Monday, October 20, 2008

ಲೂಸ್ಪದ್ಯ ೪-೫.





ಮಂತ್ರಿಪತ್ನಿಯ ಕೊರಳಲ್ಲಿ ಪರಿಪರಿಯ ಹಾರ - ಬರದ ಪರಿಹಾರ .



ರೈತರೊಡಲಲ್ಲಿ ಹಾ .. ಹಾ...ಖಾರ !--ಬರದ ಪರಿಹಾರ !







೨.



ಕುಡಿದು ನಶೆಯೇರಿ ಗಂಡ ತೂರಾಡುತ ಮನೆಗೆ ಬರಲು



ಸಿಟ್ಟಲಿ ಹೆಂಡತಿ ಕೈಯಲಿ ಹಿಡಿದಳು ಹಳೆಯದೊಂದು ಬರಲು !

Wednesday, September 24, 2008

ಲೂಸ್ಪದ್ಯ ೨ --೩


ಹುಡುಗ ಹೇಳಿದನು ಮಾತಲ್ಲಿ ಮಧು ತುಂಬಿ
ಹುಡುಗೀ ನಾ ನಿನ್ನ ನಲ್ಲ!.. ನಲ್ಲ!!
ಹುಡುಗಿ ಹೇಳಿದಳು ಕಣ್ಣಂಚಲ್ಲಿ ನಗೆ ಚೆಲ್ಲಿ
ಹುಡುಗಾ ನೀ ನನ್ನ ನಲ್ಲನಲ್ಲ !!

ಭಟ್ಟರ ಮಂತ್ರವು ಕೇಳಿತು ಮೈಕಲಿ ಚೌತಿಯ ದಿನದಂದು.
ಗಣೇಶಾಏನ್ಮಹಾ..ವಿನಾಯಕಾಏನ್ಮಹಾ..ಗಜಾನನಾಏನ್ಮಹಾ
ಕೇಳಿದ ಗಣಪನು ಮೌನದಿ ಕೂತನು ಅರ್ಥವು ಇದಕೇನೆಂದು.!

Tuesday, September 23, 2008

ಸಾವೆಂಬುದು

ನಮಗುಳಿಯುವುದು ಅಗ್ನಿಯುಂಡುಳಿವ ಉಚ್ಚಿಷ್ಟ ಬೂದಿ.
ಸತ್ತವಗೆ ತೆರೆದುಕೊಳ್ಳುವುದು ಊರ್ಧ್ವಲೋಕದ ಹಾದಿ.

ಲೂಸ್ಪದ್ಯ

ಮದುವೆಗೆ ಮೊದಲು ಕನಸನು ಕಾಣುತ
ಕೈ ಕೈ ಹಿಡಿದು ನಡೆದಾಡುವ ಜೋಡಿ!
ಮುಗಿಯಿತು ಮದುವೆ ಕಳೆಯಿತು ವರುಷ
ಕೈ ಕೈ ಹಿಡಿದರು ಹೊಡೆದಾಡಲು ನೋಡಿ!

Thursday, September 11, 2008

ಮಾತು ಮುತ್ತು.


ಆನೆಗೆ ನಡೆದದ್ದೇ ದಾರಿ . ಇರುವೆಗೂ ಕೂಡ..

ಪಾಪ ಕಳೆವಾತುರದಿ ಭಕ್ತ ಜನ ಗುಡಿಯಲ್ಲಿ ! ಲಕ್ಷ್ಮಿ ಕುಣಿಯುತ್ತಾಳೆ ಅರ್ಚಕರ ಮನೆಯಲ್ಲಿ !

ರಾತ್ರಿ ಕಳೆಯಿತು. ಚಂದ್ರ ತೆರಳಿದ. ವಿರಹ ನಿಶೆಗೆ .
ಉಮ್ಮಳದ ಅವಳ ಕಂಬನಿ.
ಇಬ್ಬನಿ !

ಸೂರ್ಯ ಮುಳುಗಿದ.
ಸಿಟ್ಟಲ್ಲಿ ಸಂಧ್ಯೆ ಎಸೆದಳು ಮಲ್ಲಿಗೆಯ ಮಾಲೆ !
ನಭದ ತುಂಬೆಲ್ಲ ಮಿನುಗು ತಾರೆ !

ಕೊರಡೊಣಗಿದರೆ ಕಿಡಿಯೊಂದೇ ಸಾಕದರ
ದಹಿಸಲಿಕೆ !
ಹಸಿ ಕಾಷ್ಠ . ಅಗ್ನಿಯೂ ಭಗ್ನ. ಮಾಯವಾಗುವನು
ಧೂಮದೊಳಗೆ !