Saturday, August 29, 2009

ಹೊತ್ತು ಹೋಗದೆ ಮಾತು.

. ಸಲಹೆಗಳಿರುವುದು ಬೇರೆಯವರಿಗೆ ಕೊಡಲೇ ಹೊರತು ಸ್ವಂತದ ಉಪಯೋಗಕ್ಕಲ್ಲ.

. ನೀವು ಕಡ ಕೇಳುವ ಹಿಂದಿನದಿನದವರೆಗೂ ನಿಮ್ಮ ಸ್ನೇಹಿತನ ಬಳಿ ಸಾಕಷ್ಟು ಹಣವಿರುತ್ತದೆ.

. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವುದು ಮಾನವೀಯಧರ್ಮ ಎಂದು ಯಾರಾದರೂ ಹೇಳಿದರೆ, ಅವರು ಕಷ್ಟದಲ್ಲಿದ್ದಾರೆ ಎಂದರ್ಥ.

. ದೇವರಿಗೆ ಭಕ್ತ ಏನು ಕೊಟ್ಟರೂ ಸಾಕು;ಕೊಡದಿದ್ದರೂ ಅಡ್ಡಿಲ್ಲ.ಅರ್ಚಕರಿಗೆ ಮಾತ್ರ ಭಕ್ತರು ಕೊಡಲೇಬೇಕು. ಭಕ್ತರು ಕೊಡುವಷ್ಟೂ ಅವರಿಗೆ ಬೇಕು.

. ಅಪ್ರಾಮಾಣಿಕರಾಗುವ ಅವಕಾಶ ಸಿಗುವವರೆಗೂ ಎಲ್ಲರೂ ಪ್ರಾಮಾಣಿಕರೇ. ಹಾಗೆ ಅವಕಾಶವಿದ್ದಾಗಲೂ

ಪ್ರಾಮಾಣಿಕನಾಗಿದ್ದವನನ್ನು ಹಿಂದೆಲ್ಲ ಯೋಗ್ಯ, ಮಹಾನುಭಾವ ಇತ್ಯಾದಿ ಗುರುತಿಸುತ್ತಿದ್ದರು. ಈಗ ದಡ್ಡ, ವ್ಯಾವಹಾರಿಕ ತಿಳುವಳಿಕೆ ಇಲ್ಲದವನು ಎನ್ನುತ್ತಾರೆ.

. ಒಗ್ಗಟ್ಟಿಂದ ಕೆಲಸ ಮಾಡಿದರೆ ಎಲ್ಲರ ಕೆಲಸವೂ ಸುಲಭ ಎಂದು ಗುಂಪಿನಲ್ಲಿರುವ ಎಲ್ಲರಿಗೂ ಗೊತ್ತು. ಒಗ್ಗಟ್ಟಾಗಲು ಒಬ್ಬ ನಾಯಕ ಬೇಕು ಎಂಬುದರ ಬಗ್ಗೆಯೂ ಯಾರ ತಕರಾರೂ ಇಲ್ಲ. ತಕರಾರಿರುವುದು ನಾಯಕ ಯಾರಾಗಬೇಕು ಎಂಬುದರ ಬಗ್ಗೆ.

3 comments:

ಮೂರ್ತಿ ಹೊಸಬಾಳೆ. said...

ನಿಮ್ಮ "ಹೊತ್ತು ಹೋಗದೆ ಮಾತು" ನೂರಕ್ಕೆ ನೂರು ಸರಿ.

Jagadeesh Balehadda said...
This comment has been removed by the author.
Jagadeesh Balehadda said...

ಹೊತ್ತು ಹೋಗದೆ ಮಾತು,ಹೊತ್ತು ಇಟ್ಟುಕೊಂಡು ಓದುವಂತಿದೆ.