮೂರ್ತಿಯನ್ನು ದೇವರು ಎಂದು ನಂಬಿದ್ದು, ತಾನು ಹೇಳುವ ಮಂತ್ರವನ್ನು ಮಂತ್ರ ಎಂದು ನಂಬಿದ್ದು ಎಲ್ಲವೂ ಭ್ರಮೆಯೇ ಇರಬಹುದಲ್ಲ? ನಾನು ಇದ್ದೇನೆ, ನಾನು ಶಂಭು ಅನ್ನೋದು ಕೂಡ ಭ್ರಮೆಯೇ ಇರಬಹುದು. ನಂಬಿದ್ದೇ ವಾಸ್ತವವೇ? ಯಾವುದು ಸರಿ? ಯಾವುದು ತಪ್ಪು? ಯಾವುದು ಪುಣ್ಯ? ಯಾವುದು ಪಾಪ? ಮಲಗಿದ್ದವ ವಿಚಿತ್ರ ಆತಂಕದಲ್ಲಿ ಎದ್ದು ಕುಳಿತ. ಮನೆಯ ಹೊರಗೆ ಬಂದ. ಅಂಗಳದ ತಂಪು ಗಾಳಿಗೆ ಮೈಯೊಡ್ಡಿದಾಗ ಹಿತವೆನಿಸಿತು. ಲೆಕ್ಕಕ್ಕೆ ಸಿಗದಷ್ಟು ನಕ್ಷತ್ರಗಳು. ಬೂದಿ ಚೆಲ್ಲಿದಂತೆ ಕಾಣುವ ಆಕಾಶಗಂಗೆ. ಸಪ್ತರ್ಷಿ ಮಂಡಲ. ವೃಷಭ ರಾಶಿ. ಇಡೀ ಬದುಕೇ ಒಂದು ನಂಬಿಕೆ ಎಂದಾಕ್ಷಣದಲ್ಲಿ ಅನಿಸಿತು. ಯಾರೋ ಮಾಡಿದ ತೀರ್ಮಾನಗಳನ್ನು ಒಪ್ಪುತ್ತ ಹೋಗುವುದೇ ಸುಖ. ಅಪ್ಪ ಹಾಗೇ ಇದ್ದ. ಅಪ್ಪನ ಅಪ್ಪನೂ ಹಾಗೇ ಇದ್ದನೋ ಏನೋ. ಶ್ರೀಪಾದ ಹೇಳಿದಂತೆ ಮಾಡುವುದು. ಏನಾಗುತ್ತೋ ಆಗಲಿ. ಈಗ ಹಿತವೆನಿಸಿತು. ಒಳಬಂದು ಮಲಗುವ ಬದಲು ಅಲ್ಲೇ, ಜಗಲಿಯಲ್ಲಿ ಒರಗಿ ನಕ್ಷತ್ರಗಳನ್ನು ವೀಕ್ಷಿಸತೊಡಗಿದ. ಯಾವಾಗಲೋ ನಿದ್ದೆ ಆವರಿಸಿತು.<br />
$$$$$$$$$$$$<br />
ಇನ್ನುಳಿದ ಘಟನೆಗಳನ್ನು ಸಂಕ್ಷಿಪ್ತವಾಗಿ ಹೇಳಿದರೆ ಸಾಕು. ಒಂದು ದಿನ ಬೆಳಗ್ಗೆ ಟಿವಿಯವರು ಹನೂರಿಗೆ ಬಂದಿಳಿದರು. ಗುಡಿಯ ಸುತ್ತಮುತ್ತ, ರಥದ ಅತ್ತಿತ್ತ, ಹೊಂಡದೆದುರು, ಕೆರೆಯಬಳಿ ನಿಂತು ಚಿತ್ರ ತೆಗೆದರು. ಸುದ್ದಿ ಊರಿನ ತುಂಬ ಹರಡಿ ಊರಿನ ಜನ ತಮ್ಮ ಕೆಲಸ ಮರೆತು ಇಲ್ಲಿ ಸೇರಿದರು. ಕ್ಯಾಮರಾದವನ ಹಿಂದೆಮುಂದೆ ತಾವೂ ಓಡಾಡಿದರು. ತಮ್ಮ ಚಿತ್ರವೂ ಬೀಳಲಿ ಎಂದು ಆಸೆಪಟ್ಟರು. ಗುಡ್ಡ ಏರಲಾಗದೆ ಬುಡದಲ್ಲಿಯೇ ಕೂತಿದ್ದ ಪಟೇಲರ ಬಳಿ ಟೀವಿಯವರು ಗುಡಿಯ ಬಗ್ಗೆ ನಾಲ್ಕು ಮಾತಾಡಲು ಹೇಳಿದರು. ಪಟೇಲರತ್ತ ಕ್ಯಾಮರಾ ತಿರುಗಿದ ಕೂಡಲೇ ಅವರ ಬಳಿ ನಿಂತ ಎಲ್ಲರೂ ಹಲ್ಲಷ್ಟೂ ಕಾಣುವಂತೆ ನಗಲು ಯತ್ನಿಸಿದರು. ಪಟೇಲರು ಕಷ್ಟಪಟ್ಟು ಈ ಗುಡಿ ರಾಮಾಯಣದ ಕಾಲದಿಂದಲೂ ಇದೆ. ತಮ್ಮೂರನ್ನು ಕಾಯಿತ್ತಿರುವುದು ಈ ದೇವರೇ. ಈ ದೇವರನ್ನು ನಂಬಿದವರಿಗೆ ಬಯಸಿದ್ದು ಸಿಕ್ಕಿದೆ. ಎಲ್ಲರಿಗೂ ಒಳ್ಳೇದಾಗಲಿ ಎಂದರು. ಗೌರಜ್ಜಿ ಹೊಂಡದಿಂದ ನೀರು ತಂದು ಗಿಡಕ್ಕೆ ಹಾಕುತ್ತಿರುವ ದೃಶ್ಯದ ಚಿತ್ರಣ ನಡೆಯಿತು. ಶಂಭು ಪೂಜೆ ಮಾಡುವ, ಮಂತ್ರ ಹೇಳುತ್ತ ಅಭಿಷೇಕ ಮಾಡುವ ಚಿತ್ರಣ ಆಯಿತು. ಇದು ಯಾರು ಯಾಕೆ ಮಾಡಿದರು ಎಂಬುದು ಯಾರಿಗೂ ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ಥರ ಊಹಿಸಿದರು.<br />
ಇಷ್ಟಾದ ಹದಿನೈದು ದಿನಕ್ಕೆ ಹನೂರಿನ ಬಗ್ಗೆ ಟಿವಿಯಲ್ಲಿ ಸಾಕ್ಷ್ಯಚಿತ್ರವೊಂದು ಬಂತು. ಹನೂರೆಂದರೆ ಹನುಮನ ಹುಟ್ಟಿದೂರು, ಅಲ್ಲಿರುವ ಗುಡಿ ರಾಮ ಕಟ್ಟಿಸಿದ್ದು, ಹೊಂಡದ ನೀರು ರಾಮತೀರ್ಥ. ಈ ನೀರಿಗೆ ವಿಶೇಷ ಶಕ್ತಿಯನ್ನು ಶ್ರೀರಾಮ ದಯಪಾಲಿಸಿದ್ದಾನೆ. ಹನುಮನಿಗೆ ಅಭಿಷೇಕ ಮಾಡಿದ ನೀರು ತೀರ್ಥವಾಗುತ್ತದೆ. ಅದಕ್ಕೆ ಪಾಪ ಪರಿಹರಿಸುವ, ರೋಗ ವಾಸಿ ಮಾಡುವ ಅದ್ಭುತ ಗುಣವಿದೆ. ಈ ಹೊಂಡದ ನೀರು ಹರಿವ ಪ್ರಮಾಣ ಮಳೆಗಾಲದಲ್ಲೂ ಬೇಸಗೆಯಲ್ಲೂ ಒಂದೇ ರೀತಿ. ಹರಿದ ನೀರು ಸೇರುವ ಕಳಗಿನ ಕೆರೆಯ ನೀರಲ್ಲಿ ಮಿಂದರೆ ಚರ್ಮರೋಗಗಳೆಲ್ಲ ವಾಸಿಯಾಗುತ್ತವೆ. ಈ ಕೆರೆಯ ನೀರು ಸಂಚಿತಕರ್ಮನಾಶಕ. ಗುಡಿ, ರಥ, ಹೊಂಡ, ಕೆರೆಗಳನ್ನು ತೋರಿಸುತ್ತಾ ಈ ವಿವರಣೆಗಳೆಲ್ಲ ಬಂದವು. ಗೌರಜ್ಜಿ, ಪಟೇಲರನ್ನು ತೋರಿಸುತ್ತಾ ಇವರಿಗೆ ನೂರು ವರ್ಷ ದಾಟದ್ದರೂ ಹೀಗೆ ಇರಲು ತೀರ್ಥವೇ ಕಾರಣ ಎಂಬ ವಿವರಣೆಯೂ ಇತ್ತು. ಹನೂರಿನ ಜನ ಬೆಚ್ಚಿಬಿದ್ದರು. ತಮ್ಮ ಊರಿನ ವಿಷಯ ತಮಗೇ ತಿಳಿಯದೇ ಹೋಯಿತಲ್ಲ! ಭಟ್ಟರು ಹೇಳುತ್ತಿದ್ದದು ಸುಳ್ಳಲ್ಲ ಹಾಗಾದರೆ! ಛೇ ಇಷ್ಟು ದಿನ ತಾವು ಎಷ್ಟು ಪುಣ್ಯ ಕಳೆದುಕೊಂಡೆವಪ್ಪ! ಇನ್ನಾದರೂ... ಆ ದಿನ ಗುಡಿಗೆ ಊರಿನ ಬಹಳ ಜನ ಬಂದರು. ತೀರ್ಥವನ್ನು ಶ್ರಧ್ಧೆಯಿಂದ ಸೇವಿಸಿದರು. ಏನೋ ವಿಶೇಷವಿರುವಂತೆ ಅನಿಸಿತು. ನನಗೆ ಇದು ಮುಂಚಿಂದಲೂ ಗೊತ್ತಿತ್ತು, ಹೇಳಿದರೆ ಯಾರೂ ನಂಬಲ್ಲ ಎಂದು ಸುಮ್ಮನಿದ್ದೆ ಎಂದು ಎಲ್ಲರೂ ಮಾತಾಡಿಕೊಂಡರು. ಈ ಹಠಾತ್ ಬದಲಾವಣೆ ಕಂಡು ಶಂಭು ಚಕಿತಗೊಂಡ. ಒಂದು ಪ್ರಚಾರ ಏನೆಲ್ಲ ಮಾಡಬಹುದು ಎಂಬುದನ್ನು ಕಂಡು ವಿಸ್ಮಿತನಾದ. ಈ ಪ್ರಚಾರದ ಕಾರಣ ಯಾರು ಎಂಬುದು ಅವನಿಗೆ, ಹರಿಗೆ ಮಾತ್ರ ಗೊತ್ತಿತ್ತು.<br />
$$$$$$$$$<br />
ಇವೆಲ್ಲ ಆಗಿ ನಾಲ್ಕು ವರ್ಷಗಳೇ ಕಳೆದಿವೆ. ಈಗ ಹನೂರನ್ನು ಬಂದು ನೋಡಿ. ಗುಡಿಯಿರುವ ಬೆಟ್ಟದ ಬುಡದವರೆಗೂ ಟಾರುರಸ್ತೆ. ಸಿಮೆಂಟಿನ ಮೆಟ್ಟಿಲು ಭಟ್ಟರ ಆತ್ಮಕ್ಕೆ ತೃಪ್ತಿ ನೀಡಿದೆ. ಗುಡಿಯ ಸುತ್ತಲೂ ಕಡಪ ಕಲ್ಲಿನ ಅಂಗಳ. ಮೂಲ ರಥದ ರೂಪ, ಗಾತ್ರವನ್ನು ಹೋಲುವ ಮರದ ರಥ ಸಿದ್ಧವಾಗುತ್ತಿದೆ. ಊರವರೆಲ್ಲ ಸೇರಿ ಕೆರೆಯ ಹೂಳು ತೆಗೆದು ನೀರು ಶುಧ್ಧವಾಗಿದೆ. ಸುತ್ತಲೂ ಪಾವಟಿಗೆ. ಬಂದವರು ಮೀಯದೇ ದೇವರ ದರ್ಶನ ಪಡೆಯಬಾರದಲ್ಲ! ಏನೇನು ಸೇವೆ ಮಾಡಬಹುದು, ಅದರ ದರ ಏನು ಎಂಬ ವಿವರವುಳ್ಳ ದೊಡ್ಡ ಪಟ್ಟಿ ನೇತು ಹಾಕಿದ್ದಾರೆ. ಮೂಲೆಯಲ್ಲಿ ಹನೂರಿನ ಸ್ತ್ರೀ ಶಕ್ತಿ ಸಂಘದವರ ತೆಂಗಿನಕಾಯಿ, ಕುಂಕುಮ, ಕರ್ಪೂರ, ಊದುಬತ್ತಿ ಅಂಗಡಿ. ಇಲ್ಲಿ ಹರಳಿನ ಸರವೂ ಸಿಗುತ್ತದೆ. ಹನುಮನ ಫೋಟೋ ಸಿಗುತ್ತದೆ. ಬಸ್ಸಿಳಿವ ಜಾಗದಲ್ಲೂ ಹತ್ತಾರು ಅಂಗಡಿಗಳು. ಟೀ,ಕಾಫಿ,ಮಸಾಲೆ ಮಂಡಕ್ಕಿ ಸಿಗುವ ಎರಡು ಹೊಟೆಲ್. ಇವರಿಗೆ ಪರುಸೊತ್ತಿಲ್ಲದಿಷ್ಟು ವ್ಯಾಪಾರ. ಈ ವ್ಯಾಪಾರದ ಗಡಿಬಿಡಿಯಲ್ಲಿ ಅವರಿಗೆ ಹನುಮನಿಗೆ ನಮಸ್ಕರಿಸುವುದೂ ನೆನಪಾಗುವುದಿಲ್ಲ. ಹೊಸದಾಗಿ ಒಂದು ಬಸ್ ನಿಲ್ದಾಣ ಆಗಿದೆ. ಪ್ರತಿದಿನ ನೂರಾರು ಕಾರುಗಳಲ್ಲಿ ಬರುವ ಜನ. ಗಣೇಶ ಕಂಪೆನಿಯವರು ದಿನಕ್ಕೆ ಹತ್ತು ಬಸ್ಸು ಸಾಗರದಿಂದ ಬಿಟ್ಟಿದ್ದಾರೆ. ಅದರಲ್ಲಿ ಬಂದಿಳಿವ ಜನ. ಅವರ ಅವಸರ, ಭಕ್ತಿ, ಶ್ರಧ್ಧೆಗಳನ್ನು ನೋಡಿಯೇ ತಿಳಿಯಬೇಕು. ಪಾಪ ಆದಷ್ಟೂ ಬೇಗ ಪರಿಹಾರವಾಗಬೇಕು, ಆರೋಗ್ಯ ಬೇಗ ಸುಧಾರಿಸಬೇಕು ಎಂಬ ಆಸೆ. ಬಂದವರಿಗೆ ಬಾಟಲಲ್ಲಿ ತೀರ್ಥ ಕೊಡುವ ವ್ಯವಸ್ಥೆ ಕೂಡ ಆಗಿದೆ. ಈಗಲೂ ವರ್ಷಕ್ಕೊಮ್ಮೆ ರಥೋತ್ಸವ ನಡೆಯುತ್ತದೆ. ಹರಕೆ ಕಟ್ಟಿಕೊಂಡು ೧೦೧ ರೂ. ಪಾವತಿಸಿದವರಿಗೆ ಮಾತ್ರ ರಥ ಎಳೆಯುವ ಅವಕಾಶ. ಊರಿನ ಜನ ರಥದ ಹಿಂದೆ ಜೈಗುಟ್ಟುತ್ತಾ ಹೋಗುತ್ತಾರೆ. ಇನ್ನು ಶಂಭು, ಪಾಪ! ಅವನಿಗೆ ಮನೆಗೆ ಬರಲೂ ಬಿಡುವು ಸಿಗದು. ಸಹಾಯಕ್ಕೆಂದು ಒಬ್ಬ ಮರಿಭಟ್ಟ ಬಂದಿದ್ದಾನೆ. ಶಂಭುವಿಗೆ ಶ್ರೀಪಾದನ ತಂಗಿಯ ಜತೆಯೇ ಮದುವೆಯಾಗಿದೆ. ಮನೆ, ತೋಟದ ಹೊಣೆಗಾರಿಕೆ ಅವಳದೇ. ಇಲ್ರ್ಲೆಂದು ಊರಿದೆ ಎಂಬುದು ಗಮನಕ್ಕೇ ಬಾರದಷ್ಟು ಶಾಂತವಾಗಿದ್ದ ಊರಲ್ಲಿ ದಿನವೂ ಜಾತ್ರೆ. ವಯಸ್ಸಾಯಿತೋ ಎಂದೋ ಅಥವಾ ಈ ಗದ್ದಲಕ್ಕೆ ಹೆದರಿಯೋ ಗೌರಜ್ಜಿ ಗುಡಿಗೆ ಬರುವುದೇ ಬಿಟ್ಟಿದ್ದಾಳೆ. ಮನೆಯಲ್ಲಿಯೇ ಕೂತು ಮಾಡುವ ಅವಳ ನಮಸ್ಕಾರ ಅಷ್ಟೆಲ್ಲ ಜನರನ್ನು ದಾಟಿ ಹನುಮನಿಗೆ ಮುಟ್ಟುತ್ತಿದೆಯೋ ಇಲ್ಲವೋ ಯಾರು ಬಲ್ಲರು?<br />
###########<br />
<br />
ತೀರ್ಥಕ್ಕೆ ಅಪಾರ ಬೇಡಿಕೆಯಿರುವುದರಿಂದ ಕೊಡಗಟ್ಟಲೆ ನೀರಿಂದ ಅಭಿಷೇಕ ಮಾಡಿಸಿಕೊಳ್ಳುವ ಹನುಮ ಅನಂತರ ಯಾರೋ ಹರಕೆ ತೀರಿಸಲು ಕೊಟ್ಟ ಮುಖವಾಡ, ಮೈವಾಡವನ್ನು ಧರಿಸುತ್ತಾನೆ. ಮೂರ್ತಿಯಿರುವ ಜಾಗಕ್ಕೆ ಸರಿಯಾಗಿ ವಿದ್ದ್ಯುದ್ದೀಪದ ಬೆಳಕು ಬೀಳುವಾಗ ಫಳಫಳ ಹೊಳೆಯುತ್ತಾನೆ. ಈ ಎಲ್ಲ ಮಾಯೆಯಿಂದ ತನ್ನನ್ನು ಶ್ರೀರಾಮನೇ ಪಾರು ಮಾಡಬೇಕು ಎಂಬಂತೆ ಮುಂಚಿನಂತೇ ನಿಶ್ಚಲನಾಗಿ, ನಿರ್ಭಾವುಕನಾಗಿ ಉತ್ತರಕ್ಕೆ ನೋಡುತ್ತ ನಿಂತಿದ್ದಾನೆ. <br />
<br />
<br />
ಸಾಗರ. <br />
೨೯/೦೬/೦೮<br />
೩೦/೦೮/೦೮<br />
(ಮೈಸೂರಿಂದ ಪ್ರಕಟವಾಗುವ "ಅರುಹು-ಕುರುಹು" ತ್ರೈಮಾಸಿಕದ ಜುಲೈ-ಸಪ್ಟೆಂಬರ್ ೨೦೦೯ರ ಸಂಚಿಕೆಯಲ್ಲಿ ಪ್ರಕಟಗೊಂಡ ಕಥೆ.)<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
<br />
ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com8tag:blogger.com,1999:blog-5355400587468753863.post-28810656897555958462010-08-07T19:51:00.000+05:302010-08-07T19:51:58.167+05:30ಕಲಿವ ಪರಿ..<br />
<br />
ಶ್ರೀಧರನ ಅಂಗಡಿಯಲ್ಲಿ ಕುಳಿತು ಅವನ ಜೊತೆ ಅದೂ ಇದೂ ಮಾತಾಡುತ್ತಿದ್ದೆ. ಎದುರಿನ ಶಾಲೆ ಬಿಟ್ಟಿತು. ಅಲ್ಲಿಂದ ಇಬ್ಬರು ಹುಡುಗರು ಬೆನ್ನಿನಲ್ಲಿ ಹೊತ್ತ ಚೀಲದ ಭಾರಕ್ಕೆ ತುಸು ಬಾಗಿ ಅಂಗಡಿಯತ್ತ ಬಂದರು.<br />
"ಮೂರು ರೂಪಾಯಿಯ ಪೆನ್ ಇದ್ಯಾ?"<br />
"ಇದೆ"<br />
"ಎರಡು ಕೊಡಿ" ಹತ್ತು ರೂಪಾಯಿ ಕೊಟ್ಟು ಕೇಳಿದರು.<br />
ಎರಡು ಪೆನ್ ಕೊಟ್ಟ ಶ್ರೀಧರ "ಚಿಲ್ಲರೆ ಎಷ್ಟು ವಾಪಾಸು ಕೊಡಲಿ?" ಎಂದು ಕೇಳಿದ.<br />
ಒಬ್ಬರ ಮುಖ ಒಬ್ಬರು ನೋಡಿಕೊಂಡು ಕೊಡಿ ಅಂದರು. ಅವರ ಮುಖ ನೋಡಿದರೆ ಎಷ್ಟು ಚಿಲ್ಲರೆ ಬರಬೇಕು ಎಂಬುದು ಗೊತ್ತಿರುವಂತೆ ತೋರಲಿಲ್ಲ." ಯಾವ ಕ್ಲಾಸು?" ನಾನು ಕೇಳಿದೆ. "ಮೂರು""ಚಿಲ್ಲರೆ ಎಷ್ಟು ಬರ್ಬೇಕು ಗೊತ್ತಿಲ್ವಾ?" ಗೊತ್ತಿಲ್ಲ ಎಂಬಂತೆ ತಲೆಯಾಡಿಸಿದರು.<br />
ನಾವಿಬ್ಬರೂ ಬೆಚ್ಚಿದೆವು. ಮೂರನೆಯ ತರಗತಿಯಲ್ಲಿ ಓದುತ್ತಿರುವ ಇವರಿಗೆ ೧೦-೩-೩ ಎಷ್ಟಾಗುತ್ತದೆ ಗೊತ್ತಿಲ್ಲ! ಅಯ್ಯೋ..ವಿದ್ಯಾಭ್ಯಾಸದ ಮಟ್ಟವೇ ಅನ್ಸಿತು.<br />
ಕೆಲವು ದಿನಗಳ ಹಿಂದೆ ನಡೆದ ಘಟನೆ ನೆನಪಾಯಿತು. ನನ್ನಣ್ಣನ ಪ್ರೆಸ್ಸಲ್ಲಿ ಕೆಲಸ ಮಾಡುವ ಹುಡುಗಿಯೊಬ್ಬಳಿಗೆ ಪ್ರಶ್ನೆ ಕೇಳಿದೆ: ಭೂಮಿಯಲ್ಲಿ ನಿಂತರೆ ಚಂದ್ರನನ್ನು ನೋಡಲು ತಲೆ ಮೇಲೆತ್ತಬೇಕು.ಚಂದ್ರನಲ್ಲಿ ನಿಂತು ಭೂಮಿಯನ್ನು ನೋಡಲು ಏನುಮಾಡಬೇಕು? ಒಂದು ಚಣಕೂಡ ತಡವರಿಸದೆ ಆಕೆ "ತಲೆ ಬಗ್ಗಿಸಿ ನೋಡಬೇಕು" ಅಂದಿದ್ದಳು.ಹ್ಯಾಗೆ ಅಂತ ಕೇಳಿದ್ದಕ್ಕೆ "ನಾವೀಗ ಮರದ ಮೇಲಿರುವ ಹಣ್ಣು ನೋಡಲು ತಲೆ ಎತ್ತಿ ಮೇಲೆ ನೋಡ್ತೀವಿ.ಮರದ ಮೇಲಿಂದ ನೆಲ ನೋಡ್ಲಿಕ್ಕೆ ತಲೆ ಬಗ್ಗಿಸಿ ಕೆಳಗೆ ನೋಡ್ತೀವಲ್ವಾ..ಹಾಗೇ.."ಅಂದಿದ್ಲು. ನಾವೆಲ್ಲಾ ನಕ್ಕು ಸುಮ್ಮನಾಗಿದ್ದೆವು. ಇದೇ ಪ್ರಶ್ನೆಯನ್ನು ನಾನು ನನ್ನ ಗೆಳೆಯನ ಮಗಳೊಬ್ಬಳಿಗೆ ಕೇಳಿದೆ. ಆಕೆ ಹತ್ತನೆಯ ತರಗತಿ ಆಂಗ್ಲ ಮಾಧ್ಯಮದಲ್ಲಿ ಓದಿ,೯೩%ಗೆ ಒಂದು ಅಂಕ ಕಡಿಮೆಯಾಯಿತು ಎಂದು ಒಂದು ದಿನವೆಲ್ಲ ಅತ್ತಿದ್ದಳು.ನಾನು ಪ್ರಶ್ನೆ ಕೇಳಿದಾಗ ಈಕೆ ಎರಡು ನಿಮಿಷ ಯೋಚಿಸಿ "ತಲೆ ಬಗ್ಗಿಸಿ ಕೆಳಗೆ ನೋಡಬೇಕು" ಎಂದಳು. ನಾನು ಯಾಕೆ ಎಂದೆ. "action and reaction are equal and opposite. ಆದ್ದರಿಂದ ಭೂಮಿಯ ಮೇಲೆ ನಿಂತು ತಲೆ ಎತ್ತಿ ನೋಡಿದ್ದರೆ ಅದರ ವಿರುದ್ಧವಿರುವ ಚಂದ್ರನ ಮೇಲೆ ನಿಂತು ತಲೆ ಬಗ್ಗಿಸಿ ನೋಡಬೇಕು"ಅಂತ ವಿವರಿಸಿದಳು.<br />
ನಾನು ಏನಾದರೂ ಹೇಳಬೇಕಾ?ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com2tag:blogger.com,1999:blog-5355400587468753863.post-44053145063692222452010-07-31T20:24:00.000+05:302010-07-31T20:24:56.583+05:30ಹೀಗೊಂದು ಕಥಾನಕ.......ಮಹಾರಾಜರು ತಮ್ಮ ಕೈಗಳನ್ನು ಹಿಂದೆ ಕಟ್ಟಿಕೊಂಡು ಅರಮನೆಯ ಮೊಗಸಾಲೆಯಲ್ಲಿ ಚಿಂತಾಕ್ರಾಂತರಾಗಿ ಅಡ್ಡಾಡುತ್ತಿದ್ದರು. ಅವರ ಹಿಂದೆ, ಕೈಗಳನ್ನು ಮುಂದೆ ಕಟ್ಟಿಕೊಂಡು, ತುಸು ಬಾಗಿ, ವಿಧೇಯತೆಯಿಂದ ಮುಖ್ಯಮಂತ್ರಿಯೂ ಅಡ್ಡಾಡುತ್ತಿದ್ದರು. ಮಹಾರಾಜರು ಯಾಕೆ ಈ ರೀತಿ ಹಿಂದೆ-ಮುಂದೆ ಅಡ್ಡಾಡುತ್ತಿದ್ದಾರೆ ಎಂಬುದು ಅವರ ಚಿಂತೆಯಾಗಿತ್ತು. ಕೊನೆಗೂ ತಡೆಯಲಾಗದೆ "ಮಹಾರಾಜರು ಏನೋ ಮಹತ್ತರವಾದ ಚಿಂತೆಯಲ್ಲಿರುವಂತಿದೆ.ವಿಷಯ ಏನೆಂದು ಹೇಳಿದರೆ ನಾನೂ ಅದರ ಬಗ್ಗೆ ಚಿಂತೆ ಮಾಡಬಹುದು" ಎಂದು ವಿನಂತಿಸಿದರು. ಹ್ಮಂ..ಹ್ಮಂ.."ಎಂದು ಮಹಾರಾಜರು ಹೊರಡಿಸಿದ ಧ್ವನಿಯ ಅರ್ಥ ಏನಿರಬಹುದು ಎಂಬುದು ಮಂತ್ರಿಗಳಿಗೆ ತಿಳಿಯಲಿಲ್ಲ. ಚಿಂತೆ ಮಾಡುತ್ತಿರುವಾಗ ಮಧ್ಯೆ ಯಾರಾದರೂ ಮಾತಾಡುವುದು ಮಹಾರಾಜರಿಗೆ ಹಿಡಿಸುತ್ತಿರಲಿಲ್ಲ. ಆದರೆ ಇವ ಬರೀ ಮುಖ್ಯ ಮಂತ್ರಿಯಲ್ಲ,ಖಾಸ ಹೆಂಡತಿಯ ತಮ್ಮ. ಹಾಗಾಗಿ ಗದರದೆ ಸುಮ್ಮನಾದರು.<br />
<br />
"ಅಲ್ಲಯ್ಯಾ..ಹೀಗಾದರೆ ಏನು ಗತಿ?" ಇನ್ನೂ ಎರಡು ಬಾರಿ ಅತ್ತಿತ್ತ ಓಡಾಡಿದ ಅನಂತರ ಮಹಾರಾಜರು ಉದ್ಗರಿಸಿದರು. ಮಂತ್ರಿಗೆ ಏನು ವಿಷಯ ಎಂಬುದು ತಿಳಿಯಲಿಲ್ಲ. ವಿಷಯವನ್ನು ಸಂಪೂರ್ಣ ತಿಳಿಯುವ ಆಸೆಯಿಂದ "ಯಾವುದು ಹೇಗಾದರೆ ಯಾವ ಗತಿ?" ಎಂದು ಕೇಳಿದರು.<br />
<br />
"ಬೆಲೆಗಳೆಲ್ಲ ಏರುತ್ತಿವೆಯಂತೆ.."<br />
<br />
"ಯಾವುದರ ಬೆಲೆ?"<br />
<br />
"ಇನ್ನ್ಯಾವುದಯ್ಯಾ..ದವಸ ಧಾನ್ಯ, ಬೇಳೆ ಕಾಳುಗಳು,ತರಕಾರಿ..."<br />
<br />
ಮಂತ್ರಿಗಳಿಗೆ ವಿಷಯ ಇಷ್ಟೇನಾ ಅನಿಸಿತು. ವಾಸ್ತವದಲ್ಲಿ ಅವಕ್ಕೆಲ್ಲ "ಬೆಲೆ" ಎಂಬುದೊಂದು ಇರುತ್ತದೆ ಎಂಬುದೇ ಅವರಿಗೆ ತಿಳಿದಿರಲಿಲ್ಲ. ಅವೆಲ್ಲವೂ ಸಹಜವಾಗಿ,ಸುಲಭವಾಗಿ, ಸುಮ್ಮನೆ ಸಿಗುವ ವಸ್ತುಗಳು ಎಂದು ಭಾವಿಸಿದ್ದರು.ಬೆಲೆ ಏರಿದರೆ ಮಹಾರಾಜರಿಗೆ ಯಾಕೆ ಚಿಂತೆಯಾಗಬೇಕು? ಅದು ಸರಿ,ಮಹಾರಾಜರಿಗೆ ಅದರ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು? ಮಂತ್ರಿಯಾದ ತನಗೆ ತಾನೇ ಎಲ್ಲವೂ ಮೊದಲು ತಿಳಿಯಬೇಕಾದದ್ದು? ಮಂತ್ರಿಗೆ ಈ ಚಿಂತೆ ಶುರುವಾಯಿತು.<br />
<br />
"ಯಾರು ನಿಮಗೆ ಈ ವಿಷಯ ಹೇಳಿ ತೊಂದರೆ ಕೊಟ್ಟವರು? ಈ ಕ್ಷಣದಲ್ಲಿ ಅವರ ಶಿರಚ್ಛೇದನ ಮಾಡಿಸುತ್ತೇನೆ" <br />
<br />
"ಮಹಾರಾಣಿ"<br />
<br />
ಉತ್ತರ ಕೇಳಿ ಮಂತ್ರಿಗಳು ತಣ್ಣಗಾದರು. ಮಹಾರಾಣಿಯವರ ಶಿರಚ್ಛೇದ ಮಾಡಿಸುವುದೇ?ಮಾಡಿದರೆ ತನ್ನ ಕತ್ತಿನ ಮೇಲೆ ಏನುಳಿಯುತ್ತದೆ?<br />
<br />
"ಅವರಿಗೆ ಹೇಗೆ ಗೊತ್ತಾಯಿತು?"<br />
<br />
"ಅಡುಗೆ ಮಾಡುವವಳು"<br />
<br />
"ಸರಿ.ಸಮಸ್ಯೆ ಬಗೆಹರಿಯಿತಲ್ಲ..ಅವಳ ಶಿರಚ್ಛೇದ ಮಾಡಿದರಾಯಿತು ಅನಂತರ ಬೆಲೆಗಳು ಏರಿದರೆ ಯಾರಿಗೂ ತಿಳಿಯುವುದಿಲ್ಲ ತಾನೇ?" ಅಂದರು.<br />
<br />
ಮಹಾರಾಜರಿಗೆ ಕನಿಕರ ಬಂತು.ಮಂತ್ರಿಯಿಂದ ಬೇರೇನು ಉತ್ತರ ಸಾಧ್ಯ?ಬೆಳಗಿಂದ ಚಿಂತಿಸುತ್ತಿದ್ದ ಅವರಿಗೇ ಇನ್ನೂ ಉತ್ತರ ಹೊಳೆದಿರಲಿಲ್ಲ.<br />
<br />
"ಹಾಗಲ್ಲಯ್ಯಾ..ಬೆಲೆಗಳು ಏರಿ ಬಡವರಿಗೆ ತುಂಬಾ ತೊಂದರೆ ಆಗುತ್ತಿದೆಯಂತೆ.ಅವರಿಗೆಲ್ಲ ಒಬ್ಬ ನಾಯಕ ಹುಟ್ಟಿಕೊಂಡಿದ್ದಾನಂತೆ.ಅವರು ಧರಣಿ,ರಾಸ್ತಾ ರೋಕೋ ಮಾಡುತ್ತಾರಂತೆ..ಅವರೆಲ್ಲ ಒಂದಾಗಿ ನಿಂತರೆ ನನ್ನ ಮಗನ ಪಟ್ಟಾಭಿಷೇಕಕ್ಕೆ ಜನರೆಲ್ಲಯ್ಯಾ ಇರುತ್ತಾರೆ?"<br />
<br />
ಸಮಸ್ಯೆ ನಿಜವಾಗಲೂ ಗಂಭೀರವಾಗಿದೆ. ಎಷ್ಟು ಯೋಚಿಸಿದರೂ ಮಂತ್ರಿಗಳಿಗೆ ಬೆಲೆ ಏರಿದ್ದು, ಅಡುಗೆಯವಳು ಮಹಾರಾಣಿಗೆ ಯಾಕೆ ಹೇಳಿದ್ದು..ಮಹಾರಾಣಿಯವರು ಮಹಾರಾಜರಿಗೆ ಯಾಕೆ ಹೇಳಿದ್ದು..ಬೆಲೆ ಏರಿದರೆ ಜನರು ಯಾಕೆ ಒಟ್ಟಾಗಬೇಕು ಎಂಬುದು ತಿಳಿಯಲಿಲ್ಲ. ಒಂದು ಉಪಾಯ ಹೊಳೆಯಿತು.<br />
<br />
"ಸ್ವಾಮೀ, ಇದರ ಕಾರಣ ತಿಳಿಯಲು ನಾವೊಂದು ಸಮಿತಿ ಮಾಡುವಾ.ಅವರು ಅದರ ಬಗ್ಗೆ ಎಲ್ಲ ಮಾಹಿತಿಗಳನ್ನೂ ಸಂಗ್ರಹಿಸಿ ಕೊಟ್ಟ ಕೂಡಲೇ ಮುಂದಿನ ಕ್ರಮ ತೆಗೆದುಕೊಂಡರಾಯಿತು."<br />
<br />
ಮಹಾರಾಜರಿಗೂ ಇದು ಒಳ್ಳೇ ಉಪಾಯ ಅನಿಸಿತು. ಅಷ್ಟಕ್ಕೂ ಎಲ್ಲ ಸಮಸ್ಯೆಗಳಿಗೂ ತಾವೇ ಚಿಂತಿಸುತ್ತ ಕೂತರೆ ರಾಜ್ಯಭಾರ ಮಾಡುವುದು ಹೇಗೆ?ಕೂಡಲೇ ಒಂದು ಸಮಿತಿ ಮಾಡುವ ಜವಾಬ್ದಾರಿಯನ್ನು ಮಂತ್ರಿಗೇ ವಹಿಸಿ,ಬೆಲೆ ಏರಿಕೆಯ ಕಾರಣವನ್ನು ಒಂದು ವಾರದಲ್ಲಿ ತಮಗೆ ತಿಳಿಸಲು ಸೂಚಿಸಿದರು.<br />
<br />
ಅದರಂತೆ ಒಂದು ಸಮಿತಿ ರಚನೆಯಾಯಿತು. ಸಮಿತಿಗೆ ಈ ಕೆಳಕಂಡ ವಿಚಾರಗಳ ಬಗ್ಗೆ ವರದಿ ಕೊಡಲು ಸೂಚಿಸಲಾಯಿತು.<br />
<br />
೧.ಅಡುಗೆಯವಳಿಗೆ ಬೆಲೆ ಏರಿದೆ ಎಂಬುದು ಹೇಗೆ ತಿಳಿಯಿತು?<br />
<br />
೨.ಅವಳು ಅದನ್ನು ಮಹಾರಾಣಿಯವರಿಗೆ ತಿಳಿಸಲು ಕಾರಣಗಳೇನು?<br />
<br />
೩.ಇಂತಹ ಘಟನೆಗಳು ಮುಂದೆ ಸಂಭವಿಸದಂತೆ ಏನು ಎಚ್ಚರಿಕೆ ತೆಗೆದುಕೊಳ್ಳಬೇಕು?ಮೃತ್ಯುಂಜಯ ಹೊಸಮನೆhttp://www.blogger.com/profile/07261241675817705746noreply@blogger.com3